AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ವೈರಸ್‌ ನಂತರ ಚೀನಾದಲ್ಲಿ ಈಗ ಭಯಾನಕ ಬುಬೋನಿಕ್‌ ಪ್ಲೇಗ್‌ ಹಾವಳಿ

ಬೀಜಿಂಗ್‌: ಕೊರೊನಾ ವೈರಸ್‌ ಜನಕ ಚೀನಾದಲ್ಲಿ ಈಗ ದಿನಕ್ಕೊಂದು ಹೊಸ ಹೊಸ ವೈರಸ್‌ಗಳು ಹುಟ್ಟಿಕ್ಕೊಳ್ಳುತ್ತಿದ್ದು ಇತರ ದೇಶಗಳು ಈಗ ಚೀನಾದೆಡೆ ಭಯದಿಂದ ನೋಡುವಂತಾಗಿದೆ. ಹೌದು ಕೊರೊನಾ ವೈರಸ್‌ ಜನಕ ಚೀನಾದಲ್ಲಿ ಹೊಸ ಹೊಸ ವೈರಸ್‌ಗಳು ಪತ್ತೆಯಾಗುತ್ತಿವೆ. ಕೊರೊನಾ ನಂತರ ಬುನ್‌ಯಾ ವೈರಸ್‌ನಿಂದ ನೂರಾರು ಜನರು ಚೀನಾದಲ್ಲಿ ಸಾವನ್ನಪ್ಪಿದ್ದಾರೆ. ಇವುಗಳ ಜೊತೆಗೆ ಈಗ ಬುಬೋನಿಕ್‌ ಪ್ಲೇಗ್‌ ಹಾವಳಿ ಚೀನಾದಲ್ಲಿ ಶುರವಾಗಿದೆ. ಚೀನಾದ ಮುಂಗೋಲಿಯಾ ಪ್ರಾಂತ್ಯದ ಹಳ್ಳಿಯೊಂದರಲ್ಲಿ ಬುಬೋನಿಕ್‌ ಪ್ಲೇಗ್‌ನಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಚೀನಾ ಸರ್ಕಾರ […]

ಕೊರೊನಾ ವೈರಸ್‌ ನಂತರ ಚೀನಾದಲ್ಲಿ ಈಗ ಭಯಾನಕ ಬುಬೋನಿಕ್‌ ಪ್ಲೇಗ್‌ ಹಾವಳಿ
Guru
|

Updated on:Aug 08, 2020 | 8:59 PM

Share

ಬೀಜಿಂಗ್‌: ಕೊರೊನಾ ವೈರಸ್‌ ಜನಕ ಚೀನಾದಲ್ಲಿ ಈಗ ದಿನಕ್ಕೊಂದು ಹೊಸ ಹೊಸ ವೈರಸ್‌ಗಳು ಹುಟ್ಟಿಕ್ಕೊಳ್ಳುತ್ತಿದ್ದು ಇತರ ದೇಶಗಳು ಈಗ ಚೀನಾದೆಡೆ ಭಯದಿಂದ ನೋಡುವಂತಾಗಿದೆ.

ಹೌದು ಕೊರೊನಾ ವೈರಸ್‌ ಜನಕ ಚೀನಾದಲ್ಲಿ ಹೊಸ ಹೊಸ ವೈರಸ್‌ಗಳು ಪತ್ತೆಯಾಗುತ್ತಿವೆ. ಕೊರೊನಾ ನಂತರ ಬುನ್‌ಯಾ ವೈರಸ್‌ನಿಂದ ನೂರಾರು ಜನರು ಚೀನಾದಲ್ಲಿ ಸಾವನ್ನಪ್ಪಿದ್ದಾರೆ. ಇವುಗಳ ಜೊತೆಗೆ ಈಗ ಬುಬೋನಿಕ್‌ ಪ್ಲೇಗ್‌ ಹಾವಳಿ ಚೀನಾದಲ್ಲಿ ಶುರವಾಗಿದೆ. ಚೀನಾದ ಮುಂಗೋಲಿಯಾ ಪ್ರಾಂತ್ಯದ ಹಳ್ಳಿಯೊಂದರಲ್ಲಿ ಬುಬೋನಿಕ್‌ ಪ್ಲೇಗ್‌ನಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.

ಈ ವಿಷಯ ತಿಳಿಯುತ್ತಿದ್ದಂತೆ ಚೀನಾ ಸರ್ಕಾರ ಮುಂಗೋಲಿಯಾ ಪ್ರಾಂತ್ಯದ ಅಧಿಕಾರಿಗಳಿಗೆ ತಕ್ಷಣವೇ ಕ್ರಮ ಕೈಗೊಳ್ಳಲು ಸೂಚಿಸಿದೆ. ಹೀಗಾಗಿ ಅಧಿಕಾರಿಗಳು ಈಗ ಈ ಬುಬೋನಿಕ್‌ ಪ್ಲೇಗ್‌ನಿಂದ ಸಾವನ್ನಪ್ಪಿರುವ ವ್ಯಕ್ತಿಯ ಇಡೀ ಹಳ್ಳಿಗೆ ಹಳ್ಳಿಯನ್ನೇ ಕ್ವಾರಂಟೈನ್‌ ಮಾಡಿದ್ದಾರೆ. ಹಳ್ಳಿಯಿಂದ ಯಾರೂ ಹೊರಗೆ ಹೋಗದಂತೆ ಹಾಗೂ ಹೊರಗಿನಿಂದ ಒಳಗೆ ಹೋಗದಂತೆ ಬ್ಲಾಕ್‌ ಮಾಡಿದ್ದಾರೆ.

ಜೊತೆಗೆ ಹಳ್ಳಿಯಲ್ಲಿ ದಿನಂಪ್ರತಿ ಸ್ಯಾನಿಟೈಸ್‌ ಮಾಡಿ ಕೆಮಿಕಲ್ಸ್‌ ಸ್ಪ್ರೇ ಮಾಡಲಾಗುತ್ತಿದೆ. ಇದುವರೆಗಿನ ಟೆಸ್ಟ್‌ನಲ್ಲಿ ಈ ಹಳ್ಳಿಯಲ್ಲಿ ಯಾರೂ ಪಾಸಿಟಿವ್‌ ಬಂದಿಲ್ಲ. ಆದ್ರೂ ಮುನ್ನಚ್ಚರಿಕೆ ಕ್ರಮವಾಗಿ ಚೀನಾ ಸರ್ಕಾರ ಹಳ್ಳಿಯನ್ನು ಕ್ವಾರಂಟೈನ್‌ ಮಾಡಿದೆ.

ಸಾಮಾನ್ಯವಾಗಿ ಈ ಬುಬೋನಿಕ್‌ ಪ್ಲೇಗ್‌ ಕೂಡಾ ಕೊರೊನಾದಂತೆ ಒಬ್ಬರಿಂದ ಒಬ್ಬರಿಗೆ ಹರಡುತ್ತೆ. ಈ ಸೋಂಕು ತಗುಲಿದರೆ ಲಕ್ಷಣಗಳು ಗೋಚರಿಸಲು ನಾಲ್ಕರಿಂದ ಆರು ದಿನಗಳುಬೇಕು. ಆನಂತರ ಅದೃಷ್ಟ ಚೆನ್ನಾಗಿದ್ದರೆ ಸೋಂಕಿತ ಬದುಕಬಹುದು. ಇಲ್ಲಿದಿದ್ರೆ ಶಿವನ ಪಾದವೇ ಗತಿ. ಯಾಕಂದ್ರೆ ಇದಕ್ಕೂ ಕೂಡಾ ಇನ್ನೂ ಔಷಧ ಕಂಡುಹಿಡಿದಿಲ್ಲ.

Published On - 8:56 pm, Sat, 8 August 20

ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ