Raksha Bandhan 2022: ನನ್ನೊಲವನು ತಿಳಿಸುವ ಮುನ್ನ ಅಣ್ಣಾ ಎಂದು ರಾಖಿ ಕಟ್ಟಿ ಹರಸೆಂದಳು

ನಾವು ಎಂದಿನಂತೆ ಆ ದಿನವೂ ಟ್ಯೂಷನ್ ಹೋದೆವು. ಆದ್ರೆ ಅವಳು ಟ್ಯೂಷನ್ ಮುಗಿದ ಮೇಲೆ ಗೆಳೆಯನ ಕೈಗೆ ರಾಖಿ ಕಟ್ಟಿದಳು. ಪ್ರೀತಿ ವ್ಯಕ್ತಪಡಿಸಬೇಕೆಂದ ಗೆಳೆಯ ತಂಗಿ ಎಂದು ಕರೆದ. ಪಾಪ ಪ್ರೀತಿ ಚಿಗುರುವ ಮುನ್ನವೇ ಬಾಡಿ ಹೋಯಿತ್ತು.

Raksha Bandhan 2022: ನನ್ನೊಲವನು ತಿಳಿಸುವ ಮುನ್ನ ಅಣ್ಣಾ ಎಂದು ರಾಖಿ ಕಟ್ಟಿ ಹರಸೆಂದಳು
raksha bandhan
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 11, 2022 | 9:00 AM

ರಕ್ಷಾ ಬಂಧನ ಒಂದು ವಿಶೇಷವಾದ ಹಬ್ಬ, ಅನುಬಂಧಗಳು ಗಟ್ಟಿ ಮಾಡಿ, ಪ್ರೀತಿ ವಾತ್ಸಲ್ಯ ಹೆಚ್ಚಿಸುವ ವಿಶೇಷ ಗಳಿಗೆ. ನಮ್ಮ ಕುಟುಂಬದಲ್ಲಿ ನಾವು ಮೂರು ಜನ ಗಂಡು ಮಕ್ಕಳು. ನಮಗೆ ಪ್ರತಿ ವರ್ಷ ರಕ್ಷಾಬಂಧನದಂದು ರಾಖಿ ಕಟ್ಟಲು ಬರುವ ಜೀವ ಎಂದರೆ ಕವಿತಾ, ನಾವು ಅವರನ್ನು ಪ್ರೀತಿಯಿಂದ ದೀದಿ ಎಂದು ಕರೆಯುತ್ತೇವೆ.‌ ನಮಗೆಲ್ಲ ಪ್ರತಿ ವರ್ಷ ತಪ್ಪದೇ ರಾಖಿ ಕಟ್ಟಿದ್ದಾಗ, ಉಡುಗರೆ ಕೊಟ್ಟು, ಆಶೀರ್ವಾದ ಪಡೆಯುತ್ತಿದ್ದೆವು. ಒಂದು ಬಾರಿ ನಾನು ವಿದ್ಯಾಭ್ಯಾಸಕ್ಕಾಗಿ ಬೇರೆಯ ಊರಿಗೆ ಹೋದ ಕಾರಣ ದೀದಿ ರಾಖಿಯನ್ನು ಕೊರಿಯರ್ ಮೂಲಕ ಕಳಿಸಿಕೊಟ್ಟಿದರು.

ಶಾಲೆ ದಿನಗಳಲ್ಲಿ ನಾನು ಮತ್ತು ನನ್ನ ಗೆಳೆಯ ಟ್ಯೂಷನ್​ಗೆ ಹೋಗುತ್ತಿದ್ದೆವು. ಅಲ್ಲಿ ಅವನಿಗೆ ಒಬ್ಬಳು ಮೇಲೆ ಕ್ರಶ್ ಆಗಿತ್ತು. ನಂತರ ಅವಳೊಡನೆ ಮಾತನಾಡಲು ಶುರು ಮಾಡಿದ. ಆದ್ರೆ ಅವನ ಪ್ರೀತಿಗೆ ಒಂದು ವಿಘ್ನ ಕಾದಿತ್ತು. ಅದೇನೆಂದರೆ ಮುಂದಿನ ವಾರ ರಕ್ಷಾ ಬಂಧನದ ದಿನವಾಗಿತ್ತು. ನಾವು ಎಂದಿನಂತೆ ಆ ದಿನವೂ ಟ್ಯೂಷನ್ ಹೋದೆವು. ಆದ್ರೆ ಅವಳು ಟ್ಯೂಷನ್ ಮುಗಿದ ಮೇಲೆ ಗೆಳೆಯನ ಕೈಗೆ ರಾಖಿ ಕಟ್ಟಿದಳು. ಪ್ರೀತಿ ವ್ಯಕ್ತಪಡಿಸಬೇಕೆಂದ ಗೆಳೆಯ ತಂಗಿ ಎಂದು ಕರೆದ. ಪಾಪ ಪ್ರೀತಿ ಚಿಗುರುವ ಮುನ್ನವೇ ಬಾಡಿ ಹೋಯಿತ್ತು.

ಡಿಗ್ರಿಯಲ್ಲಿ ಬಿಎಸ್ಸಿ ಓದುತ್ತಿರಬೇಕಾದರೆ. ನಮ್ಮ ಪ್ರೀತಿಯ ಸೀನಿಯರ್ ಅಕ್ಕಂದಿರ ಜೊತೆಯಲ್ಲಿ ನಾನು ಊಟ ಮಾಡುವುದು, ಮನಸಲ್ಲಿದ್ದ ಭಾವನೆಗಳನ್ನು ಅವರೊಡನೆ ಚರ್ಚೆ ಮಾಡುತ್ತಿದ್ದೆ. ಅವರು ನನಗೆ ಸ್ವಂತ ತಮ್ಮನ ಹಾಗೆ ಸರಿಯಾದ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಕಾಳಜಿ ಮಾಡುತ್ತಿದ್ದರು. ರಕ್ಷಾಬಂಧನ ಸಮಯದಲ್ಲಿ ರಾಖಿ ಕಟ್ಟಿದ್ದಾಗ, ನನಗೂ ಅಕ್ಕಂದಿರು ಇದ್ದಾರೆ ಎನ್ನುವ ಅನುಬಂಧದ ಹೆಚ್ಚಾಯ್ತು. ಈಗಲೂ ಅವರು ಬೇರೆ ಕ್ಷೇತ್ರದಲ್ಲಿ ಇದ್ದರು. ಅವರ ಜೊತೆಗಿನ ನಂಟು ಗಟ್ಟಿಯಾಗಿ ಇನ್ನೂ ಹಾಗೆ ಇದೆ.

ಇದನ್ನೂ ಓದಿ
Image
Raksha Bandhan 2022: ರಕ್ಷಾ ಬಂಧನದಂದು ಈ ವಿಶೇಷ ಖಾದ್ಯಗಳನ್ನು ಮನೆಯಲ್ಲಿ ತಯಾರಿಸಿ?
Image
Raksha Bandhan 2022: ರಕ್ಷಾ ಬಂಧನಕ್ಕೆ ಆಕರ್ಷಕ ಮೆಹಂದಿ ಡಿಸೈನ್​ಗಳು ಇಲ್ಲಿವೆ
Image
ರಾಧಿಕಾ ಪಂಡಿತ್ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ; ಇಲ್ಲಿವೆ ಫೋಟೋಗಳು
Image
Raksha Bandhan Gift Ideas: ರಕ್ಷಾಬಂಧನದ ದಿನ ನಿಮ್ಮ ಸಹೋದರಿಗೆ ಈ ಗಿಫ್ಟ್​ ಕೊಡಬಹುದಾ ನೋಡಿ

ಆನಂದ ಜೇವೂರ್, ಕಲಬುರಗಿ

ತಾಜಾ ಸುದ್ದಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು