AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಕಣ್ಣಿಗೆ ಕಂಡ ನಿಜವಾದ ದೇವರು ಅಪ್ಪ

ಹೌದು, ತನ್ನ ಇಡೀ ಬದುಕನ್ನು ನಮಗಾಗಿ ಮೀಸಲಿಟ್ಟ ಅವನು ಕರ್ಣನೇ ಸರಿ. ಪ್ರತಿಬಾರಿಯೂ ನಾನು ನೋವಿನಲ್ಲಿದ್ದಾಗ ಸ್ನೇಹಿತನಂತೆ ನನ್ನನ್ನು ಸಂತೈಸುವ ಈ ವ್ಯಕ್ತಿಯನ್ನು ವರ್ಣಿಸಲು ಅಸಾಧ್ಯ. ಬದುಕಿನಲ್ಲಿ ಎದುರಾಗುವ ಎಲ್ಲಾ ಕಷ್ಟ ನಷ್ಟಗಳನ್ನು ಹೇಗೆ ಎದುರಿಸಬೇಕೆಂದು ಹೇಳಿಕೊಟ್ಟ ಅವನೇ ನನ್ನ ಬದುಕಿನ ನಿಜವಾದ ಜಾದೂಗಾರ.

ನನ್ನ ಕಣ್ಣಿಗೆ ಕಂಡ ನಿಜವಾದ ದೇವರು ಅಪ್ಪ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Jun 20, 2022 | 3:03 PM

Share

ಎಂದಿನಂತೆ ಕಾಲೇಜಿಗೆ ಬೆಳ್ಳಂಬೆಳಗ್ಗೆ ಹೊರಟಿದ್ದೆ , ಬಸ್ಸಿನಲ್ಲಿ ಅಷ್ಟೆಲ್ಲಾ ನೂಕುನುಗ್ಗಲು ಇದ್ದರೂ ಕಿಟಕಿ ಬದಿಯ ಒಂದು ಸೀಟು ನನಗಾಗಿಯೇ ಕಾದಿರುವಂತೆ ಕಂಡಿತು.  ಖಾಲಿ ಇದ್ದ ಸೀಟಿನಲ್ಲಿ ಕುಳಿತುಕೊಂಡೆ . ಕೈಯಲ್ಲಿದ್ದ ಮೊಬೈಲ್ ಸದ್ದಾದ ಕಾರಣ ಕುತೂಹಲದಿಂದ ಏನೆಂದು ಮೊಬೈಲ್ ತೆರೆದು ನೋಡಿದೆ. ಅದಾಗಲೇ ಮೊದಲ ಅವಧಿಯ ತರಗತಿ ಇಲ್ಲ ಎಂದು ಮೇಡಂ ಮೆಸೇಜ್ ಹಾಕಿದ್ದರು. ಹೀಗಾಗಿ ಬೇಗ ಕ್ಲಾಸಿಗೆ ಹೋಗಲು ಮನಸ್ಸಿರಲಿಲ್ಲ , ಹೀಗಾಗಿ ನನ್ನ ಪಯಣವನ್ನು ಬಸ್ಸ್ಟ್ಯಾಂಡ್ ನ ಪಕ್ಕದಲ್ಲೇ ಇದ್ದ ದೇವಸ್ಥಾನಕ್ಕೆ ನಡೆದೆ. ಕಾಣದ ದೇವರನ್ನು ನೋಡಲು ಹೊರಟಾಗ ನನ್ನ ಕಣ್ಣಿಗೆ ಕಂಡದ್ದು ಬದುಕಿನ ನಿಜವಾದ ದೇವರ ಪ್ರೀತಿ. ಒಬ್ಬ ತಂದೆ ತನ್ನ ಮಗಳನ್ನು ಹೆಗಲ ಮೇಲೇರಿಸಿಕೊಂಡು ದೇವರನ್ನು ತೋರಿಸುತ್ತಿದ್ದ ಪರಿ. ಅದಾಗಲೇ ನನ್ನ ಜೀವನದ ಸೂಪರ್ ಹೀರೋ ನನ್ನಪ್ಪ ನೆನಪಿಗೆ ಬಂದರು, ಆತನನ್ನ ನೆನೆಯುತ್ತಲೇ ನನ್ನ ಕಣ್ಣುಗಳು ತೇವವಾದವು.

ಹೌದು, ತನ್ನ ಇಡೀ ಬದುಕನ್ನು ನಮಗಾಗಿ ಮೀಸಲಿಟ್ಟ ಅವನು ಕರ್ಣನೇ ಸರಿ. ಪ್ರತಿಬಾರಿಯೂ ನಾನು ನೋವಿನಲ್ಲಿದ್ದಾಗ ಸ್ನೇಹಿತನಂತೆ ನನ್ನನ್ನು ಸಂತೈಸುವ ಈ ವ್ಯಕ್ತಿಯನ್ನು ವರ್ಣಿಸಲು ಅಸಾಧ್ಯ. ಬದುಕಿನಲ್ಲಿ ಎದುರಾಗುವ ಎಲ್ಲಾ ಕಷ್ಟ ನಷ್ಟಗಳನ್ನು ಹೇಗೆ ಎದುರಿಸಬೇಕೆಂದು ಹೇಳಿಕೊಟ್ಟ ಅವನೇ ನನ್ನ ಬದುಕಿನ ನಿಜವಾದ ಜಾದೂಗಾರ.

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ನನ್ನ ಬದುಕಿನ ರಾಯಭಾರಿ ಅಪ್ಪ

ಇದನ್ನೂ ಓದಿ
Image
Indian book of Record: ಚಂದ್ರಹಾಸ ಅವರ ಕೃತಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೌರವ
Image
Gallstone: ಶಸ್ತ್ರಚಿಕಿತ್ಸೆಯಿಲ್ಲದೆ ಪಿತ್ತಕೋಶದ ಕಲ್ಲುಗಳನ್ನು ತೆಗೆಯಲು ಸಾಧ್ಯವೆ! ಇಲ್ಲಿದೆ ಮನೆಮದ್ದು

ಅದೆಷ್ಟು ನೋವಿದೆಯೋ ನಿನ್ನಲ್ಲಿ, ಅದೆಷ್ಟು ಆಸೆ ಇತ್ತೋ ನಿನ್ನಲ್ಲಿ. ಇದೆಲ್ಲವನ್ನ ನಮಗಾಗಿ ಅದುಮಿಟ್ಟುಕೊಂಡು ನಮ್ಮ ಖುಷಿಗಾಗಿ ಹಗಲು-ರಾತ್ರಿ ದುಡಿಯುತ್ತಲೇ ಇರುತ್ತಿ. ನಿನ್ನ ಈ ಪ್ರೀತಿಯ ಮುಂದೆ ಎಲ್ಲಾವೂ ಶೂನ್ಯ ಅಪ್ಪ!. ಅದೆಷ್ಟೋ ಸಲ ನಾ ಕೇಳಿದ್ದನ್ನೆಲ್ಲ ದೇವರು ಕೊಡದೇ  ಇರಬಹುದು. ಆದರೆ ಕೇಳಿದ್ದನ್ನೆಲ್ಲಾ ಕೊಡಿಸುವ ಅಪ್ಪಕ್ಕಿಂತ ನನಗೆ ಇನ್ನೇನು ಬೇಕು. ತನ್ನ ಸಂಸಾರಕ್ಕಾಗಿ ಬಿಸಿಲು-ಮಳೆ ಎನ್ನದೆ ದಿನವಿಡೀ ದುಡಿಯುವ ಆತ ನನ್ನ ಪಾಲಿನ ದೇವರು. ಎಷ್ಟೋ ಬಾರಿ ಇಂಥ ಅಪ್ಪನನ್ನು ಪಡೆದ ನಾನು ಪುಣ್ಯವಂತೆ ಎನಿಸಿದ್ದು ಇದೆ. ಭವಿಷ್ಯ ಕಟ್ಟುವ ಭರವಸೆ ನೀಡಿ ಕೈ ಹಿಡಿದು ಸರಿಯಾದ ದಡಕ್ಕೆ ಸೇರಿಸುವ ನೀನು ಯಾವ ಅಂಬಿಗನಿಗೂ ಕಮ್ಮಿಯಿಲ್ಲ!

ಶಮಿತಾ ಮುತ್ಲಾಜೆ

ತೃತೀಯ ಪತ್ರಿಕೋದ್ಯಮ

ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 2:57 pm, Mon, 20 June 22

ಹೇಗೆ ಹೆಣ ಎಸೆದು ಹೋದ ನೋಡಿ ಆಂಬ್ಯುಲೆನ್ಸ್​ ಚಾಲಕ
ಹೇಗೆ ಹೆಣ ಎಸೆದು ಹೋದ ನೋಡಿ ಆಂಬ್ಯುಲೆನ್ಸ್​ ಚಾಲಕ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್