AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Auto Tips: ಕಾರು ರನ್ನಿಂಗ್​ನಲ್ಲಿರುವಾಗ ಸನ್‌ರೂಫ್ ತೆರೆಯುವುದು ಸರಿಯೇ?: ತಪ್ಪಿಯೂ ಹೀಗೆ ಮಾಡಬೇಡಿ

ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುವಾಗ ಸನ್‌ರೂಫ್ ಅನ್ನು ತೆರೆಯುವುದು ಮಾತ್ರವಲ್ಲದೆ ಅದರ ಮೂಲಕ ಹೊರಗೆ ಇಣುಕಿ ನೋಡುವವರಿ ಇರುತ್ತಾರೆ. ಆದರೆ, ಇದೆಲ್ಲ ಒಳ್ಳೆಯದಾ?, ಇಂದು ನಾವು ಸನ್‌ರೂಫ್ ತೆರೆದರೆ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳ ಹೇಳಲಿದ್ದೇವೆ.

Auto Tips: ಕಾರು ರನ್ನಿಂಗ್​ನಲ್ಲಿರುವಾಗ ಸನ್‌ರೂಫ್ ತೆರೆಯುವುದು ಸರಿಯೇ?: ತಪ್ಪಿಯೂ ಹೀಗೆ ಮಾಡಬೇಡಿ
ಕಾರು
ಪ್ರೀತಿ ಭಟ್​, ಗುಣವಂತೆ
| Edited By: |

Updated on:Oct 09, 2024 | 11:37 AM

Share

ನಿಮ್ಮ ಕಾರಿನಲ್ಲಿ ತೆರೆಯುವ ಸನ್‌ರೂಫ್ ಹೊಂದಿದ್ದರೆ, ಮೊದಲು ನೀವು ಅದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕು. ಇಂದು ಹೆಚ್ಚಿನ ಜನರು ಸನ್‌ರೂಫ್ ತೆರೆಯುವ ಮೂಲಕ ಕಾರನ್ನು ಓಡಿಸಬೇಕು ಎಂದು ಎಂದು ಭಾವಿಸುತ್ತಾರೆ. ಇದೊಂದು ಕ್ರೇಜ್ ಆಗಿದೆ. ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುವಾಗ ಸನ್‌ರೂಫ್ ಅನ್ನು ತೆರೆಯುವುದು ಮಾತ್ರವಲ್ಲದೆ ಅದರ ಮೂಲಕ ಹೊರಗೆ ಇಣುಕಿ ನೋಡುತ್ತಾರೆ. ಆದರೆ, ಇದೆಲ್ಲ ಒಳ್ಳೆಯದಾ?, ಇಂದು ನಾವು ಸನ್‌ರೂಫ್ ತೆರೆದರೆ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳ ಹೇಳಲಿದ್ದೇವೆ.

ಸನ್‌ರೂಫ್ ತೆರೆಯುವ ಪ್ರಯೋಜನಗಳು:

ತಾಜಾ ಗಾಳಿ: ಸನ್‌ರೂಫ್ ಅನ್ನು ತೆರೆಯುವುದರಿಂದ ಕ್ಯಾಬಿನ್‌ ಒಳಗೆ ಹೆಚ್ಚು ತಾಜಾ ಗಾಳಿಯನ್ನು ಬರುತ್ತದೆ, ಇದು ಕಾರಿನ ಒಳಗೆ ತಾಜಾ ಅನುಭವ ನೀಡುತ್ತದೆ.

ನೈಸರ್ಗಿಕ ಬೆಳಕು: ಇದು ಕ್ಯಾಬಿನ್‌ಗೆ ನೈಸರ್ಗಿಕ ಬೆಳಕನ್ನು ತರುತ್ತದೆ, ಕಾರಿನ ಒಳಾಂಗಣವನ್ನು ಹೆಚ್ಚು ಗಾಳಿ ಮತ್ತು ಪ್ರಕಾಶಮಾನವಾಗಿ ಮಾಡುತ್ತದೆ.

ಅನುಭವ: ಹೆದ್ದಾರಿಯಲ್ಲಿ ಅಥವಾ ಉತ್ತಮ ಹವಾಮಾನದಲ್ಲಿ ಸನ್‌ರೂಫ್ ತೆರೆದು ರೈಡ್ ಮಾಡುವಾಗ ರೋಮಾಂಚಕಾರಿ ಅನುಭವ ನೀಡುತ್ತದೆ.

ಸನ್ರೂಫ್​ನ ಅನಾನುಕೂಲಗಳು:

ಗಾಳಿಯ ಒತ್ತಡ ಮತ್ತು ಶಬ್ದ: ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುತ್ತಿದ್ದಾಗ ಸನ್‌ರೂಫ್ ಅನ್ನು ತೆರೆದಾಗ ಗಾಳಿಯ ಒತ್ತಡದಿಂದಾಗಿ ಕ್ಯಾಬಿನ್‌ನಲ್ಲಿ ಹೆಚ್ಚಿನ ಶಬ್ದ ಉಂಟಾಗುತ್ತದೆ, ಇದು ಡ್ರೈವಿಂಗ್ ಅನುಭವವನ್ನು ಹಾಳುಮಾಡುತ್ತದೆ ಮತ್ತು ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಬಹುದು.

ಸುರಕ್ಷತೆಯ ಅಪಾಯ: ನಿಮ್ಮ ತಲೆ ಅಥವಾ ಕೈಗಳನ್ನು ಸನ್‌ರೂಫ್‌ನಿಂದ ಹೊರತೆಗೆಯುವುದು ತುಂಬಾ ಅಪಾಯಕಾರಿ. ಅಪಘಾತದ ಸಂದರ್ಭದಲ್ಲಿ ಇದು ಡೊಡ್ಡ ನಷ್ಟಕ್ಕೆ ಕಾರಣವಾಗಬಹುದು. ವಿಶೇಷವಾಗಿ ಮಕ್ಕಳಿಗೆ ತುಂಬಾ ಅಪಾಯಕಾರಿ.

ಧೂಳು ಮತ್ತು ಕೊಳಕು: ಸನ್‌ರೂಫ್ ಅನ್ನು ತೆರೆಯುವುದರಿಂದ ಹೊರಗಿನಿಂದ ಧೂಳು, ಕೊಳಕು ಮತ್ತು ಕಸವು ಕ್ಯಾಬಿನ್‌ಗೆ ಬರಬಹುದು, ಇದು ಸುರಕ್ಷಿತ ಚಾಲನೆಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಇಂಧನ ದಕ್ಷತೆ: ನೀವು ಹೆದ್ದಾರಿಯಲ್ಲಿ ಅಥವಾ ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುತ್ತಿದ್ದರೆ, ಸನ್‌ರೂಫ್ ಅನ್ನು ತೆರೆಯುವುದರಿಂದ ಗಾಳಿಯ ಒತ್ತಡ ಹೆಚ್ಚಾಗುತ್ತದೆ. ಇದು ವಾಹನದ ಮೇಲೆ ಪರಿಣಾಮ ಬೀರುತ್ತದೆ. ಮೈಲೇಜ್ ಕೂಡ ಕಡಿಮೆ ಆಗುತ್ತದೆ.

ಮಳೆ ಅಥವಾ ಕೆಟ್ಟ ಹವಾಮಾನ: ಸನ್‌ರೂಫ್ ತೆರೆಯುವಾಗ ಹಠಾತ್ ಮಳೆ ಅಥವಾ ಹವಾಮಾನದಲ್ಲಿ ಬದಲಾವಣೆಯಾದರೆ, ನೀರು ಒಳಗೆ ಬರಬಹುದು, ಇದು ಎಲೆಕ್ಟ್ರಾನಿಕ್ಸ್ ಮತ್ತು ಒಳಾಂಗಣಕ್ಕೆ ಹಾನಿಯನ್ನುಂಟುಮಾಡುತ್ತದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:35 am, Wed, 9 October 24

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ