AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Omicron: ಭಾರತದ 10 ರಾಜ್ಯಗಳಲ್ಲಿ ಓಮಿಕ್ರಾನ್​ನ ಹೊಸ ಪ್ರಭೇದ ಪತ್ತೆ

ಭಾರತದ 10 ರಾಜ್ಯಗಳಲ್ಲಿ ಕೊರೊನಾದ ಹೊಸ ಪ್ರಭೇದ ಪತ್ತೆಯಾಗಿದ್ದು, ಈ ಮೊದಲು ಕೊರೊನಾ ಬಂದಿದ್ದವರಿಗೂ ಹೊಸದಾಗಿ ಸೋಂಕು ತಗುಲುವ ಸಾಮರ್ಥ್ಯ ಹೊಂದಿದೆ.

Omicron: ಭಾರತದ 10 ರಾಜ್ಯಗಳಲ್ಲಿ ಓಮಿಕ್ರಾನ್​ನ ಹೊಸ ಪ್ರಭೇದ ಪತ್ತೆ
Coronavirus
TV9 Web
| Edited By: |

Updated on:Jul 04, 2022 | 6:03 PM

Share

ಭಾರತದ 10 ರಾಜ್ಯಗಳಲ್ಲಿ ಕೊರೊನಾದ ಹೊಸ ಪ್ರಭೇದ ಪತ್ತೆಯಾಗಿದ್ದು, ಈ ಮೊದಲು ಕೊರೊನಾ ಬಂದಿದ್ದವರಿಗೂ ಹೊಸದಾಗಿ ಸೋಂಕು ತಗುಲುವ ಸಾಮರ್ಥ್ಯ ಹೊಂದಿದೆ. ಈಗಾಗಲೇ ಕೊರೊನಾ ಲಸಿಕೆ ಪಡೆದಿದ್ದವರಿಗೂ BA.2.75 ಪ್ರಭೇದ ತಗುಲುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಇದರ ಮೇಲೆ ನಿಗಾ ವಹಿಸುವ ಅಗತ್ಯ ಇದೆ ಎಂದು ವಿಜ್ಞಾನಿ ಟೀಮ್ ಪಿಕಾಕ್ ಹೇಳಿಕೆ ನೀಡಿದ್ದಾರೆ.

BA.2.75 ಪ್ರಭೇದದಿಂದ ಹೆಚ್ಚಿನ ರೂಪಾಂತರವಾಗಲಿದ್ದು, ಬಹುಶಃ ಎರಡನೇ ತಲೆಮಾರಿನ ಪ್ರಭೇದ ಇದಾಗಿದೆ. ಬಹಳ ವೇಗವಾಗಿ ಬೆಳವಣಿಗೆ, ಹೆಚ್ಚಿನ ಭೌಗೋಳಿಕ ಪ್ರದೇಶಕ್ಕೆ ಹರಡುವಿಕೆಯ ಸಾಮರ್ಥ್ಯವನ್ನು ಇದು ಹೊಂದಿದೆ.

ದೇಹದಲ್ಲಿನ ರೋಗನಿರೋಧಕ ಶಕ್ತಿಯಿಂದ ಎಸ್ಕೇಪ್ ಆಗುವ ಸಾಮರ್ಥ್ಯವೂ ಇದರಲ್ಲಿದೆ. ಇಸ್ರೇಲಿ ತಜ್ಞರ ಪ್ರಕಾರ, ಭಾರತದಲ್ಲಿ ಸುಮಾರು 10 ರಾಜ್ಯಗಳು ಹೊಸ ಒಮಿಕ್ರಾನ್ ಉಪ-ವೇರಿಯಂಟ್ BA.2.75 ಅನ್ನು ಪತ್ತೆಹಚ್ಚಿವೆ ಎಂದು ಹೇಳಲಾಗಿದೆ.

ಇದು ಆತಂಕಕಾರಿಯಾಗಿರಬಹುದು ಎಂದು ತಜ್ಞರ ಹೇಳಿಕೆ ನೀಡಿದ್ದಾರೆ. ಟೆಲ್ ಹ್ಯಾಶೋಮರ್‌ನಲ್ಲಿರುವ ಶೆಬಾ ಮೆಡಿಕಲ್ ಸೆಂಟರ್‌ನಲ್ಲಿರುವ ಸೆಂಟ್ರಲ್ ವೈರಾಲಜಿ ಲ್ಯಾಬೊರೇಟರಿಯ ಡಾ ಶೇಯ್ ಫ್ಲೆಶನ್ ಸರಣಿ ಟ್ವೀಟ್ ಮಾಡಿದ್ದಾರೆ.

ಎಂಟು ದೇಶಗಳ 85 ಅನುಕ್ರಮಗಳನ್ನು ಜೀನೋಮಿಕ್ ಡೇಟಾದ ಓಪನ್ ಸೋರ್ಸ್ ಪ್ಲಾಟ್‌ಫಾರ್ಮ್ ನೆಕ್ಸ್ಟ್‌ಸ್ಟ್ರೇನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದರಲ್ಲಿ ಭಾರತದ 69 ಮಂದಿ ಸೇರಿದ್ದಾರೆ. ದೆಹಲಿ (1), ಹರಿಯಾಣ (6), ಹಿಮಾಚಲ ಪ್ರದೇಶ (3), ಜಮ್ಮು (1), ಕರ್ನಾಟಕ (10), ಮಧ್ಯಪ್ರದೇಶ (5), ಮಹಾರಾಷ್ಟ್ರ (27), ತೆಲಂಗಾಣ (2), ಉತ್ತರ ಪ್ರದೇಶ (1), ಮತ್ತು ಪಶ್ಚಿಮ ಬಂಗಾಳ (13) ದಲ್ಲಿ BA.2.75 ಪ್ರಭೇದ ಪತ್ತೆಯಾಗಿದೆ.

Published On - 5:55 pm, Mon, 4 July 22

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು