ಹೀಗೂ ಉಂಟೆ! ಮಾಸ್ಕೊಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮಾರ್ಗಮಧ್ಯದಲ್ಲಿ ವಾಪಸ್

ದೆಹಲಿ: ಕೊರೊನಾ ಕಾಲದಲ್ಲಿ ಹೀಗೂ ಉಂಟೆ! ಎಂದು ಕೇಳುವಂತಹ ಪ್ರಸಂಗವೊಂದು ನಡೆದಿದೆ. ಮಾಸ್ಕೊಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮಾರ್ಗಮಧ್ಯದಲ್ಲಿಯೆ ವಾಪಸ್ ತಿರುಗಿಸಿಕೊಂಡು ಬರುವಂತಾಗಿದೆ. ರಷ್ಯಾದ ಮಾಸ್ಕೊಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮಾರ್ಗಮಧ್ಯದಲ್ಲಿರುವಾಗಲೇ ವಾಪಸ್ ಬರಲು ಇಂಡಿಯಾ ಏರ್ ಟ್ರಾಫಿಕ್ ಕಂಟ್ರೋಲ್ ಸೂಚನೆ ರವಾನಿಸಿದೆ. ವಿಮಾನದ ಪೈಲಟ್ ಗೆ ಕೊರೊನಾ ಪಾಸಿಟಿವ್ ದೃಢ ಹಿನ್ನೆಲೆ ಇಂತಹ ತುರ್ತು ಸಂದೇಶ ರವಾನೆಯಾಗಿದೆ. ದೆಹಲಿಯಿಂದ ವಿಮಾನ ಟೇಕಾಫ್ ಆದ ಬಳಿಕ ಪೈಲಟ್ ಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. […]

ಹೀಗೂ ಉಂಟೆ! ಮಾಸ್ಕೊಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮಾರ್ಗಮಧ್ಯದಲ್ಲಿ ವಾಪಸ್
ಕಳೆದ 10 ವರ್ಷಗಳಲ್ಲಿ ನೀವು ಏರ್​ ಇಂಡಿಯಾಗೆ ಖಾಸಗಿ ವಿವರ ನೀಡಿದ್ದರೆ... ಆ ಮಾಹಿತಿ ಸೋರಿಕೆಯಾಗಿದೆ ಎಚ್ಚರಾ!
ಸಾಧು ಶ್ರೀನಾಥ್​

Updated on: May 30, 2020 | 2:59 PM

ದೆಹಲಿ: ಕೊರೊನಾ ಕಾಲದಲ್ಲಿ ಹೀಗೂ ಉಂಟೆ! ಎಂದು ಕೇಳುವಂತಹ ಪ್ರಸಂಗವೊಂದು ನಡೆದಿದೆ. ಮಾಸ್ಕೊಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮಾರ್ಗಮಧ್ಯದಲ್ಲಿಯೆ ವಾಪಸ್ ತಿರುಗಿಸಿಕೊಂಡು ಬರುವಂತಾಗಿದೆ.

ರಷ್ಯಾದ ಮಾಸ್ಕೊಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮಾರ್ಗಮಧ್ಯದಲ್ಲಿರುವಾಗಲೇ ವಾಪಸ್ ಬರಲು ಇಂಡಿಯಾ ಏರ್ ಟ್ರಾಫಿಕ್ ಕಂಟ್ರೋಲ್ ಸೂಚನೆ ರವಾನಿಸಿದೆ. ವಿಮಾನದ ಪೈಲಟ್ ಗೆ ಕೊರೊನಾ ಪಾಸಿಟಿವ್ ದೃಢ ಹಿನ್ನೆಲೆ ಇಂತಹ ತುರ್ತು ಸಂದೇಶ ರವಾನೆಯಾಗಿದೆ. ದೆಹಲಿಯಿಂದ ವಿಮಾನ ಟೇಕಾಫ್ ಆದ ಬಳಿಕ ಪೈಲಟ್ ಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಹೀಗಾಗಿ ಮಾರ್ಗ ಮಧ್ಯೆ ವಾಪಸ್ ಬರಲು ಪೈಲಟ್ ಗೆ ಸೂಚಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸದ್ಯ ವಿಮಾನದಲ್ಲಿ ಪ್ರಯಾಣಿಕರು ಇರಲಿಲ್ಲ!
ಯಾಕೆಂದ್ರೆ ಈ ವಿಮಾನವು ಮಾಸ್ಕೋದಲ್ಲಿದ್ದ ಭಾರತೀಯರನ್ನು ಕರೆತರಲು ಖಾಲಿ ವಿಮಾನ ಹೊರಟಿತ್ತು. ವಿಮಾನ ದೆಹಲಿಯಿಂದ ಹೊರಡುವ ವೇಳೆ ಎಲ್ಲ ಪೈಲಟ್, ಸಿಬ್ಬಂದಿಯ ಕೊರೊನಾ ರಿಪೋರ್ಟ್ ಪರಿಶೀಲಿಸಲಾಗಿತ್ತು. ಆದ್ರೆ ಈ ಒಬ್ಬ ಪೈಲಟ್​ ವರದಿ ಪಾಸಿಟೀವ್ ಬಂದಿದ್ದರೂ ಅದನ್ನು ನೆಗೆಟೀವ್ ಎಂದು ತಪ್ಪಾಗಿ ಭಾವಿಸಲಾಗಿತ್ತು.

Published On - 2:49 pm, Sat, 30 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us