AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಲ್ಲ ಎಂದ ಫ್ರೆಂಚ್ ಅಧ್ಯಕ್ಷನಿಗೆ ಗಾವುದ ದೂರ ಕೂರಿಸಿ ರಷ್ಯಾ ಅಧ್ಯಕ್ಷ ಮಾತುಕತೆ ನಡೆಸಿದರು!

ಹಂಗರಿಯ ಪ್ರಧಾನ ಮಂತ್ರಿ ವಿಕ್ಟರ್ ಒರ್ಬನ್ ಮತ್ತು ಇರಾನಿನ ಅಧ್ಯಕ್ಷ ಎಬ್ರಾಹಿಮ್ ರೈಸಿ ಅವರೊಂದಿಗೆ ಮಾತುಕತೆ ನಡೆಸುವಾಗಲೂ ‘ಬೃಹತ್ ಟೇಬಲ್ ಪಾಲಿಸಿ’ಯನ್ನೇ ಅಳವಡಿಸಲಾಗಿತ್ತು. ಇವರಿಬ್ಬರು ಈ ವರ್ಷದ ಆರಂಭದಲ್ಲಿ ರಷ್ಯಾಗೆ ಪ್ರವಾಸ ಬಂದಾಗ ಪುಟಿನ್ ಅವರಿಬ್ಬನ್ನು ಗಾವುದ ದೂರ ಕೂರಿಸಿಯೇ ಮಾತುಕತೆ ನಡೆಸಿದ್ದರು.

ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಲ್ಲ ಎಂದ ಫ್ರೆಂಚ್ ಅಧ್ಯಕ್ಷನಿಗೆ ಗಾವುದ ದೂರ ಕೂರಿಸಿ ರಷ್ಯಾ ಅಧ್ಯಕ್ಷ ಮಾತುಕತೆ ನಡೆಸಿದರು!
ರಾಜತಾಂತ್ರಿಕ ಮಾತುಕತೆ ಹೀಗೂ ನಡೆಯುತ್ತವೆ!
Follow us
TV9 Web
| Updated By: shivaprasad.hs

Updated on: Feb 12, 2022 | 7:54 AM

ಮಾಸ್ಕೋ: ಹೀಗೂ ಆಗುತ್ತಿದೆ ಪ್ರಪಂಚದಲ್ಲಿ! ರಷ್ಯಾದ ಪ್ರವಾಸ ಹೋಗಿದ್ದ ಫ್ರಾನ್ಸ್ ದೇಶದ ಅಧ್ಯಕ್ಷ ಇಮ್ಯಾನುಯೇಲ್ ಮ್ಯಾಕ್ರನ್ (Emmanuel Macron) ಅವರಿಗೆ ಆ ದೇಶದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರೊಂದಿಗೆ ಮಾತುಕತೆ ನಡೆಸಲು ಗಾವುದ ದೂರದಲ್ಲಿ ಕುಳ್ಳಿರಿಸಲಾಗಿತ್ತು!! ಅವರನ್ನು ಪುತಿನ್ ಹತ್ತಿರಕ್ಕೆ ಬಿಟ್ಟುಕೊಳ್ಳಲಿಲ್ಲ. ಯಾಕೆ ಗೊತ್ತಾ? ಮ್ಯಾಕ್ರನ್, ಕ್ರೆಮ್ಲಿನ್ (Kremlin) ನಗರದಲ್ಲಿ ಕೊವಿಡ್ ಟೆಸ್ಟ್ ಗೆ (ಪಿಸಿಆರ್) ಒಳಪಡಲು ನಿರಾಕರಿಸಿದರು! ಎರಡು ದೇಶಗಳ ಧುರೀಣರು ಬೃಹತ್ ಗಾತ್ರದ ಟೇಬಲ್ ನ (long table) ವಿರುದ್ಧ ದಿಕ್ಕುಗಳಲ್ಲಿ ಕೂತು ಮಾತುಕತೆ ನಡೆಸಿದರು. ರಷ್ಯಾ ಮತ್ತು ಉಕ್ರೇನ್ ನಡುವೆ ತಲೆದೋರಿರುವ ಬಿಕ್ಕಟ್ಟನ್ನು ಶಮನಗೊಳಿಸುವ ಪ್ರಯತ್ನ ಮಾಡಲು ಮ್ಯಾಕ್ರನ್ ಮಾಸ್ಕೋ ತೆರಳಿದ್ದರು. ಕೇವಲ ಮೂರು ದಿನಗಳ ನಂತರ ಪುಟಿನ್, ತಮ್ಮ ಆಪ್ತರಲ್ಲಿ ಒಬ್ಬರಾಗಿರುವ ಕಜಾಕಸ್ತಾನ್ ಅಧ್ಯಕ್ಷರೊಂದಿಗೆ ಒಂದು ಚಿಕ್ಕ ಟೇಬಲ್ ನಡುವೆ ಇಟ್ಟುಕೊಂಡು ಮಾತುಕತೆ ನಡಿಸಿದ ಹಿನ್ನೆಲೆಯಲ್ಲಿ ಮ್ಯಾಕ್ರನ್ ಜೊತೆಗಿನ ಮಾತುಕತೆಗಾಗಿ ವ್ಯವಸ್ಥೆ ಮಾಡಲಾಗಿದ್ದ ಜಂಬೋ ಟೇಬಲ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ.

ಕ್ರೆಮ್ಲಿನ್ ವೈದ್ಯಕೀಯ ಸಿಬ್ಬಂದಿ ನಡೆಸಬೇಕೆಂದಿದ್ದ ಕೊವಿಡ್ ಟೆಸ್ಟ್ ಗೆ ಮ್ಯಾಕ್ರನ್ ಒಲ್ಲೆ ಎಂದ ಕಾರಣ ಅಧ್ಯಕ್ಷ ಪುಟಿನ್ ಅವರೊಂದಿಗಿನ ಮಾತುಕತೆಯ ಸಂದರ್ಭದಲ್ಲಿ ದೊಡ್ಡ ಟೇಬಲ್ ವ್ಯವಸ್ಥೆ ಮಾಡಲಾಯಿತು ಎಂದು ಪುಟಿನ್ ಅವರ ಬಾತ್ಮೀದಾರ ಡಿಮಿತ್ರಿ ಪೆಕ್ಸೋವ್ ಹೇಳಿದ್ದಾರೆ. ಕೆಲವು ನಾಯಕರೊಂದಿಗೆ ಎರಡು ಕೊನೆಗಳ ನಡುವೆ 6 ಮೀಟರ್​ಗಳಷ್ಟು ಅಂತರವಿರುವ ಟೇಬಲ್ ಮಧ್ಯೆ ಇರಿಸಿ ಮಾತುಕತೆ ನಡೆಸಲಾಗುತ್ತಿದೆ, ಎಂದು ಅವರು ಹೇಳಿದ್ದಾರೆ.

‘ಕೆಲವು ನಾಯಕರು ತಮ್ಮದೇ ಆದ ನಿಯಮಗಳನ್ನು ಪಾಲಿಸುತ್ತಾರೆ, ಅತಿಥೇಯ ಪಕ್ಷದವರು ಹೇಳುವುದನ್ನು ಕೇಳುವುದಿಲ್ಲ, ಅಂಥ ಸಂದರ್ಭಗಳಲ್ಲಿ ಹೀಗೆ ಮಾಡುವುದು ಅನಿವಾರ್ಯವಾಗುತ್ತದೆ. ನಮ್ಮ ಅಧ್ಯಕ್ಷರು ಮತ್ತು ಅತಿಥಿಗಳ ಆರೋಗ್ಯ ಕಾಪಾಡಲು ಹೆಚ್ಚುವರಿ ಸ್ವಚ್ಛತೆ ಶಿಷ್ಟಾಚಾರದ ಭಾಗವಾಗಿ ನಾವಿದನ್ನು ಮಾಡುತ್ತೇವೆ,’ ಎಂದು ಪೆಕ್ಸೋವ್ ಹೇಳಿದ್ದಾರೆ.

ಬೇರೆ ದೇಶದ ನಾಯಕರೊಂದಿಗೆ ದೊಡ್ಡ ಟೇಬಲ್ ಆರಿಸಿಕೊಳ್ಳಬೇಕು ಅನ್ನುವುದರ ಹಿಂದೆ ರಾಜಕೀಯದ ಯಾವುದೇ ಉದ್ದೇಶ ಇಲ್ಲ ಎಂದು ಅವರು ಹೇಳಿದ್ದಾರೆ. ‘ಇದರಲ್ಲಿ ಯಾವುದೇ ರಾಜಕೀಯವಿಲ್ಲ ಮತ್ತು ದೊಡ್ಡ ಟೇಬಲ್ ಮಾತುಕತೆಗೆ ಅಡಚಣೆ ಉಂಟು ಮಾಡುವುದಿಲ್ಲ,’ ಎಂದು ಪೆಕ್ಸೋವ್ ಹೇಳಿದ್ದಾರೆ.

‘ರಾಜತಾಂತ್ರಿಕ ಮಾತುಕತೆಗಳು ನಡೆಯುವಾಗ ಎರಡೂ ರಾಷ್ಟ್ರಗಳ ವೈದ್ಯಕೀಯ ಸಿಬ್ಬಂದಿ ಸಹಕರಿಸಿದರೆ, ಅತಿಥಿಗಳೊಂದಿಗೆ ಪುಟಿನ್ ನೇರವಾಗಿ ಅವರಿಗೆ ತೀರ ಹತ್ತಿರ ಕೂತು ಹಸ್ತಲಾಘ ಮಾಡುತ್ತಾ ಮಾತುಕತೆ ನಡೆಸಲು ತಯಾರಿದ್ದಾರೆ,’ ಎಂದು ಅವರು ಹೇಳಿದರು.

ಮತ್ತೊಂದೆಡೆ ಮ್ಯಾಕ್ರನ್ ಅವರ ಅಪ್ತ ಸಿಬ್ಬಂದಿಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಅಧ್ಯಕ್ಷರು ತಮ್ಮ ಪ್ರವಾಸದಲ್ಲಿ ಏನೆಲ್ಲ ಮಾಡುತ್ತಾರೋ ರಷ್ಯಾನಲ್ಲೂ ಅದನ್ನೇ ಮಾಡಿದರು.

ರಷ್ಯಾದ ತಂಡವೊಂದು ಪಿಸಿಆರ್ ಮಾಡಿಸಬೇಕೆಂದು ಆಗ್ರಹಿಸಿದ್ದರಿಂದ ಅಂಥ ಪರಿಸ್ಥಿತಿ ಉದ್ಭವಿಸಿತು ಎಂದು ಹೆಸರು ಗೌಪ್ಯವಾಗಿಡಬೇಕೆಂಬ ಷರತ್ತಿನೊಂದಿಗೆ ಫ್ರೆಂಚ್ ಅಧ್ಯಕ್ಷೀಯ ತಂಡದ ಅಧಿಕಾರಿಯೊಬ್ಬರು ಎ ಎಫ್ ಪಿ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

ಹಂಗರಿಯ ಪ್ರಧಾನ ಮಂತ್ರಿ ವಿಕ್ಟರ್ ಒರ್ಬನ್ ಮತ್ತು ಇರಾನಿನ ಅಧ್ಯಕ್ಷ ಎಬ್ರಾಹಿಮ್ ರೈಸಿ ಅವರೊಂದಿಗೆ ಮಾತುಕತೆ ನಡೆಸುವಾಗಲೂ ‘ಬೃಹತ್ ಟೇಬಲ್ ಪಾಲಿಸಿ’ಯನ್ನೇ ಅಳವಡಿಸಲಾಗಿತ್ತು. ಇವರಿಬ್ಬರು ಈ ವರ್ಷದ ಆರಂಭದಲ್ಲಿ ರಷ್ಯಾಗೆ ಪ್ರವಾಸ ಬಂದಾಗ ಪುಟಿನ್ ಅವರಿಬ್ಬನ್ನು ಗಾವುದ ದೂರ ಕೂರಿಸಿಯೇ ಮಾತುಕತೆ ನಡೆಸಿದ್ದರು.

ಪುಟಿನ್ ಮತ್ತು ಒರ್ಬನ್ ಕ್ರೆಮ್ಲಿನ್ ನಲ್ಲಿ ಟೇಬಲ್ ನ ವಿರುದ್ಧ ದಿಕ್ಕಿಗೆ ನಿಂತುಕೊಂಡೇ ಶಾಂಪೇನ್ ಹೀರಿದರು.

ಕ್ರೆಮ್ಲಿನ್ ಅಧಿಕಾರಿಗಳು 69-ವರ್ಷ ವಯಸ್ಸಿನ ಪುಟಿನ್ ಅವರನ್ನು ಸೋಂಕಿನಿಂದ ರಕ್ಷಿಸಲು ವಿಪರೀತ ಅನಿಸುವಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪುಟಿನ್ ಅವರು ರಷ್ಯಾದಲ್ಲೇ ತಯಾರಾಗುವ ಸ್ಫುಟ್ನಿಕ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಮಾಸ್ಕೋನಲ್ಲಿ ಜನ ಹೆಚ್ಚು ತಲೆ ಕೆಡಿಸಿಕೊಂಡಿಲ್ಲವಾದರೂ ಅವರ ಅಧ್ಯಕ್ಷ ಮಾತ್ರ ಸೋಂಕಿನ ಬಗ್ಗೆ ಅತ್ಯಂತ ಜಾಗರೂಕರಾಗಿದ್ದಾರೆ.

ರಷ್ಯಾನಲ್ಲಿ ಈಗ ಅನುಷ್ಠಾನದಲ್ಲಿರುವ ಕೊವಿಡ್ ಸುರಕ್ಷೆ ನಿಯಮಾವಳಿಗಳ ಪ್ರಕಾರ ಆ ದೇಶಕ್ಕೆ ಪ್ರಯಾಣಿಸಲಿಚ್ಛಿಸುವವರು ವಿಮಾನ ಹತ್ತುವ ಮೊದಲೇ ಪಿಸಿಅರ್ ಟೆಸ್ಟ್ ಮಾಡಿಸಿಕೊಂಡು ಅದರ ರಿಸಲ್ಟ್ ತಮ್ಮೊಂದಿಗೆ ಕೊಂಡೊಯ್ಯಬೇಕು. ರಷ್ಯಾ ತಲುಪಿದ ನಂತರ ಅವರು ಮತ್ತೊಮ್ಮೆ ಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ.

ಇದನ್ನೂ ಓದಿ:   Modi-Putin Meeting ಹೈದರಾಬಾದ್ ಹೌಸ್‌ನಲ್ಲಿ ವ್ಲಾಡಿಮಿರ್ ಪುಟಿನ್ ಭೇಟಿ ಮಾಡಿದ ಮೋದಿ, ಭಾರತ-ರಷ್ಯಾ ಬಾಂಧವ್ಯ ಸದೃಢವಾಗಿದೆ ಎಂದ ಪ್ರಧಾನಿ

ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್
ದುರಂತಕ್ಕೀಡಾದ ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನ ತುಂಬಲಾಗಿತ್ತು
ದುರಂತಕ್ಕೀಡಾದ ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನ ತುಂಬಲಾಗಿತ್ತು
ಕೆಆರ್​ಎಸ್​ ಡ್ಯಾಂನ ಕ್ರಸ್ಟ್ ಗೇಟ್ ಬಳಿ ಯುವಕರ ಹುಚ್ಚಾಟ: ವಿಡಿಯೋ ವೈರಲ್
ಕೆಆರ್​ಎಸ್​ ಡ್ಯಾಂನ ಕ್ರಸ್ಟ್ ಗೇಟ್ ಬಳಿ ಯುವಕರ ಹುಚ್ಚಾಟ: ವಿಡಿಯೋ ವೈರಲ್
ದ್ಯಾಮೇಶ್ ಧ್ವನಿಗೆ ಮೆಚ್ಚುಗೆ ಸೂಚಿಸಿದ ನಟಿ ರಚಿತಾ ರಾಮ್
ದ್ಯಾಮೇಶ್ ಧ್ವನಿಗೆ ಮೆಚ್ಚುಗೆ ಸೂಚಿಸಿದ ನಟಿ ರಚಿತಾ ರಾಮ್
ಬೆಣ್ಣೆಹಳ್ಳದಲ್ಲಿ ಪ್ರತಿವರ್ಷ ಪ್ರವಾಹದಂಥ ಸ್ಥಿತಿಯಿಂದ ಮೂರು ಬೆಳೆ ನಷ್ಟ
ಬೆಣ್ಣೆಹಳ್ಳದಲ್ಲಿ ಪ್ರತಿವರ್ಷ ಪ್ರವಾಹದಂಥ ಸ್ಥಿತಿಯಿಂದ ಮೂರು ಬೆಳೆ ನಷ್ಟ
ವಿಮಾನ ಬಿದ್ದ ರಭಸಕ್ಕೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಹೇಗಾಗಿದೆ ನೋಡಿ
ವಿಮಾನ ಬಿದ್ದ ರಭಸಕ್ಕೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಹೇಗಾಗಿದೆ ನೋಡಿ