‘RCB ಹೊಗಳಿದ್ರೆ ಪಂಜಾಬ್ ಟೀಂ ನನ್ನ ಕೊಲ್ತಾರೆ’; ಟಿವಿ9 ಜೊತೆ ಚಾಹಲ್ ಮಾತು; ವಿಡಿಯೋ ನೋಡಿ
Yuzvendra Chahal React on RCB: ಖಾಸಗಿ ಕಾರ್ಯಕ್ರಮವೊಂದಕ್ಕೆ ಬೆಂಗಳೂರಿಗೆ ಆಗಮಿಸಿದ್ದ ಟೀಂ ಇಂಡಿಯಾದ ಗೂಗ್ಲಿ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಟಿವಿ9 ಕನ್ನಡದೊಂದಿಗೆ ಮಾತಿಗೆ ಸಿಕ್ಕಿದ್ದಾರೆ. ವಾಹಿನಿಯ ಆ್ಯಂಕರ್ ಅವಿನಾಶ್ ಯುವನ್ ಅವರೊಂದಿಗೆ ಮಾತನಾಡಿರುವ ಚಾಹಲ್, ಆರ್ಸಿಬಿಯೊಂದಿಗೆ ಅವರ ಒಡನಾಟ, ಬೆಂಗಳೂರು ಹಾಗೂ ಬೆಂಗಳೂರಿನ ಜನರ ಬಗ್ಗೆ ಅವರಿಗಿರುವ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಟೀಂ ಇಂಡಿಯಾ ಅಭಿಮಾನಿಗಳಿಗೆ ಗೂಗ್ಲಿ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅದರಲ್ಲೂ ಆರ್ಸಿಬಿ ಅಭಿಮಾನಿಗಳಿಗೆ ಚಾಹಲ್ ಚಿರಪರಿಚಿತರು. 2014 ರಿಂದ 2021 ರವರೆಗೆ ಆರ್ಸಿಬಿ ಪರ ಹಲವು ಸ್ಮರಣೀಯ ಪಂದ್ಯಗಳನ್ನಾಡಿದ್ದ ಚಾಹಲ್ಗೆ ಬೆಂಗಳೂರು ಹಾಗೂ ಇಲ್ಲಿಯ ಜನರೊಂದಿಗೆ ಅವಿನಾಭಾವ ನಂಟಿದೆ. ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದಿರುವ ಚಾಹಲ್ ದೇಶೀ ಕ್ರಿಕೆಟ್ ಜೊತೆಗೆ ಐಪಿಎಲ್ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಕ್ರಿಕೆಟ್ನ ಹೊರತಾಗಿ ಬೇರೆ ಕ್ಷೇತ್ರಗಳಲ್ಲಿಯೂ ತೊಡಗಿಕೊಂಡಿರುವ ಚಾಹಲ್, ಪ್ರಾಯೋಗಿಕ ಕಲಿಕೆ ಹಾಗೂ ಸಮಗ್ರ ಶಿಕ್ಷಣದಲ್ಲಿ ಮುಂದಿರುವ ಹಾಯ್- ಕಲ್ಪಾ ಗ್ರೂಪ್ ಆಫ್ ಸ್ಕೂಲ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದರ ಜೊತೆಗೆ ಪಾಲುದಾರ ಕೂಡ ಆಗಿದ್ದಾರೆ. ಹೀಗಾಗಿ ಶಾಲೆಯ ಸಮಾರಂಭದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಆಗಮಿಸಿದ್ದ ಟೀಂ ಇಂಡಿಯಾದ ಗೂಗ್ಲಿ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಟಿವಿ9 ಕನ್ನಡ ವಾಹಿನಿಯೊಂದಿಗೆ ಮಾತಿಗೆ ಸಿಕ್ಕಿದ್ದಾರೆ. ವಾಹಿನಿಯ ಆ್ಯಂಕರ್ ಅವಿನಾಶ್ ಯುವನ್ ಅವರೊಂದಿಗೆ ಮಾತನಾಡಿರುವ ಚಾಹಲ್, ಆರ್ಸಿಬಿಯೊಂದಿಗೆ ಅವರ ಒಡನಾಟ, ಬೆಂಗಳೂರು ಹಾಗೂ ಬೆಂಗಳೂರಿನ ಜನರ ಬಗ್ಗೆ ಅವರಿಗಿರುವ ಅಭಿಪ್ರಾಯ ಹಾಗೂ ಮುಂಬರುವ ಐಪಿಎಲ್ಗೆ ಅವರ ತಯಾರಿ ಹೇಗಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಚಾಹಲ್ ಕನ್ನಡದಲ್ಲೇ ಮಾತು ಆರಂಭಿಸಿದ್ದು, ಕನ್ನಡದ ಮೇಲೆ ಹಾಗೂ ಕನ್ನಡಿಗರ ಮೇಲೆ ಅವರಿಗಿರುವ ಪ್ರೀತಿಯನ್ನು ಮತ್ತೊಮ್ಮೆ ಸಾಭೀತುಪಡಿಸಿದೆ.

ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ

ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ

ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್ಗೆ ಸೇರ್ಪಡೆ

ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್ಡಿಕೆಯನ್ನು ಭೇಟಿಯಾದ ಸತೀಶ್
