AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿಯನ್ನ ಸಾವಿನ ದವಡೆಯಿಂದ ಉಳಿಸಲು Sharkಗೇ ಗೂಸಾ ಕೊಟ್ಟ ಪತಿರಾಯ!

ಗೂಸಾ ಮೇಲೆ ಗೂಸಾ. ಹೌದು, ಶಾರ್ಕ್​ ಬಾಯಲ್ಲಿ ಸಿಲುಕಿದ್ದ ತನ್ನ ಹೆಂಡತಿಯನ್ನ ರಕ್ಷಿಸಲು ಪತಿರಾಯನೊಬ್ಬ ಅದಕ್ಕೆ ಸರಿಯಾಗಿ ಗೂಸಾ ಕೊಟ್ಟಿರುವ ಸ್ವಾರಸ್ಯಕರ ಪ್ರಸಂಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ವೀಕೆಂಡ್​ ಮಸ್ತಿಗೆಂದು ಸಿಡ್ನಿಯ ಸಮುದ್ರ ತೀರಕ್ಕೆ ಬಂದಿದ್ದ ದಂಪತಿ ನೀರಿನಲ್ಲಿ ಸರ್ಫಿಂಗ್​ ಮಾಡಲು ಮುಂದಾದರು. ಇದೇ ವೇಳೆ ಅಲ್ಲೇ ಈಜುತ್ತಿದ್ದ 10 ಅಡಿ ಉದ್ದದ ಗ್ರೇಟ್​ ವೈಟ್​ ಶಾರ್ಕ್ ಒಂದು ಮಹಿಳೆಯ ಕಾಲಿಗೆ ಬಾಯಿ ಹಾಕಿ ಆಕೆಯನ್ನ ಸಮುದ್ರದೊಳಗೆ ಕಸಿದುಕೊಂದು ಹೋಗಲು ಮುಂದಾಗಿದೆ. ಹೆಂಡತಿಯ […]

ಹೆಂಡತಿಯನ್ನ ಸಾವಿನ ದವಡೆಯಿಂದ ಉಳಿಸಲು Sharkಗೇ ಗೂಸಾ ಕೊಟ್ಟ ಪತಿರಾಯ!
KUSHAL V
|

Updated on: Aug 16, 2020 | 3:12 PM

Share

ಗೂಸಾ ಮೇಲೆ ಗೂಸಾ. ಹೌದು, ಶಾರ್ಕ್​ ಬಾಯಲ್ಲಿ ಸಿಲುಕಿದ್ದ ತನ್ನ ಹೆಂಡತಿಯನ್ನ ರಕ್ಷಿಸಲು ಪತಿರಾಯನೊಬ್ಬ ಅದಕ್ಕೆ ಸರಿಯಾಗಿ ಗೂಸಾ ಕೊಟ್ಟಿರುವ ಸ್ವಾರಸ್ಯಕರ ಪ್ರಸಂಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಬೆಳಕಿಗೆ ಬಂದಿದೆ.

ಕಳೆದ ಶನಿವಾರ ವೀಕೆಂಡ್​ ಮಸ್ತಿಗೆಂದು ಸಿಡ್ನಿಯ ಸಮುದ್ರ ತೀರಕ್ಕೆ ಬಂದಿದ್ದ ದಂಪತಿ ನೀರಿನಲ್ಲಿ ಸರ್ಫಿಂಗ್​ ಮಾಡಲು ಮುಂದಾದರು. ಇದೇ ವೇಳೆ ಅಲ್ಲೇ ಈಜುತ್ತಿದ್ದ 10 ಅಡಿ ಉದ್ದದ ಗ್ರೇಟ್​ ವೈಟ್​ ಶಾರ್ಕ್ ಒಂದು ಮಹಿಳೆಯ ಕಾಲಿಗೆ ಬಾಯಿ ಹಾಕಿ ಆಕೆಯನ್ನ ಸಮುದ್ರದೊಳಗೆ ಕಸಿದುಕೊಂದು ಹೋಗಲು ಮುಂದಾಗಿದೆ.

ಹೆಂಡತಿಯ ಚೀತ್ಕಾರ ಕೇಳಿದ ಪತಿ ಮಾರ್ಕ್​ ಱಪ್ಲೇ ಕೂಡಲೇ ಆಕೆಯ ಬಳಿಗೆ ಈಜಿಬಂದು ಶಾರ್ಕ್ ಬಾಯಲ್ಲಿ ಸಿಲುಕಿದ್ದ ಪತ್ನಿಯ ಬಲಗಾಲನ್ನು ಹೊರತೆಗೆಯಲು ಪ್ರಯತ್ನಿಸಿದ. ಆದರೆ, ಹೆಂಡತಿಯ ಕಾಲನ್ನು ಶಾರ್ಕ್​ ಬಲವಾಗಿ ಕಚ್ಚಿದ್ದರಿಂದ ಅದು ಸಾಧ್ಯವಾಗಲಿಲ್ಲ. ಇದೇ ವೇಳೆ ಸಿಟ್ಟಿಗೆದ್ದ ಮಾರ್ಕ್ ಶಾರ್ಕ್​ಗೆ ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾನಂತೆ.

ಮಾರ್ಕ್​ನ ಆಕ್ರಮಣದಿಂದ ಕೊಂಚ ವಿಚಲಿತಗೊಂಡ ಶಾರ್ಕ್ ಪತ್ನಿಯ ಕಾಲನ್ನು ಬಿಡುಗಡೆ ಮಾಡಿ ಅಲ್ಲಿಂದ ಪರಾರಿಯಾಗಿದೆ. ಇತರರ ಸಹಾಯದಿಂದ ಆಕೆಯನ್ನ ತೀರಕ್ಕೆ ಕರೆತಂದ ಮಾರ್ಕ್​ ಕೂಡಲೇ ಪತ್ನಿಯನ್ನ ಆಸ್ಪತ್ರೆಗೆ ಸೇರಿಸಿ ಅವಳ ಪ್ರಾಣ ಉಳಿಸಿದ್ದಾನೆ. ಒಟ್ನಲ್ಲಿ, ಸಾವಿನ ದವಡೆಯಿಂದ ಹೆಂಡತಿಯನ್ನ ಪಾರುಮಾಡಿದ ಮಾರ್ಕ್​ ನಿಜಕ್ಕೂ ಗಂಡೆದೆಯ ಗಂಡು ಅಲ್ಲ ಗಂಡೆದೆಯ ಗಂಡ ಎಂದು ತೋರಿಸಿಕೊಟ್ಟಿದ್ದಾನೆ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ