Sudan Crisis: ದಂಗೆ, ಹಿಂಸಾಚಾರದಿಂದ ತತ್ತರಿಸಿದ ಸುಡಾನ್; ಉತ್ತರ ಆಫ್ರಿಕಾ ರಾಷ್ಟ್ರದಲ್ಲಿನ ಬಿಕ್ಕಟ್ಟಿಗೆ ಕಾರಣವೇನು?

|

Updated on: Apr 19, 2023 | 2:22 PM

ರ್ಯಾಪಿಡ್ ಸಪೋರ್ಟ್ ಫೋರ್ಸ್ ಅರೆಸೇನಾಪಡೆಗಳನ್ನು ಸುಡಾನ್ ಸೈನ್ಯಕ್ಕೆ ಹೇಗೆ ಸೇರಿಸಬೇಕು ಎಂಬುದರ ಕುರಿತು ಭಿನ್ನಾಭಿಪ್ರಾಯ ಭುಗಿಲೆದ್ದಿದ್ದು ಇದು ಹಿಂಸಾಚಾರಕ್ಕೆ ಕಾರಣವಾಗಿದೆ.ರ್ಯಾಪಿಡ್ ಸಪೋರ್ಟ್ ಫೋರ್ಸ್ ದೇಶದಾದ್ಯಂತ ತಮ್ಮ ಸದಸ್ಯರನ್ನು ನಿಯೋಜನೆ ಮಾಡಿದಾಗಿನಿಂದ ಹಿಂಸಾಚಾರ ಮತ್ತಷ್ಟು ತೀವ್ರಗೊಂಡಿದೆ

Sudan Crisis: ದಂಗೆ, ಹಿಂಸಾಚಾರದಿಂದ ತತ್ತರಿಸಿದ ಸುಡಾನ್; ಉತ್ತರ ಆಫ್ರಿಕಾ ರಾಷ್ಟ್ರದಲ್ಲಿನ ಬಿಕ್ಕಟ್ಟಿಗೆ ಕಾರಣವೇನು?
ಸುಡಾನ್ ಬಿಕ್ಕಟ್ಟು
Image Credit source: AP
Follow us on

ಸುಡಾನ್​​ನಲ್ಲಿನ ಬಿಕ್ಕಟ್ಟಿನಿಂದಾಗಿ (Sudan Crisis) ಇಲ್ಲಿವರೆಗೆ ಕನಿಷ್ಠ  180 ಮಂದಿ ಸಾವಿಗೀಡಾಗಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ.ಉತ್ತರ ಆಫ್ರಿಕಾ ರಾಷ್ಟ್ರದಲ್ಲಿನ ಇತ್ತೀಚಿನ ಈ ಬಿಕ್ಕಟ್ಟು 1956ರಲ್ಲಿ ಸ್ವತಂತ್ರವಾದ ನಂತರ ಸಂಭವಿಸಿ ದಂಗೆ, ನಾಗರಿಕ ಕಲಹಗಳಲ್ಲೊಂದಾಗಿದೆ. ಸುಡಾನ್ ನ ತಜ್ಞ ಮತ್ತು ಯುನಿವರ್ಸಿಟಿ ಆಫ್ ವಾಷಿಂಗ್ಟನ್ಸ್ ಆಫ್ರಿಕನ್ ಸ್ಟಡೀಸ್ ಪ್ರೋಗ್ರಾಂನ ಹಂಗಾಮಿ ನಿರ್ದೇಶಕ ಕ್ರಿಸ್ಟೋಪರ್ ಥೌನ್ಸೆಲ್ (Christopher Tounsel) ದಿ ಕನ್ವರ್ಸೇಷನ್​​ನಲ್ಲಿ ಸುಡಾನ್​​ನಲ್ಲಿನ (Sudan) ಬಿಕ್ಕಟ್ಟಿನ ಬಗ್ಗೆ ವಿವರಿಸಿದ್ದಾರೆ. ಪ್ರಸ್ತುತ ಲೇಖನದಲ್ಲಿ ವಿವರಿಸಿದ ಪ್ರಮುಖ ಅಂಶಗಳು ಹೀಗಿವೆ.

ಸುಡಾನ್​​ನಲ್ಲಿ ಏನು ನಡೆಯುತ್ತಿದೆ?

ಎರಡು ಗುಂಪುಗಳ ನಡುವೆ ಅಂದರೆ ಸುಡಾನ್ ಸೇನೆ ಮತ್ತು ರ್ಯಾಪಿಡ್ ಸಪೋರ್ಟ್ ಫೋರ್ಸ್ ಎಂದು ಕರೆಯಲ್ಪಡುವ ಪ್ಯಾರಾಮಿಲಿಟರಿ ಗುಂಪಿನ ನಡುವೆ ಜಗಳ ನಡೆಯುತ್ತಿದೆ.  2021 ರಲ್ಲಿ ದೇಶದಲ್ಲಿ ನಡೆದ ದಂಗೆ, ಎರಡು ವರ್ಷಗಳ ಹಿಂದೆ ದೀರ್ಘಕಾಲದ ಸರ್ವಾಧಿಕಾರಿ ಒಮರ್ ಅಲ್-ಬಶೀರ್ ಅವರ ಪತನದ ನಂತರ ಜಾರಿಗೆ ಬಂದ ಮಧ್ಯಂತರ ಸರ್ಕಾರವನ್ನು ಕೊನೆಗೊಳಿಸಿತು. ಸುಡಾನ್​​ನಲ್ಲಿ ಸೈನ್ಯ ಅಧಿಕಾರ ನಡೆಸುತ್ತಿದ್ದ ದಂಗೆಯ ನಾಯಕ ಜನರಲ್ ಅಬ್ದೆಲ್-ಫತ್ತಾಹ್ ಬುರ್ಹಾನ್ ಈಗಿನ ಆಡಳಿತಗಾರರಾಗಿದ್ದಾರೆ.
ಹಮೇದಿತಿ ಎಂಬ ಹೆಸರಿನಿಂದ ಗುರುತಿಸಲ್ಪಡುವ ದಿ ರ್ಯಾಪಿಡ್ ಸಪೋರ್ಟ್ ಫೋರ್ಸ್ ತಂಡದ ನಾಯಕ ಜನರಲ್ ಮೊಹಮ್ಮದ್ ಹಮದಾನ್ ದಗಾಲೋ ಸುಡಾನ್ ಸೇನೆಯೊಂದಿಗೆ ಕೆಲಸ ಮಾಡಿದ್ದು ದೇಶದಲ್ಲಿ ಸೇನೆ ಅಧಿಕಾರದಲ್ಲಿರಲು ಸಹಾಯ ಮಾಡಿದ್ದರು.
ಬಶೀರ್ ಪತನ ನಂತರ 2023ರ ಅಂತ್ಯದಲ್ಲಿ ಚುನಾವಣೆ ನಡೆಯಬೇಕಿತ್ತು. ನಾಗರಿಕ ಆಡಳಿತಕ್ಕೆ ಪರಿವರ್ತನೆ ತರುವುದಾಗಿ ಬುರ್ಹಾನ್ ಭರವಸೆ ನೀಡಿದ್ದರು. ಆದರೆ ಬುರ್ಹಾನ್ ಆಗಲೀ ದಗಾಲೋ ಆಗಲೀ ಅಧಿಕಾರವನ್ನು ತ್ಯಜಿಸುವ ಯಾವುದೇ ಉದ್ದೇಶ ಹೊಂದಿಲ್ಲ. ಇದರ ಬದಲು ಅವರಿಬ್ಬರೂ ಅಧಿಕಾರಕ್ಕಾಗಿ ಪರಸ್ಪರ ಕಿತ್ತಾಡಿಕೊಂಡಿದ್ದು ಏಪ್ರಿಲ್ 15ರ ಹಿಂಸಾಚಾರಕ್ಕೆ ಇದು ಕಾರಣವಾಗಿತ್ತು.
ಇದಾದ ನಂತರ ರ್ಯಾಪಿಡ್ ಸಪೋರ್ಟ್ ಫೋರ್ಸ್ ಮತ್ತು ಸುಡಾನ್ ಆರ್ಮಿಯ ಸದಸ್ಯರು ರಾಜಧಾನಿ ಖರ್ಟೋಮ್ ಸೇರಿದಂತೆ ದೇಶದ ಇತರೆಡೆ ಗುಂಡಿನ ಕಾಳಗದಲ್ಲಿ ನಿರತರಾಗಿದ್ದಾರೆ.

ರ್ಯಾಪಿಡ್ ಸಪೋರ್ಟ್ ಫೋರ್ಸ್ ಅರೆಸೇನಾಪಡೆಗಳನ್ನು ಸುಡಾನ್ ಸೈನ್ಯಕ್ಕೆ ಹೇಗೆ ಸೇರಿಸಬೇಕು ಎಂಬುದರ ಕುರಿತು ಭಿನ್ನಾಭಿಪ್ರಾಯ ಭುಗಿಲೆದ್ದಿದ್ದು ಇದು ಹಿಂಸಾಚಾರಕ್ಕೆ ಕಾರಣವಾಗಿದೆ.ರ್ಯಾಪಿಡ್ ಸಪೋರ್ಟ್ ಫೋರ್ಸ್ ದೇಶದಾದ್ಯಂತ ತಮ್ಮ ಸದಸ್ಯರನ್ನು ನಿಯೋಜನೆ ಮಾಡಿದಾಗಿನಿಂದ ಹಿಂಸಾಚಾರ ಮತ್ತಷ್ಟು ತೀವ್ರಗೊಂಡಿದೆ. ಖರ್ಟೋಮ್​​ನಲ್ಲಿ ಸೇನಾಪಡೆಯ ಅನುಮತಿ ಇಲ್ಲದೆಯೇ ಇದು ಸದಸ್ಯರನ್ನು ನಿಯೋಜಿಸಿತ್ತು, ಆದರೆ ವಾಸ್ತವವಾಗಿ ಸುಡಾನ್​​ನಲ್ಲಿ ಹಿಂಸಾಚಾರ ಜಾಸ್ತಿಯಾಗುತ್ತಿದ್ದಂತೆ ರ್ಯಾಪಿಡ್ ಸಪೋರ್ಟ್ ಫೋರ್ಸ್ ದೇಶದಲ್ಲಿನ ಆರ್ಥಿಕ ಮೂಲವಾದ ಚಿನ್ನದ ಗಣಿ ಮೇಲೆ ಹೆಚ್ಚಿನ ನಿಯಂತ್ರಣವನ್ನು ಸಾಧಿಸಲು ಯತ್ನಿಸುತ್ತಿದೆ.

ಇದಕ್ಕೆಲ್ಲ ಕಾರಣಕರ್ತರು ಯಾರು?

ಡಾರ್ಫರ್ ಪ್ರದೇಶಲ್ಲಿ ಮಾನವ ಹಕ್ಕುಗಳ ಮೇಲೆ ದೌರ್ಜನ್ಯಕ್ಕೆ ಕಾರಣವಾದ ಜುಂಜಾವೀಡ್ ಎಂಬ ಸೇನಾಪಡೆಯ ಮುಖ್ಯಸ್ಥರಾಗಿದ್ದಾಗ ದಗಾಲೋ 2000 ಇಸವಿಯ ಆರಂಭದಲ್ಲಿ ರ್ಯಾಪಿಡ್ ಸಪೋರ್ಟ್ ಫೋರ್ಸ್ ತಂಡದಲ್ಲಿ ಅಧಿಕಾರಕ್ಕೇರಿದರು. ಏತನ್ಮಧ್ಯೆ, ಆಗಿನ ಸುಡಾನ್ ಅಧ್ಯಕ್ಷ ಬಶೀರ್ , ಡಾರ್ಫಾರ್ ಪ್ರದೇಶಲ್ಲಿ ಮಾನವ ಹಕ್ಕುಗಳ ಮೇಲೆ ದೌರ್ಜನ್ಯಕ್ಕೆ ಕಾರಣವಾದ ವ್ಯಕ್ತಿ ಎಂದು ಹೇಳಲಾಗಿತ್ತು. ನಂತರ  ಮಾನವೀಯತೆಯ ವಿರುದ್ಧದ ಅಪರಾಧಗಳ ಮೇಲೆ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ದೋಷಾರೋಪಣೆ ಮಾಡಲ್ಪಟ್ಟಿತು. ನರಮೇಧದ ಆಪಾದಿತ ಕೃತ್ಯಗಳಿಗಾಗಿ ಜಾಂಜವೀಡ್ ಅನ್ನು ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಕೂಡ ಜವಾಬ್ದಾರನಾಗಿ ಮಾಡಿತ್ತು. ಅವರು ಹಾಗೆ ಮಾಡುತ್ತಿರುವಾಗ, ದಗಾಲೊ ಅಧಿಕಾರದಲ್ಲಿ ಮೇಲಕ್ಕೇರಿದರು.

ರ್ಯಾಪಿಡ್ ಸಪೋರ್ಟ್ ಫೋರ್ಸ್ ನ ಮುಖ್ಯಸ್ಥರಾಗಿದ್ದ ದಗಾಲೋ , 2019ರಲ್ಲಿ ನಡೆದ 120 ಪ್ರತಿಭಟನೆಕಾರರ ನರಮೇಧ ಮತ್ತು ಪ್ರಜಾಪ್ರಭುತ್ವ ಪರ ಹೋರಾಟಗಾರರ ರಕ್ತಸಿಕ್ತ ದಮನದ ಮೇಲ್ವಿಚಾರಣೆ ನಡೆಸಿದ ಆರೋಪವನ್ನು ಎದುರಿಸಿದ್ದಾರೆ. ಬುರ್ಹಾನ್ ಅವರ ಈ ಕ್ರಮವನ್ನ ಮಾನವ ಹಕ್ಕುಗಳು ತೀವ್ರವಾಗಿ ಎದುರಿಸಿದ್ದರು. ಅಧಿಕಾರದಲ್ಲಿರುವ ಸೇನೆಯ ಮುಖ್ಯಸ್ಥರಾಗಿ ಮತ್ತು ಎರಡು ವರ್ಷದಿಂದ ಸರ್ಕಾರದ ಮುಖ್ಯಸ್ಥರಾಗಿರುವ ಇವರು ಪ್ರಜಾಪ್ರಭುತ್ವ ಪರ ಹೋರಾಟಗರಾರರ ದಮನ ಮಾಡಿದ್ದಾರೆ.

ಅಂದರೆ ಇದು ಸಿದ್ದಾಂತಕ್ಕಿಂತ ಹೆಚ್ಚಾಗಿ ಅಧಿಕಾರಕ್ಕಾಗಿರುವ ಹೋರಾಟವೇ?

ಹೌದು ಅಂತಾರೆ ಕ್ರಿಸ್ಟೋಪರ್ ಥೌನ್ಸೆಲ್. ನಾವು ದೇಶದ ಭವಿಷ್ಯದ ದಿಕ್ಕಿನ ಬಗ್ಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೊಂದಿಗೆ ಇಬ್ಬರು ವ್ಯಕ್ತಿಗಳು ಅಥವಾ ಬಣಗಳ ಬಗ್ಗೆ ಮಾತನಾಡುತ್ತಿಲ್ಲ. ಇದು ಎಡಪಂಥೀಯ ಮತ್ತು ಬಲಪಂಥೀಯ ವಿಷಯವೂ ಅಲ್ಲ ಅಥವಾ ರಾಜಕೀಯ ಪಕ್ಷಗಳ ವಿರುದ್ಧದ ಹೋರಾಟವೂ ಅಲ್ಲ. ಇದು ಭೌಗೋಳಿಕ-ಧಾರ್ಮಿಕ ಸಂಘರ್ಷವೂ ಅಲ್ಲ. ಬಹುಸಂಖ್ಯಾತ ಉತ್ತರದ ಮುಸ್ಲಿಂ ಮತ್ತು ದಕ್ಷಿಣದ ಕ್ರಿಶ್ಚಿಯನ್ ವಿರುದ್ಧ ಎತ್ತಿಕಟ್ಟುವುದೂ ಅಲ್ಲ. ಇದು ಡಾರ್ಫರ್ ಸಂಘರ್ಷದ ರೀತಿಯಲ್ಲಿಯೇ ಜನಾಂಗೀಯ ಹಿಂಸಾಚಾರವೂ ಅಲ್ಲ
ನನ್ನ ಅಭಿಪ್ರಾಯದಲ್ಲಿ ಅಧಿಕಾರಕ್ಕಾಗಿ ಹತಾಶರಾಗಿರುವ ಇಬ್ಬರು ಪುರುಷರ ನಡುವಿನ ಯುದ್ಧವಾಗಿದೆ.

ಹಿಂಸಾಚಾರವು ಸುಡಾನ್‌ನ  ಭೂತಕಾಲಕ್ಕೆ ಹೇಗೆ ಹೊಂದಿಕೊಳ್ಳುತ್ತದೆ?

ಸುಡಾನ್‌ನಲ್ಲಿನ ಹಿಂಸಾಚಾರವು ಈಗ ವಿಫಲ ಆಫ್ರಿಕನ್ ರಾಷ್ಟ್ರ ಎಂಬುದಕ್ಕೆ ಸರಿಹೊಂದುವ ಇತಿಹಾಸದ ಭಾಗವಾಗಿದೆ. ನನಗೆ ತಿಳಿದಂತೆ ಸುಡಾನ್ ಯಾವುದೇ ಆಫ್ರಿಕನ್ ರಾಷ್ಟ್ರಗಳಿಗಿಂತ ಹೆಚ್ಚು ದಂಗೆಗಳನ್ನು ಹೊಂದಿದೆ. 1956 ರಲ್ಲಿ ಯುಕೆಯಿಂದ ಸ್ವಾತಂತ್ರ್ಯ ಪಡೆದ ನಂತರ, 1958, 1969, 1985, 1989, 2019 ಮತ್ತು 2021 ರಲ್ಲಿ ದಂಗೆಗಳು ನಡೆದಿವೆ. 1989 ರಲ್ಲಿ ನಡೆದ ದಂಗೆಯು ಬಶೀರ್ ಅವರನ್ನು ಮೂರು ದಶಕಗಳ ಕಾಲ ಸರ್ವಾಧಿಕಾರಿಯಾಗಿ ಅಧಿಕಾರಕ್ಕೆ ತಂದಿತು. ಈ ಸಮಯದಲ್ಲಿ ಸೂಡಾನ್ ಜನರು ನಿರಂಕುಶ ಆಡಳಿತದ ರಹಸ್ಯ ಪೋಲೀಸ್, ವಿರೋಧದ ದಮನ, ಭ್ರಷ್ಟಾಚಾರದಿಂದ ಬಳಲುತ್ತಿದ್ದರು. 2019 ರಲ್ಲಿ ಬಶೀರ್ ಅವರನ್ನು ಪದಚ್ಯುತಗೊಳಿಸಿದಾಗ ಅವರು ಅಧಿಕಾರದಲ್ಲಿ ಸಾಯುತ್ತಾರೆ ಅಥವಾ ಅವರ ಆಳ್ವಿಕೆಯು ಹತ್ಯೆಯಿಂದ ಮಾತ್ರ ಕೊನೆಗೊಳ್ಳುತ್ತದೆ ಎಂದು ಭಾವಿಸಿದ ನಾನು ಸೇರಿದಂತೆ ಅನೇಕ ವೀಕ್ಷಕರಿಗೆ ಆಘಾತಕಾರಿಯಾಗಿತ್ತು.

ಆದರೆ ಬಶೀರ್‌ನ ಅಂತ್ಯವು ಪ್ರಜಾಸತ್ತಾತ್ಮಕ ಆಡಳಿತವನ್ನು ಅರ್ಥೈಸುತ್ತದೆ ಎಂಬ ಯಾವುದೇ ಭರವಸೆಗಳು ಅಲ್ಪಕಾಲಿಕವಾಗಿವೆ. ಅವನ ಪದಚ್ಯುತಿಗೆ ಎರಡು ವರ್ಷಗಳ ನಂತರ ಅಂತರ್ಯುದ್ಧವನ್ನು ತಪ್ಪಿಸಲು ಸೈನ್ಯವು ಅಧಿಕಾರವನ್ನು ತೆಗೆದುಕೊಳ್ಳಲು ನಿರ್ಧರಿಸಿತು. ಸುಡಾನ್‌ನ ರಾಜಕೀಯ ಸ್ಥಿತ್ಯಂತರಗಳ ಕೇಂದ್ರದಲ್ಲಿ ಸೇನೆಯು ಬಹಳ ಹಿಂದಿನಿಂದಲೂ ಇದೆ. 1956 ರಲ್ಲಿ ಸ್ವಾತಂತ್ರ್ಯದ ನಂತರ ನಾಗರಿಕ ಆಡಳಿತಕ್ಕೆ ಪ್ರತಿರೋಧವು ಸಾಮಾನ್ಯಕ್ಕಿಂತ ಕಡಿಮೆಯಾಗಿದೆ.

ಇದನ್ನೂ ಓದಿ:India Is World’s Most Populous Country: ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ

ಹಿಂಸಾಚಾರ ಉಲ್ಬಣಗೊಳ್ಳುವ ಅಪಾಯವಿದೆಯೇ?

ಅಮೆರಿಕ ಮತ್ತು ಇತರ ಅಂತರರಾಷ್ಟ್ರೀಯ ವೀಕ್ಷಕರು ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಲು ಕರೆ ನೀಡಿದೆ.ಆದರೆ ಎರಡೂ ಬಣಗಳಿಗೆ ಇದು ಅಸಂಭವವಾಗಿದೆ. ಅಂತೆಯೇ, ಸುಡಾನ್‌ನಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ನಿರೀಕ್ಷೆಯನ್ನೂ ಮಾಡುವಂತಿಲ್ಲ. ಅಲ್ಪಾವಧಿಯ ಪರಿಹಾರಕ್ಕೆ ಸುಲಭವಾದ ಮಾರ್ಗವಿಲ್ಲ ಎಂದು ತೋರುತ್ತಿದೆ. ಇಬ್ಬರೂ ಅಧಿಕಾರಕ್ಕಾಗಿ ಪರಸ್ಪರ ಹೋರಾಡುತ್ತಿದ್ದು ಬಿಟ್ಟುಕೊಡಲು ಸಿದ್ಧವಾಗಿಲ್ಲ ಎಂದು ತೋರುತ್ತದೆ. ಹೋರಾಟವು ಉಲ್ಬಣಗೊಳ್ಳಬಹುದು. ಇದು ನೆರೆಹೊರೆಯವರೊಂದಿಗೆ ಸುಡಾನ್‌ನ ಸಂಬಂಧಗಳನ್ನು ಅಪಾಯಕ್ಕೆ ತಳ್ಳಬಹುದು ಎಂಬುದು ಕಳವಳ ಇದ್ದೇ ಇದೆ. ಪಶ್ಚಿಮಕ್ಕೆ ಸುಡಾನ್‌ನ ಗಡಿಯಲ್ಲಿರುವ ಚಾಡ್ ಈಗಾಗಲೇ ಸುಡಾನ್‌ನೊಂದಿಗಿನ ತನ್ನ ಗಡಿಯನ್ನು ಮುಚ್ಚಿದೆ. ಏತನ್ಮಧ್ಯೆ, ಖಾರ್ಟೂಮ್‌ನಲ್ಲಿ ಹಿಂಸಾಚಾರ ನಡೆಯುತ್ತಿರುವಾಗ ಉತ್ತರ ಸುಡಾನ್‌ನಲ್ಲಿ ಒಂದೆರಡು ಈಜಿಪ್ಟ್ ಸೈನಿಕರನ್ನು ಸೆರೆಹಿಡಿಯಲಾಯಿತು. ಪೂರ್ವಕ್ಕೆ ಸುಡಾನ್‌ನ ನೆರೆಯ ಇಥಿಯೋಪಿಯಾ, ಟೈಗ್ರೇ ಪ್ರದೇಶದಲ್ಲಿ ಎರಡು ವರ್ಷಗಳ ಯುದ್ಧದಿಂದ ಇನ್ನೂ ತತ್ತರಿಸುತ್ತಿದೆ. ಸುಡಾನ್‌ನಲ್ಲಿನ ಅಶಾಂತಿಯ ಹರಡುವಿಕೆಯು ದಕ್ಷಿಣ ಸುಡಾನ್‌ನಲ್ಲಿ ಅಹಿತಕರ ಶಾಂತಿ ಒಪ್ಪಂದವನ್ನು ವೀಕ್ಷಿಸುವವರಿಗೆ ಕಳವಳಕಾರಿಯಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ