ಕ್ಯಾಮೆರಾ ಕೆಲಸ ನೋಡಿಕೋ ಅಂತ ಪಾರ್ವತಮ್ಮ ಹೇಳಿದ್ದಕ್ಕೆ ದರ್ಶನ್​ಗೆ ಬೇಸರ

| Updated By: ಮದನ್​ ಕುಮಾರ್​

Updated on: Jun 20, 2024 | 10:37 PM

‘ವಜ್ರೇಶ್ವರಿ ಕಂಬೈನ್ಸ್​’ ನಿರ್ಮಾಣದ ಸಿನಿಮಾದಲ್ಲಿ ದರ್ಶನ್​ ಅವರು ಕ್ಯಾಮೆರಾ ಅಸಿಸ್ಟೆಂಟ್​ ಆಗಿದ್ದರು. ಆದ್ದರಿಂದ ದರ್ಶನ್​ಗೆ ಪಾರ್ವತಮ್ಮ ರಾಜ್​ಕುಮಾರ್​ ಅವರು ಒಂದು ಹೊಸ ಜವಾಬ್ದಾರಿ ನೀಡಲು ನಿರ್ಧರಿಸಿದ್ದರು. ಅದು ದರ್ಶನ್​ಗೆ ಇಷ್ಟ ಆಗಲಿಲ್ಲ. ಆ ಘಟನೆಯ ಬಗ್ಗೆ ಹಿರಿಯ ಪತ್ರಕರ್ತ ಗಣೇಶ್​ ಕಾಸರಗೋಡು ಅವರು ‘ಟಿವಿ9 ಕನ್ನಡ’ದ ಜೊತೆ ಮಾತನಾಡಿದ್ದಾರೆ.

ನಟ ದರ್ಶನ್​ (Darshan) ಅವರು ಆರಂಭದಲ್ಲಿ ಕ್ಯಾಮೆರಾ ಸಹಾಯಕನಾಗಿ ಚಿತ್ರರಂಗದಲ್ಲಿ ಕೆಲಸ ಶುರು ಮಾಡಿದರು. ನಂತರ ಹೀರೋ ಆದರು. ವಜ್ರೇಶ್ವರಿ ಕಂಬೈನ್ಸ್​ ಸಂಸ್ಥೆಯ ಸಿನಿಮಾಗೆ ದರ್ಶನ್​ ಕ್ಯಾಮೆರಾ ಅಸಿಸ್ಟೆಂಟ್​ ಆಗಿದ್ದಾಗ ಅವರಿಗೆ ಹೊಸ ಜವಾಬ್ದಾರಿ ನೀಡಲು ಪಾರ್ವತಮ್ಮ ರಾಜ್​ಕುಮಾರ್​ (Parvathamma Rajkumar) ನಿರ್ಧರಿಸಿದ್ದರು. ಆದರೆ ಅದನ್ನು ದರ್ಶನ್​ ಒಪ್ಪಲಿಲ್ಲ. ಅಲ್ಲದೇ ಪಾರ್ವತಮ್ಮ ಹೇಳಿದ್ದನ್ನು ಅವರು ಅವರು ಬೇರೆ ರೀತಿಯಲ್ಲಿ ಅರ್ಥೈಸಿಕೊಂಡರು. ಆ ಬಗ್ಗೆ ಹಿರಿಯ ಪತ್ರಕರ್ತ ಗಣೇಶ್​ ಕಾಸರಗೋಡು ಮಾತನಾಡಿದ್ದಾರೆ. ‘ದರ್ಶನ್​ಗೆ ಆರಂಭದ ದಿನಗಳಲ್ಲಿ ಈ ವಿಚಾರ ಹರ್ಟ್​ ಆಗಿತ್ತು. ರಕ್ಷಿತಾ ಅವರ ತಂದೆ ಗೌರಿಶಂಕರ್​ ಜೊತೆ ದರ್ಶನ್​ ಕ್ಯಾಮೆರಾ ಅಸಿಸ್ಟೆಂಟ್​ ಆಗಿದ್ದರು. ಪಾರ್ವತಮ್ಮ ರಾಜ್​ಕುಮಾರ್​ ಒಂದು ಹೊಸ ಕ್ಯಾಮೆರಾ ತರಿಸಿದ್ದರು. ನೀನು ಅದನ್ನು ನೋಡಿಕೋ ಎಂದು ದರ್ಶನ್​ಗೆ ಅವರು ಹೇಳಿದ್ದರು. ಅದು ದರ್ಶನ್​ಗೆ ಸಮಸ್ಯೆ ಆಯಿತು. ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಪ್ರಮೋಟ್​ ಮಾಡುವ ಸಲುವಾಗಿ ನನ್ನನ್ನು ಟಿಕ್ನಿಕಲ್​ ವಿಭಾಗಕ್ಕೆ ಕಳಿಸುತ್ತಿದ್ದಾರೆ ಅಂತ ದರ್ಶನ್​ಗೆ ಬೇಸರವಾಯಿತು. ನನ್ನ ವಿರುದ್ಧ ಯಾರನ್ನೋ ಎತ್ತಿಕಟ್ಟುತ್ತಿದ್ದಾರೆ ಎನ್ನುವ ಭಾವನೆ ದರ್ಶನ್​ಗೆ ಬಂದಿದ್ದೇ ಅಲ್ಲಿಂದ’ ಎಂದು ಗಣೇಶ್​ ಕಾಸರಗೋಡು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on