AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಜಾದಲ್ಲಿ ಮುಂದುವರಿದ ಇಸ್ರೇಲ್​ ಏರ್​ಸ್ಟ್ರೈಕ್​; ಇಸ್ಲಾಮಿಕ್​ ಜಿಹಾದ್​ ಉಗ್ರಸಂಘಟನೆಯ ಉನ್ನತ ಕಮಾಂಡರ್​​ನ ಹತ್ಯೆ

ಗಾಜಾದಲ್ಲಿ ಇಸ್ರೇಲ್ ಸೈನ್ಯದ ದಾಳಿಯ ಚಿತ್ರಣಗಳು ಸ್ಪಷ್ಟವಾಗಿ ಕಾಣುತ್ತಿದೆ. ಇಂದು ಮೂರಂತಸ್ತಿನ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಆದರೆ ಯಾವುದೇ ಕಟ್ಟಡದ ಮೇಲೆ ಏರ್​ಸ್ಟ್ರೈಕ್ ಮಾಡುವುದಕ್ಕೂ ಮೊದಲು ಅಲ್ಲಿನ ನಿವಾಸಿಗಳಿಗೆ 10 ನಿಮಿಷ ಮೊದಲೇ ಇಸ್ರೇಲ್ ಸೈನ್ಯ ಮಾಹಿತಿ ನೀಡುತ್ತಿದೆ.

ಗಾಜಾದಲ್ಲಿ ಮುಂದುವರಿದ ಇಸ್ರೇಲ್​ ಏರ್​ಸ್ಟ್ರೈಕ್​; ಇಸ್ಲಾಮಿಕ್​ ಜಿಹಾದ್​ ಉಗ್ರಸಂಘಟನೆಯ ಉನ್ನತ ಕಮಾಂಡರ್​​ನ ಹತ್ಯೆ
ಇಸ್ರೇಲ್​ ಏರ್​ಸ್ಟ್ರೈಕ್​ನಿಂದಾದ ಹಾನಿಯ ಚಿತ್ರಣ
Lakshmi Hegde
|

Updated on: May 17, 2021 | 10:01 PM

Share

ಇಸ್ರೇಲ್​ ಸೈನ್ಯ ಗಾಜಾದ ಮೇಲಿನ ವೈಮಾನಿಕ ದಾಳಿಯನ್ನು ಮುಂದುವರಿಸಿದೆ. ಇಂದು ಮುಂಜಾನೆ ನಡೆಸಿದ ಏರ್​ಸ್ಟ್ರೈಕ್​​ನಲ್ಲಿ, ಹಮಾಸ್ ಉಗ್ರಸಂಘಟನೆಗೆ ಸೇರಿದ 15 ಕಿಮೀ ಉದ್ದದ ಸುರಂಗ ಮತ್ತು ಸಂಘಟನೆಯ ಕಮಾಂಡರ್​​ಗಳ 9 ಮನೆಯನ್ನು ಧ್ವಂಸ ಮಾಡಿದ್ದಾಗಿ ಹೇಳಿಕೆ ಬಿಡುಗಡೆ ಮಾಡಿದೆ. ಗಾಜಾದ ಹಮಾಸ್​ ಮತ್ತು ಇಸ್ರೇಲ್​ ಸೈನ್ಯದ ನಡುವೆ ಯುದ್ಧ ಸದೃಶ ದಾಳಿ-ಪ್ರತಿದಾಳಿ ಶುರುವಾಗಿ ವಾರವೇ ಕಳೆದಿದೆ. ಹಮಾಸ್​ ಇಸ್ರೇಲ್ ಮೇಲೆ ನಡೆಸಿದ್ದ ರಾಕೆಟ್​ ದಾಳಿಗೆ ಪ್ರತಿಯಾಗಿ, ಇಸ್ರೇಲ್ ಸೈನ್ಯ ಗಾಜಾದಲ್ಲಿ ನಿರಂತರವಾಗಿ ವೈಮಾನಿಕ ದಾಳಿ ನಡೆಸುತ್ತಿದೆ. ಇಷ್ಟುದಿನಗಳಲ್ಲಿ ಇಂದು ಮುಂಜಾನೆ ನಡೆದ ದಾಳಿ ತುಂಬ ಭಯಂಕರವಾಗಿತ್ತು ಎಂದು ಗಾಜಾ ನಿವಾಸಿಗಳು ಹೇಳಿದ್ದಾರೆ.

ಹಾಗೇ ಇಂದಿನ ಏರ್​ಸ್ಟ್ರೈಕ್​​ನಲ್ಲಿ ಗಾಜಾದ ಇಸ್ಲಾಮಿಕ್​ ಜಿಹಾದ್​ ಉಗ್ರಸಂಘಟನೆಯ ಉನ್ನತ ಕಮಾಂಡರ್​ ಒಬ್ಬನನ್ನು ಕೊಲ್ಲಲಾಗಿದೆ ಎಂದೂ ಇಸ್ರೇಲ್​ ಸೈನ್ಯ ತಿಳಿಸಿದೆ. ಈ ಕಮಾಂಡರ್ ಹೆಸರು ಹುಸೇನ್​ ಅಬು ಹರ್ಬೀದ್​ ಎಂದಾಗಿದ್ದು, ಇಸ್ಲಾಮಿಕ್​ ಜಿಹಾದ್​ನ ಉತ್ತರ ವಿಭಾಗದ ಕಮಾಂಡರ್ ಆಗಿದ್ದ. ಇಸ್ರೇಲ್​ ನಾಗರಿಕರ ಮೇಲೆ ನಡೆದ ಹಲವು ಕ್ಷಿಪಣಿ ದಾಳಿಯ ಹಿಂದಿನ ಮಾಸ್ಟರ್​ ಮೈಂಡ್ ಆಗಿದ್ದ. ಸುಮಾರು 15 ವರ್ಷಗಳಿಂದ ಆ ಸಂಘಟನೆಯ ಕಮಾಂಡರ್ ಆಗಿದ್ದ ಎಂದು ಇಸ್ರೇಲಿ ಸೈನ್ಯ ತಿಳಿಸಿದೆ. ಹಾಗೇ, ಇದಕ್ಕೆ ಸಂಬಂಧಪಟ್ಟ ವಿಡಿಯೋ ಫೂಟೇಜ್​ ಕೂಡ ಬಿಡುಗಡೆ ಮಾಡಿದೆ.

ಇನ್ನಳಿದಂತೆ ಗಾಜಾದಲ್ಲಿ ಇಸ್ರೇಲ್ ಸೈನ್ಯದ ದಾಳಿಯ ಚಿತ್ರಣಗಳು ಸ್ಪಷ್ಟವಾಗಿ ಕಾಣುತ್ತಿದೆ. ಇಂದು ಮೂರಂತಸ್ತಿನ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಆದರೆ ಯಾವುದೇ ಕಟ್ಟಡದ ಮೇಲೆ ಏರ್​ಸ್ಟ್ರೈಕ್ ಮಾಡುವುದಕ್ಕೂ ಮೊದಲು ಅಲ್ಲಿನ ನಿವಾಸಿಗಳಿಗೆ 10 ನಿಮಿಷ ಮೊದಲೇ ಇಸ್ರೇಲ್ ಸೈನ್ಯ ಮಾಹಿತಿ ನೀಡುತ್ತಿದೆ. ಅಂದರೆ ಅದು ಕೇವಲ ಹಮಾಸ್ ಉಗ್ರರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ನಿನ್ನೆ, ಅಲ್​ ಜಜೀರಾ ಸೇರಿ ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು ಇದ್ದ ಕಟ್ಟಡವನ್ನು ಇಸ್ರೇಲ್​ ಸೈನ್ಯ ನೆಲಸಮ ಮಾಡಿತ್ತು.

ಇದನ್ನೂ ಓದಿ: ಕೊರೊನಾ ಸೋಂಕಿನಿಂದ ಪಾರಾಗಲು ಸೀಮೆಎಣ್ಣೆ ಕುಡಿದು ಮೃತಪಟ್ಟ ವ್ಯಕ್ತಿ; ಸತ್ತ ಮೇಲೆ ವರದಿಯೂ ನೆಗೆಟಿವ್ ಬಂತು..

Cyclone Tauktae: ತೌಕ್ತೆ ಅಬ್ಬರಕ್ಕೆ ಮಹಾರಾಷ್ಟ್ರದಲ್ಲಿ 6 ಮಂದಿ ಸಾವು; ಅಹ್ಮದಾಬಾದ್​ನಲ್ಲಿ ವಿಪರೀತ ಮಳೆ, ಪರಿಸ್ಥಿತಿ ಬಗ್ಗೆ ವರದಿ ಪಡೆದ ಪ್ರಧಾನಿ ಮೋದಿ

ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?