ಮಕ್ಕಳಾಗದ ಕಾರಣಕ್ಕೆ ಅತ್ತೆ ಮತ್ತು ಗಂಡ ಮನೆಯಿಂದ ಹೊರಗಟ್ಟಿದ್ದಾರೆ ಅಂತ ದೂರುತ್ತಿರುವ ಚಿಕ್ಕಬಳ್ಳಾಪುರದ ಮಹಿಳೆ

ವಿದ್ಯಾವಂತೆಯಾಗಿರುವ ಜಬೀನ್, ಗಂಡ ಮತ್ತು ಹೆಂಡತಿಯ ನಡವೆ ದೈಹಿಕ ಸಂಪರ್ಕವೇ ನಡೆಯದಿದ್ದರೆ ಹೇಗೆ ಮಕ್ಕಳಾಗುತ್ತವೆ ಅಂತ ಕೇಳುತ್ತಾರೆ. ಕಳೆದ 8 ತಿಂಗಳಿಂದ ಮುಖ್ತಾರ್ ಅಹ್ಮದ್ ತನ್ನಿಂದ ದೂರವಿದ್ದಾರೆ ಎಂದು ಹೇಳುವ ಅವರು ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು ಊಟಕ್ಕೆ ತೊಂದರೆಯಾಗುತ್ತಿದೆಯಂತೆ.

ಮಕ್ಕಳಾಗದ ಕಾರಣಕ್ಕೆ ಅತ್ತೆ ಮತ್ತು ಗಂಡ ಮನೆಯಿಂದ ಹೊರಗಟ್ಟಿದ್ದಾರೆ ಅಂತ ದೂರುತ್ತಿರುವ ಚಿಕ್ಕಬಳ್ಳಾಪುರದ ಮಹಿಳೆ
|

Updated on: Sep 18, 2023 | 6:11 PM

ಚಿಕ್ಕಬಳ್ಳಾಪುರ: ಈ ಮಹಿಳೆಯ ಹೆಸರು ಜಬೀನ್ ತಾಜ್ (Jabeen Taj) ಮತ್ತು ಚಿಕ್ಕಬಳ್ಳಾಪುರದ ನಿವಾಸಿ. ವಿವಾಹಿತೆಯಾಹಿರುವ ಜಬೀನ್ ತನ್ನ ಅತ್ತೆಯ ಮನೆ ಮುಂದೆ ಧರಣಿಗೆ ಕೂತಿದ್ದಾರೆ. ಜಬೀನ್ ಹೇಳುವ ಪ್ರಕಾರ ಗಂಡ ಮುಖ್ತಾರ್ ಅಹ್ಮದ್ (Mukhtar Ahmed) ಮತ್ತು ಅತ್ತೆ ಲಿಯಾಖತ್ ಬೇಗಂ (Liyaquat Begum) ಆಕೆಯನ್ನು ಮನೆಯಿಂದ ಹೊರಹಾಕಿದ್ದಾರೆ. ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕೆ ಮನೆಯಿಂದ ಹೊರತಳ್ಳಿದ್ದಾರೆ ಅಂತ ಅವರು ಹೇಳುತ್ತಾರೆ. ವಿದ್ಯಾವಂತೆಯಾಗಿರುವ ಜಬೀನ್, ಗಂಡ ಮತ್ತು ಹೆಂಡತಿಯ ನಡವೆ ದೈಹಿಕ ಸಂಪರ್ಕವೇ ನಡೆಯದಿದ್ದರೆ ಹೇಗೆ ಮಕ್ಕಳಾಗುತ್ತವೆ ಅಂತ ಕೇಳುತ್ತಾರೆ. ಕಳೆದ 8 ತಿಂಗಳಿಂದ ಮುಖ್ತಾರ್ ಅಹ್ಮದ್ ತನ್ನಿಂದ ದೂರವಿದ್ದಾರೆ ಎಂದು ಹೇಳುವ ಅವರು ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು ಊಟಕ್ಕೆ ತೊಂದರೆಯಾಗುತ್ತಿದೆಯಂತೆ. ಕೇವಲ ತನ್ನಣ್ಣ ಹಾಗ ಅಮ್ಮನ ಮಾತು ಕೇಳುವ ಮುಖ್ತಾರ್ ಡಿವೋರ್ಸ್ ನೋಟೀಸ್ ಸಹ ಕಳುಹಿಸಿದ್ದು ಜಬೀನ್ ಅದನ್ನು ಸ್ವೀಕರಿಸಿಲ್ಲ. ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​