AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಮೊದಲ ಸಂಬಳದಿಂದ ನಾನು ಕಲಿತ ಪಾಠ !

ಮದುರಂಗಿ ಶಾಸ್ತ್ರ ಕಾರ‍್ಯಕ್ರಮವಿದ್ದದ್ದು ವಿಟ್ಲ ಸಮೀಪದ ಒಂದು ಪುಟ್ಟ ಹಳ್ಳಿಯಲ್ಲಿ. ಅಲ್ಲಿಗೆ ಹೋಗುವ ಖುಷಿ, ಕುತೂಹಲವನ್ನು ಜೊತೆಗೆ ಸೇರಿಸಿಕೊಂಡು ಆತುರದಿಂದ ಹೋರಟು ಹೋದೆ. ದಾರಿ ಹುಡುಕಿಕೊಂಡು ಕಾರ‍್ಯಕ್ರಮವಿರುವ ಸ್ಥಳಕ್ಕೆ ತಲುಪಿದೆ.

ನನ್ನ ಮೊದಲ ಸಂಬಳದಿಂದ ನಾನು ಕಲಿತ ಪಾಠ !
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 16, 2022 | 8:30 AM

Share

ಆ ದಿನ ಅದ್ಯಾವುದೋ ಯೋಚನೆಯಲ್ಲಿ ಮಲಗಿದ ನನಗೆ ನಿದ್ರಾದೇವಿ ಆವರಿಸತೊಡಗಿದ್ದಳು. ಅಷ್ಟರಲ್ಲೇ , ಬದಿಯಲ್ಲಿದ್ದ ಮೊಬೈಲ್ ರಿಂಗ್ ಆಯಿತು, ತಿಳಿಯಲೇ ಇಲ್ಲ. ಕಾಲ್ ಬೆಂಬಿಡದೆ ಬರುತ್ತಿದ್ದ ಕಾರಣ ರಿಂಗ್ ಟೋನ್ ನನ್ನನ್ನು ಎಚ್ಚರಗೊಳಿಸಿತ್ತು. ಕರೆಯನ್ನು ಸ್ವೀಕರಿಸುತ್ತಾ ಆ ಕಡೆಯಿಂದ, ನಾಳೆ ನಮ್ಮ ನನ್ನ ಮದುರಂಗಿಶಾಸ್ತ್ರ ಇದೆ ಮದುರಂಗಿ ಇಡಬಹುದಾ? ಎನ್ನೋ ಮೃದು ದನಿಯ ಮಾತುಗಳು ನನ್ನನ್ನು ನಿದ್ರಾವಸ್ಥೆಯಿಂದ ಹೊರತಂದ್ದಿದ್ದವು. ಸರಿ ಎನ್ನುತ್ತಾ ಪೋನ್ ಕಟ್ ಮಾಡಿ ಮತ್ತೆ ನಿದ್ರಾ ಅವಸ್ಥಿಗೆ ಜಾರಿದೆ. ಶಶಿಯು ಜಾರಿ ಮರುದಿನದ ರವಿಯ ಬರುವಿಕೆಗಾಗಿ ಎದುರು ನೋಡುತ್ತಿದ್ದೆ. ಬಾನಾಡಿಯಲ್ಲಿ ಕೆಂಬಣ್ಣದ ಸೂರ್ಯ ಉದಯಿಸುವ ಮುನ್ನವೇ ನನಗಂದು ಎಚ್ಚರವಾಗಿತ್ತು. ಕಾಲುಗಳಿಗೆ ಚಕ್ರ ಕಟ್ಟಿರುವಂತೆ ನಿಂತಲ್ಲಿ ನಿಲ್ಲುತಿರಲಿಲ್ಲ. ಅದೊಂದು ಹೊಸ ಅನುಭವದ ಚಿತ್ರಣ ನನಗೆ ಅರಿಯದೇ ನನಲ್ಲಿ ಕಾಣತೊಡಗಿತ್ತು.

ಮದುರಂಗಿ ಶಾಸ್ತ್ರ ಕಾರ‍್ಯಕ್ರಮವಿದ್ದದ್ದು ವಿಟ್ಲ ಸಮೀಪದ ಒಂದು ಪುಟ್ಟ ಹಳ್ಳಿಯಲ್ಲಿ. ಅಲ್ಲಿಗೆ ಹೋಗುವ ಖುಷಿ, ಕುತೂಹಲವನ್ನು ಜೊತೆಗೆ ಸೇರಿಸಿಕೊಂಡು ಆತುರದಿಂದ ಹೋರಟು ಹೋದೆ. ದಾರಿ ಹುಡುಕಿಕೊಂಡು ಕಾರ‍್ಯಕ್ರಮವಿರುವ ಸ್ಥಳಕ್ಕೆ ತಲುಪಿದೆ. ಕಾರ‍್ಯಕ್ರಮಗಳಲ್ಲಿ ನನ್ನನ್ನು ಅತಿಥಿಯಾಗಿ ಸ್ವೀಕರಿಸಿದ ರೀತಿ ನನಗೆ ತೋರಿದ ಆತಿಥ್ಯ ನನ್ನ ಖುಷಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ಅರಶಿನ ಶಾಸ್ತ್ರಗಳೆಲ್ಲ ಮುಗಿದ ನಂತರ ಕೈಯ ಮೇಲೆ ಕೆಂಬಣ್ಣದ ಗೋರಂಟೆ ಇಡುವ ಕ್ರಮ ಆರಂಭವಾಯಿತು.ಈಗ ನನ್ನ ಜವಾಬ್ದಾರಿ ಸೂರ್ಯ ಚಂದ್ರರು ಕೈಯ ಮೇಲೆ ಮೂಡಿಬರುತ್ತಿದ್ದಂತೆ ನವವಧುವಿನ ಮೊಗದಲಿ ಅದೇನೋ ಸಂತಸದ ಛಾಯೆ. ಬಹುಷಃ ಇನಿಯನ ನೆನೆದು ಆಕೆಯ ಮೊಗವು ನಾಚಿ ನೀರಾದಂತ್ತಿತ್ತು. ಸಂಜೆಯಾಗುತ್ತಲೇ ಮದರಂಗಿ ಇಡೋ ನನ್ನ ಕೆಲಸವೂ ಮುಗಿದಿತ್ತು.

ಹಿರಿಯರ ಸಮ್ಮುಖದಲ್ಲಿ ಮದುವೆಯ ಮಮತೆಯ ಕರೆಯೋಲೆಯ ಜೊತೆಗೆ ಮೂರು ಗರಿ ಗರಿ ನೋಟನ್ನು ನನ್ನ ಕೈಯಲ್ಲಿತ್ತರು. ಅದೇನೋ ಹೊಸ ಅನುಭವ , ನನ್ನೋಳಗೆ ಒಂದು ರೀತಿಯ ನಿರಾಳಭಾವ. ದುಡಿಯುವ ಮೊದಲ ಹೆಜ್ಜೆಯ ಪ್ರಯತ್ನ ಇಂದು ಹೆತ್ತವರು ದುಡಿದು ತಂದ ಹಣವನ್ನು ನೀರಿನಂತೆ ವ್ಯಯ ಮಾಡೋ ಕಾಲದಲ್ಲಿ , ಅವರ ಒಂದೊಂದು ಬೆವರ ಹನಿಯ ಅರಿತು ಉಳಿತಾಯ ಮಾಡುವುದು ಉತ್ತಮ ಅಲ್ವಾ. ದಿನವಿಡೀ ದುಡಿಯುವ ಕೈಗಳಿಗೆ ಒಂದು ಸಲಾಂ ಹೇಳೋಣವೇ? ಅಂದಿನ ಆ ನನ್ನ ಮೊದಲ ಸ್ಯಾಲರಿ ಮರೆಯಲಾಗದ ಖುಷಿ ಕೊಟ್ಟಿರುವ ಜೊತೆಗೆ ಒಂದೊಂದು ಬೆವರ ಹನಿಯ ಮಹತ್ವ ತಿಳಿಸಿದ್ದು ಮಾತ್ರ ಸುಳ್ಳಲ್ಲ.

ಇದನ್ನೂ ಓದಿ
Image
ಒಂದಾದ ಮೇಲೊಂದು ಅನಿರೀಕ್ಷಿತ ತಿರುವುಗಳಿದ್ದ ದಾರಿಯ ತುದಿಯಲ್ಲಿತ್ತು ನೆಮ್ಮದಿಯ ಬದುಕು
Image
Today History : ಈ ದಾರಿಯಲ್ಲಿ ಪ್ರಯಾಣಿಸುವಾಗ ವಾಹನದ ಹೆಡ್ ಲೈಟ್ ಆಫ್ ಮಾಡಬೇಕು ! ಇದು ಕೊರಗಜ್ಜನ ಆದೇಶ?
Image
ನಿಮಗಿದು ಗೊತ್ತೇ?: ಮೊದಲ ಸೂರ್ಯ ಮುಳುಗದ ಸಾಮ್ರಾಜ್ಯ: ವಸಾಹತುಶಾಹಿ ಆಡಳಿತ ಆರಂಭಿಸಿದ್ದು, ಕೊನೆಗೊಳಿಸಿದ್ದು ಯಾವ ದೇಶ?
Image
World Environment Day 2022 : ಭೂಲೋಕದ ಸ್ವರ್ಗ ಕೂಡ್ಲು ತೀರ್ಥ ಜಲಪಾತ

ನೀತಾ ರವೀಂದ್ರ  ವಿವೇಕಾನಂದ ಕಾಲೇಜ್ ಪುತ್ತೂರು

ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ