AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಜಾದಲ್ಲಿ ಮುಂದುವರಿದ ಇಸ್ರೇಲ್​ ಏರ್​ಸ್ಟ್ರೈಕ್​; ಇಸ್ಲಾಮಿಕ್​ ಜಿಹಾದ್​ ಉಗ್ರಸಂಘಟನೆಯ ಉನ್ನತ ಕಮಾಂಡರ್​​ನ ಹತ್ಯೆ

ಗಾಜಾದಲ್ಲಿ ಇಸ್ರೇಲ್ ಸೈನ್ಯದ ದಾಳಿಯ ಚಿತ್ರಣಗಳು ಸ್ಪಷ್ಟವಾಗಿ ಕಾಣುತ್ತಿದೆ. ಇಂದು ಮೂರಂತಸ್ತಿನ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಆದರೆ ಯಾವುದೇ ಕಟ್ಟಡದ ಮೇಲೆ ಏರ್​ಸ್ಟ್ರೈಕ್ ಮಾಡುವುದಕ್ಕೂ ಮೊದಲು ಅಲ್ಲಿನ ನಿವಾಸಿಗಳಿಗೆ 10 ನಿಮಿಷ ಮೊದಲೇ ಇಸ್ರೇಲ್ ಸೈನ್ಯ ಮಾಹಿತಿ ನೀಡುತ್ತಿದೆ.

ಗಾಜಾದಲ್ಲಿ ಮುಂದುವರಿದ ಇಸ್ರೇಲ್​ ಏರ್​ಸ್ಟ್ರೈಕ್​; ಇಸ್ಲಾಮಿಕ್​ ಜಿಹಾದ್​ ಉಗ್ರಸಂಘಟನೆಯ ಉನ್ನತ ಕಮಾಂಡರ್​​ನ ಹತ್ಯೆ
ಇಸ್ರೇಲ್​ ಏರ್​ಸ್ಟ್ರೈಕ್​ನಿಂದಾದ ಹಾನಿಯ ಚಿತ್ರಣ
Lakshmi Hegde
|

Updated on: May 17, 2021 | 10:01 PM

Share

ಇಸ್ರೇಲ್​ ಸೈನ್ಯ ಗಾಜಾದ ಮೇಲಿನ ವೈಮಾನಿಕ ದಾಳಿಯನ್ನು ಮುಂದುವರಿಸಿದೆ. ಇಂದು ಮುಂಜಾನೆ ನಡೆಸಿದ ಏರ್​ಸ್ಟ್ರೈಕ್​​ನಲ್ಲಿ, ಹಮಾಸ್ ಉಗ್ರಸಂಘಟನೆಗೆ ಸೇರಿದ 15 ಕಿಮೀ ಉದ್ದದ ಸುರಂಗ ಮತ್ತು ಸಂಘಟನೆಯ ಕಮಾಂಡರ್​​ಗಳ 9 ಮನೆಯನ್ನು ಧ್ವಂಸ ಮಾಡಿದ್ದಾಗಿ ಹೇಳಿಕೆ ಬಿಡುಗಡೆ ಮಾಡಿದೆ. ಗಾಜಾದ ಹಮಾಸ್​ ಮತ್ತು ಇಸ್ರೇಲ್​ ಸೈನ್ಯದ ನಡುವೆ ಯುದ್ಧ ಸದೃಶ ದಾಳಿ-ಪ್ರತಿದಾಳಿ ಶುರುವಾಗಿ ವಾರವೇ ಕಳೆದಿದೆ. ಹಮಾಸ್​ ಇಸ್ರೇಲ್ ಮೇಲೆ ನಡೆಸಿದ್ದ ರಾಕೆಟ್​ ದಾಳಿಗೆ ಪ್ರತಿಯಾಗಿ, ಇಸ್ರೇಲ್ ಸೈನ್ಯ ಗಾಜಾದಲ್ಲಿ ನಿರಂತರವಾಗಿ ವೈಮಾನಿಕ ದಾಳಿ ನಡೆಸುತ್ತಿದೆ. ಇಷ್ಟುದಿನಗಳಲ್ಲಿ ಇಂದು ಮುಂಜಾನೆ ನಡೆದ ದಾಳಿ ತುಂಬ ಭಯಂಕರವಾಗಿತ್ತು ಎಂದು ಗಾಜಾ ನಿವಾಸಿಗಳು ಹೇಳಿದ್ದಾರೆ.

ಹಾಗೇ ಇಂದಿನ ಏರ್​ಸ್ಟ್ರೈಕ್​​ನಲ್ಲಿ ಗಾಜಾದ ಇಸ್ಲಾಮಿಕ್​ ಜಿಹಾದ್​ ಉಗ್ರಸಂಘಟನೆಯ ಉನ್ನತ ಕಮಾಂಡರ್​ ಒಬ್ಬನನ್ನು ಕೊಲ್ಲಲಾಗಿದೆ ಎಂದೂ ಇಸ್ರೇಲ್​ ಸೈನ್ಯ ತಿಳಿಸಿದೆ. ಈ ಕಮಾಂಡರ್ ಹೆಸರು ಹುಸೇನ್​ ಅಬು ಹರ್ಬೀದ್​ ಎಂದಾಗಿದ್ದು, ಇಸ್ಲಾಮಿಕ್​ ಜಿಹಾದ್​ನ ಉತ್ತರ ವಿಭಾಗದ ಕಮಾಂಡರ್ ಆಗಿದ್ದ. ಇಸ್ರೇಲ್​ ನಾಗರಿಕರ ಮೇಲೆ ನಡೆದ ಹಲವು ಕ್ಷಿಪಣಿ ದಾಳಿಯ ಹಿಂದಿನ ಮಾಸ್ಟರ್​ ಮೈಂಡ್ ಆಗಿದ್ದ. ಸುಮಾರು 15 ವರ್ಷಗಳಿಂದ ಆ ಸಂಘಟನೆಯ ಕಮಾಂಡರ್ ಆಗಿದ್ದ ಎಂದು ಇಸ್ರೇಲಿ ಸೈನ್ಯ ತಿಳಿಸಿದೆ. ಹಾಗೇ, ಇದಕ್ಕೆ ಸಂಬಂಧಪಟ್ಟ ವಿಡಿಯೋ ಫೂಟೇಜ್​ ಕೂಡ ಬಿಡುಗಡೆ ಮಾಡಿದೆ.

ಇನ್ನಳಿದಂತೆ ಗಾಜಾದಲ್ಲಿ ಇಸ್ರೇಲ್ ಸೈನ್ಯದ ದಾಳಿಯ ಚಿತ್ರಣಗಳು ಸ್ಪಷ್ಟವಾಗಿ ಕಾಣುತ್ತಿದೆ. ಇಂದು ಮೂರಂತಸ್ತಿನ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಆದರೆ ಯಾವುದೇ ಕಟ್ಟಡದ ಮೇಲೆ ಏರ್​ಸ್ಟ್ರೈಕ್ ಮಾಡುವುದಕ್ಕೂ ಮೊದಲು ಅಲ್ಲಿನ ನಿವಾಸಿಗಳಿಗೆ 10 ನಿಮಿಷ ಮೊದಲೇ ಇಸ್ರೇಲ್ ಸೈನ್ಯ ಮಾಹಿತಿ ನೀಡುತ್ತಿದೆ. ಅಂದರೆ ಅದು ಕೇವಲ ಹಮಾಸ್ ಉಗ್ರರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ನಿನ್ನೆ, ಅಲ್​ ಜಜೀರಾ ಸೇರಿ ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು ಇದ್ದ ಕಟ್ಟಡವನ್ನು ಇಸ್ರೇಲ್​ ಸೈನ್ಯ ನೆಲಸಮ ಮಾಡಿತ್ತು.

ಇದನ್ನೂ ಓದಿ: ಕೊರೊನಾ ಸೋಂಕಿನಿಂದ ಪಾರಾಗಲು ಸೀಮೆಎಣ್ಣೆ ಕುಡಿದು ಮೃತಪಟ್ಟ ವ್ಯಕ್ತಿ; ಸತ್ತ ಮೇಲೆ ವರದಿಯೂ ನೆಗೆಟಿವ್ ಬಂತು..

Cyclone Tauktae: ತೌಕ್ತೆ ಅಬ್ಬರಕ್ಕೆ ಮಹಾರಾಷ್ಟ್ರದಲ್ಲಿ 6 ಮಂದಿ ಸಾವು; ಅಹ್ಮದಾಬಾದ್​ನಲ್ಲಿ ವಿಪರೀತ ಮಳೆ, ಪರಿಸ್ಥಿತಿ ಬಗ್ಗೆ ವರದಿ ಪಡೆದ ಪ್ರಧಾನಿ ಮೋದಿ

Follow Us
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ