AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿಯನ್ನ ಸಾವಿನ ದವಡೆಯಿಂದ ಉಳಿಸಲು Sharkಗೇ ಗೂಸಾ ಕೊಟ್ಟ ಪತಿರಾಯ!

ಗೂಸಾ ಮೇಲೆ ಗೂಸಾ. ಹೌದು, ಶಾರ್ಕ್​ ಬಾಯಲ್ಲಿ ಸಿಲುಕಿದ್ದ ತನ್ನ ಹೆಂಡತಿಯನ್ನ ರಕ್ಷಿಸಲು ಪತಿರಾಯನೊಬ್ಬ ಅದಕ್ಕೆ ಸರಿಯಾಗಿ ಗೂಸಾ ಕೊಟ್ಟಿರುವ ಸ್ವಾರಸ್ಯಕರ ಪ್ರಸಂಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ವೀಕೆಂಡ್​ ಮಸ್ತಿಗೆಂದು ಸಿಡ್ನಿಯ ಸಮುದ್ರ ತೀರಕ್ಕೆ ಬಂದಿದ್ದ ದಂಪತಿ ನೀರಿನಲ್ಲಿ ಸರ್ಫಿಂಗ್​ ಮಾಡಲು ಮುಂದಾದರು. ಇದೇ ವೇಳೆ ಅಲ್ಲೇ ಈಜುತ್ತಿದ್ದ 10 ಅಡಿ ಉದ್ದದ ಗ್ರೇಟ್​ ವೈಟ್​ ಶಾರ್ಕ್ ಒಂದು ಮಹಿಳೆಯ ಕಾಲಿಗೆ ಬಾಯಿ ಹಾಕಿ ಆಕೆಯನ್ನ ಸಮುದ್ರದೊಳಗೆ ಕಸಿದುಕೊಂದು ಹೋಗಲು ಮುಂದಾಗಿದೆ. ಹೆಂಡತಿಯ […]

ಹೆಂಡತಿಯನ್ನ ಸಾವಿನ ದವಡೆಯಿಂದ ಉಳಿಸಲು Sharkಗೇ ಗೂಸಾ ಕೊಟ್ಟ ಪತಿರಾಯ!
KUSHAL V
|

Updated on: Aug 16, 2020 | 3:12 PM

Share

ಗೂಸಾ ಮೇಲೆ ಗೂಸಾ. ಹೌದು, ಶಾರ್ಕ್​ ಬಾಯಲ್ಲಿ ಸಿಲುಕಿದ್ದ ತನ್ನ ಹೆಂಡತಿಯನ್ನ ರಕ್ಷಿಸಲು ಪತಿರಾಯನೊಬ್ಬ ಅದಕ್ಕೆ ಸರಿಯಾಗಿ ಗೂಸಾ ಕೊಟ್ಟಿರುವ ಸ್ವಾರಸ್ಯಕರ ಪ್ರಸಂಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಬೆಳಕಿಗೆ ಬಂದಿದೆ.

ಕಳೆದ ಶನಿವಾರ ವೀಕೆಂಡ್​ ಮಸ್ತಿಗೆಂದು ಸಿಡ್ನಿಯ ಸಮುದ್ರ ತೀರಕ್ಕೆ ಬಂದಿದ್ದ ದಂಪತಿ ನೀರಿನಲ್ಲಿ ಸರ್ಫಿಂಗ್​ ಮಾಡಲು ಮುಂದಾದರು. ಇದೇ ವೇಳೆ ಅಲ್ಲೇ ಈಜುತ್ತಿದ್ದ 10 ಅಡಿ ಉದ್ದದ ಗ್ರೇಟ್​ ವೈಟ್​ ಶಾರ್ಕ್ ಒಂದು ಮಹಿಳೆಯ ಕಾಲಿಗೆ ಬಾಯಿ ಹಾಕಿ ಆಕೆಯನ್ನ ಸಮುದ್ರದೊಳಗೆ ಕಸಿದುಕೊಂದು ಹೋಗಲು ಮುಂದಾಗಿದೆ.

ಹೆಂಡತಿಯ ಚೀತ್ಕಾರ ಕೇಳಿದ ಪತಿ ಮಾರ್ಕ್​ ಱಪ್ಲೇ ಕೂಡಲೇ ಆಕೆಯ ಬಳಿಗೆ ಈಜಿಬಂದು ಶಾರ್ಕ್ ಬಾಯಲ್ಲಿ ಸಿಲುಕಿದ್ದ ಪತ್ನಿಯ ಬಲಗಾಲನ್ನು ಹೊರತೆಗೆಯಲು ಪ್ರಯತ್ನಿಸಿದ. ಆದರೆ, ಹೆಂಡತಿಯ ಕಾಲನ್ನು ಶಾರ್ಕ್​ ಬಲವಾಗಿ ಕಚ್ಚಿದ್ದರಿಂದ ಅದು ಸಾಧ್ಯವಾಗಲಿಲ್ಲ. ಇದೇ ವೇಳೆ ಸಿಟ್ಟಿಗೆದ್ದ ಮಾರ್ಕ್ ಶಾರ್ಕ್​ಗೆ ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾನಂತೆ.

ಮಾರ್ಕ್​ನ ಆಕ್ರಮಣದಿಂದ ಕೊಂಚ ವಿಚಲಿತಗೊಂಡ ಶಾರ್ಕ್ ಪತ್ನಿಯ ಕಾಲನ್ನು ಬಿಡುಗಡೆ ಮಾಡಿ ಅಲ್ಲಿಂದ ಪರಾರಿಯಾಗಿದೆ. ಇತರರ ಸಹಾಯದಿಂದ ಆಕೆಯನ್ನ ತೀರಕ್ಕೆ ಕರೆತಂದ ಮಾರ್ಕ್​ ಕೂಡಲೇ ಪತ್ನಿಯನ್ನ ಆಸ್ಪತ್ರೆಗೆ ಸೇರಿಸಿ ಅವಳ ಪ್ರಾಣ ಉಳಿಸಿದ್ದಾನೆ. ಒಟ್ನಲ್ಲಿ, ಸಾವಿನ ದವಡೆಯಿಂದ ಹೆಂಡತಿಯನ್ನ ಪಾರುಮಾಡಿದ ಮಾರ್ಕ್​ ನಿಜಕ್ಕೂ ಗಂಡೆದೆಯ ಗಂಡು ಅಲ್ಲ ಗಂಡೆದೆಯ ಗಂಡ ಎಂದು ತೋರಿಸಿಕೊಟ್ಟಿದ್ದಾನೆ.

Follow Us
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ