AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನುಷ್ಯತ್ವದಲ್ಲಿ ಅದೆಷ್ಟು ಸೌಂದರ್ಯವಿದೆ ?!-ಜಿಂಕೆ ಮರಿಯನ್ನು ಯೋಧ ರಕ್ಷಿಸಿದ ಈ ವಿಡಿಯೋ ನೋಡಿದ್ರೆ ಯಾರಿಗಾದ್ರೂ ಹಾಗೇ ಅನ್ಸತ್ತೆ..

ಇದು ಭಾರತದ್ದಲ್ಲ ಎಂದು ಆ ಯೋಧನನ್ನು ನೋಡಿದರೆ ಗೊತ್ತಾಗುತ್ತದೆ. ಆದರೆ ನಡೆದಿದ್ದು ಎಲ್ಲಿ ಎಂಬುದು ಗೊತ್ತಾಗಿಲ್ಲ. 31 ಸೆಕೆಂಡ್​​ಗಳ ವಿಡಿಯೋವನ್ನು @hopkinsBRFC21 ಎಂಬ ಇನ್​​ಸ್ಟಾಗ್ರಾಂ ಪೇಜ್​​ನಲ್ಲಿ ಶೇರ್ ಮಾಡಲಾಗಿದೆ.

ಮನುಷ್ಯತ್ವದಲ್ಲಿ ಅದೆಷ್ಟು ಸೌಂದರ್ಯವಿದೆ ?!-ಜಿಂಕೆ ಮರಿಯನ್ನು ಯೋಧ ರಕ್ಷಿಸಿದ ಈ ವಿಡಿಯೋ ನೋಡಿದ್ರೆ ಯಾರಿಗಾದ್ರೂ ಹಾಗೇ ಅನ್ಸತ್ತೆ..
ಜಿಂಕೆ ಮರಿಯನ್ನು ರಕ್ಷಿಸಿದ ಯೋಧ
TV9 Web
| Edited By: |

Updated on: Jun 14, 2021 | 11:43 AM

Share

ಕೆಲವರಿಗೆ ಪ್ರಾಣಿಗಳೆಡೆಗೆ ತುಸು ಜಾಸ್ತಿಯೇ ಪ್ರೀತಿ ಇರುತ್ತದೆ.. ಅವು ಸಾಕುಪ್ರಾಣಿಗಳಿರಲಿ, ಕಾಡು ಪ್ರಾಣಿಗಳಿರಲಿ. ಮನುಷ್ಯರ ಪ್ರಾಣಿಪ್ರೀತಿಗೆ ಸಾಕ್ಷಿಯಾದ ಹಲವು ವಿಡಿಯೋಗಳು ಈಗಾಗಲೇ ಇಂಟರ್​​ನೆಟ್​​ನಲ್ಲಿ ಸಾಕಷ್ಟು ವೈರಲ್​ ಆಗಿದೆ. ಹಾಗೇ ಇದೀಗ ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆಯ ಮರಿಯನ್ನು ಯೋಧನೊಬ್ಬ ಕಾಪಾಡಿದ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರಂತೂ ಪ್ರಶಂಸೆಯ ಸುರಿಮಳೆಯನ್ನೇ ಸುರಿಸಿದ್ದಾರೆ.

ಇದು ಭಾರತದ್ದಲ್ಲ ಎಂದು ಆ ಯೋಧನನ್ನು ನೋಡಿದರೆ ಗೊತ್ತಾಗುತ್ತದೆ. ಆದರೆ ನಡೆದಿದ್ದು ಎಲ್ಲಿ ಎಂಬುದು ಗೊತ್ತಾಗಿಲ್ಲ. 31 ಸೆಕೆಂಡ್​​ಗಳ ವಿಡಿಯೋವನ್ನು @hopkinsBRFC21 ಎಂಬ ಇನ್​​ಸ್ಟಾಗ್ರಾಂ ಪೇಜ್​​ನಲ್ಲಿ ಶೇರ್ ಮಾಡಲಾಗಿದೆ. ಅದೊಂದು ದೊಡ್ಡ ಸರೋವರ. ಆ ನೀರಿನಲ್ಲಿ ದೊಡ್ಡದಾದ ಮರವೊಂದು ಅಡ್ಡ ಮಲಗಿದೆ.. ಅದರ ಬಳಿಯೇ ಪುಟ್ಟ ಜಿಂಕೆ ಮರಿಯೊಂದು ನೀರಿನಲ್ಲಿ ಮುಳುಗುತ್ತಿತ್ತು. ಅದನ್ನು ನೋಡಿದ ಯೋಧ, ಆ ಮರದೇ ಮೇಲೆ ಹೋಗಿ, ಬೋರಲಾಗಿ ಮಲಗಿ ಜಿಂಕೆ ಮರಿಯನ್ನು ನೀರಿನಿಂದ ಎತ್ತಿ, ದಡಕ್ಕೆ ಕರೆದುಕೊಂಡು ಬಂದಿದ್ದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋ ಶೇರ್​ ಮಾಡಿದ ಇನ್​ಸ್ಟಾಗ್ರಾಂ ಬಳಕೆದಾರ, ಮನುಷ್ಯತ್ವ ನಿಜಕ್ಕೂ ಸುಂದರ ಎಂದು ಕ್ಯಾಪ್ಷನ್​ ಬರೆದಿದ್ದಾರೆ.

ವಿಡಿಯೋವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಜಿಂಕೆ ಮರಿಯ ಜೀವ ಉಳಿಸಿದ ಯೋಧನನ್ನು ಹೊಗಳಿದ್ದಾರೆ. ಅದನ್ನು ರಕ್ಷಿಸಿದ್ದನ್ನು ನೋಡಿ ತುಂಬ ಸಂತೋಷವಾಯಿತು, ಭೂಮಿ ಮೇಲೆ ಒಳ್ಳೆಯ ಜನರಿದ್ದಾರೆ ಎಂಬುದಕ್ಕೆ ಈ ಯೋಧ ಸಾಕ್ಷಿ ಎಂಬಿತ್ಯಾದಿ ಕಾಮೆಂಟ್​​ಗಳನ್ನೂ ಬರೆದಿದ್ದಾರೆ.

ಇದನ್ನೂ ಓದಿ: Sanchari Vijay: ಸಂಚಾರಿ ವಿಜಯ್ ಮೆದುಳಿನ ಕೆಲಸಗಳು ನಿಂತಿದೆ; ಅಪೋಲೋ ವೈದ್ಯರಿಂದ ಆತಂಕಕಾರಿ ಮಾಹಿತಿ

Follow Us
Web contact
Web contact

TV9 Kannada

Read More
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ವಸ್ತುಗಳನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ್ದೇನು ನೋಡಿ
ವಸ್ತುಗಳನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ್ದೇನು ನೋಡಿ
ವನ್ಯಜೀವಿ ಛಾಯಾಗ್ರಾಹಕಿಯಾದ ಸೋನಲ್ ಮೊಂತೆರೋ
ವನ್ಯಜೀವಿ ಛಾಯಾಗ್ರಾಹಕಿಯಾದ ಸೋನಲ್ ಮೊಂತೆರೋ