AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೀನ್ಯಾ ಏರ್​ಪೋರ್ಟ್ ವಶಕ್ಕೆ ತೆಗೆದುಕೊಳ್ಳುವ ಅದಾನಿ ಪ್ರಯತ್ನಕ್ಕೆ ಕೀನ್ಯಾ ಕೋರ್ಟ್ ತಡೆ

Kenyan court temporarily blocks Adani takeover of Nairobi airport: ಕೀನ್ಯಾ ರಾಜಧಾನಿ ನೈರೋಬಿಯ ಅತಿದೊಡ್ಡ ಏರ್ಪೋರ್ಟ್ ಆದ ಜೋಮೋ ಕೀನ್ಯಾಟ್ಟವನ್ನು ಲೀಸ್​ಗೆ ಪಡೆಯುವ ಅದಾನಿ ಕಂಪನಿಯ ಪ್ರಯತ್ನಕ್ಕೆ ಅಲ್ಲಿನ ಕೋರ್ಟ್ ತಡೆ ನೀಡಿದೆ. ಜನರು ಮತ್ತು ಕಾರ್ಮಿಕ ಸಂಘಟನೆಗಳ ಪ್ರತಿಭಟನೆಗಳ ನಡುವೆ ಕೀನ್ಯಾ ನ್ಯಾಯಾಲಯ ತಾತ್ಕಾಲಿಕವಾಗಿ ತಡೆ ನೀಡಿದೆ.

ಕೀನ್ಯಾ ಏರ್​ಪೋರ್ಟ್ ವಶಕ್ಕೆ ತೆಗೆದುಕೊಳ್ಳುವ ಅದಾನಿ ಪ್ರಯತ್ನಕ್ಕೆ ಕೀನ್ಯಾ ಕೋರ್ಟ್ ತಡೆ
ಅದಾನಿ ಗ್ರೂಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 10, 2024 | 6:39 PM

Share

ನೈರೋಬಿ, ಸೆಪ್ಟೆಂಬರ್ 10: ಕೀನ್ಯಾದಲ್ಲಿ ಅದಾನಿ ಕಂಪನಿ ವಿರುದ್ಧ ಪ್ರತಿಭಟನೆಗಳು ಮುಂದುವರಿಯುತ್ತಿರುವ ಹೊತ್ತಲ್ಲಿ ಭಾರತದ ಕಂಪನಿಗೆ ನ್ಯಾಯಾಲಯ ಕೂಡ ಮುಳುವಾಗಿದೆ. ಕೀನ್ಯಾ ದೇಶದ ರಾಜಧಾನಿ ನೈರೋಬಿ ನಗರದ ಜೋಮೋ ಕೀನ್ಯಾಟ್ಟ ಇಂಟರ್ನ್ಯಾಷನಲ್ ಏರ್ಪೋರ್ಟ್ ಅನ್ನು ಅದಾನಿ ಗ್ರೂಪ್​ನ ಸುಪರ್ದಿಗೆ ಒಪ್ಪಿಸುವ ನಿರ್ಧಾರಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

ಕೀನ್ಯಾದ ಅತಿದೊಡ್ಡ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಅದಾನಿ ಗ್ರೂಪ್ ಜೊತೆ ಅಲ್ಲಿನ ಸರ್ಕಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. 30 ವರ್ಷ ಕಾಲ ಲೀಸ್​ಗೆ ನೀಡುವ ಪ್ರಸ್ತಾಪ ಇದೆ. ಈ 30 ವರ್ಷದಲ್ಲಿ ಏರ್ಪೋರ್ಟ್ ಅನ್ನು ಅದಾನಿ ಗ್ರೂಪ್​ನ ಕಂಪನಿಯೇ ನಿರ್ವಹಣೆ ಮಾಡಲಿದೆ. ಏರ್​ಪೋರ್ಟ್ ಅಭಿವೃದ್ಧಿಪಡಿಸುವುದು ಅದರ ಜವಾಬ್ದಾರಿ, ಹಾಗೆಯೇ, ಆದಾಯದಲ್ಲಿ ಪಾಲು ಪಡೆಯಬಹುದು.

ಇದನ್ನೂ ಓದಿ: ವಿಶ್ವದ ಮೊದಲ ಬಿಲಿಯನೇರ್ ಜಾನ್ ರಾಕೆಫೆಲ್ಲರ್; ಯಾರಾಗ್ತಾರೆ ಮೊದಲ ಟ್ರಿಲಿಯನೇರ್? ಮಸ್ಕ್ vs ಅದಾನಿ

ಆದರೆ, ಅದಾನಿ ಗ್ರೂಪ್​ಗೆ ನೈರೋಬಿ ಏರ್ಪೋರ್ಟನ್ನು ಕೊಡುವ ಪ್ರಸ್ತಾಪಕ್ಕೆ ಅಲ್ಲಿನ ಜನರನ್ನು ಆಕ್ರೋಶಗೊಳಿಲಿದೆ. ಜನರ ಪ್ರತಿಭಟನೆಗಳು ಬುಗಿಲೆದ್ದಿವೆ. ಕೀನ್ಯಾ ಏವಿಯೇಶನ್ ಕಾರ್ಮಿಕರ ಒಕ್ಕೂಟವೂ ಕೂಡ ಇದನ್ನು ವಿರೋಧಿಸಿದೆ.

ಅದಾನಿಗೆ ಏರ್ಪೋರ್ಟ್ ಒಪ್ಪಿಸಲು ಯಾಕೆ ವಿರೋಧ?

ವಿದೇಶೀ ಕಂಪನಿಗೆ ಏರ್ಪೋರ್ಟ್ ನಿರ್ವಹಣೆ ಒಪ್ಪಿಸುತ್ತಿರುವುದು ಒಂದು ಕಾರಣ. ಹಾಗೆಯೇ, ವಿದೇಶೀ ಕಂಪನಿಗೆ ಏರ್ಪೋರ್ಟ್ ನಿರ್ವಹಣೆ ಸಿಕ್ಕರೆ ಸ್ಥಳೀಯರಿಗೆ ಕೆಲಸ ಸಿಗುವುದಿಲ್ಲ. ವಿದೇಶೀ ಕೆಲಸಗಾರರನ್ನು ಕರೆತರಲಾಗುತ್ತದೆ ಎನ್ನುವುದು ಎರಡನೇ ಕಾರಣ.

ಇದನ್ನೂ ಓದಿ: ವಿದೇಶಗಳಿಗೆ ಹೋಗಲಿವೆ ಮಾರುತಿ ಸುಜುಕಿಯ ಎಲೆಕ್ಟ್ರಿಕ್ ಕಾರುಗಳು; ಬಯೋಫುಯಲ್, ಹೈಡ್ರೋಜನ್ ಕಾರುಗಳ ತಯಾರಿಕೆಗೂ ಆಲೋಚನೆ

ಕೀನ್ಯಾ ಸರ್ಕಾರ ಹೇಳೋದೇನು?

ಏರ್ಪೋರ್ಟ್ ಅನ್ನು ಮಾರಾಟ ಮಾಡುತ್ತಿಲ್ಲ. ಪಬ್ಲಿಕ್ ಪ್ರೈವೇಟ್ ಪಾಲುದಾರಿಕೆಯಲ್ಲಿ ಏರ್ಪೋರ್ಟ್ ಅನ್ನು ಅಭಿವೃದ್ಧಿಪಡಿಸಬೇಕೆಂಬುದು ಉದ್ದೇಶ. ಅದಾನಿ ಏರ್​ಪೋರ್ಟ್ ಹೋಲ್ಡಿಂಗ್ಸ್ ಕಂಪನಿ ಜೊತೆಗಿನ ಡೀಲ್ ಇನ್ನೂ ಅಂತಿಮಗೊಂಡಿಲ್ಲ ಎಂದು ಕೀನ್ಯಾ ಸರ್ಕಾರ ಹೇಳುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ