AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲ್ಲೂರು ಮೂಲದ ಹಸು 36 ಕೋಟಿಗೆ ಮಾರಾಟವಾಯ್ತು! ಯಾಕೆ ಗೊತ್ತಾ? ಇಲ್ಲಿದೆ ಪೈಸಾ ವಸೂಲ್ ಕಹಾನಿ

ಒಂದು ಮಾಮೂಲಿ ನೆಲ್ಲೂರು ಹಸು ಕೇವಲ ಕೆಲವು ಡಜನ್ ಕರುಗಳನ್ನು ಹುಟ್ಟುಹಾಕಬಹುದು. ಅದೇ ಬ್ರೆಜಿಲ್​​ನಲ್ಲಿ ಅಭಿವೃದ್ಧಿಪಡಿಸಲಾದ ರಾಣಿ ಹಸು ಬಲಾಢ್ಯ ಹತ್ತಾರು ಜಾನುವಾರುಗಳನ್ನು ಹುಟ್ಟುಹಾಕುತ್ತದೆ. ಇಲ್ಲಿನ ಸಂತಾನೋತ್ಪತ್ತಿ ಪ್ರಕ್ರಿಯೆಯೇ ಕ್ರಾಂತಿಕಾರಿಯಾಗಿದೆ. ಇದು ಶಾಖ ಪ್ರತಿರೋಧ, ರೋಗ ನಿರೋಧಕ ಶಕ್ತಿ, ಫೀಡ್ ದಕ್ಷತೆ, ಉತ್ತಮ ಗುಣಮಟ್ಟದ ಕೊಬ್ಬು ಬೆಳವಣಿಗೆ ಮತ್ತು ಸಮೃದ್ಧ ಸಂತಾನೋತ್ಪತ್ತಿ ಶಕ್ತಿಯನ್ನು ಹೊಂದಿದೆ. ಹಾಗಾಗಿಯೇ, Viatina-19 ತಳಿ ಮಾರುಕಟ್ಟೆಯಲ್ಲಿ ಬಿಲಿಯನ್-ಡಾಲರ್-ಆಭರಣದ ಪ್ರತಿನಿಧಿಯಾಗಿ ಕಂಗೊಳಿಸುತ್ತಿದೆ.

ನೆಲ್ಲೂರು ಮೂಲದ ಹಸು 36 ಕೋಟಿಗೆ ಮಾರಾಟವಾಯ್ತು! ಯಾಕೆ ಗೊತ್ತಾ? ಇಲ್ಲಿದೆ ಪೈಸಾ ವಸೂಲ್ ಕಹಾನಿ
ದಾಖಲೆ ಮಾರಾಟದ ನಡುವೆಯೂ ಬ್ರೆಜಿಲ್‌ನ ಜಾನುವಾರು ದಿಗಂತದಲ್ಲಿ ಕಾರ್ಮೋಡಗಳು!?
ಸಾಧು ಶ್ರೀನಾಥ್​
|

Updated on:May 10, 2024 | 6:00 PM

Share

ಜಾನುವಾರು ಸಂತಾನೋತ್ಪತ್ತಿ, ಸಾಕಣೆ ಮತ್ತು ಪಾಲನೆ ಇತಿಹಾಸದಲ್ಲಿ ಕಳೆದ ವರ್ಷ ಬ್ರೆಜಿಲ್‌ನಲ್ಲಿ ಹಾಲುಬಿಳುಪಿನ ನೆಲ್ಲೂರು ಹಸು ಹರಾಜು ಮೂಲಕ ದಾಖಲೆಯ ಮಟ್ಟದಲ್ಲಿ ಮಾರಾಟವಾಯಿತು. ಮಧ್ಯ ಬ್ರೆಜಿಲ್​​ ನಲ್ಲಿ ನಡೆದ ಹರಾಜಿನಲ್ಲಿ ಈ ನೆಲ್ಲೂರು ಹಸು ನೀವು ನಂಬಲಾಗದ ಮೌಲ್ಯದಲ್ಲಿ 36 ಕೋಟಿ ರೂ.ಗೆ ಮಾರಾಟವಾಯಿತು. ಅದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್​​​​​ಗೂ ಸೇರ್ಪಡೆಯಾಯಿತು. ಇದೂ ಸಹ ಹೆಚ್ಚುಗಾರಿಕೆಯೆ ಆಗಿದೆ. ಹಾಗೆ ನೋಡಿದರೆ ಇಲ್ಲಿನ ಜಾನುವಾರು ಸಂತಾನೋತ್ಪತ್ತಿ ಪ್ರಕ್ರಿಯೆಯೇ ಕ್ರಾಂತಿಕಾರಿಯಾಗಿದೆ. ಇದು ಪ್ರಸ್ತುತ ಭೂಮಿಯ ಮೇಲಿನ ಅತ್ಯಮೂಲ್ಯ ಜಾನುವಾರು ಆಗಿದೆ. ಹಸುವಿಗೆ ವಯಾಟಿನಾ-19 ಎಫ್‌ಐವಿ ಮಾರಾ ಇಮೊವೆಸ್ (Viatina-19 FIV Mara Imóveis) ಎಂದು ಹೆಸರಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಜಾನುವಾರು ವ್ಯಾಪಾರದಲ್ಲಿ ಕ್ರಾಂತಿಯನ್ನುಂಟುಮಾಡುವ ರೀತಿಯಲ್ಲಿ ಜೈವಿಕ ತಂತ್ರಜ್ಞಾನದ ಆವಿಷ್ಕಾರದ ಪ್ರಮುಖ ಸಾಧನೆಯನ್ನು ಇದು ಪ್ರತಿನಿಧಿಸುತ್ತದೆ. ಈ ಹಿಂದೆಯೆಲ್ಲಾ ನೆಲ್ಲೂರು ಎತ್ತುಗಳು ನಿಯಮಿತವಾಗಿ 2,000 ಡಾಲರ್​ ಬೆಲೆ ಪಡೆಯುತ್ತಿದ್ದರೂ, ಅದೇ ತಳಿಯ ಹಸುವನ್ನು ದುಬಾರಿ ಮೊತ್ತಕ್ಕೆ ಮಾರಾಟ ಮಾಡಲು ನಿರ್ದಿಷ್ಟ ಕಾರಣಗಳಿವೆ. ಎತ್ತುಗಳನ್ನು ಸಾಮಾನ್ಯವಾಗಿ ಅವುಗಳ ಮಾಂಸ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯಗಳಿಗಾಗಿ ಮಾರಾಟ ಮಾಡಲಾಗುತ್ತದೆ. ಹಾಗಾಗಿ ವಯಾಟಿನಾ -19 ಹಸುವಿನ ಮೌಲ್ಯವು ಅದರ ವಂಶವಾಹಿಯಲ್ಲಿಯೇ ಅಡಗಿದೆ. Viatina-19 ಭಾರತೀಯ ವಂಶಾವಳಿಯನ್ನು ಹೊಂದಿದೆ. ನೆಲ್ಲೂರು ತಳಿಯನ್ನು ವೈಜ್ಞಾನಿಕವಾಗಿ ಬಾಸ್ ಇಂಡಿಕಸ್ ಎಂದು ಕರೆಯಲಾಗುತ್ತದೆ, ಇದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಒಂಗೋಲ್ ಜಾನುವಾರುಗಳಿಂದ ಬಂದಿದೆ. ಒಂಗೋಲ್ ಜಾನುವಾರುಗಳು ಸುಡುವ ಬೇಸಿಗೆ ಶಾಖ ಮತ್ತು ತೀವ್ರ ಬರ ಪರಿಸ್ಥಿತಿಗಳನ್ನು ಸಹಿಸಿಕೊಳ್ಳುವ ಅಸಾಧಾರಣ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಭಾರತದಲ್ಲಿ ಶತಮಾನಗಳಿಂದಲೂ ಅದನ್ನು ಪವಿತ್ರ ಜೀವಿಗಳಾಗಿ ಪೂಜಿಸಲಾಗುತ್ತಿದೆ. ಒಂಗೋಲ್ ಮತ್ತು...

Published On - 5:13 pm, Fri, 10 May 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ