AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಜಾಂಬಿಕ್​ನಲ್ಲಿ ಚುನಾವಣೋತ್ತರ ಗಲಾಟೆ, ಇದೇ ಒಳ್ಳೆ ಸಮಯವೆಂದು 1,500 ಕೈದಿಗಳು ಪರಾರಿ

ಮೊಜಂಬಿಕ್​ನಲ್ಲಿ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ, ಗಲಾಟೆಗಳು ಹೆಚ್ಚಾಗಿವೆ, ಇದರ ಲಾಭ ಪಡೆದ 1,500 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ, ಇದೇ ಸಂದರ್ಭದಲ್ಲಿ 33 ಕೈದಿಗಳು ತಪ್ಪಿಸಿಕೊಳ್ಳಳು ಹೋಗಿ ಸಾವನ್ನಪ್ಪಿದ್ದರೆ 15 ಕೈದಿಗಳು ಗಾಯಗೊಂಡಿದ್ದಾರೆ. 1975 ರಿಂದ ಅಧಿಕಾರದಲ್ಲಿರುವ ಫ್ರೆಲಿಮೊ ಅಕ್ಟೋಬರ್ 9 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದೆ ಎಂದು ನ್ಯಾಯಾಲಯ ದೃಢಪಡಿಸಿದೆ.

ಮೊಜಾಂಬಿಕ್​ನಲ್ಲಿ ಚುನಾವಣೋತ್ತರ ಗಲಾಟೆ, ಇದೇ ಒಳ್ಳೆ ಸಮಯವೆಂದು 1,500 ಕೈದಿಗಳು ಪರಾರಿ
ಮೊಜಾಂಬಿಕ್ ಕಲಹImage Credit source: BBC
ನಯನಾ ರಾಜೀವ್
|

Updated on:Dec 26, 2024 | 10:56 AM

Share

ಮೊಜಾಂಬಿಕ್​ನಲ್ಲಿ ಚುನಾವಣೆಗೆ ಸಂಬಂಧಿಸಿದ ಗಲಾಟೆಗಳು ನಡೆಯುತ್ತಿದ್ದು, ಅಶಾಂತಿ ತಲೆದೋರಿದೆ. ಇದೇ ಸಮಯವನ್ನು ಬಳಸಿಕೊಂಡು 1,500 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ. ಮೊಜಾಂಬಿಕ್‌ನ ರಾಜಧಾನಿ ಮಾಪುಟೊದಲ್ಲಿನ ಜೈಲಿನಲ್ಲಿ ನಡೆದ ಗಲಭೆಯಲ್ಲಿ 33 ಜನರು ಸಾವನ್ನಪ್ಪಿದ್ದಾರೆ ಮತ್ತು 15 ಮಂದಿ ಗಾಯಗೊಂಡಿದ್ದಾರೆ.

ಗಲಭೆಯಿಂದಾಗಿ 1534 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದು, ಅವರಲ್ಲಿ 150 ಕೈದಿಗಳನ್ನು ಮರಳಿ ಸೆರೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಮೊಜಾಂಬಿಕ್‌ನ ಇತರ ಎರಡು ಜೈಲುಗಳಲ್ಲಿ ಗಲಾಟೆಯ ವರದಿಗಳಿವೆ. ಮೊಜಾಂಬಿಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇದುವರೆಗೆ ನೂರಾರು ಜನರು ಸಾವನ್ನಪ್ಪಿದ್ದಾರೆ. ಈವರೆಗೆ ಬಂದಿರುವ ಮಾಹಿತಿ ಪ್ರಕಾರ ಹತ್ಯೆಯಾದವರ ಗುರುತು ಇನ್ನೂ ಸ್ಪಷ್ಟವಾಗಿಲ್ಲ.

ರಾಜಧಾನಿಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಹೈ-ಸೆಕ್ಯುರಿಟಿ ಜೈಲಿನಿಂದ ಒಟ್ಟು 1,534 ಕೈದಿಗಳು ತಪ್ಪಿಸಿಕೊಂಡಿದ್ದಾರೆ. ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದವರಲ್ಲಿ, ಜೈಲು ಸಿಬ್ಬಂದಿಯೊಂದಿಗಿನ ಘರ್ಷಣೆಯಲ್ಲಿ 33 ಮಂದಿ ಸಾವನ್ನಪ್ಪಿದರು ಮತ್ತು 15 ಮಂದಿ ಗಾಯಗೊಂಡರು, ಸೇನೆಯ ಬೆಂಬಲದೊಂದಿಗೆ ಶೋಧ ಕಾರ್ಯಾಚರಣೆಯು ಸುಮಾರು 150 ಪರಾರಿಯಾದವರನ್ನು ಬಂಧಿಸಲು ಸಾಧ್ಯವಾಯಿತು.

ಮತ್ತಷ್ಟು ಓದಿ: ಲುಂಗಿ, ಬೆಡ್​ಶೀಟ್​ ಬಳಸಿ 20 ಅಡಿ ಎತ್ತರದ ಜೈಲು ಗೋಡೆ ಹಾರಿ ಕೈದಿಗಳು ಪರಾರಿ

ಸುಮಾರು 30 ಕೈದಿಗಳು ಕಳೆದ ಏಳು ವರ್ಷಗಳಿಂದ ಉತ್ತರ ಪ್ರಾಂತ್ಯದ ಕ್ಯಾಬೊ ಡೆಲ್ಗಾಡೊದಲ್ಲಿ ಅಶಾಂತಿ ಮತ್ತು ದಾಳಿಗಳ ಹಿಂದೆ ಸಶಸ್ತ್ರ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದಾರೆ. 1975 ರಿಂದ ಅಧಿಕಾರದಲ್ಲಿರುವ ಫ್ರೆಲಿಮೊ ಅಕ್ಟೋಬರ್ 9 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದೆ ಎಂದು ನ್ಯಾಯಾಲಯ ದೃಢಪಡಿಸಿದೆ.

ಇದಾದ ಬಳಿಕ ಘರ್ಷಣೆಗಳು ಹೆಚ್ಚಾಗಿದ್ದವು. ವಿಧ್ವಂಸಕ ಕೃತ್ಯಗಳು ಮುಂದುವರೆದಂತೆ ರಾಜಧಾನಿಯ ಹಲವಾರು ಪ್ರದೇಶಗಳಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿತ್ತು. ಈಗಾಗಲೇ ಸಾಕಷ್ಟು ಅಂಗಡಿಗಳನ್ನು ಲೂಟಿ ಮಾಡಲಾಗಿದೆ. ಆಂಬ್ಯುಲೆನ್ಸ್​, ಮೆಡಿಕಲ್ ಸ್ಟೋರ್ಸ್​ ಸೇರಿದಂತೆ ಹಲವನ್ನು ಸುಟ್ಟುಹಾಕಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:56 am, Thu, 26 December 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ