ಮದ್ಯದಂಗಡಿ ಬೇಡವೆಂದು ಹುಬ್ಬಳ್ಳಿ ನವನಗರ ಮಹಿಳೆಯರಿಂದ ಹೊಸ ಅಂಗಡಿ ಮುಂದೆ ಧರಣಿ

ಅರುಣ್​ ಕುಮಾರ್​ ಬೆಳ್ಳಿ

Updated on: Nov 16, 2024 | 11:19 AM

ಸ್ಥಳೀಯ ಶಾಸಕ ಅರವಿಂದ್ ಬೆಲ್ಲದ್ ಸ್ಥಳಕ್ಕೆ ಆಗಮಿಸಿ ಧರಣಿಗೆ ಕೂತ ಮಹಿಳೆಯರೊಂದಿಗೆ ಮಾತಾಡಿದರು. ರಾಜ್ಯ ಸರ್ಕಾರ ಮನಬಂದಂತೆ ಲಿಕ್ಕರ್ ಶಾಪ್ ಗಳಿಗೆ ಅನುಮತಿ ನೀಡುತ್ತಿರುವುದನ್ನು ಮದ್ಯ ಮಾರಾಟಗಾರರ ಸಂಘ ತೀವ್ರವಾಗಿ ವಿರೋಧಿಸುತ್ತಿದೆ. ಆದರೆ, ಅಬಕಾರಿ ಇಲಾಖೆ ಅನುಮತಿ ನೀಡಿರುವುದರಿಂದ ಪೊಲೀಸರು ಏನೂ ಮಾಡಲಾಗದು.

ಹುಬ್ಬಳ್ಳಿ: ರಾಜ್ಯದ ಎಲ್ಲ ಮಹಿಳೆಯರಲ್ಲಿ ಇಂಥ ಪ್ರಜ್ಞಾವಂತಿಕೆ ಮೂಡಿದರೆ ನಿಸ್ಸಂದೇಹವಾಗಿ ಮದ್ಯದ ಅಂಗಡಿಗಳ ಸಂಖ್ಯೆ ಕಡಿಮೆಯಾಗುತ್ತದೆ. ವಿಷಯವೇನೆಂದರೆ ಹುಬ್ಬಳ್ಳಿಯ ನವನಗರದ ಮಹಿಳಾ ನಿವಾಸಿಗಳು ತಮ್ಮ ಏರಿಯದಲ್ಲಿ ಮದ್ಯದಂಗಡಿ ಬೇಡ ಅಂತ ಹೇಳಿದರೂ ಓಪನ್ ಆಗಿದೆ. ಲಿಕ್ಕರ್ ಅಂಗಡಿ ಬೇಡ ನಮಗೆ ನ್ಯಾಯ ಬೇಕು ಎಂದು ಮಹಿಳಾ ಮಹಾಮಂಡಳದ ಸದಸ್ಯರು ಮತ್ತು ಸಾರ್ವಜನಿಕರು ಕಳೆದ ರಾತ್ರಿ ಅಂಗಡಿಯ ಮುಂದೆ ಕೂತು ಧರಣಿ ನಡೆಸಿದರು.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನವೆಂಬರ್ 20ರಂದು ಮದ್ಯ ಮಾರಾಟಗಾರರ ಸಂಘ ಅಂಗಡಿಗಳನ್ನು ಬಂದ್ ಮಾಡಲಿದೆ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.