‘ಶಕ್ತಿ ಯೋಜನೆ’ ಎಫೆಕ್ಟ್​: ಅಪ್ಪು ಸಮಾಧಿಯ ದರ್ಶನಕ್ಕೆ ಮಹಿಳಾಭಿಮಾನಿಗಳ ದಂಡು

‘ಶಕ್ತಿ ಯೋಜನೆ’ ಎಫೆಕ್ಟ್​: ಅಪ್ಪು ಸಮಾಧಿಯ ದರ್ಶನಕ್ಕೆ ಮಹಿಳಾಭಿಮಾನಿಗಳ ದಂಡು
|

Updated on: Jun 26, 2023 | 1:17 PM

ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರು ಶಕ್ತಿ ಯೋಜನೆ ಜಾರಿಗೆ ತಂದಿದ್ದಾರೆ. ಈಗ ಪುನೀತ್ ಸಮಾಧಿಗೆ ಮಹಿಳೆಯರು ಆಗಮಿಸುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಶಕ್ತಿ ಯೋಜನೆ ಜಾರಿಗೆ ತಂದಿದ್ದಾರೆ. ಈ ಯೋಜನೆ ಅಡಿಯಲ್ಲಿ ಮಹಿಳೆಯರು ಬಸ್​ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಈ ಮೊದಲು ರಾಜ್ಯದ ವಿವಿಧ ಪುಣ್ಯ ಕ್ಷೇತ್ರಗಳಿಗೆ ಮಹಿಳೆಯರು ತೆರಳಿದ್ದರು. ಈಗ ಪುನೀತ್ (Puneeth Rajkumar) ಸಮಾಧಿಗೂ ಮಹಿಳೆಯರು ಆಗಮಿಸುತ್ತಿದ್ದಾರೆ. ನಾಡಿನ ಮೂಲೆ ಮೂಲೆಗಳಿಂದ ಮಹಿಳೆಯರು ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಆಗಮಿಸುತ್ತಿದ್ದಾರೆ. ‘ನಾವು ಬಡವರು. ನಾವು ಅಷ್ಟು ದೂರದಿಂದ ಬರೋದಕ್ಕೆ ಆಗುತ್ತಿರಲಿಲ್ಲ. ಸರ್ಕಾರ ಫ್ರೀ ಬಸ್ ಕೊಡ್ತು. ಹೀಗಾಗಿ ಪುನೀತ್ ಸಮಾಧಿ ದರ್ಶನಕ್ಕೆ ಬಂದೆವು’ ಎಂದು ಮಹಿಳೆಯರು ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us