ಮಡಿಕೇರಿ: KSRTC ಬಸ್ ಅಡ್ಡಗಟ್ಟಿದ ಒಂಟಿ ಸಲಗ! ಮೈ ಜುಮ್ಮೆನ್ನುವ ವಿಡಿಯೋ ಇಲ್ಲಿದೆ
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ದೇವರಪುರ ಗ್ರಾಮದ ಬಳಿ ಕಾಡಾನೆಯೊಂದು ಕೆಎಸ್ಆರ್ಟಿಸಿ ಬಸ್ ಅಡ್ಡಗಟ್ಟಿದ ಘಟನೆ ವಿಡಿಯೋ ವೈರಲ್ ಆಗುತ್ತಿದೆ. ಮೈ ಜುಮ್ ಎನಿಸುವ ಇದರ ವಿಡಿಯೋ ಇಲ್ಲಿದೆ ನೋಡಿ.
ಮಡಿಕೇರಿ, ಜುಲೈ 22: ರಸ್ತೆಯಲ್ಲಿ ಸಂಚರಿಸುತ್ತಿದ್ದಾಗಲೇ ಎದುರಾದ ಕಾಡಾನೆಯೊಂದು (Wild Elephant) ಕೆಎಸ್ಆರ್ಟಿಸಿ (KSRTC) ಬಸ್ ಅನ್ನು ಅಡ್ಡಗಟ್ಟಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ದೇವರಪುರ ಗ್ರಾಮದ ಬಳಿ ನಡೆದಿದೆ. ಕಾಫಿ ತೋಟಕ್ಕೆ ಹೋಗಲು ಯತ್ನಿಸಿದಾಗ ಚಾಲಕ ಬಸ್ ಚಲಾಯಿಸಲು ಯತ್ನಿಸಿದ್ದಾರೆ. ಈ ವೇಳೆ ಏಕಾಏಕಿಯಾಗಿ ಘೀಳಿಡುತ್ತಾ ಬಸ್ ಬಳಿ ಓಡಿ ಬಂದಾಗ ಚಾಲಕ ಬಸ್ ಆಫ್ ಮಾಡಿ ತನ್ನ ಸೀಟ್ನಿಂದ ಎದ್ದು ಪಕ್ಕಕ್ಕೆ ಬಂದಿದ್ದಾರೆ. ಆನೆ ಫೀಳಿಡುತ್ತಾ ಓಡಿ ಬಂದ ಶೈಲಿ ನೋಡಿದರೆ ಬಸ್ಗೆ ಹಾನಿ ಮಾಡುತ್ತೆ ಎನ್ನುವಂತಿತ್ತು. ಆದರೆ ಆನೆ ಬಸ್ಗೆ ಯಾವುದೇ ಹಾನಿ ಮಾಡದೆ ಕಾಫಿ ತೋಟದತ್ತ ತೆರಳಿತು. ನಂತರ ಬಸ್ ಸಿಬ್ಬಂದಿ, ಪ್ರಯಾಣಿಕರು ನಿಟ್ಟುಸಿರುವ ಬಿಟ್ಟರು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
