AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿಯನ್ನ ಸಾವಿನ ದವಡೆಯಿಂದ ಉಳಿಸಲು Sharkಗೇ ಗೂಸಾ ಕೊಟ್ಟ ಪತಿರಾಯ!

ಗೂಸಾ ಮೇಲೆ ಗೂಸಾ. ಹೌದು, ಶಾರ್ಕ್​ ಬಾಯಲ್ಲಿ ಸಿಲುಕಿದ್ದ ತನ್ನ ಹೆಂಡತಿಯನ್ನ ರಕ್ಷಿಸಲು ಪತಿರಾಯನೊಬ್ಬ ಅದಕ್ಕೆ ಸರಿಯಾಗಿ ಗೂಸಾ ಕೊಟ್ಟಿರುವ ಸ್ವಾರಸ್ಯಕರ ಪ್ರಸಂಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ವೀಕೆಂಡ್​ ಮಸ್ತಿಗೆಂದು ಸಿಡ್ನಿಯ ಸಮುದ್ರ ತೀರಕ್ಕೆ ಬಂದಿದ್ದ ದಂಪತಿ ನೀರಿನಲ್ಲಿ ಸರ್ಫಿಂಗ್​ ಮಾಡಲು ಮುಂದಾದರು. ಇದೇ ವೇಳೆ ಅಲ್ಲೇ ಈಜುತ್ತಿದ್ದ 10 ಅಡಿ ಉದ್ದದ ಗ್ರೇಟ್​ ವೈಟ್​ ಶಾರ್ಕ್ ಒಂದು ಮಹಿಳೆಯ ಕಾಲಿಗೆ ಬಾಯಿ ಹಾಕಿ ಆಕೆಯನ್ನ ಸಮುದ್ರದೊಳಗೆ ಕಸಿದುಕೊಂದು ಹೋಗಲು ಮುಂದಾಗಿದೆ. ಹೆಂಡತಿಯ […]

ಹೆಂಡತಿಯನ್ನ ಸಾವಿನ ದವಡೆಯಿಂದ ಉಳಿಸಲು Sharkಗೇ ಗೂಸಾ ಕೊಟ್ಟ ಪತಿರಾಯ!
KUSHAL V
|

Updated on: Aug 16, 2020 | 3:12 PM

Share

ಗೂಸಾ ಮೇಲೆ ಗೂಸಾ. ಹೌದು, ಶಾರ್ಕ್​ ಬಾಯಲ್ಲಿ ಸಿಲುಕಿದ್ದ ತನ್ನ ಹೆಂಡತಿಯನ್ನ ರಕ್ಷಿಸಲು ಪತಿರಾಯನೊಬ್ಬ ಅದಕ್ಕೆ ಸರಿಯಾಗಿ ಗೂಸಾ ಕೊಟ್ಟಿರುವ ಸ್ವಾರಸ್ಯಕರ ಪ್ರಸಂಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಬೆಳಕಿಗೆ ಬಂದಿದೆ.

ಕಳೆದ ಶನಿವಾರ ವೀಕೆಂಡ್​ ಮಸ್ತಿಗೆಂದು ಸಿಡ್ನಿಯ ಸಮುದ್ರ ತೀರಕ್ಕೆ ಬಂದಿದ್ದ ದಂಪತಿ ನೀರಿನಲ್ಲಿ ಸರ್ಫಿಂಗ್​ ಮಾಡಲು ಮುಂದಾದರು. ಇದೇ ವೇಳೆ ಅಲ್ಲೇ ಈಜುತ್ತಿದ್ದ 10 ಅಡಿ ಉದ್ದದ ಗ್ರೇಟ್​ ವೈಟ್​ ಶಾರ್ಕ್ ಒಂದು ಮಹಿಳೆಯ ಕಾಲಿಗೆ ಬಾಯಿ ಹಾಕಿ ಆಕೆಯನ್ನ ಸಮುದ್ರದೊಳಗೆ ಕಸಿದುಕೊಂದು ಹೋಗಲು ಮುಂದಾಗಿದೆ.

ಹೆಂಡತಿಯ ಚೀತ್ಕಾರ ಕೇಳಿದ ಪತಿ ಮಾರ್ಕ್​ ಱಪ್ಲೇ ಕೂಡಲೇ ಆಕೆಯ ಬಳಿಗೆ ಈಜಿಬಂದು ಶಾರ್ಕ್ ಬಾಯಲ್ಲಿ ಸಿಲುಕಿದ್ದ ಪತ್ನಿಯ ಬಲಗಾಲನ್ನು ಹೊರತೆಗೆಯಲು ಪ್ರಯತ್ನಿಸಿದ. ಆದರೆ, ಹೆಂಡತಿಯ ಕಾಲನ್ನು ಶಾರ್ಕ್​ ಬಲವಾಗಿ ಕಚ್ಚಿದ್ದರಿಂದ ಅದು ಸಾಧ್ಯವಾಗಲಿಲ್ಲ. ಇದೇ ವೇಳೆ ಸಿಟ್ಟಿಗೆದ್ದ ಮಾರ್ಕ್ ಶಾರ್ಕ್​ಗೆ ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾನಂತೆ.

ಮಾರ್ಕ್​ನ ಆಕ್ರಮಣದಿಂದ ಕೊಂಚ ವಿಚಲಿತಗೊಂಡ ಶಾರ್ಕ್ ಪತ್ನಿಯ ಕಾಲನ್ನು ಬಿಡುಗಡೆ ಮಾಡಿ ಅಲ್ಲಿಂದ ಪರಾರಿಯಾಗಿದೆ. ಇತರರ ಸಹಾಯದಿಂದ ಆಕೆಯನ್ನ ತೀರಕ್ಕೆ ಕರೆತಂದ ಮಾರ್ಕ್​ ಕೂಡಲೇ ಪತ್ನಿಯನ್ನ ಆಸ್ಪತ್ರೆಗೆ ಸೇರಿಸಿ ಅವಳ ಪ್ರಾಣ ಉಳಿಸಿದ್ದಾನೆ. ಒಟ್ನಲ್ಲಿ, ಸಾವಿನ ದವಡೆಯಿಂದ ಹೆಂಡತಿಯನ್ನ ಪಾರುಮಾಡಿದ ಮಾರ್ಕ್​ ನಿಜಕ್ಕೂ ಗಂಡೆದೆಯ ಗಂಡು ಅಲ್ಲ ಗಂಡೆದೆಯ ಗಂಡ ಎಂದು ತೋರಿಸಿಕೊಟ್ಟಿದ್ದಾನೆ.

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ