AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿಯನ್ನ ಸಾವಿನ ದವಡೆಯಿಂದ ಉಳಿಸಲು Sharkಗೇ ಗೂಸಾ ಕೊಟ್ಟ ಪತಿರಾಯ!

ಗೂಸಾ ಮೇಲೆ ಗೂಸಾ. ಹೌದು, ಶಾರ್ಕ್​ ಬಾಯಲ್ಲಿ ಸಿಲುಕಿದ್ದ ತನ್ನ ಹೆಂಡತಿಯನ್ನ ರಕ್ಷಿಸಲು ಪತಿರಾಯನೊಬ್ಬ ಅದಕ್ಕೆ ಸರಿಯಾಗಿ ಗೂಸಾ ಕೊಟ್ಟಿರುವ ಸ್ವಾರಸ್ಯಕರ ಪ್ರಸಂಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ವೀಕೆಂಡ್​ ಮಸ್ತಿಗೆಂದು ಸಿಡ್ನಿಯ ಸಮುದ್ರ ತೀರಕ್ಕೆ ಬಂದಿದ್ದ ದಂಪತಿ ನೀರಿನಲ್ಲಿ ಸರ್ಫಿಂಗ್​ ಮಾಡಲು ಮುಂದಾದರು. ಇದೇ ವೇಳೆ ಅಲ್ಲೇ ಈಜುತ್ತಿದ್ದ 10 ಅಡಿ ಉದ್ದದ ಗ್ರೇಟ್​ ವೈಟ್​ ಶಾರ್ಕ್ ಒಂದು ಮಹಿಳೆಯ ಕಾಲಿಗೆ ಬಾಯಿ ಹಾಕಿ ಆಕೆಯನ್ನ ಸಮುದ್ರದೊಳಗೆ ಕಸಿದುಕೊಂದು ಹೋಗಲು ಮುಂದಾಗಿದೆ. ಹೆಂಡತಿಯ […]

ಹೆಂಡತಿಯನ್ನ ಸಾವಿನ ದವಡೆಯಿಂದ ಉಳಿಸಲು Sharkಗೇ ಗೂಸಾ ಕೊಟ್ಟ ಪತಿರಾಯ!
KUSHAL V
|

Updated on: Aug 16, 2020 | 3:12 PM

Share

ಗೂಸಾ ಮೇಲೆ ಗೂಸಾ. ಹೌದು, ಶಾರ್ಕ್​ ಬಾಯಲ್ಲಿ ಸಿಲುಕಿದ್ದ ತನ್ನ ಹೆಂಡತಿಯನ್ನ ರಕ್ಷಿಸಲು ಪತಿರಾಯನೊಬ್ಬ ಅದಕ್ಕೆ ಸರಿಯಾಗಿ ಗೂಸಾ ಕೊಟ್ಟಿರುವ ಸ್ವಾರಸ್ಯಕರ ಪ್ರಸಂಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಬೆಳಕಿಗೆ ಬಂದಿದೆ.

ಕಳೆದ ಶನಿವಾರ ವೀಕೆಂಡ್​ ಮಸ್ತಿಗೆಂದು ಸಿಡ್ನಿಯ ಸಮುದ್ರ ತೀರಕ್ಕೆ ಬಂದಿದ್ದ ದಂಪತಿ ನೀರಿನಲ್ಲಿ ಸರ್ಫಿಂಗ್​ ಮಾಡಲು ಮುಂದಾದರು. ಇದೇ ವೇಳೆ ಅಲ್ಲೇ ಈಜುತ್ತಿದ್ದ 10 ಅಡಿ ಉದ್ದದ ಗ್ರೇಟ್​ ವೈಟ್​ ಶಾರ್ಕ್ ಒಂದು ಮಹಿಳೆಯ ಕಾಲಿಗೆ ಬಾಯಿ ಹಾಕಿ ಆಕೆಯನ್ನ ಸಮುದ್ರದೊಳಗೆ ಕಸಿದುಕೊಂದು ಹೋಗಲು ಮುಂದಾಗಿದೆ.

ಹೆಂಡತಿಯ ಚೀತ್ಕಾರ ಕೇಳಿದ ಪತಿ ಮಾರ್ಕ್​ ಱಪ್ಲೇ ಕೂಡಲೇ ಆಕೆಯ ಬಳಿಗೆ ಈಜಿಬಂದು ಶಾರ್ಕ್ ಬಾಯಲ್ಲಿ ಸಿಲುಕಿದ್ದ ಪತ್ನಿಯ ಬಲಗಾಲನ್ನು ಹೊರತೆಗೆಯಲು ಪ್ರಯತ್ನಿಸಿದ. ಆದರೆ, ಹೆಂಡತಿಯ ಕಾಲನ್ನು ಶಾರ್ಕ್​ ಬಲವಾಗಿ ಕಚ್ಚಿದ್ದರಿಂದ ಅದು ಸಾಧ್ಯವಾಗಲಿಲ್ಲ. ಇದೇ ವೇಳೆ ಸಿಟ್ಟಿಗೆದ್ದ ಮಾರ್ಕ್ ಶಾರ್ಕ್​ಗೆ ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾನಂತೆ.

ಮಾರ್ಕ್​ನ ಆಕ್ರಮಣದಿಂದ ಕೊಂಚ ವಿಚಲಿತಗೊಂಡ ಶಾರ್ಕ್ ಪತ್ನಿಯ ಕಾಲನ್ನು ಬಿಡುಗಡೆ ಮಾಡಿ ಅಲ್ಲಿಂದ ಪರಾರಿಯಾಗಿದೆ. ಇತರರ ಸಹಾಯದಿಂದ ಆಕೆಯನ್ನ ತೀರಕ್ಕೆ ಕರೆತಂದ ಮಾರ್ಕ್​ ಕೂಡಲೇ ಪತ್ನಿಯನ್ನ ಆಸ್ಪತ್ರೆಗೆ ಸೇರಿಸಿ ಅವಳ ಪ್ರಾಣ ಉಳಿಸಿದ್ದಾನೆ. ಒಟ್ನಲ್ಲಿ, ಸಾವಿನ ದವಡೆಯಿಂದ ಹೆಂಡತಿಯನ್ನ ಪಾರುಮಾಡಿದ ಮಾರ್ಕ್​ ನಿಜಕ್ಕೂ ಗಂಡೆದೆಯ ಗಂಡು ಅಲ್ಲ ಗಂಡೆದೆಯ ಗಂಡ ಎಂದು ತೋರಿಸಿಕೊಟ್ಟಿದ್ದಾನೆ.

Follow Us
KUSHAL V
KUSHAL V
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು