AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಫ್ರಿಕಾದ ಬೋಟ್ಸ್ವಾನಾದಲ್ಲಿ 500 ಆನೆಗಳ ಸಾವು, ಕಾರಣ ಮಾತ್ರ ನಿಗೂಢ

ಬೋಟ್ಸ್ವಾನ: ಕಳೆದ ಕೆಲವು ದಿನಗಳಲ್ಲಿ ಸುಮಾರು 500 ಆನೆಗಳು ಆಫ್ರಿಕಾದ ಬೋಟ್ಸ್ವಾನಾದಲ್ಲಿ ಮೃತಪಟ್ಟಿವೆ. ಈ ರೀತಿ ಆನೆಗಳ ನಿಗೂಢ ಸಾವಿಗೆ ಸಂರಕ್ಷಣಾ ವಿಪತ್ತು ಕಾರಣ ಎಂದು ವಿವರಿಸಲಾಗಿದೆ. ಆದರೆ ಆನೆಗಳ ಸಾವು ಮಾತ್ರ ತುಂಬಾ ದುರಂತದ ಸಂಗತಿ. ಮೇ ತಿಂಗಳ ಆರಂಭದಲ್ಲಿ ಒಕಾವಾಂಗೊ ಡೆಲ್ಟಾದಲ್ಲಿ ಆನೆಗಳ ಸಾವು ಸಂಭವಿಸಿದೆ ಎಂದು ಇದೇ ರೀತಿ ವರದಿಯಾಗಿತ್ತು. ತಿಂಗಳ ಅಂತ್ಯದ ವೇಳೆಗೆ 169 ಆನೆಗಳು ಸಾವನ್ನಪ್ಪಿದ್ದವು. ಜೂನ್ ಮಧ್ಯದ ವೇಳೆಗೆ, ಈ ಸಂಖ್ಯೆ ದ್ವಿಗುಣಗೊಂಡಿತ್ತು. 70% ಸಾವುಗಳು ವಾಟರ್‌ಹೋಲ್‌ಗಳ ಸಮೀಪವೇ […]

ಆಫ್ರಿಕಾದ ಬೋಟ್ಸ್ವಾನಾದಲ್ಲಿ 500 ಆನೆಗಳ ಸಾವು, ಕಾರಣ ಮಾತ್ರ ನಿಗೂಢ
ಆಯೇಷಾ ಬಾನು
ಆಯೇಷಾ ಬಾನು|

Updated on:Jul 03, 2020 | 10:27 AM

Share

ಬೋಟ್ಸ್ವಾನ: ಕಳೆದ ಕೆಲವು ದಿನಗಳಲ್ಲಿ ಸುಮಾರು 500 ಆನೆಗಳು ಆಫ್ರಿಕಾದ ಬೋಟ್ಸ್ವಾನಾದಲ್ಲಿ ಮೃತಪಟ್ಟಿವೆ. ಈ ರೀತಿ ಆನೆಗಳ ನಿಗೂಢ ಸಾವಿಗೆ ಸಂರಕ್ಷಣಾ ವಿಪತ್ತು ಕಾರಣ ಎಂದು ವಿವರಿಸಲಾಗಿದೆ. ಆದರೆ ಆನೆಗಳ ಸಾವು ಮಾತ್ರ ತುಂಬಾ ದುರಂತದ ಸಂಗತಿ.

ಮೇ ತಿಂಗಳ ಆರಂಭದಲ್ಲಿ ಒಕಾವಾಂಗೊ ಡೆಲ್ಟಾದಲ್ಲಿ ಆನೆಗಳ ಸಾವು ಸಂಭವಿಸಿದೆ ಎಂದು ಇದೇ ರೀತಿ ವರದಿಯಾಗಿತ್ತು. ತಿಂಗಳ ಅಂತ್ಯದ ವೇಳೆಗೆ 169 ಆನೆಗಳು ಸಾವನ್ನಪ್ಪಿದ್ದವು. ಜೂನ್ ಮಧ್ಯದ ವೇಳೆಗೆ, ಈ ಸಂಖ್ಯೆ ದ್ವಿಗುಣಗೊಂಡಿತ್ತು. 70% ಸಾವುಗಳು ವಾಟರ್‌ಹೋಲ್‌ಗಳ ಸಮೀಪವೇ ಸಂಭವಿಸಿದೆ ಎಂದು ಸ್ಥಳೀಯ ಮೂಲಗಳಿಂದ ತಿಳಿದು ಬಂದಿದೆ.

ಇನ್ನು ಈ ರೀತಿ ಆನೆಗಳ ಸಾಮೂಹಿಕ ಸಾವು ಬಹಳ ದೀರ್ಘಕಾಲದಿಂದಲೂ ನಾವು ಕಂಡಿಲ್ಲ. ಆದರೆ ಇದು ಬರಗಾಲದ ಅಭಾವದಿಂದಾಗಿ ಸಂಭವಿಸಿದ್ದ, ಅಥವಾ ಅದನ್ನು ಹೊರತು ಪಡಿಸಿ ಬೇರೇನಿದೆ ಅದು ನನಗೆ ತಿಳಿದಿಲ್ಲ ಎಂದು ಯುಕೆ ಮೂಲದ ಚಾರಿಟಿ ನ್ಯಾಷನಲ್ ಪಾರ್ಕ್ ಪಾರುಗಾಣಿಕಾ ಸಂರಕ್ಷಣಾ ನಿರ್ದೇಶಕ ಡಾ. ನಿಯಾಲ್ ಮೆಕ್ಕನ್ ಹೇಳಿದ್ದಾರೆ.

ಬೋಟ್ಸ್ವಾನ ಸರ್ಕಾರ ಇನ್ನೂ ಆನೆಗಳ ಸಾಮೂಹಿಕ ಸಾವಿಗೆ ಕಾರಣ ಹುಡುಕಲು ಮುಂದಾಗಿಲ್ಲ. ಇನ್ನು ಮಾದರಿಗಳನ್ನು ಪರೀಕ್ಷಿಸಿಲ್ಲ ಆದ್ದರಿಂದ ಸಾವಿಗೆ ಕಾರಣವೇನು ಅಥವಾ ಅವು ಮಾನವನ ಆರೋಗ್ಯಕ್ಕೆ ಅಪಾಯವನ್ನುಂಟುಮಾಡಬಹುದೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಎರಡು ಮುಖ್ಯ ಸಾಧ್ಯತೆಗಳು ಎಂದರೆ ವಿಷ ಅಥವಾ ಮಾರಕ ರೋಗ ಕಾರಣವಾಗಿರಬಹುದು.

Published On - 10:16 am, Fri, 3 July 20

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್