AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನುಷ್ಯತ್ವದಲ್ಲಿ ಅದೆಷ್ಟು ಸೌಂದರ್ಯವಿದೆ ?!-ಜಿಂಕೆ ಮರಿಯನ್ನು ಯೋಧ ರಕ್ಷಿಸಿದ ಈ ವಿಡಿಯೋ ನೋಡಿದ್ರೆ ಯಾರಿಗಾದ್ರೂ ಹಾಗೇ ಅನ್ಸತ್ತೆ..

ಇದು ಭಾರತದ್ದಲ್ಲ ಎಂದು ಆ ಯೋಧನನ್ನು ನೋಡಿದರೆ ಗೊತ್ತಾಗುತ್ತದೆ. ಆದರೆ ನಡೆದಿದ್ದು ಎಲ್ಲಿ ಎಂಬುದು ಗೊತ್ತಾಗಿಲ್ಲ. 31 ಸೆಕೆಂಡ್​​ಗಳ ವಿಡಿಯೋವನ್ನು @hopkinsBRFC21 ಎಂಬ ಇನ್​​ಸ್ಟಾಗ್ರಾಂ ಪೇಜ್​​ನಲ್ಲಿ ಶೇರ್ ಮಾಡಲಾಗಿದೆ.

ಮನುಷ್ಯತ್ವದಲ್ಲಿ ಅದೆಷ್ಟು ಸೌಂದರ್ಯವಿದೆ ?!-ಜಿಂಕೆ ಮರಿಯನ್ನು ಯೋಧ ರಕ್ಷಿಸಿದ ಈ ವಿಡಿಯೋ ನೋಡಿದ್ರೆ ಯಾರಿಗಾದ್ರೂ ಹಾಗೇ ಅನ್ಸತ್ತೆ..
ಜಿಂಕೆ ಮರಿಯನ್ನು ರಕ್ಷಿಸಿದ ಯೋಧ
TV9 Web
| Edited By: |

Updated on: Jun 14, 2021 | 11:43 AM

Share

ಕೆಲವರಿಗೆ ಪ್ರಾಣಿಗಳೆಡೆಗೆ ತುಸು ಜಾಸ್ತಿಯೇ ಪ್ರೀತಿ ಇರುತ್ತದೆ.. ಅವು ಸಾಕುಪ್ರಾಣಿಗಳಿರಲಿ, ಕಾಡು ಪ್ರಾಣಿಗಳಿರಲಿ. ಮನುಷ್ಯರ ಪ್ರಾಣಿಪ್ರೀತಿಗೆ ಸಾಕ್ಷಿಯಾದ ಹಲವು ವಿಡಿಯೋಗಳು ಈಗಾಗಲೇ ಇಂಟರ್​​ನೆಟ್​​ನಲ್ಲಿ ಸಾಕಷ್ಟು ವೈರಲ್​ ಆಗಿದೆ. ಹಾಗೇ ಇದೀಗ ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆಯ ಮರಿಯನ್ನು ಯೋಧನೊಬ್ಬ ಕಾಪಾಡಿದ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರಂತೂ ಪ್ರಶಂಸೆಯ ಸುರಿಮಳೆಯನ್ನೇ ಸುರಿಸಿದ್ದಾರೆ.

ಇದು ಭಾರತದ್ದಲ್ಲ ಎಂದು ಆ ಯೋಧನನ್ನು ನೋಡಿದರೆ ಗೊತ್ತಾಗುತ್ತದೆ. ಆದರೆ ನಡೆದಿದ್ದು ಎಲ್ಲಿ ಎಂಬುದು ಗೊತ್ತಾಗಿಲ್ಲ. 31 ಸೆಕೆಂಡ್​​ಗಳ ವಿಡಿಯೋವನ್ನು @hopkinsBRFC21 ಎಂಬ ಇನ್​​ಸ್ಟಾಗ್ರಾಂ ಪೇಜ್​​ನಲ್ಲಿ ಶೇರ್ ಮಾಡಲಾಗಿದೆ. ಅದೊಂದು ದೊಡ್ಡ ಸರೋವರ. ಆ ನೀರಿನಲ್ಲಿ ದೊಡ್ಡದಾದ ಮರವೊಂದು ಅಡ್ಡ ಮಲಗಿದೆ.. ಅದರ ಬಳಿಯೇ ಪುಟ್ಟ ಜಿಂಕೆ ಮರಿಯೊಂದು ನೀರಿನಲ್ಲಿ ಮುಳುಗುತ್ತಿತ್ತು. ಅದನ್ನು ನೋಡಿದ ಯೋಧ, ಆ ಮರದೇ ಮೇಲೆ ಹೋಗಿ, ಬೋರಲಾಗಿ ಮಲಗಿ ಜಿಂಕೆ ಮರಿಯನ್ನು ನೀರಿನಿಂದ ಎತ್ತಿ, ದಡಕ್ಕೆ ಕರೆದುಕೊಂಡು ಬಂದಿದ್ದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋ ಶೇರ್​ ಮಾಡಿದ ಇನ್​ಸ್ಟಾಗ್ರಾಂ ಬಳಕೆದಾರ, ಮನುಷ್ಯತ್ವ ನಿಜಕ್ಕೂ ಸುಂದರ ಎಂದು ಕ್ಯಾಪ್ಷನ್​ ಬರೆದಿದ್ದಾರೆ.

ವಿಡಿಯೋವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಜಿಂಕೆ ಮರಿಯ ಜೀವ ಉಳಿಸಿದ ಯೋಧನನ್ನು ಹೊಗಳಿದ್ದಾರೆ. ಅದನ್ನು ರಕ್ಷಿಸಿದ್ದನ್ನು ನೋಡಿ ತುಂಬ ಸಂತೋಷವಾಯಿತು, ಭೂಮಿ ಮೇಲೆ ಒಳ್ಳೆಯ ಜನರಿದ್ದಾರೆ ಎಂಬುದಕ್ಕೆ ಈ ಯೋಧ ಸಾಕ್ಷಿ ಎಂಬಿತ್ಯಾದಿ ಕಾಮೆಂಟ್​​ಗಳನ್ನೂ ಬರೆದಿದ್ದಾರೆ.

ಇದನ್ನೂ ಓದಿ: Sanchari Vijay: ಸಂಚಾರಿ ವಿಜಯ್ ಮೆದುಳಿನ ಕೆಲಸಗಳು ನಿಂತಿದೆ; ಅಪೋಲೋ ವೈದ್ಯರಿಂದ ಆತಂಕಕಾರಿ ಮಾಹಿತಿ

Follow Us
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ
ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ
ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ
28 ಕೋಟಿ ರೂ. ಪರಿಹಾರದ ಕ್ರೆಡಿಟ್ ವಾರ್
28 ಕೋಟಿ ರೂ. ಪರಿಹಾರದ ಕ್ರೆಡಿಟ್ ವಾರ್