AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಷ್ಟೊಂದು ಕಟುಕ ರಾಷ್ಟ್ರವಾಯಿತೇ ಆಸ್ಟ್ರೇಲಿಯಾ? ಒಂಟೆಗೆ ಡುಬ್ಬವೇ ಮುಳುವಾಯಿತೇ!

ಕ್ಯಾನ್ಬೆರಾ: ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಆಗಾಧವಾಗಿ ಕಾಡುತ್ತಿದೆ. ಆದ್ರೆ ಹಾಗಂತ ಅಲ್ಲಿನ ಸರ್ಕಾರ ಮತ್ತು ಜನ ಮಾನವೀಯತೆಯನ್ನೇ ಮರೆತು ಕ್ರೂರಿಗಳಾಗಿಬಿಟ್ಟರಾ? ಎಂಬ ಆತಂಕ ಕಾಡತೊಡಗಿದೆ. ನೋಡಿ ಒಂದು ಒಂಟೆ ಸಾಮಾನ್ಯವಾಗಿ 200 ಲೀಟರ್ ನೀರನ್ನು ಕುಡಿದು, ತನ್ನ ಡುಬ್ಬದಲ್ಲಿ ಶೇಖರಿಸಿಟ್ಟುಕೊಳ್ಳುವ ದೈಹಿಕ ಸಾಮರ್ಥ್ಯ ಹೊಂದಿರುತ್ತದೆ. ಆದ್ರೆ ಅದುವೇ ಈಗ ಒಂಟೆಗೆ ಮುಳುವಾಗುತ್ತಿದೆ. ಕಾಡ್ಗಿಚ್ಚು, ಬರದ ಸುಳಿಯಲ್ಲಿ ಆಸ್ಟ್ರೇಲಿಯಾದಲ್ಲಿ 10 ಸಾವಿರ ಒಂಟೆಗಳ ಮಾರಣಹೋಮ ಏನಾಗಿದೆಯೆಂದ್ರೆ ಆಸ್ಟ್ರೇಲಿಯಾದಲ್ಲಿ ಸರಿಸುಮಾರು 10 ಸಾವಿರ ಒಂಟೆಗಳಿವೆ. ಆದ್ರೆ ಅಲ್ಲಿ ಒಂದು ಹನಿ ನೀರಿಗೂ […]

ಇಷ್ಟೊಂದು ಕಟುಕ ರಾಷ್ಟ್ರವಾಯಿತೇ ಆಸ್ಟ್ರೇಲಿಯಾ? ಒಂಟೆಗೆ ಡುಬ್ಬವೇ ಮುಳುವಾಯಿತೇ!
ಸಾಧು ಶ್ರೀನಾಥ್​
|

Updated on:Jan 09, 2020 | 11:28 AM

Share

ಕ್ಯಾನ್ಬೆರಾ: ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಆಗಾಧವಾಗಿ ಕಾಡುತ್ತಿದೆ. ಆದ್ರೆ ಹಾಗಂತ ಅಲ್ಲಿನ ಸರ್ಕಾರ ಮತ್ತು ಜನ ಮಾನವೀಯತೆಯನ್ನೇ ಮರೆತು ಕ್ರೂರಿಗಳಾಗಿಬಿಟ್ಟರಾ? ಎಂಬ ಆತಂಕ ಕಾಡತೊಡಗಿದೆ. ನೋಡಿ ಒಂದು ಒಂಟೆ ಸಾಮಾನ್ಯವಾಗಿ 200 ಲೀಟರ್ ನೀರನ್ನು ಕುಡಿದು, ತನ್ನ ಡುಬ್ಬದಲ್ಲಿ ಶೇಖರಿಸಿಟ್ಟುಕೊಳ್ಳುವ ದೈಹಿಕ ಸಾಮರ್ಥ್ಯ ಹೊಂದಿರುತ್ತದೆ. ಆದ್ರೆ ಅದುವೇ ಈಗ ಒಂಟೆಗೆ ಮುಳುವಾಗುತ್ತಿದೆ.

ಕಾಡ್ಗಿಚ್ಚು, ಬರದ ಸುಳಿಯಲ್ಲಿ ಆಸ್ಟ್ರೇಲಿಯಾದಲ್ಲಿ 10 ಸಾವಿರ ಒಂಟೆಗಳ ಮಾರಣಹೋಮ ಏನಾಗಿದೆಯೆಂದ್ರೆ ಆಸ್ಟ್ರೇಲಿಯಾದಲ್ಲಿ ಸರಿಸುಮಾರು 10 ಸಾವಿರ ಒಂಟೆಗಳಿವೆ. ಆದ್ರೆ ಅಲ್ಲಿ ಒಂದು ಹನಿ ನೀರಿಗೂ ತತ್ವಾರ ತಲೆದೋರಿದೆ. ಒಂದು ಕಡೆ ಅಪಾರ ಕಾಡಿಗೆ ಕಿಚ್ಚು ಬಿದ್ದಿದೆ, ಮತ್ತೊಂದು ಕಡೆ ಆಸ್ಟ್ರೇಲಿಯಾದ ಅನೇಕ ಭಾಗಗಳಲ್ಲಿ ತೀವ್ರ ಬರ ಎದುರಾಗಿದೆ. ಒಟ್ಟಿನಲ್ಲಿ ಚಿಕ್ಕ ಹನಿ ನೀರಿಗೂ ಮನುಷ್ಯರೇ ಬಾಯಿಬಿಡುವಂತಾಗಿದೆ. ಪರಿಸ್ಥಿತಿ ಹೀಗಿರುವಾಗ ಒಂದೊಂಟೆಗೆ 200 ಲೀಟರ್ ನೀರು ಬೇಕೆಂದ್ರೆ ​10 ಸಾವಿರ ಒಂಟೆಗಳಿಗೆ ಇನ್ನೆಷ್ಟು ನೀರು ಬೇಕಾದೀತು? ಹಾಗೆಂದೇ ಆಸ್ಟ್ರೇಲಿಯಾದಲ್ಲಿ ಅಷ್ಟೂ ಒಂಟೆಗಳನ್ನು ಸಾಯಿಸುವಂತಹ ಅಮಾನವೀಯ ನಿರ್ಧಾರಕ್ಕೆ ಬರಲಾಗಿದೆ.

ಕಾಡ್ಗಿಚ್ಚಿಗೆ ಕಂಗೆಟ್ಟ ಆಸ್ಟ್ರೇಲಿಯಾ 10 ಸಾವಿರ ಒಂಟೆಗಳನ್ನು ಕೊಲ್ಲಲು ಮುಂದಾಗಿದೆ. ಕಾಡ್ಗಿಚ್ಚಿನಿಂದ ಬೇಸತ್ತು, ಇಂತಹ ನಿರ್ಧಾರಕ್ಕೆ ಕೈ ಹಾಕಿದೆ. ಒಂಟೆಗಳು ಹೆಚ್ಚು ನೀರು ಕುಡಿಯುವುದರಿಂದ ಆಸ್ಟ್ರೇಲಿಯಾ ಸರ್ಕಾರ ನೀರನ್ನು ಸಂರಕ್ಷಿಸುವ ಸಲುವಾಗಿ ಒಂಟೆಗಳ ಮಾರಣಹೋಮಕ್ಕೆ ಮುಂದಾಗಿದೆ.

ಈಗಾಗಲೇ ನಿನ್ನೆಯಿಂದ ಒಂಟೆ ಕೊಲ್ಲುವ ಕಾರ್ಯಾಚರಣೆ ಆರಂಭವಾಗಿದೆ. ಹೆಲಿಕಾಪ್ಟರ್​ ಮೂಲಕ ಶೂಟರ್​ಗಳನ್ನು ಕಳುಹಿಸಿಕೊಟ್ಟಿದೆ. ಐದು ದಿನದಲ್ಲಿ 10 ಸಾವಿರ ಒಂಟೆಗಳ ಮಾರಣಹೋಮಕ್ಕೆ ನಿರ್ಧಾರ ಮಾಡಿದೆ. ಕಾಡ್ಗಿಚ್ಚಿನಿಂದ ಒಂಟೆಗಳು ಜನವಸತಿ ಪ್ರದೇಶದ ಕಡೆ ಹೋಗುತ್ತಿವೆ.

 ಒಂಟೆಗಳು ಹೆಚ್ಚು ನೀರು ಕುಡಿಯುವುದರಿಂದ ನೀರಿನ ಅಭಾವ ಆಗುತ್ತೆ. ಬುಡಕಟ್ಟು ನಿವಾಸಿಗಳಿಗೆ ಒಂಟೆಗಳಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಹೀಗಾಗಿ ಒಂಟೆಗಳನ್ನು ಕೊಲ್ಲಲು ಆಸ್ಟ್ರೇಲಿಯಾ ಸರ್ಕಾರ ನಿರ್ಧಾರಿಸಿದೆ. ಈಗಾಗಲೇ ಕಾಡ್ಗಿಚ್ಚಿನಿಂದ ಅನೇಕ ವನ್ಯಜೀವಿಗಳ ಮಾರಣಹೋಮವಾಗಿದೆ. ಅದರಲ್ಲಿ ಸರ್ಕಾರವೇ ಮತ್ತಷ್ಟು ವನ್ಯಜೀವಿಗಳನ್ನು ಸಾಯಿಸುವಂತ ದುರ್ಭರ ಪರಿಸ್ಥಿತಿ ಬಂದಿದೆ.

Published On - 10:02 am, Thu, 9 January 20

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ