AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನ್​ನ ಜಲಾಲಾಬಾದ್​ ಸರಣಿ ಸ್ಫೋಟದಲ್ಲಿ 35 ತಾಲಿಬಾನಿಗಳು ಸಾವು; ದಾಳಿಯ ಹೊಣೆ ಹೊತ್ತ ಐಎಸ್​ ಸಂಘಟನೆ

ಈ ಹಿಂದೆ ಅಫ್ಘಾನಿಸ್ತಾನ ಸರ್ಕಾರವಿದ್ದಾಗ ನಂಗರ್​ಹಾರ್​ ಮತ್ತು ಕುನಾರ್​ ಪ್ರಾಂತ್ಯಗಳಲ್ಲಿ ಅನೇಕ ಜಿಲ್ಲೆಗಳು ಐಎಸ್​ ಉಗ್ರರ ನೆಲೆಗಳಾಗಿದ್ದವು. ಸುಮಾರು ಐದುವರ್ಷಗಳ ಕಾಲ ಆ ಜಿಲ್ಲೆಗಳನ್ನೆಲ್ಲ ಸಂಪೂರ್ಣವಾಗಿ ಅವರೇ ಆಳಿದ್ದರು.

ಅಫ್ಘಾನ್​ನ ಜಲಾಲಾಬಾದ್​ ಸರಣಿ ಸ್ಫೋಟದಲ್ಲಿ 35 ತಾಲಿಬಾನಿಗಳು ಸಾವು; ದಾಳಿಯ ಹೊಣೆ ಹೊತ್ತ ಐಎಸ್​ ಸಂಘಟನೆ
ಜಲಾಲಾಬಾದ್​ ಚಿತ್ರಣ
TV9 Web
| Updated By: Lakshmi Hegde|

Updated on: Sep 20, 2021 | 7:05 PM

Share

ಅಫ್ಘಾನಿಸ್ತಾನದ ಪೂರ್ವನಗರವಾದ ಜಲಾಲಾಬಾದ್​​ನಲ್ಲಿ ನಡೆದ ಬಾಂಬ್​ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್​ ಸ್ಟೇಟ್​ ಹೊತ್ತುಕೊಂಡಿದೆ. ಇದನ್ನು ಗ್ರೂಪ್​​ನ ಅಮಾಕ್​ ನ್ಯೂಸ್​ ಏಜೆನ್ಸಿ ತನ್ನ ಟೆಲಿಗ್ರಾಂ ಚಾನಲ್​​ನಲ್ಲಿ ಹೇಳಿಕೊಂಡಿದೆ. ಜಲಾಲಾಬಾದ್​​ನಲ್ಲಿ ಮೂರು ತಾಲಿಬಾನಿ ವಾಹನಗಳನ್ನು ಗುರಿಯಾಗಿಸಿಕೊಂಡು ಶನಿವಾರ ಮೂರು ಬಾಂಬ್​ ಸ್ಫೋಟಗಳು ನಡೆದಿವೆ. ಮತ್ತೆ ಭಾನುವಾರವೂ ಒಂದು ದಾಳಿ ನಡೆದಿದೆ. ಒಟ್ಟಾರೆ ಈ ಎಲ್ಲ ದಾಳಿಯಿಂದ 35 ತಾಲಿಬಾನ್​ ಉಗ್ರರು ಮೃತಪಟ್ಟಿದ್ದಾರೆ ಎಂದು ಸುದ್ದಿಸಂಸ್ಥೆ ತಿಳಿಸಿದೆ. 

ನಂಗರ್​ಹಾರ್​ ಪ್ರಾಂತ್ಯದ ರಾಜಧಾನಿ ಜಲಾಲಾಬಾದ್​ನಲ್ಲಿ ತಾಲಿಬಾನ್​ ಹೋರಾಟಗಾರರನ್ನು ಹೊತ್ತೊಯ್ಯುತ್ತಿದ್ದ ಪಿಕಪ್​ ಟ್ರಕ್​​ವೊಂದರ ಮೇಲೆ ದಾಳಿ ನಡೆದಿದೆ. ಈ ಸ್ಫೋಟದಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.  ಇನ್ನು ಜಲಾಲಾಬಾದ್ ಸರಣಿ ಸ್ಫೋಟದಲ್ಲಿ ಮೃತರಾದವರ ಸಂಖ್ಯೆ ಬಗ್ಗೆ ಇನ್ನೂ ತಾಲಿಬಾನ್​ ಉಗ್ರರು ಏನೂ ಹೇಳಿಲ್ಲ. ಅಫ್ಘಾನಿಸ್ತಾನವನ್ನು ಆಗಸ್ಟ್​ 15ರಂದು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಪಾಕಿಸ್ತಾನದ ಗಡಿಭಾಗದಲ್ಲಿರುವ ನಂಗರ್​ಹಾರ್​ ಪ್ರಾಂತ್ಯದಲ್ಲಿ ಮಾತ್ರ ಐಎಸ್​ ಉಗ್ರರಿಂದ ದಾಳಿ ನಡೆಯುತ್ತಿದೆ. ಇವರು ತಾಲಿಬಾನಿಗಳನ್ನು ಟಾರ್ಗೆಟ್​ ಮಾಡಿಯೇ ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ, ಈ ಹಿಂದೆ ಅಫ್ಘಾನಿಸ್ತಾನ ಸರ್ಕಾರವಿದ್ದಾಗ ನಂಗರ್​ಹಾರ್​ ಮತ್ತು ಕುನಾರ್​ ಪ್ರಾಂತ್ಯಗಳಲ್ಲಿ ಅನೇಕ ಜಿಲ್ಲೆಗಳು ಐಎಸ್​ ಉಗ್ರರ ನೆಲೆಗಳಾಗಿದ್ದವು. ಸುಮಾರು ಐದುವರ್ಷಗಳ ಕಾಲ ಆ ಜಿಲ್ಲೆಗಳನ್ನೆಲ್ಲ ಸಂಪೂರ್ಣವಾಗಿ ಅವರೇ ಆಳಿದ್ದರು. ಆದರೆ ನಂತರ ಬಂದ ತಾಲಿಬಾನಿಗಳು ಐಎಸ್​  ಹೋರಾಟಗಾರರನ್ನು ಹೊರಗೆ ಹಾಕಿದ್ದರು. ಇದೇ ಕಾರಣಕ್ಕೆ ಈಗ ಅವರು ದಾಳಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಜಿಎಸ್​ಟಿ, ಆಧಾರ್ ಯೋಜನೆ ಬಂದಿದ್ದೇ ಮನಮೋಹನ್​ ಸಿಂಗ್​ ಅವಧಿಯಲ್ಲಿ; ಸಿಎಂಗೆ ಹೆಚ್​ಡಿ ಕುಮಾರಸ್ವಾಮಿ ತಿರುಗೇಟು

ಬೀದರನ ಗುರು ನಾನಕ್ ಜೀರಾ ಸಾಹಿಬ್ ಅಮೃತಸರ್​ನಲ್ಲಿರುವ ಸ್ವರ್ಣಮಂದಿರಕ್ಕೆ ಪರ್ಯಾಯ ಎನಿಸಿಕೊಂಡಿದೆ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ