AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಚೇರಿಯ ಅವಧಿಯಲ್ಲಿ ನಿತ್ಯ 6 ಗಂಟೆಗಳ ಕಾಲ ಟಾಯ್ಲೆಟ್​ನಲ್ಲೇ ಕುಳಿತಿರುತ್ತಿದ್ದ ಉದ್ಯೋಗಿ, ಕೆಲಸದಿಂದ ವಜಾ

ಕಚೇರಿ ಅವಧಿಯಲ್ಲಿ 6 ಗಂಟೆಗಳ ಕಾಲ ಟಾಯ್ಲೆಟ್​ನಲ್ಲಿ ಕೂತಿದ್ದ ವ್ಯಕ್ತಿಯನ್ನು ಕಂಪನಿ ಕೆಲಸದಿಂದ ವಜಾಗೊಳಿಸಿದೆ. ಆರೋಗ್ಯ ಸರಿ ಇಲ್ಲ ಎಂದು 6 ಗಂಟೆಗಳ ಕಾಲ ಕೆಲಸ ಬಿಟ್ಟು ಆತ ಟಾಯ್ಲೆಟ್​ನಲ್ಲಿ ಕುಳಿತಿದ್ದ ಎನ್ನಲಾಗಿದೆ.

ಕಚೇರಿಯ ಅವಧಿಯಲ್ಲಿ ನಿತ್ಯ 6 ಗಂಟೆಗಳ ಕಾಲ ಟಾಯ್ಲೆಟ್​ನಲ್ಲೇ ಕುಳಿತಿರುತ್ತಿದ್ದ ಉದ್ಯೋಗಿ, ಕೆಲಸದಿಂದ ವಜಾ
ಟಾಯ್ಲೆಟ್
Follow us
ನಯನಾ ರಾಜೀವ್
|

Updated on: Jun 02, 2023 | 3:42 PM

ಕಚೇರಿ ಅವಧಿಯಲ್ಲಿ 6 ಗಂಟೆಗಳ ಕಾಲ ಟಾಯ್ಲೆಟ್​ನಲ್ಲಿ ಕೂತಿದ್ದ ವ್ಯಕ್ತಿಯನ್ನು ಕಂಪನಿ ಕೆಲಸದಿಂದ ವಜಾಗೊಳಿಸಿದೆ. ಆರೋಗ್ಯ ಸರಿ ಇಲ್ಲ ಎಂದು 6 ಗಂಟೆಗಳ ಕಾಲ ಕೆಲಸ ಬಿಟ್ಟು ಆತ ಟಾಯ್ಲೆಟ್​ನಲ್ಲಿ ಕುಳಿತಿದ್ದ ಎನ್ನಲಾಗಿದೆ. ಈ ಘಟನೆ ಚೀನಾದಲ್ಲಿ ನಡೆದಿದೆ. ಉದ್ಯೋಗಿ ವಾಂಗ್ ಆರೋಗ್ಯ ಸರಿ ಇಲ್ಲ ಎನ್ನುವ ಕಾರಣವನ್ನು ನೀಡಿದ್ದ, ಅನ್ಯಾಯವಾಗಿ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಆದರೂ ಕೋರ್ಟ್​ ಕಂಪನಿ ಪರವಾಗಿ ತೀರ್ಪು ನೀಡಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ , ಶ್ರೀ ವಾಂಗ್ ಅವರು ಏಪ್ರಿಲ್ 2006 ರಲ್ಲಿ ಕಂಪನಿಗೆ ಸೇರಿದ್ದರು ಮತ್ತು ಡಿಸೆಂಬರ್ 2014 ರಲ್ಲಿ ಅವರು ಪೈಲ್ಸ್​ಗೆ ಚಿಕಿತ್ಸೆ ಪಡೆದರು, ಇದಾದ ಬಳಿಕ ಅವರು ಆಗಾಗ ಬಾತ್​ ರೂಮ್​ಗೆ ತೆರಳಬೇಕಾಗಿತ್ತು. ಅವರ ಚಿಕಿತ್ಸೆಯು ಯಶಸ್ವಿಯಾಗಿದ್ದರೂ ಸಹ, ವಾಂಗ್ ಅವರು ನಿರಂತರ ನೋವನ್ನು ಅನುಭವಿಸುತ್ತಿದ್ದರು, ಅಂದರೆ ಜುಲೈ 2015 ರಿಂದ ಟಾಯ್ಲೆಟ್​ನಲ್ಲಿ ದಿನಕ್ಕೆ ಮೂರರಿಂದ ಆರು ಗಂಟೆಗಳ ಕಾಲ ಕುಳಿತುಕೊಳ್ಳುವುದು ಅನಿವಾರ್ಯವಾಗಿತ್ತು.

ಮತ್ತಷ್ಟು ಓದಿ: Piles: ಜೀವ ಹಿಂಡುವ ಮೂಲವ್ಯಾಧಿ ನಿವಾರಣೆಗೆ ಇಲ್ಲಿದೆ ಪವರ್‌ಫುಲ್ ಹಳ್ಳಿಮದ್ದುಗಳು!

ಔಟ್ಲೆಟ್ ವರದಿ ಮಾಡಿದ ಕಂಪನಿಯ ದಾಖಲೆಗಳ ಪ್ರಕಾರ, 2015 ರಲ್ಲಿ ಸೆಪ್ಟೆಂಬರ್ 7 ರಿಂದ 17 ರವರೆಗೆ, ವಾಂಗ್ ಪ್ರತಿ ಕೆಲಸದ ಶಿಫ್ಟ್ ಸಮಯದಲ್ಲಿ ರೆಸ್ಟ್ ರೂಂಗೆ ಎರಡು ಅಥವಾ ಮೂರು ಬಾರಿ ಹೋಗುತ್ತಿದ್ದರು. ಪ್ರತಿ ಸಲವೂ 47 ರಿಂದ 3 ಗಂಟೆಯವರೆಗೆ ಇರುತ್ತಿದ್ದರು. ಕಳೆದ ಸೆಪ್ಟೆಂಬರ್​ನಲ್ಲಿ ಅವರನ್ನು ಕೆಲಸದಿಂದ ವಜಾ ಮಾಡಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಆಷಾಢ ಮೊದಲ ಶುಕ್ರವಾರ: ಶಕ್ತಿ ದೇವತೆ ಆರಾಧನೆಯ ಪ್ರಯೋಜನಗಳೇನು ನೋಡಿ
ಆಷಾಢ ಮೊದಲ ಶುಕ್ರವಾರ: ಶಕ್ತಿ ದೇವತೆ ಆರಾಧನೆಯ ಪ್ರಯೋಜನಗಳೇನು ನೋಡಿ
ಜಮ್ಮು ಕಾಶ್ಮೀರದ ಪ್ರವಾಸಿ ರೆಸಾರ್ಟ್​ ಬಳಿ ಕರಡಿ ಪ್ರತ್ಯಕ್ಷ, ಹೆಚ್ಚಿದ ಆತಂಕ
ಜಮ್ಮು ಕಾಶ್ಮೀರದ ಪ್ರವಾಸಿ ರೆಸಾರ್ಟ್​ ಬಳಿ ಕರಡಿ ಪ್ರತ್ಯಕ್ಷ, ಹೆಚ್ಚಿದ ಆತಂಕ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ