Mandya: ಮೂವತ್ತಾದರೂ ಬ್ರಹ್ಮಚಾರಿಗಳಾಗುಳಿದಿರುವ ಕೆಎಂ ದೊಡ್ಡಿ ಯುವಕರು ಮಹದೇಶ್ವರ ಮಾದಪ್ಪನಿಗೆ ಹರಕೆ ಸಲ್ಲಿಸಲು ಪಾದಯಾತ್ರೆ ಹೊರಟರು!

ಅರುಣ್​ ಕುಮಾರ್​ ಬೆಳ್ಳಿ

Updated on: Feb 23, 2023 | 1:58 PM

ಹಾಗಾಗೇ, ಗ್ರಾಮದ ಹಲವಾರು 30 ಪ್ಲಸ್ ಯುವಕರು ಪಾದಯಾತ್ರೆ ಹೊರಟಿದ್ದಾರೆ. ಅಂದಹಾಗೆ ಅವರ ಪಾದಯಾತ್ರೆಯನ್ನು ಚಿತ್ರನಟ ಡಾಲಿ ಧನಂಜಯ ಚಾಲನೆ ನೀಡಿದ್ದಾರೆ.

ಮಂಡ್ಯ: ಜಿಲ್ಲೆಯ ಕೆಎಂ ದೊಡ್ಡಿ ಗ್ರಾಮದ ಯುವಕರಿಗೆ ಒಂದು ದೊಡ್ಡ ಸಮಸ್ಯೆ ಕಾಡುತ್ತಿದೆ. ವಯಸ್ಸು ಮೀರುತ್ತಿದ್ದರೂ ಅವರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವಂತೆ. ಈ ಸಮಸ್ಯೆ ಈಗ ಎಲ್ಲ ಕಡೆ ಆರಂಭವಾಗಿದೆ ಅಂತ ಪ್ರಾಯಶಃ ಅವರಿಗೆ ಗೊತ್ತಿರಲಿಕ್ಕಿಲ್ಲ. ವಿದ್ಯಾವಂತ ಯುವಕರಿಗೆ ನೌಕರಿಗಳು ಮರೀಚಿಕೆಯಾಗಿರುವುದರಿಂದ ಹೆಣ್ಣು ಹೆತ್ತವರು ಅದ್ಹೇಗೆ ಮಗಳನ್ನು ನೌಕರಿಯಿಲ್ಲದ ತರುಣನಿಗೆ ಕೊಟ್ಟಾರು? ಆದರೆ, ಕೆಎಮ್ ದೊಡ್ಡಿ (KM Doddi) ಗ್ರಾಮದ ಯುವಕರಿಗೆ ಯಾರೋ ಒಂದು ಉಪಾಯ ಸೂಚಿಸಿದ್ದಾರೆ. ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡಿ ಮಾದಪ್ಪನಿಗೆ (Madappa) ಪ್ರಾರ್ಥನೆ ಸಲ್ಲಿಸಿದರೆ ಅವರ ಸಮಸ್ಯೆ ನೀಗುತ್ತದಂತೆ. ಹಾಗಾಗೇ, ಗ್ರಾಮದ ಹಲವಾರು 30 ಪ್ಲಸ್ ಯುವಕರು ಪಾದಯಾತ್ರೆ ಹೊರಟಿದ್ದಾರೆ. ಅಂದಹಾಗೆ ಅವರ ಪಾದಯಾತ್ರೆಯನ್ನು ಚಿತ್ರನಟ ಡಾಲಿ ಧನಂಜಯ (Dolly Dhananjay) ಚಾಲನೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.