ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

Edited By:

Updated on: Sep 17, 2025 | 5:41 PM

ಮಹಿಳೆಯೊಬ್ಬರು ಎರಡನೇ ಹೆರಿಗೆಗೆಂದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದು, ಮಗುವಿಗೆ ಜನ್ಮ ನೀಡಿದ್ದಾಳೆ. ಆದ್ರೆ, ತೀವ್ರ ರಕ್ತಸ್ರಾವದಿಂದ ಬಾಣಂತಿ ಮಹಿಳೆ ಏಕಾಏಕಿ ಸಾವನ್ನಪ್ಪಿದ್ದಾಳೆ. ಗೌರಿಬಿದನೂರು ತಾಲೂಕಿನ ಪುಲಗಾನಹಳ್ಳಿ ಗ್ರಾಮದ 35 ವರ್ಷದ ಬಾಗ್ಯಮ್ಮ ಮೃತ ಮಹಿಳೆ. ಸಿಜೇರಿಯನ್ ಹೆರಿಗೆ ಮಾಡಿಸಲು ಅಲ್ಲಿಯ ಸರ್ಕಾರಿ ವೈದ್ಯರು ಹತ್ತು ಸಾವಿರ ರೂಪಾಯಿ ಲಂಚ ಕೇಳಿದ್ರಂತೆ, ಇದ್ರಿಂದ ಆಕೆಯ ಗಂಡ, ಆಟೊವನ್ನು ಒತ್ತೆಯಿಟ್ಟು ವೈದ್ಯರಿಗೆ ಹಣ ತಂದುಕೊಟ್ಟಿದ್ದ. ಆದ್ರೆ, ಹಣವೂ ಹೊಯ್ತು ಇತ್ತೆ ಹೆಂಡ್ತಿಯೂ ಉಳಿಲಿಲ್ಲ ಎಂದು ಮೃತ ಮಹಿಳೆಯ ಪತಿ ಗೋಳಾಡಿದ್ದಾರೆ.

ಚಿಕ್ಕಬಳ್ಳಾಪುರ, (ಸೆಪ್ಟೆಂಬರ್ 17): ಮಹಿಳೆಯೊಬ್ಬರು ಎರಡನೇ ಹೆರಿಗೆಗೆಂದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದು, ಮಗುವಿಗೆ ಜನ್ಮ ನೀಡಿದ್ದಾಳೆ. ಆದ್ರೆ, ತೀವ್ರ ರಕ್ತಸ್ರಾವದಿಂದ ಬಾಣಂತಿ ಮಹಿಳೆ ಏಕಾಏಕಿ ಸಾವನ್ನಪ್ಪಿದ್ದಾಳೆ. ಗೌರಿಬಿದನೂರು ತಾಲೂಕಿನ ಪುಲಗಾನಹಳ್ಳಿ ಗ್ರಾಮದ 35 ವರ್ಷದ ಬಾಗ್ಯಮ್ಮ ಮೃತ ಮಹಿಳೆ. ಸಿಜೇರಿಯನ್ ಹೆರಿಗೆ ಮಾಡಿಸಲು ಅಲ್ಲಿಯ ಸರ್ಕಾರಿ ವೈದ್ಯರು ಹತ್ತು ಸಾವಿರ ರೂಪಾಯಿ ಲಂಚ ಕೇಳಿದ್ರಂತೆ, ಇದ್ರಿಂದ ಆಕೆಯ ಗಂಡ, ಆಟೊವನ್ನು ಒತ್ತೆಯಿಟ್ಟು ವೈದ್ಯರಿಗೆ ಹಣ ತಂದುಕೊಟ್ಟಿದ್ದ. ಆದ್ರೆ, ಹಣವೂ ಹೊಯ್ತು ಇತ್ತೆ ಹೆಂಡ್ತಿಯೂ ಉಳಿಲಿಲ್ಲ ಎಂದು ಮೃತ ಮಹಿಳೆಯ ಪತಿ ಗೋಳಾಡಿದ್ದಾರೆ.

Follow Us
Bheemappa Patil

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More