AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ ಬಳಿಕ ಸಂಚಾರ ಕೈಗೊಂಡಿದ್ದ ಕರಾಚಿ ವಿಮಾನ ಪತನ!

ಕರಾಚಿ: ಕರಾಚಿಯಲ್ಲಿ ನಾಗರಿಕ ವಿಮಾನವೊಂದು ಪತನಗೊಂಡಿದೆ. ಕರಾಚಿ ಏರ್​ಪೋರ್ಟ್​ ಬಳಿ ಲ್ಯಾಂಡಿಂಗ್ ಮಾಡಲು ಒಂದೆರಡು ನಿಮಿಷ ಇರುವಾಗ ಪತನವಾಗಿದೆ. ತಾಂತ್ರಿಕ ದೋಷದಿಂದ ವಸತಿ ಪ್ರದೇಶದಲ್ಲಿ, ಮನೆಗಳ ಮೇಲೆ A320 ವಿಮಾನ ನೋಸ್ ಡೈವ್​ ಹೊಡೆದು ಬಿದ್ದಿದೆ. Black Friday, Corona Effect ಪಾಕಿಸ್ತಾನಕ್ಕೆ ಇಂದು ಕಪ್ಪು ಶುಕ್ರವಾರ ಆಗಿದೆ. ಇಂದು  ರಂಜಾನ್ ಮಾಸದ ಕೊನೆಯ ಶುಕ್ರವಾರ.  ಕೊರೊನಾ ವೈರಸ್​ ಕಾಟದಿಂದಾಗಿ ದೀರ್ಘಕಾಲದ ಲಾಕ್​ಡೌನ್​ ಬಳಿಕ ಸಂಚಾರ ಕೈಗೊಂಡಿದ್ದ ವಿಮಾನವೊಂದು ಪಾಕಿಸ್ತಾನದಲ್ಲಿ ಅಪಘಾತಕ್ಕೀಡಾಗಿದೆ. ನತದೃಷ್ಟ PK-8303 flight ವಿಮಾನದಲ್ಲಿ […]

ಲಾಕ್​ಡೌನ್​ ಬಳಿಕ ಸಂಚಾರ ಕೈಗೊಂಡಿದ್ದ ಕರಾಚಿ ವಿಮಾನ ಪತನ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:May 22, 2020 | 4:57 PM

Share

ಕರಾಚಿ: ಕರಾಚಿಯಲ್ಲಿ ನಾಗರಿಕ ವಿಮಾನವೊಂದು ಪತನಗೊಂಡಿದೆ. ಕರಾಚಿ ಏರ್​ಪೋರ್ಟ್​ ಬಳಿ ಲ್ಯಾಂಡಿಂಗ್ ಮಾಡಲು ಒಂದೆರಡು ನಿಮಿಷ ಇರುವಾಗ ಪತನವಾಗಿದೆ. ತಾಂತ್ರಿಕ ದೋಷದಿಂದ ವಸತಿ ಪ್ರದೇಶದಲ್ಲಿ, ಮನೆಗಳ ಮೇಲೆ A320 ವಿಮಾನ ನೋಸ್ ಡೈವ್​ ಹೊಡೆದು ಬಿದ್ದಿದೆ.

Black Friday, Corona Effect ಪಾಕಿಸ್ತಾನಕ್ಕೆ ಇಂದು ಕಪ್ಪು ಶುಕ್ರವಾರ ಆಗಿದೆ. ಇಂದು  ರಂಜಾನ್ ಮಾಸದ ಕೊನೆಯ ಶುಕ್ರವಾರ.  ಕೊರೊನಾ ವೈರಸ್​ ಕಾಟದಿಂದಾಗಿ ದೀರ್ಘಕಾಲದ ಲಾಕ್​ಡೌನ್​ ಬಳಿಕ ಸಂಚಾರ ಕೈಗೊಂಡಿದ್ದ ವಿಮಾನವೊಂದು ಪಾಕಿಸ್ತಾನದಲ್ಲಿ ಅಪಘಾತಕ್ಕೀಡಾಗಿದೆ. ನತದೃಷ್ಟ PK-8303 flight ವಿಮಾನದಲ್ಲಿ ಐದು ಸಿಬ್ಬಂದಿಯ ಜೊತೆಗೆ 51 ಮಂದಿ ಪುರುಷರು, 31 ಮಹಿಳೆಯರು ಮತ್ತು 9 ಮಕ್ಕಳು ಪ್ರಯಾಣಿಸಿದ್ದರು.

ರಂಜಾನ್ ಆಚರಣೆ ಮೇಲೆ ಕರಿಛಾಯೆ: ಪಾಕಿಸ್ತಾನ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಗೆ ಸೇರಿದ ಈ ವಿಮಾನವು (PIA) ಲಾಹೋರ್​ ಮತ್ತು ಕರಾಚಿ ನಡುವೆ ಸಂಚರಿಸುತ್ತಿತ್ತು. ಕರಾಚಿಯಲ್ಲಿ ಜಿನ್ನಾ ಗಾರ್ಡನ್ ಏರಿಯಾದಲ್ಲಿ ಲ್ಯಾಂಡಿಂಗ್​ಗೆ ಒಂದೆರಡು ನಿಮಿಷ ಇರುವಾಗ ಬಿದ್ದಿದೆ. ಬಹುತೇಕ ಪ್ರಯಾಣಿಕರು ರಂಜಾನ್ ಆಚರಣೆಗೆಂದು ತಮ್ಮ ತಮ್ಮ ಊರುಗಳಿಗೆ ತೆರಳಲು ಲಾಹೋರ್​ನಿಂದ ವಿಮಾನದ ಮೂಲಕ ಕರಾಚಿಗೆ ಬಂದಿಳಿಯಬೇಕಿತ್ತು. ಆದ್ರೆ ಅಷ್ಟರಲ್ಲಿ ವಿಧಿ ಬೇರೆಯದ್ದೇ ಆಟ ಆಡಿದೆ.

Published On - 4:16 pm, Fri, 22 May 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು