AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನ್​ನ ಜಲಾಲಾಬಾದ್​ ಸರಣಿ ಸ್ಫೋಟದಲ್ಲಿ 35 ತಾಲಿಬಾನಿಗಳು ಸಾವು; ದಾಳಿಯ ಹೊಣೆ ಹೊತ್ತ ಐಎಸ್​ ಸಂಘಟನೆ

ಈ ಹಿಂದೆ ಅಫ್ಘಾನಿಸ್ತಾನ ಸರ್ಕಾರವಿದ್ದಾಗ ನಂಗರ್​ಹಾರ್​ ಮತ್ತು ಕುನಾರ್​ ಪ್ರಾಂತ್ಯಗಳಲ್ಲಿ ಅನೇಕ ಜಿಲ್ಲೆಗಳು ಐಎಸ್​ ಉಗ್ರರ ನೆಲೆಗಳಾಗಿದ್ದವು. ಸುಮಾರು ಐದುವರ್ಷಗಳ ಕಾಲ ಆ ಜಿಲ್ಲೆಗಳನ್ನೆಲ್ಲ ಸಂಪೂರ್ಣವಾಗಿ ಅವರೇ ಆಳಿದ್ದರು.

ಅಫ್ಘಾನ್​ನ ಜಲಾಲಾಬಾದ್​ ಸರಣಿ ಸ್ಫೋಟದಲ್ಲಿ 35 ತಾಲಿಬಾನಿಗಳು ಸಾವು; ದಾಳಿಯ ಹೊಣೆ ಹೊತ್ತ ಐಎಸ್​ ಸಂಘಟನೆ
ಜಲಾಲಾಬಾದ್​ ಚಿತ್ರಣ
TV9 Web
| Edited By: |

Updated on: Sep 20, 2021 | 7:05 PM

Share

ಅಫ್ಘಾನಿಸ್ತಾನದ ಪೂರ್ವನಗರವಾದ ಜಲಾಲಾಬಾದ್​​ನಲ್ಲಿ ನಡೆದ ಬಾಂಬ್​ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್​ ಸ್ಟೇಟ್​ ಹೊತ್ತುಕೊಂಡಿದೆ. ಇದನ್ನು ಗ್ರೂಪ್​​ನ ಅಮಾಕ್​ ನ್ಯೂಸ್​ ಏಜೆನ್ಸಿ ತನ್ನ ಟೆಲಿಗ್ರಾಂ ಚಾನಲ್​​ನಲ್ಲಿ ಹೇಳಿಕೊಂಡಿದೆ. ಜಲಾಲಾಬಾದ್​​ನಲ್ಲಿ ಮೂರು ತಾಲಿಬಾನಿ ವಾಹನಗಳನ್ನು ಗುರಿಯಾಗಿಸಿಕೊಂಡು ಶನಿವಾರ ಮೂರು ಬಾಂಬ್​ ಸ್ಫೋಟಗಳು ನಡೆದಿವೆ. ಮತ್ತೆ ಭಾನುವಾರವೂ ಒಂದು ದಾಳಿ ನಡೆದಿದೆ. ಒಟ್ಟಾರೆ ಈ ಎಲ್ಲ ದಾಳಿಯಿಂದ 35 ತಾಲಿಬಾನ್​ ಉಗ್ರರು ಮೃತಪಟ್ಟಿದ್ದಾರೆ ಎಂದು ಸುದ್ದಿಸಂಸ್ಥೆ ತಿಳಿಸಿದೆ. 

ನಂಗರ್​ಹಾರ್​ ಪ್ರಾಂತ್ಯದ ರಾಜಧಾನಿ ಜಲಾಲಾಬಾದ್​ನಲ್ಲಿ ತಾಲಿಬಾನ್​ ಹೋರಾಟಗಾರರನ್ನು ಹೊತ್ತೊಯ್ಯುತ್ತಿದ್ದ ಪಿಕಪ್​ ಟ್ರಕ್​​ವೊಂದರ ಮೇಲೆ ದಾಳಿ ನಡೆದಿದೆ. ಈ ಸ್ಫೋಟದಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.  ಇನ್ನು ಜಲಾಲಾಬಾದ್ ಸರಣಿ ಸ್ಫೋಟದಲ್ಲಿ ಮೃತರಾದವರ ಸಂಖ್ಯೆ ಬಗ್ಗೆ ಇನ್ನೂ ತಾಲಿಬಾನ್​ ಉಗ್ರರು ಏನೂ ಹೇಳಿಲ್ಲ. ಅಫ್ಘಾನಿಸ್ತಾನವನ್ನು ಆಗಸ್ಟ್​ 15ರಂದು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಪಾಕಿಸ್ತಾನದ ಗಡಿಭಾಗದಲ್ಲಿರುವ ನಂಗರ್​ಹಾರ್​ ಪ್ರಾಂತ್ಯದಲ್ಲಿ ಮಾತ್ರ ಐಎಸ್​ ಉಗ್ರರಿಂದ ದಾಳಿ ನಡೆಯುತ್ತಿದೆ. ಇವರು ತಾಲಿಬಾನಿಗಳನ್ನು ಟಾರ್ಗೆಟ್​ ಮಾಡಿಯೇ ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ, ಈ ಹಿಂದೆ ಅಫ್ಘಾನಿಸ್ತಾನ ಸರ್ಕಾರವಿದ್ದಾಗ ನಂಗರ್​ಹಾರ್​ ಮತ್ತು ಕುನಾರ್​ ಪ್ರಾಂತ್ಯಗಳಲ್ಲಿ ಅನೇಕ ಜಿಲ್ಲೆಗಳು ಐಎಸ್​ ಉಗ್ರರ ನೆಲೆಗಳಾಗಿದ್ದವು. ಸುಮಾರು ಐದುವರ್ಷಗಳ ಕಾಲ ಆ ಜಿಲ್ಲೆಗಳನ್ನೆಲ್ಲ ಸಂಪೂರ್ಣವಾಗಿ ಅವರೇ ಆಳಿದ್ದರು. ಆದರೆ ನಂತರ ಬಂದ ತಾಲಿಬಾನಿಗಳು ಐಎಸ್​  ಹೋರಾಟಗಾರರನ್ನು ಹೊರಗೆ ಹಾಕಿದ್ದರು. ಇದೇ ಕಾರಣಕ್ಕೆ ಈಗ ಅವರು ದಾಳಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಜಿಎಸ್​ಟಿ, ಆಧಾರ್ ಯೋಜನೆ ಬಂದಿದ್ದೇ ಮನಮೋಹನ್​ ಸಿಂಗ್​ ಅವಧಿಯಲ್ಲಿ; ಸಿಎಂಗೆ ಹೆಚ್​ಡಿ ಕುಮಾರಸ್ವಾಮಿ ತಿರುಗೇಟು

ಬೀದರನ ಗುರು ನಾನಕ್ ಜೀರಾ ಸಾಹಿಬ್ ಅಮೃತಸರ್​ನಲ್ಲಿರುವ ಸ್ವರ್ಣಮಂದಿರಕ್ಕೆ ಪರ್ಯಾಯ ಎನಿಸಿಕೊಂಡಿದೆ

Follow Us
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ