AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದ ಸಿನೋವ್ಯಾಕ್​ ಕೊರೊನಾ ಲಸಿಕೆ ಪ್ರಯೋಗಗಳಲ್ಲಿ ಮುಂಚೂಣಿಯಲ್ಲಿದ್ದ ವಿಜ್ಞಾನಿ ನೊವಿಲಿಯಾ ಸ್ಜಾಫ್ರಿ ಬಚ್ಚಿಯಾರ್ ಸಾವು

ಇಂಡೋನೇಷ್ಯಾದ ರಾಜ್ಯ ಉದ್ಯಮಗಳ ಸಚಿವ ಎರಿಕ್​ ತೋಹಿರ್​​ ಇನ್​ಸ್ಟಾಗ್ರಾಂನಲ್ಲಿ ನೊವಿಲಿಯಾ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಆದರೆ ಆಕೆಯ ಸಾವಿಗೆ ನಿಖರ ಕಾರಣವೇನೆಂದು ಅವರೂ ತಿಳಿಸಲಿಲ್ಲ.

ಚೀನಾದ ಸಿನೋವ್ಯಾಕ್​ ಕೊರೊನಾ ಲಸಿಕೆ ಪ್ರಯೋಗಗಳಲ್ಲಿ ಮುಂಚೂಣಿಯಲ್ಲಿದ್ದ ವಿಜ್ಞಾನಿ ನೊವಿಲಿಯಾ ಸ್ಜಾಫ್ರಿ ಬಚ್ಚಿಯಾರ್ ಸಾವು
ನೊವಿಲಿಯಾ ಸ್ಜಾಫ್ರಿ ಬಚ್ಚಿಯಾರ್
TV9 Web
| Edited By: |

Updated on: Jul 10, 2021 | 11:00 AM

Share

ಇಂಡೋನೇಷ್ಯಾದಲ್ಲಿ ಚೀನಾದ ಸಿನೋವ್ಯಾಕ್ ಕೊರೊನಾ ಲಸಿಕೆ ಪ್ರಯೋಗಗಳನ್ನು ನಡೆಸುತ್ತಿದ್ದ ಪ್ರಮುಖ ವಿಜ್ಞಾನಿ ಮೃತಪಟ್ಟಿದ್ದಾರೆ. ಸಿನೋವ್ಯಾಕ್​ ಕೊರೊನಾ ಲಸಿಕೆಯ ಪ್ರಯೋಗದಲ್ಲಿ ಮುಂಚೂಣಿಯಲ್ಲಿದ್ದ ನೊವಿಲಿಯಾ ಸ್ಜಾಫ್ರಿ ಬಚ್ಚಿಯಾರ್ ಶಂಕಿತ ಕೊವಿಡ್​ 19 ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಇಂಡೋನೇಷಿಯಾ ಮಾಧ್ಯಮಗಳು ವರದಿ ಮಾಡಿವೆ. ಇಂಡೋನೇಷಿಯಾದಲ್ಲಿ ಕೊರೊನಾ ವೈರಸ್​ ಉಲ್ಬಣಗೊಂಡಿದೆ. ಹಾಗೇ ಈ ದೇಶದ ಚೀನಾದ ಸಿನೋವ್ಯಾಕ್​ ಲಸಿಕೆಯನ್ನೇ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.

ನೊವಿಲಿಯಾ ಅವರು ಮೃತಪಟ್ಟಿದ್ದು ಕೊರೊನಾ ವೈರಸ್​ನಿಂದ. ಹಾಗಾಗಿ ಅವರ ಅಂತ್ಯಕ್ರಿಯೆಯನ್ನು ಕೊವಿಡ್​ 19 ಶಿಷ್ಟಾಚಾರ ಅನುಸರಿಸಿಯೇ ಮಾಡಲಾಗಿದೆ ಎಂದು ಸಿಂಡೋನ್ಯೂಸ್​ ವರದಿ ಮಾಡಿದೆ. ಇಂಡೋನೇಷ್ಯಾದ ಲಸಿಕೆ ತಯಾರಿಕಾ ಕಂಪನಿ ಬಯೋ ಫಾರ್ಮಾ ಮೃತ ನೊವಿಲಿಯಾರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ಅವರನ್ನು ಕಳೆದುಕೊಂಡಿದ್ದು ಬಯೋಫಾರ್ಮ್​ಗೆ ದೊಡ್ಡ ನಷ್ಟ ಎಂದೂ ಹೇಳಿದೆ.

ಇಂಡೋನೇಷ್ಯಾದ ರಾಜ್ಯ ಉದ್ಯಮಗಳ ಸಚಿವ ಎರಿಕ್​ ತೋಹಿರ್​​ ಇನ್​ಸ್ಟಾಗ್ರಾಂನಲ್ಲಿ ನೊವಿಲಿಯಾ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಆದರೆ ಆಕೆಯ ಸಾವಿಗೆ ನಿಖರ ಕಾರಣವೇನೆಂದು ಅವರೂ ತಿಳಿಸಲಿಲ್ಲ. ಚೀನಾದ ಸಿನೋವ್ಯಾಕ್​ ಲಸಿಕೆಯನ್ನು ಇಂಡೋನೇಷ್ಯಾದಲ್ಲಿ ಬಯೋ ಫಾರ್ಮಾ ಕ್ಲಿನಿಕಲ್​ ಟ್ರಯಲ್​ ನಡೆಸುತ್ತಿದ್ದು, ಅದರ ವಿಜ್ಞಾನಿಗಳ ತಂಡವನ್ನು ನೊವಿಲಿಯಾ ಸ್ಜಾಫ್ರಿ ಬಚ್ಚಿಯಾರ್ ಮುನ್ನಡೆಸಿದ್ದರು. ಚೀನಾದ ಸಿನೋವ್ಯಾಕ್​ ಲಸಿಕೆಯ ದಕ್ಷತೆ ಬಗ್ಗೆ ಹಲವು ಪ್ರಶ್ನೆಗಳನ್ನೂ ಎತ್ತಿದ್ದರು. ಈಗಾಗಲೇ ಇಂಡೋನೇಷ್ಯಾದಲ್ಲಿ ಸುಮಾರು 10 ಮಿಲಿಯನ್​ ಜನರಿಗೆ ಸಿನೋವ್ಯಾಕ್​ ನೀಡಲಾಗಿದೆ.

ಇದನ್ನೂ ಓದಿ: Aamir Khan: ಸೌರವ್ ಗಂಗೂಲಿ ಮನೆಯ ಗಾರ್ಡ್​ಗಳು ಆಮೀರ್ ಖಾನ್​ರನ್ನು ಒಳ ಬಿಡದೇ ಹೊರ ಕಳಿಸಿದ ಕತೆ ನಿಮಗೆ ಗೊತ್ತಾ?

Sinovac Vaccine Scientist Novilia Sjafri Bachtiar Dies in Indonesia

Follow Us
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ