Railway Budget 2023: ಬಜೆಟ್​ನಲ್ಲಿ ರೈಲ್ವೆ ಇಲಾಖೆಗೆ 2.4 ಲಕ್ಷ ಕೋಟಿ ರೂ; ಇತಿಹಾಸದಲ್ಲೇ ಹೆಚ್ಚು

Union Budget 2023: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್​ನಲ್ಲಿ ರೈಲ್ವೆ ಇಲಾಖೆಗೆ ಭರ್ಜರಿ ಕೊಡುಗೆ ನೀಡಿದ್ಧಾರೆ. 2.4 ಲಕ್ಷ ಕೋಟಿ ರೂ ಅನ್ನು ರೈಲ್ವೆಗೆ ನೀಡಲಾಗಿದೆ. ಇದು ರೈಲ್ವೆ ಇಲಾಖೆ ತನ್ನ ಇತಿಹಾಸದಲ್ಲೇ ಸಿಕ್ಕಿದ ಗರಿಷ್ಠ ಮೊತ್ತವಾಗಿದೆ.

Railway Budget 2023: ಬಜೆಟ್​ನಲ್ಲಿ ರೈಲ್ವೆ ಇಲಾಖೆಗೆ 2.4 ಲಕ್ಷ ಕೋಟಿ ರೂ; ಇತಿಹಾಸದಲ್ಲೇ ಹೆಚ್ಚು
ರೈಲು

Updated on: Feb 01, 2023 | 3:04 PM

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್​ನಲ್ಲಿ (Union Budget 2023) ರೈಲ್ವೆ ಇಲಾಖೆಗೆ ಭರ್ಜರಿ ಕೊಡುಗೆ ನೀಡಿದ್ಧಾರೆ. 2.4 ಲಕ್ಷ ಕೋಟಿ ರೂ (2.4 Trillion Rs) ಅನ್ನು ರೈಲ್ವೆಗೆ ನೀಡಲಾಗಿದೆ. ಇದು ರೈಲ್ವೆ ಇಲಾಖೆ ತನ್ನ ಇತಿಹಾಸದಲ್ಲೇ ಸಿಕ್ಕಿದ ಗರಿಷ್ಠ ಮೊತ್ತವಾಗಿದೆ. ಬಜೆಟ್ ಮಂಡನೆ ವೇಳೆ ಈ ವಿಷಯ ತಿಳಿಸಿದ ನಿರ್ಮಲಾ ಸೀತಾರಾಮನ್, 2013-14ರ ಬಜೆಟ್​ನಲ್ಲಿ ಕೊಡಲಾಗಿದ್ದಕ್ಕಿಂತ 9 ಪಟ್ಟು ಹೆಚ್ಚು ಮೊತ್ತವನ್ನು ಈ ಬಾರಿ ಕೊಡಲಾಗಿದೆ ಎಂದಿದ್ದಾರೆ. ಪ್ರಾದೇಶಿಕ ಸಂಪರ್ಕತೆ (Regional Connectivity) ಮತ್ತು ಸರಕು ಸಾಗಣೆ ವ್ಯವಸ್ಥೆಯನ್ನು (Cargo) ಬಲಗೊಳಿಸಲು ಒತ್ತು ಕೊಡಲಾಗುತ್ತಿದೆ. ರೈಲ್ವೆಗೆ ಸಿಕ್ಕಿರುವ 2.4 ಲಕ್ಷ ರೂ ಹಣದಲ್ಲಿ 75 ಸಾವಿರ ಕೋಟಿ ರೂ ಹಣವನ್ನು ಸರಕು ಸಾಗಣೆ ವ್ಯವಸ್ಥೆ ಸುಧಾರಣೆಗೆ ಕೊಡಲಾಗಿದೆ. ಈ ಕ್ರಮದಿಂದ ರೈಲ್ವೆ ಇಲಾಖೆಗೆ ಆದಾಯ ಹೆಚ್ಚಳವಾಗುವ ನಿರೀಕ್ಷೆ ಇದೆ.

ಈ ಬಜೆಟ್​ನಲ್ಲಿ ವಂದೇ ಭಾರತ್ ರೈಲುಗಳ ಮೇಲೆ ಗಮನ ಕೊಡುವ ಸಾಧ್ಯತೆ ಇದೆ. ಈ ವರ್ಷದ ಆಗಸ್ಟ್ ತಿಂಗಳೊಳಗೆ 75 ವಂದೇ ಭಾರತ್ ರೈಲುಗಳನ್ನು ಹೊರಬಿಡಲು ರೈಲ್ವೆ ಇಲಾಖೆ ಯೋಜಿಸಿದೆ. ಈ ನಿಟ್ಟಿನಲ್ಲಿ ಬಜೆಟ್​ನಲ್ಲೂ ಇಲಾಖೆಗೆ ಉತ್ತೇಜನ ಸಿಕ್ಕಿದೆ.

ಇದನ್ನೂ ಓದಿ: Budget 2023: ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 5.93 ಲಕ್ಷ ಕೋಟಿ ರೂ ಘೋಷಣೆ, ಕಳೆದ ವರ್ಷಕ್ಕಿಂತ ಶೇ.13ರಷ್ಟು ಹೆಚ್ಚು

ಇನ್ನು, 200 ವಂದೇ ಭಾರತ್ ಸ್ಲೀಪರ್ ರೈಲುಗಳ ತಯಾರಿಕೆಗೆ ಶೀಘ್ರದಲ್ಲೇ ಟೆಂಡರ್ ನೀಡುವ ಸಾಧ್ಯತೆ ಇದೆ. ಶತಾಬ್ದಿ ಎಕ್ಸ್​ಪ್ರೆಸ್ ರೈಲುಗಳ ಜಾಗಕ್ಕೆ ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲುಗಳನ್ನು ತರಲಾಗುತ್ತಿದೆ. ಸದ್ಯಕ್ಕೆ ಇರುವ ವಂದೇ ಭಾರತ್ ಎಕ್ಸ್​ಪ್ರೆಸ್ ಟ್ರೈನುಗಳು ಚೇರ್ ಕಾರ್​ನದ್ದಾಗಿವೆ. ಈಗ ಸ್ಲೀಪರ್ ಬೋಗಿಗಳಿರುವ ರೈಲುಗಳು ರಾಜಧಾನಿ ಎಕ್ಸ್​ಪ್ರೆಸ್ ರೈಲುಗಳಿಗೆ ಬದಲಿಯಾಗಿ ಬರಲಿವೆ.

ವಂದೇ ಭಾರತ್ ರೈಲು ಯೋಜನೆ ಬಹಳ ಮಹತ್ವದ್ದೆಂದು ಸರ್ಕಾರ ಪರಿಗಣಿಸಿ ಹೆಚ್ಚು ಮುತುವರ್ಜಿ ತೋರುತ್ತಿದೆ. ನಿನ್ನೆ ಪ್ರಕಟವಾದ ಆರ್ಥಿಕ ಸಮೀಕ್ಷೆಯಲ್ಲೂ ವಂದೇ ಭಾರತ್ ರೈಲು ಯೋಜನೆಯನ್ನು ಶ್ಲಾಘಿಸಲಾಗಿದೆ. ಈ ರೈಲುಗಳು ಸಮರ್ಪಕ ಹಳಿಗಳ ಮೇಲೆ ಗಂಟೆಗೆ 160 ಕಿಮೀ ವೇಗದವರೆಗೂ ಓಡಬಲ್ಲುದು. ಈ ರೈಲಿನಲ್ಲಿ ಜಿಪಿಎಸ್ ಆಧಾರಿತ ಪ್ಯಾಸೆಂಜರ್ ಇನ್ಫಾರ್ಮೇಶನ್ ಸಿಸ್ಟಂ ಅಳವಡಿಕೆ ಸೇರಿದಂತೆ ಆಧುನಿಕ ತಂತ್ರಜ್ಞಾನ ಮತ್ತು ಸೌಕರ್ಯಗಳು ಇವೆ.

Published On - 12:14 pm, Wed, 1 February 23

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us