AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನುಷ್ಯತ್ವದಲ್ಲಿ ಅದೆಷ್ಟು ಸೌಂದರ್ಯವಿದೆ ?!-ಜಿಂಕೆ ಮರಿಯನ್ನು ಯೋಧ ರಕ್ಷಿಸಿದ ಈ ವಿಡಿಯೋ ನೋಡಿದ್ರೆ ಯಾರಿಗಾದ್ರೂ ಹಾಗೇ ಅನ್ಸತ್ತೆ..

ಇದು ಭಾರತದ್ದಲ್ಲ ಎಂದು ಆ ಯೋಧನನ್ನು ನೋಡಿದರೆ ಗೊತ್ತಾಗುತ್ತದೆ. ಆದರೆ ನಡೆದಿದ್ದು ಎಲ್ಲಿ ಎಂಬುದು ಗೊತ್ತಾಗಿಲ್ಲ. 31 ಸೆಕೆಂಡ್​​ಗಳ ವಿಡಿಯೋವನ್ನು @hopkinsBRFC21 ಎಂಬ ಇನ್​​ಸ್ಟಾಗ್ರಾಂ ಪೇಜ್​​ನಲ್ಲಿ ಶೇರ್ ಮಾಡಲಾಗಿದೆ.

ಮನುಷ್ಯತ್ವದಲ್ಲಿ ಅದೆಷ್ಟು ಸೌಂದರ್ಯವಿದೆ ?!-ಜಿಂಕೆ ಮರಿಯನ್ನು ಯೋಧ ರಕ್ಷಿಸಿದ ಈ ವಿಡಿಯೋ ನೋಡಿದ್ರೆ ಯಾರಿಗಾದ್ರೂ ಹಾಗೇ ಅನ್ಸತ್ತೆ..
ಜಿಂಕೆ ಮರಿಯನ್ನು ರಕ್ಷಿಸಿದ ಯೋಧ
TV9 Web
| Edited By: |

Updated on: Jun 14, 2021 | 11:43 AM

Share

ಕೆಲವರಿಗೆ ಪ್ರಾಣಿಗಳೆಡೆಗೆ ತುಸು ಜಾಸ್ತಿಯೇ ಪ್ರೀತಿ ಇರುತ್ತದೆ.. ಅವು ಸಾಕುಪ್ರಾಣಿಗಳಿರಲಿ, ಕಾಡು ಪ್ರಾಣಿಗಳಿರಲಿ. ಮನುಷ್ಯರ ಪ್ರಾಣಿಪ್ರೀತಿಗೆ ಸಾಕ್ಷಿಯಾದ ಹಲವು ವಿಡಿಯೋಗಳು ಈಗಾಗಲೇ ಇಂಟರ್​​ನೆಟ್​​ನಲ್ಲಿ ಸಾಕಷ್ಟು ವೈರಲ್​ ಆಗಿದೆ. ಹಾಗೇ ಇದೀಗ ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆಯ ಮರಿಯನ್ನು ಯೋಧನೊಬ್ಬ ಕಾಪಾಡಿದ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರಂತೂ ಪ್ರಶಂಸೆಯ ಸುರಿಮಳೆಯನ್ನೇ ಸುರಿಸಿದ್ದಾರೆ.

ಇದು ಭಾರತದ್ದಲ್ಲ ಎಂದು ಆ ಯೋಧನನ್ನು ನೋಡಿದರೆ ಗೊತ್ತಾಗುತ್ತದೆ. ಆದರೆ ನಡೆದಿದ್ದು ಎಲ್ಲಿ ಎಂಬುದು ಗೊತ್ತಾಗಿಲ್ಲ. 31 ಸೆಕೆಂಡ್​​ಗಳ ವಿಡಿಯೋವನ್ನು @hopkinsBRFC21 ಎಂಬ ಇನ್​​ಸ್ಟಾಗ್ರಾಂ ಪೇಜ್​​ನಲ್ಲಿ ಶೇರ್ ಮಾಡಲಾಗಿದೆ. ಅದೊಂದು ದೊಡ್ಡ ಸರೋವರ. ಆ ನೀರಿನಲ್ಲಿ ದೊಡ್ಡದಾದ ಮರವೊಂದು ಅಡ್ಡ ಮಲಗಿದೆ.. ಅದರ ಬಳಿಯೇ ಪುಟ್ಟ ಜಿಂಕೆ ಮರಿಯೊಂದು ನೀರಿನಲ್ಲಿ ಮುಳುಗುತ್ತಿತ್ತು. ಅದನ್ನು ನೋಡಿದ ಯೋಧ, ಆ ಮರದೇ ಮೇಲೆ ಹೋಗಿ, ಬೋರಲಾಗಿ ಮಲಗಿ ಜಿಂಕೆ ಮರಿಯನ್ನು ನೀರಿನಿಂದ ಎತ್ತಿ, ದಡಕ್ಕೆ ಕರೆದುಕೊಂಡು ಬಂದಿದ್ದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋ ಶೇರ್​ ಮಾಡಿದ ಇನ್​ಸ್ಟಾಗ್ರಾಂ ಬಳಕೆದಾರ, ಮನುಷ್ಯತ್ವ ನಿಜಕ್ಕೂ ಸುಂದರ ಎಂದು ಕ್ಯಾಪ್ಷನ್​ ಬರೆದಿದ್ದಾರೆ.

ವಿಡಿಯೋವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಜಿಂಕೆ ಮರಿಯ ಜೀವ ಉಳಿಸಿದ ಯೋಧನನ್ನು ಹೊಗಳಿದ್ದಾರೆ. ಅದನ್ನು ರಕ್ಷಿಸಿದ್ದನ್ನು ನೋಡಿ ತುಂಬ ಸಂತೋಷವಾಯಿತು, ಭೂಮಿ ಮೇಲೆ ಒಳ್ಳೆಯ ಜನರಿದ್ದಾರೆ ಎಂಬುದಕ್ಕೆ ಈ ಯೋಧ ಸಾಕ್ಷಿ ಎಂಬಿತ್ಯಾದಿ ಕಾಮೆಂಟ್​​ಗಳನ್ನೂ ಬರೆದಿದ್ದಾರೆ.

ಇದನ್ನೂ ಓದಿ: Sanchari Vijay: ಸಂಚಾರಿ ವಿಜಯ್ ಮೆದುಳಿನ ಕೆಲಸಗಳು ನಿಂತಿದೆ; ಅಪೋಲೋ ವೈದ್ಯರಿಂದ ಆತಂಕಕಾರಿ ಮಾಹಿತಿ

ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!