AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದ ಸಿನೋವ್ಯಾಕ್​ ಕೊರೊನಾ ಲಸಿಕೆ ಪ್ರಯೋಗಗಳಲ್ಲಿ ಮುಂಚೂಣಿಯಲ್ಲಿದ್ದ ವಿಜ್ಞಾನಿ ನೊವಿಲಿಯಾ ಸ್ಜಾಫ್ರಿ ಬಚ್ಚಿಯಾರ್ ಸಾವು

ಇಂಡೋನೇಷ್ಯಾದ ರಾಜ್ಯ ಉದ್ಯಮಗಳ ಸಚಿವ ಎರಿಕ್​ ತೋಹಿರ್​​ ಇನ್​ಸ್ಟಾಗ್ರಾಂನಲ್ಲಿ ನೊವಿಲಿಯಾ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಆದರೆ ಆಕೆಯ ಸಾವಿಗೆ ನಿಖರ ಕಾರಣವೇನೆಂದು ಅವರೂ ತಿಳಿಸಲಿಲ್ಲ.

ಚೀನಾದ ಸಿನೋವ್ಯಾಕ್​ ಕೊರೊನಾ ಲಸಿಕೆ ಪ್ರಯೋಗಗಳಲ್ಲಿ ಮುಂಚೂಣಿಯಲ್ಲಿದ್ದ ವಿಜ್ಞಾನಿ ನೊವಿಲಿಯಾ ಸ್ಜಾಫ್ರಿ ಬಚ್ಚಿಯಾರ್ ಸಾವು
ನೊವಿಲಿಯಾ ಸ್ಜಾಫ್ರಿ ಬಚ್ಚಿಯಾರ್
TV9 Web
| Edited By: |

Updated on: Jul 10, 2021 | 11:00 AM

Share

ಇಂಡೋನೇಷ್ಯಾದಲ್ಲಿ ಚೀನಾದ ಸಿನೋವ್ಯಾಕ್ ಕೊರೊನಾ ಲಸಿಕೆ ಪ್ರಯೋಗಗಳನ್ನು ನಡೆಸುತ್ತಿದ್ದ ಪ್ರಮುಖ ವಿಜ್ಞಾನಿ ಮೃತಪಟ್ಟಿದ್ದಾರೆ. ಸಿನೋವ್ಯಾಕ್​ ಕೊರೊನಾ ಲಸಿಕೆಯ ಪ್ರಯೋಗದಲ್ಲಿ ಮುಂಚೂಣಿಯಲ್ಲಿದ್ದ ನೊವಿಲಿಯಾ ಸ್ಜಾಫ್ರಿ ಬಚ್ಚಿಯಾರ್ ಶಂಕಿತ ಕೊವಿಡ್​ 19 ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಇಂಡೋನೇಷಿಯಾ ಮಾಧ್ಯಮಗಳು ವರದಿ ಮಾಡಿವೆ. ಇಂಡೋನೇಷಿಯಾದಲ್ಲಿ ಕೊರೊನಾ ವೈರಸ್​ ಉಲ್ಬಣಗೊಂಡಿದೆ. ಹಾಗೇ ಈ ದೇಶದ ಚೀನಾದ ಸಿನೋವ್ಯಾಕ್​ ಲಸಿಕೆಯನ್ನೇ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.

ನೊವಿಲಿಯಾ ಅವರು ಮೃತಪಟ್ಟಿದ್ದು ಕೊರೊನಾ ವೈರಸ್​ನಿಂದ. ಹಾಗಾಗಿ ಅವರ ಅಂತ್ಯಕ್ರಿಯೆಯನ್ನು ಕೊವಿಡ್​ 19 ಶಿಷ್ಟಾಚಾರ ಅನುಸರಿಸಿಯೇ ಮಾಡಲಾಗಿದೆ ಎಂದು ಸಿಂಡೋನ್ಯೂಸ್​ ವರದಿ ಮಾಡಿದೆ. ಇಂಡೋನೇಷ್ಯಾದ ಲಸಿಕೆ ತಯಾರಿಕಾ ಕಂಪನಿ ಬಯೋ ಫಾರ್ಮಾ ಮೃತ ನೊವಿಲಿಯಾರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ಅವರನ್ನು ಕಳೆದುಕೊಂಡಿದ್ದು ಬಯೋಫಾರ್ಮ್​ಗೆ ದೊಡ್ಡ ನಷ್ಟ ಎಂದೂ ಹೇಳಿದೆ.

ಇಂಡೋನೇಷ್ಯಾದ ರಾಜ್ಯ ಉದ್ಯಮಗಳ ಸಚಿವ ಎರಿಕ್​ ತೋಹಿರ್​​ ಇನ್​ಸ್ಟಾಗ್ರಾಂನಲ್ಲಿ ನೊವಿಲಿಯಾ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಆದರೆ ಆಕೆಯ ಸಾವಿಗೆ ನಿಖರ ಕಾರಣವೇನೆಂದು ಅವರೂ ತಿಳಿಸಲಿಲ್ಲ. ಚೀನಾದ ಸಿನೋವ್ಯಾಕ್​ ಲಸಿಕೆಯನ್ನು ಇಂಡೋನೇಷ್ಯಾದಲ್ಲಿ ಬಯೋ ಫಾರ್ಮಾ ಕ್ಲಿನಿಕಲ್​ ಟ್ರಯಲ್​ ನಡೆಸುತ್ತಿದ್ದು, ಅದರ ವಿಜ್ಞಾನಿಗಳ ತಂಡವನ್ನು ನೊವಿಲಿಯಾ ಸ್ಜಾಫ್ರಿ ಬಚ್ಚಿಯಾರ್ ಮುನ್ನಡೆಸಿದ್ದರು. ಚೀನಾದ ಸಿನೋವ್ಯಾಕ್​ ಲಸಿಕೆಯ ದಕ್ಷತೆ ಬಗ್ಗೆ ಹಲವು ಪ್ರಶ್ನೆಗಳನ್ನೂ ಎತ್ತಿದ್ದರು. ಈಗಾಗಲೇ ಇಂಡೋನೇಷ್ಯಾದಲ್ಲಿ ಸುಮಾರು 10 ಮಿಲಿಯನ್​ ಜನರಿಗೆ ಸಿನೋವ್ಯಾಕ್​ ನೀಡಲಾಗಿದೆ.

ಇದನ್ನೂ ಓದಿ: Aamir Khan: ಸೌರವ್ ಗಂಗೂಲಿ ಮನೆಯ ಗಾರ್ಡ್​ಗಳು ಆಮೀರ್ ಖಾನ್​ರನ್ನು ಒಳ ಬಿಡದೇ ಹೊರ ಕಳಿಸಿದ ಕತೆ ನಿಮಗೆ ಗೊತ್ತಾ?

Sinovac Vaccine Scientist Novilia Sjafri Bachtiar Dies in Indonesia

Follow Us
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ