AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದ ಸಿನೋವ್ಯಾಕ್​ ಕೊರೊನಾ ಲಸಿಕೆ ಪ್ರಯೋಗಗಳಲ್ಲಿ ಮುಂಚೂಣಿಯಲ್ಲಿದ್ದ ವಿಜ್ಞಾನಿ ನೊವಿಲಿಯಾ ಸ್ಜಾಫ್ರಿ ಬಚ್ಚಿಯಾರ್ ಸಾವು

ಇಂಡೋನೇಷ್ಯಾದ ರಾಜ್ಯ ಉದ್ಯಮಗಳ ಸಚಿವ ಎರಿಕ್​ ತೋಹಿರ್​​ ಇನ್​ಸ್ಟಾಗ್ರಾಂನಲ್ಲಿ ನೊವಿಲಿಯಾ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಆದರೆ ಆಕೆಯ ಸಾವಿಗೆ ನಿಖರ ಕಾರಣವೇನೆಂದು ಅವರೂ ತಿಳಿಸಲಿಲ್ಲ.

ಚೀನಾದ ಸಿನೋವ್ಯಾಕ್​ ಕೊರೊನಾ ಲಸಿಕೆ ಪ್ರಯೋಗಗಳಲ್ಲಿ ಮುಂಚೂಣಿಯಲ್ಲಿದ್ದ ವಿಜ್ಞಾನಿ ನೊವಿಲಿಯಾ ಸ್ಜಾಫ್ರಿ ಬಚ್ಚಿಯಾರ್ ಸಾವು
ನೊವಿಲಿಯಾ ಸ್ಜಾಫ್ರಿ ಬಚ್ಚಿಯಾರ್
TV9 Web
| Edited By: |

Updated on: Jul 10, 2021 | 11:00 AM

Share

ಇಂಡೋನೇಷ್ಯಾದಲ್ಲಿ ಚೀನಾದ ಸಿನೋವ್ಯಾಕ್ ಕೊರೊನಾ ಲಸಿಕೆ ಪ್ರಯೋಗಗಳನ್ನು ನಡೆಸುತ್ತಿದ್ದ ಪ್ರಮುಖ ವಿಜ್ಞಾನಿ ಮೃತಪಟ್ಟಿದ್ದಾರೆ. ಸಿನೋವ್ಯಾಕ್​ ಕೊರೊನಾ ಲಸಿಕೆಯ ಪ್ರಯೋಗದಲ್ಲಿ ಮುಂಚೂಣಿಯಲ್ಲಿದ್ದ ನೊವಿಲಿಯಾ ಸ್ಜಾಫ್ರಿ ಬಚ್ಚಿಯಾರ್ ಶಂಕಿತ ಕೊವಿಡ್​ 19 ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಇಂಡೋನೇಷಿಯಾ ಮಾಧ್ಯಮಗಳು ವರದಿ ಮಾಡಿವೆ. ಇಂಡೋನೇಷಿಯಾದಲ್ಲಿ ಕೊರೊನಾ ವೈರಸ್​ ಉಲ್ಬಣಗೊಂಡಿದೆ. ಹಾಗೇ ಈ ದೇಶದ ಚೀನಾದ ಸಿನೋವ್ಯಾಕ್​ ಲಸಿಕೆಯನ್ನೇ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.

ನೊವಿಲಿಯಾ ಅವರು ಮೃತಪಟ್ಟಿದ್ದು ಕೊರೊನಾ ವೈರಸ್​ನಿಂದ. ಹಾಗಾಗಿ ಅವರ ಅಂತ್ಯಕ್ರಿಯೆಯನ್ನು ಕೊವಿಡ್​ 19 ಶಿಷ್ಟಾಚಾರ ಅನುಸರಿಸಿಯೇ ಮಾಡಲಾಗಿದೆ ಎಂದು ಸಿಂಡೋನ್ಯೂಸ್​ ವರದಿ ಮಾಡಿದೆ. ಇಂಡೋನೇಷ್ಯಾದ ಲಸಿಕೆ ತಯಾರಿಕಾ ಕಂಪನಿ ಬಯೋ ಫಾರ್ಮಾ ಮೃತ ನೊವಿಲಿಯಾರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ಅವರನ್ನು ಕಳೆದುಕೊಂಡಿದ್ದು ಬಯೋಫಾರ್ಮ್​ಗೆ ದೊಡ್ಡ ನಷ್ಟ ಎಂದೂ ಹೇಳಿದೆ.

ಇಂಡೋನೇಷ್ಯಾದ ರಾಜ್ಯ ಉದ್ಯಮಗಳ ಸಚಿವ ಎರಿಕ್​ ತೋಹಿರ್​​ ಇನ್​ಸ್ಟಾಗ್ರಾಂನಲ್ಲಿ ನೊವಿಲಿಯಾ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಆದರೆ ಆಕೆಯ ಸಾವಿಗೆ ನಿಖರ ಕಾರಣವೇನೆಂದು ಅವರೂ ತಿಳಿಸಲಿಲ್ಲ. ಚೀನಾದ ಸಿನೋವ್ಯಾಕ್​ ಲಸಿಕೆಯನ್ನು ಇಂಡೋನೇಷ್ಯಾದಲ್ಲಿ ಬಯೋ ಫಾರ್ಮಾ ಕ್ಲಿನಿಕಲ್​ ಟ್ರಯಲ್​ ನಡೆಸುತ್ತಿದ್ದು, ಅದರ ವಿಜ್ಞಾನಿಗಳ ತಂಡವನ್ನು ನೊವಿಲಿಯಾ ಸ್ಜಾಫ್ರಿ ಬಚ್ಚಿಯಾರ್ ಮುನ್ನಡೆಸಿದ್ದರು. ಚೀನಾದ ಸಿನೋವ್ಯಾಕ್​ ಲಸಿಕೆಯ ದಕ್ಷತೆ ಬಗ್ಗೆ ಹಲವು ಪ್ರಶ್ನೆಗಳನ್ನೂ ಎತ್ತಿದ್ದರು. ಈಗಾಗಲೇ ಇಂಡೋನೇಷ್ಯಾದಲ್ಲಿ ಸುಮಾರು 10 ಮಿಲಿಯನ್​ ಜನರಿಗೆ ಸಿನೋವ್ಯಾಕ್​ ನೀಡಲಾಗಿದೆ.

ಇದನ್ನೂ ಓದಿ: Aamir Khan: ಸೌರವ್ ಗಂಗೂಲಿ ಮನೆಯ ಗಾರ್ಡ್​ಗಳು ಆಮೀರ್ ಖಾನ್​ರನ್ನು ಒಳ ಬಿಡದೇ ಹೊರ ಕಳಿಸಿದ ಕತೆ ನಿಮಗೆ ಗೊತ್ತಾ?

Sinovac Vaccine Scientist Novilia Sjafri Bachtiar Dies in Indonesia

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್