Bakrid 2023: ಟೊಮೆಟೊ ಬೆಲೆ ಎಷ್ಟಾದರೇನು ಹಬ್ಬವಂತೂ ಆಚರಿಸಲೇಬೇಕಲ್ಲ ಎಂದರೊಬ್ಬ ಮುಸ್ಲಿಂ ಗೃಹಣಿ!

ಬೆಲೆ ಎಷ್ಟಾದರೇನು ಹಬ್ಬ ಮಾಡದಿರೋಕ್ಕಾಗುತ್ತಾ? ಅಂತ ಗೃಹಿಣಿ ಕೇಳುತ್ತಾರೆ, ಅವರು ಹೇಳೋದು ಅಕ್ಷರಶಃ ಸತ್ಯ,

Bakrid 2023: ಟೊಮೆಟೊ ಬೆಲೆ ಎಷ್ಟಾದರೇನು ಹಬ್ಬವಂತೂ ಆಚರಿಸಲೇಬೇಕಲ್ಲ ಎಂದರೊಬ್ಬ ಮುಸ್ಲಿಂ ಗೃಹಣಿ!
| Updated By: Digi Tech Desk

Updated on:Jun 28, 2023 | 2:10 PM

ಬೆಂಗಳೂರು: ನಾಳೆ ಮುಸಲ್ಮಾನ ಸಮುದಾಯ ಬಕ್ರೀದ್ (Bakrid) ಸಂಭ್ರಮ ಸಡಗರದಿಂದ ಆಚರಿಸಲಿದೆ. ಆದರೆ ಮಾಂಸದಡಿಗೆಗೆ ಬೇಕಾಗುವ ಟೊಮೆಟೊ, ಹಸಿರು ತರಕಾರಿ (tomato and green vegetables) ಮತ್ತು ಇತರ ಅಗತ್ಯ ವಸ್ತುಗಳ (essential commodities) ಬೆಲೆ ಕೈಗೆಟುಕದಷ್ಟು ಮೇಲೆ ಹೋಗಿವೆ. ಹಬ್ಬದೂಟದ ತಯಾರಿಗಾಗಿ ತರಕಾರಿ ಕೊಳ್ಳಲು ಬಂದಿರುವ ಈ ಮಹಿಳೆಯ ಮಾತು ಕೇಳಿಸಿಕೊಳ್ಳಿ. ಟೊಮೆಟೊ ಬೆಲೆ ಕೆಜಿಗೆ ರೂ. 100 ಮತ್ತು ಒಂದು ಕಟ್ಟು ಕೊತ್ತಂಬರಿಗೆ ರೂ. 50 ಆಗಿದೆ ಅಂತ ಬೆಲೆಯೇರಿಕೆಯನ್ನು ದೂಷಿಸುತ್ತಾರೆ. ತರಕಾರಿಗಳು ಇಷ್ಟು ತುಟ್ಟಿಯಾದರರೆ ಹೇಗೆ ಹಬ್ಬ ಮಾಡೋದು ಅಂತ ಟಿವಿ9 ಕನ್ನಡ ವಾಹಿನಿಯ ವರದಿಗಾರ್ತಿ ಕೇಳಿದಾಗ, ಬೆಲೆ ಎಷ್ಟಾದರೇನು ಹಬ್ಬ ಮಾಡದಿರೋಕ್ಕಾಗುತ್ತಾ? ಅಂತ ವಾಪಸ್ಸು ಪ್ರಶ್ನಿಸುತ್ತಾರೆ. ಅವರು ಹೇಳೋದು ಅಕ್ಷರಶಃ ಸತ್ಯ, ಹಬ್ಬ ಹರಿದಿನ, ಈದ್ ಪದೇಪದೆ ಬರಲ್ಲ, ಆಗಾಗ ಬರುತ್ತವೆ ಮತ್ತು ಅವುಗಳನ್ನು ಆಚರಿಸುವ ಅನಿವಾರ್ಯತೆಯಂತೂ ಇದ್ದೇ ಇರುತ್ತದೆ-ಟೊಮೆಟೊ ಬೆಲೆ ಪ್ರತಿ ಕೆಜಿಗೆ ರೂ. 10 ಇರಲಿ ಅಥವಾ ರೂ. 100!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:40 pm, Wed, 28 June 23

Follow us
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?