AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಷ್ಟೊಂದು ಕಟುಕ ರಾಷ್ಟ್ರವಾಯಿತೇ ಆಸ್ಟ್ರೇಲಿಯಾ? ಒಂಟೆಗೆ ಡುಬ್ಬವೇ ಮುಳುವಾಯಿತೇ!

ಕ್ಯಾನ್ಬೆರಾ: ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಆಗಾಧವಾಗಿ ಕಾಡುತ್ತಿದೆ. ಆದ್ರೆ ಹಾಗಂತ ಅಲ್ಲಿನ ಸರ್ಕಾರ ಮತ್ತು ಜನ ಮಾನವೀಯತೆಯನ್ನೇ ಮರೆತು ಕ್ರೂರಿಗಳಾಗಿಬಿಟ್ಟರಾ? ಎಂಬ ಆತಂಕ ಕಾಡತೊಡಗಿದೆ. ನೋಡಿ ಒಂದು ಒಂಟೆ ಸಾಮಾನ್ಯವಾಗಿ 200 ಲೀಟರ್ ನೀರನ್ನು ಕುಡಿದು, ತನ್ನ ಡುಬ್ಬದಲ್ಲಿ ಶೇಖರಿಸಿಟ್ಟುಕೊಳ್ಳುವ ದೈಹಿಕ ಸಾಮರ್ಥ್ಯ ಹೊಂದಿರುತ್ತದೆ. ಆದ್ರೆ ಅದುವೇ ಈಗ ಒಂಟೆಗೆ ಮುಳುವಾಗುತ್ತಿದೆ. ಕಾಡ್ಗಿಚ್ಚು, ಬರದ ಸುಳಿಯಲ್ಲಿ ಆಸ್ಟ್ರೇಲಿಯಾದಲ್ಲಿ 10 ಸಾವಿರ ಒಂಟೆಗಳ ಮಾರಣಹೋಮ ಏನಾಗಿದೆಯೆಂದ್ರೆ ಆಸ್ಟ್ರೇಲಿಯಾದಲ್ಲಿ ಸರಿಸುಮಾರು 10 ಸಾವಿರ ಒಂಟೆಗಳಿವೆ. ಆದ್ರೆ ಅಲ್ಲಿ ಒಂದು ಹನಿ ನೀರಿಗೂ […]

ಇಷ್ಟೊಂದು ಕಟುಕ ರಾಷ್ಟ್ರವಾಯಿತೇ ಆಸ್ಟ್ರೇಲಿಯಾ? ಒಂಟೆಗೆ ಡುಬ್ಬವೇ ಮುಳುವಾಯಿತೇ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Jan 09, 2020 | 11:28 AM

Share

ಕ್ಯಾನ್ಬೆರಾ: ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಆಗಾಧವಾಗಿ ಕಾಡುತ್ತಿದೆ. ಆದ್ರೆ ಹಾಗಂತ ಅಲ್ಲಿನ ಸರ್ಕಾರ ಮತ್ತು ಜನ ಮಾನವೀಯತೆಯನ್ನೇ ಮರೆತು ಕ್ರೂರಿಗಳಾಗಿಬಿಟ್ಟರಾ? ಎಂಬ ಆತಂಕ ಕಾಡತೊಡಗಿದೆ. ನೋಡಿ ಒಂದು ಒಂಟೆ ಸಾಮಾನ್ಯವಾಗಿ 200 ಲೀಟರ್ ನೀರನ್ನು ಕುಡಿದು, ತನ್ನ ಡುಬ್ಬದಲ್ಲಿ ಶೇಖರಿಸಿಟ್ಟುಕೊಳ್ಳುವ ದೈಹಿಕ ಸಾಮರ್ಥ್ಯ ಹೊಂದಿರುತ್ತದೆ. ಆದ್ರೆ ಅದುವೇ ಈಗ ಒಂಟೆಗೆ ಮುಳುವಾಗುತ್ತಿದೆ.

ಕಾಡ್ಗಿಚ್ಚು, ಬರದ ಸುಳಿಯಲ್ಲಿ ಆಸ್ಟ್ರೇಲಿಯಾದಲ್ಲಿ 10 ಸಾವಿರ ಒಂಟೆಗಳ ಮಾರಣಹೋಮ ಏನಾಗಿದೆಯೆಂದ್ರೆ ಆಸ್ಟ್ರೇಲಿಯಾದಲ್ಲಿ ಸರಿಸುಮಾರು 10 ಸಾವಿರ ಒಂಟೆಗಳಿವೆ. ಆದ್ರೆ ಅಲ್ಲಿ ಒಂದು ಹನಿ ನೀರಿಗೂ ತತ್ವಾರ ತಲೆದೋರಿದೆ. ಒಂದು ಕಡೆ ಅಪಾರ ಕಾಡಿಗೆ ಕಿಚ್ಚು ಬಿದ್ದಿದೆ, ಮತ್ತೊಂದು ಕಡೆ ಆಸ್ಟ್ರೇಲಿಯಾದ ಅನೇಕ ಭಾಗಗಳಲ್ಲಿ ತೀವ್ರ ಬರ ಎದುರಾಗಿದೆ. ಒಟ್ಟಿನಲ್ಲಿ ಚಿಕ್ಕ ಹನಿ ನೀರಿಗೂ ಮನುಷ್ಯರೇ ಬಾಯಿಬಿಡುವಂತಾಗಿದೆ. ಪರಿಸ್ಥಿತಿ ಹೀಗಿರುವಾಗ ಒಂದೊಂಟೆಗೆ 200 ಲೀಟರ್ ನೀರು ಬೇಕೆಂದ್ರೆ ​10 ಸಾವಿರ ಒಂಟೆಗಳಿಗೆ ಇನ್ನೆಷ್ಟು ನೀರು ಬೇಕಾದೀತು? ಹಾಗೆಂದೇ ಆಸ್ಟ್ರೇಲಿಯಾದಲ್ಲಿ ಅಷ್ಟೂ ಒಂಟೆಗಳನ್ನು ಸಾಯಿಸುವಂತಹ ಅಮಾನವೀಯ ನಿರ್ಧಾರಕ್ಕೆ ಬರಲಾಗಿದೆ.

ಕಾಡ್ಗಿಚ್ಚಿಗೆ ಕಂಗೆಟ್ಟ ಆಸ್ಟ್ರೇಲಿಯಾ 10 ಸಾವಿರ ಒಂಟೆಗಳನ್ನು ಕೊಲ್ಲಲು ಮುಂದಾಗಿದೆ. ಕಾಡ್ಗಿಚ್ಚಿನಿಂದ ಬೇಸತ್ತು, ಇಂತಹ ನಿರ್ಧಾರಕ್ಕೆ ಕೈ ಹಾಕಿದೆ. ಒಂಟೆಗಳು ಹೆಚ್ಚು ನೀರು ಕುಡಿಯುವುದರಿಂದ ಆಸ್ಟ್ರೇಲಿಯಾ ಸರ್ಕಾರ ನೀರನ್ನು ಸಂರಕ್ಷಿಸುವ ಸಲುವಾಗಿ ಒಂಟೆಗಳ ಮಾರಣಹೋಮಕ್ಕೆ ಮುಂದಾಗಿದೆ.

ಈಗಾಗಲೇ ನಿನ್ನೆಯಿಂದ ಒಂಟೆ ಕೊಲ್ಲುವ ಕಾರ್ಯಾಚರಣೆ ಆರಂಭವಾಗಿದೆ. ಹೆಲಿಕಾಪ್ಟರ್​ ಮೂಲಕ ಶೂಟರ್​ಗಳನ್ನು ಕಳುಹಿಸಿಕೊಟ್ಟಿದೆ. ಐದು ದಿನದಲ್ಲಿ 10 ಸಾವಿರ ಒಂಟೆಗಳ ಮಾರಣಹೋಮಕ್ಕೆ ನಿರ್ಧಾರ ಮಾಡಿದೆ. ಕಾಡ್ಗಿಚ್ಚಿನಿಂದ ಒಂಟೆಗಳು ಜನವಸತಿ ಪ್ರದೇಶದ ಕಡೆ ಹೋಗುತ್ತಿವೆ.

 ಒಂಟೆಗಳು ಹೆಚ್ಚು ನೀರು ಕುಡಿಯುವುದರಿಂದ ನೀರಿನ ಅಭಾವ ಆಗುತ್ತೆ. ಬುಡಕಟ್ಟು ನಿವಾಸಿಗಳಿಗೆ ಒಂಟೆಗಳಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಹೀಗಾಗಿ ಒಂಟೆಗಳನ್ನು ಕೊಲ್ಲಲು ಆಸ್ಟ್ರೇಲಿಯಾ ಸರ್ಕಾರ ನಿರ್ಧಾರಿಸಿದೆ. ಈಗಾಗಲೇ ಕಾಡ್ಗಿಚ್ಚಿನಿಂದ ಅನೇಕ ವನ್ಯಜೀವಿಗಳ ಮಾರಣಹೋಮವಾಗಿದೆ. ಅದರಲ್ಲಿ ಸರ್ಕಾರವೇ ಮತ್ತಷ್ಟು ವನ್ಯಜೀವಿಗಳನ್ನು ಸಾಯಿಸುವಂತ ದುರ್ಭರ ಪರಿಸ್ಥಿತಿ ಬಂದಿದೆ.

Published On - 10:02 am, Thu, 9 January 20

Follow Us
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ