Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಜೀನಿಯಾ: ದುಷ್ಕರ್ಮಿಯಿಂದ ಅಂಗಡಿಯೊಳಗೆ ಗುಂಡಿನ ದಾಳಿ, ಗುಜರಾತ್ ಮೂಲದ ತಂದೆ-ಮಗಳು ಸಾವು

ಅಮೆರಿಕದ ವರ್ಜೀನಿಯಾದಲ್ಲಿ ಅಂಗಡಿಯೊಂದರೊಳಗೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಗುಜರಾತ್​ ಮೂಲದ ತಂದೆ-ಮಗಳು ಸಾವನ್ನಪ್ಪಿದ್ದಾರೆ. ಮೃತರನ್ನು ಪ್ರದೀಪ್‌ಭಾಯ್ ಪಟೇಲ್ (56) ಮತ್ತು ಅವರ 24 ವರ್ಷದ ಮಗಳು ಉರ್ವಿ ಪಟೇಲ್ ಮೇಲೆ ಅಕೋಮ್ಯಾಕ್ ಕೌಂಟಿಯಲ್ಲಿ ಬಂದೂಕುಧಾರಿಯೊಬ್ಬ ದಾಳಿ ನಡೆಸಿದ್ದಾನೆ. ಇವರು ಗುಜರಾತ್‌ನ ಮೆಹ್ಸಾನಾದ ಕನೋಡಾ ಗ್ರಾಮದವರಾಗಿದ್ದು, ಪಾಟಿದಾರ್ ಕುಟುಂಬಕ್ಕೆ ಸೇರಿದವರು.

ವರ್ಜೀನಿಯಾ: ದುಷ್ಕರ್ಮಿಯಿಂದ  ಅಂಗಡಿಯೊಳಗೆ ಗುಂಡಿನ ದಾಳಿ, ಗುಜರಾತ್ ಮೂಲದ ತಂದೆ-ಮಗಳು ಸಾವು
ಗುಜರಾತಿ ತಂದೆ-ಮಗಳ ಸಾವು
Follow us
ನಯನಾ ರಾಜೀವ್
|

Updated on: Mar 23, 2025 | 9:32 AM

ವರ್ಜೀನಿಯಾ, ಮಾರ್ಚ್​ 23: ಅಮೆರಿಕದ ವರ್ಜೀನಿಯಾದಲ್ಲಿ ಅಂಗಡಿಯೊಂದರೊಳಗೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಗುಜರಾತ್​ ಮೂಲದ ತಂದೆ-ಮಗಳು ಸಾವನ್ನಪ್ಪಿದ್ದಾರೆ. ಮೃತರನ್ನು ಪ್ರದೀಪ್‌ಭಾಯ್ ಪಟೇಲ್ (56) ಮತ್ತು ಅವರ 24 ವರ್ಷದ ಮಗಳು ಉರ್ವಿ ಪಟೇಲ್ ಮೇಲೆ ಅಕೋಮ್ಯಾಕ್ ಕೌಂಟಿಯಲ್ಲಿ ಬಂದೂಕುಧಾರಿಯೊಬ್ಬ ದಾಳಿ ನಡೆಸಿದ್ದಾನೆ. ಇವರು ಗುಜರಾತ್‌ನ ಮೆಹ್ಸಾನಾದ ಕನೋಡಾ ಗ್ರಾಮದವರಾಗಿದ್ದು, ಪಾಟಿದಾರ್ ಕುಟುಂಬಕ್ಕೆ ಸೇರಿದವರು.

ಸುದ್ದಿಯ ಪ್ರಕಾರ, ಗುಂಡೇಟಿನಿಂದ ಪ್ರದೀಪ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅವರ ಮಗಳು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾಳೆ. ಅಮೆರಿಕದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ದಾಳಿ ನಡೆದಾಗ, ಪ್ರದೀಪ್‌ಭಾಯ್ ಪಟೇಲ್ ಮತ್ತು ಅವರ ಮಗಳು ಉರ್ವಿ ಪಟೇಲ್ ವರ್ಜೀನಿಯಾದ ಅಕೋಮ್ಯಾಕ್ ಕೌಂಟಿಯಲ್ಲಿರುವ ಅಂಗಡಿಯಲ್ಲಿದ್ದರು. ಅಷ್ಟರಲ್ಲಿ, ಒಬ್ಬ ಬಂದೂಕುಧಾರಿ ಅಂಗಡಿಯೊಳಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಲು ಆರಂಭಿಸಿದ. ತಲೆಗೆ ಗುಂಡು ತಗುಲಿ ಪ್ರದೀಪ್‌ಭಾಯ್ ಸ್ಥಳದಲ್ಲೇ ಮೃತಪಟ್ಟರು. ಏತನ್ಮಧ್ಯೆ, ಅವರ ಮಗಳು ಉರ್ವಿ ಕೂಡ 36 ಗಂಟೆಗಳ ಚಿಕಿತ್ಸೆಯ ನಂತರ ನಿಧನರಾದರು.

ಮತ್ತಷ್ಟು ಓದಿ: ಕೇಂದ್ರ ಸಚಿವರ ಇಬ್ಬರು ಸೋದರಳಿಯರ ನಡುವೆ ಗುಂಡಿನ ಚಕಮಕಿ, ಓರ್ವ ಸಾವು ನಡೆದಿದ್ದೇನು?

ಮಾರ್ಚ್ 20 ರಂದು ಬೆಳಗ್ಗೆ 5:30 ಕ್ಕೆ, ಕೊಲೆ ಆರೋಪಿ ಮದ್ಯ ಖರೀದಿಸಲು ಅಂಗಡಿಗೆ ಬಂದಿದ್ದ. ಇದಾದ ನಂತರ, ಅಂಗಡಿಯನ್ನು ರಾತ್ರಿ ಏಕೆ ತೆರೆಯಲಿಲ್ಲ ಎಂದು ತಂದೆಯೊಂದಿಗೆ ಜಗಳವಾಡಿ ತಂದೆ ಮತ್ತು ಮಗಳು ಇಬ್ಬರ ಮೇಲೂ ಗುಂಡು ಹಾರಿಸಿದ್ದಾನೆ. ಪ್ರದೀಪ್ ಪಟೇಲ್, ಅವರ ಪತ್ನಿ ಹಂಸಬೆನ್ ಮತ್ತು ಮಗಳು ಉರ್ವಿ 6 ವರ್ಷಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದರು. ಪ್ರದೀಪ್‌ಭಾಯ್‌ಗೆ 3 ಹೆಣ್ಣು ಮಕ್ಕಳಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ, ಅವರ ಮಗಳು, ಅಳಿಯ ಅಮೆರಿಕಕ್ಕೆ ತಲುಪಿದರು.

ಅಮೆರಿಕದಲ್ಲಿ ನಡೆದ ತಂದೆ-ಮಗಳ ಹತ್ಯೆ ಘಟನೆ ವಿದೇಶಗಳಲ್ಲಿ ವಾಸಿಸುವ ಭಾರತೀಯರಲ್ಲಿ ಆತಂಕವನ್ನು ಸೃಷ್ಟಿಸಿದೆ. ಅತನಿಖೆಯ ನಂತರ ಒನಾನ್‌ಕಾಕ್‌ನ ಜಾರ್ಜ್ ಫ್ರೇಜಿಯರ್ ಡೆವೊನ್ ವಾರ್ಟನ್ (44) ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ. ವಾರ್ಟನ್ ಪ್ರಸ್ತುತ ಕೊಲೆ, ಕೊಲೆ ಯತ್ನ, ಮತ್ತು ಮಾರಕ ಆಯುಧ ಬಳಕೆ ಆರೋಪ ಹೊರಿಸಿ ಜೈಲಿಗೆ ಕಳುಹಿಸಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್