ರಸ್ತೆ ಮಧ್ಯೆಯೇ ಕೈಕೊಟ್ಟ ಸಾರಿಗೆ ಬಸ್, ಪ್ರಯಾಣಿಕರ ಪರದಾಟ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 02, 2024 | 2:47 PM

ರಸ್ತೆ ಮಧ್ಯೆಯೇ ಸಾರಿಗೆ ಬಸ್​ ಕೈಕೊಟ್ಟ ಘಟನೆ ನಗರದ ಹತ್ತಿಕುಣಿ ಕ್ರಾಸ್ ಬಳಿ ನಡೆದಿದ್ದು, ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಯಾದಗಿರಿ ಬಸ್ ನಿಲ್ದಾಣದಿಂದ ಸೇಡಂಗೆ ಹೊರಟ್ಟಿದ್ದ ಕೆಕೆಆರ್​ಟಿಸಿ ಬಸ್ ಇದಾಗಿದ್ದು, ಚಲಿಸುತ್ತಿದ್ದ ವೇಳೆ ಮಾರ್ಗ ಮಧ್ಯೆಯೇ ಬಸ್ ಕೆಟ್ಟು ನಿಂತ ಪರಿಣಾಮ, ಪ್ರಯಾಣಿಕರಿಗೆ ಸಮಸ್ಯೆಗೆ ಈಡಾಗಿದ್ದಾರೆ.

ಯಾದಗಿರಿ, ಜೂ.02: ಸಾರಿಗೆ ಸಂಸ್ಥೆಗಳಿಗೆ ಅದೇಷ್ಟೇ ಹೊಸ ಬಸ್​ಗಳನ್ನು ನೀಡಿದರು. ಹಳೆಯ ಬಸ್​ಗಳಿಗೆ ಮುಕ್ತಿ ಸಿಗುತ್ತಿಲ್ಲ. ಇದರ ಜೊತೆಗೆ ಸಾರಿಗೆ ಅಧಿಕಾರಿಗಳು ಕೂಡ ಅಂತಹ ಬಸ್​ಗಳನ್ನೇ ರಸ್ತೆಗೆ ಬಿಡುತ್ತಿದ್ದಾರೆ. ಪರಿಣಾಮ ತಲುಪಬೇಕಾದ ಸ್ಥಳ ತಲುಪದೆ ಅರ್ಧ ದಾರಿಯಲ್ಲೇ ಬಸ್ಸುಗಳು ಕೆಟ್ಟು ನಿಲ್ಲುತ್ತಿವೆ. ಈ ಮಧ್ಯೆಯೇ ಸಾರಿಗೆ ಬಸ್​ ಕೈಕೊಟ್ಟ ಘಟನೆ ನಗರದ ಹತ್ತಿಕುಣಿ ಕ್ರಾಸ್ ಬಳಿ ನಡೆದಿದ್ದು, ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಯಾದಗಿರಿ(Yadagiri) ಬಸ್ ನಿಲ್ದಾಣದಿಂದ ಸೇಡಂಗೆ ಹೊರಟ್ಟಿದ್ದ ಕೆಕೆಆರ್​ಟಿಸಿ ಬಸ್ ಇದಾಗಿದ್ದು, ಚಲಿಸುತ್ತಿದ್ದ ವೇಳೆ ಮಾರ್ಗ ಮಧ್ಯೆಯೇ ಬಸ್ ಕೆಟ್ಟು ನಿಂತ ಪರಿಣಾಮ, ಪ್ರಯಾಣಿಕರಿಗೆ ಸಮಸ್ಯೆಗೆ ಈಡಾಗಿದ್ದಾರೆ. ಇನ್ನು ಬೇರೊಂದು ಬಸ್​ಗಾಗಿ ಕಾದು ಕಾದು ಸುಸ್ತಾಗಿದ್ದಾರೆ. ಕೆಲವರು ಸರಿಯಾದ ಸಮಯಕ್ಕೆ ಅಂದುಕೊಂಡ ಸ್ಥಳಕ್ಕೆ ಹೋಗಲಾರದೆ ಸಾರಿಗೆ ಸಂಸ್ಥೆ ವಿರುದ್ದ ಕಿಡಿಕಾರಿದರು. ಬಳಿಕ ಕಂಡಕ್ಟರ್, ಬೇರೊಂದು ಬಸ್ ವ್ಯವಸ್ಥೆ ಮಾಡಿ ಪ್ರಯಾಣಿಕರನ್ನ ಆ ಬಸ್​ಗೆ ಹತ್ತಿಸಿ ಕಳುಹಿಸಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:47 pm, Sun, 2 June 24

Follow us on