AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದಾನಿ ಗ್ರೂಪ್ ಷೇರುಸಂಪತ್ತು ಒಂದೇ ದಿನದಲ್ಲಿ 1 ಲಕ್ಷ ಕೋಟಿ ರೂನಷ್ಟು ಹೆಚ್ಚಳ; ಹಿಂಡನ್ಬರ್ಗ್ ಘಟನೆ ಬಳಿಕ ಇಂಥದ್ದು ಇದೇ ಮೊದಲು

Adani Group Stocks Record Gain: ಅದಾನಿ ಗ್ರೂಪ್​ನ ವಿವಿಧ ಕಂಪನಿಗಳ ಷೇರುಗಳು ನವೆಂಬರ್ 28ರಂದು ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ. ಒಂದೇ ದಿನದಲ್ಲಿ ಅದರ ಮಾರ್ಕೆಟ್ ಕ್ಯಾಪಿಟಲ್ ಅಥವಾ ಷೇರುಸಂಪತ್ತು 1 ಲಕ್ಷ ಕೋಟಿ ರೂನಷ್ಟು ಹೆಚ್ಚಾಗಿದೆ. ಅದಾನಿ ಟೋಟಲ್ ಗ್ಯಾಸ್​ನ ಷೇರುಬೆಲೆ ಅತಿಹೆಚ್ಚಳ ಕಂಡಿದೆ. ಅದಾನಿ ಎಂಟರ್​ಪ್ರೈಸಸ್​ನಿಂದ ಹಿಡಿದು ಎನ್​ಡಿಟಿವಿವರೆಗೆ ಎಲ್ಲಾ ಅದಾನಿ ಕಂಪನಿಗಳೂ ಹಸಿರುಬಣ್ಣದಲ್ಲಿ ಅಂತ್ಯಗೊಂಡಿದ್ದವು.

ಅದಾನಿ ಗ್ರೂಪ್ ಷೇರುಸಂಪತ್ತು ಒಂದೇ ದಿನದಲ್ಲಿ 1 ಲಕ್ಷ ಕೋಟಿ ರೂನಷ್ಟು ಹೆಚ್ಚಳ; ಹಿಂಡನ್ಬರ್ಗ್ ಘಟನೆ ಬಳಿಕ ಇಂಥದ್ದು ಇದೇ ಮೊದಲು
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 28, 2023 | 7:00 PM

Share

ನವದೆಹಲಿ, ನವೆಂಬರ್ 28: ಅದಾನಿ ಹಿಂಡನ್ಬರ್ಗ್ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್​ನಲ್ಲಿ ಇತ್ತೀಚೆಗೆ ನಡೆದ ವಿಚಾರಣೆ ಬಳಿಕ ಅದಾನಿ ಗ್ರೂಪ್ (Adani Group) ನಿರಾಳಗೊಂಡಿದೆ. ಅದರ ವಿವಿಧ ಕಂಪನಿಗಳ ಷೇರುಗಳಿಗೆ ಮತ್ತೆ ಬೇಡಿಕೆ ಹೆಚ್ಚತೊಡಗಿದೆ. ಒಂದೇ ದಿನ ಅದರ ಎಲ್ಲಾ ಷೇರುಸಂಪತ್ತು (Market Capitalisation) 1 ಲಕ್ಷ ಕೋಟಿ ರೂನಷ್ಟು ಏರಿದೆ. ಇಂದು ನವೆಂಬರ್ 28, ಮಂಗಳವಾರದಂದು ಅದಾನಿ ಗ್ರೂಪ್​ನ ಬಹುತೇಕ ಎಲ್ಲಾ ಕಂಪನಿ ಷೇರು ಏರುಗತಿ ಪಡೆದಿದ್ದವು. ನ. 28ರಂದು ಷೇರುಪೇಟೆ ವ್ಯವಹಾರ ಅಂತ್ಯಗೊಂಡಾಗ ಅದಾನಿ ಗ್ರೂಪ್ ಷೇರುಗಳ ಒಟ್ಟು ಮೊತ್ತ 11.31 ಲಕ್ಷ ಕೋಟಿ ರೂ ಆಗಿತ್ತು. ಹಿಂದಿನ ದಿನ, ಅಂದರೆ ನವೆಂಬರ್ 27ರಂದು ಷೇರುಸಂಪತ್ತು 10.27 ಲಕ್ಷಕೋಟಿ ರೂ ಇತ್ತು. ಒಂದೇ ದಿನದಲ್ಲಿ 1.04 ಲಕ್ಷ ಕೋಟಿ ರೂ ಹೆಚ್ಚಳವಾಗಿದೆ.

ಅದಾನಿ ಗ್ರೂಪ್ ಕಂಪನಿಗಳ ಷೇರುಬೆಲೆ ನ. 28ರಂದು ಏರಿಕೆ ಆಗಿದ್ದು ಎಷ್ಟು?

  • ಅದಾನಿ ಟೋಟಲ್ ಗ್ಯಾಸ್: ಶೇ. 20ರಷ್ಟು ಹೆಚ್ಚಳ
  • ಅದಾನಿ ಪವರ್: ಶೇ. 12.32ರಷ್ಟು ಹೆಚ್ಚಳ
  • ಅದಾನಿ ಗ್ರೀನ್ ಎನರ್ಜಿ: 12.27ರಷ್ಟು ಹೆಚ್ಚಳ
  • ಅದಾನಿ ವಿಲ್ಮರ್: ಶೇ. 9.96ರಷ್ಟು ಹೆಚ್ಚಳ
  • ಅದಾನಿ ಎಂಟರ್​ಪ್ರೈಸಸ್: ಶೇ. 8.66ರಷ್ಟು ಹೆಚ್ಚಳ
  • ಅದಾನಿ ಪೋರ್ಟ್ಸ್: ಶೇ. 5.20ಯಷ್ಟು ಹೆಚ್ಚಳ

ಅದಾನಿ ಮಾಲಕತ್ವದ ಇತರ ಕಂಪನಿಗಳ ಷೇರುಗಳು ಏರಿದ್ದು:

  • ಎನ್​ಡಿಟಿವಿ: ಶೇ. 11.73ರಷ್ಟು ಹೆಚ್ಚಳ
  • ಅಂಬುಜಾ ಸಿಮೆಂಟ್ಸ್: ಶೇ. 4.22ರಷ್ಟು ಹೆಚ್ಚಳ
  • ಎಸಿಸಿ ಸಿಮೆಂಟ್ಸ್: ಶೇ. 2.62ರಷ್ಟು ಹೆಚ್ಚಳ

ಇದನ್ನೂ ಓದಿ: ಅದಾನಿ-ಹಿಂಡನ್ಬರ್ಗ್ ರಿಪೋರ್ಟ್, ಚೀನಾ ಬೆಂಬಲಿಗರ ಕರ್ಮಕಾಂಡ: ರಾಜ್ಯಸಭಾ ಸಂಸದ ಮಹೇಶ್ ಜೇಠ್ಮಲಾನಿ ಅರೋಪ

ಹಿಂಡನ್ಬರ್ಗ್ ರಿಸರ್ಚ್ ವರದಿಯಿಂದ ತತ್ತರಿಸಿದ್ದ ಅದಾನಿ ಗ್ರೂಪ್

ಇದೇ ಜನವರಿ ತಿಂಗಳಲ್ಲಿ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಸ್ಪೋಟಕ ವರದಿ ಬಿಡುಗಡೆ ಮಾಡಿತ್ತು. ಅದಾನಿ ಗ್ರೂಪ್​ನಿಂದ ಷೇರುಬೆಲೆ ಕೃತಕವಾಗಿ ಉಬ್ಬುವ ರೀತಿಯಲ್ಲಿ ಅಕ್ರಮಗಳಾಗಿವೆ ಎಂಬುದು ಸೇರಿದಂತೆ ಹಲವು ಗುರುತರ ಆರೋಪಗಳನ್ನು ಹಿಂಡನ್ಬರ್ಗ್ ವರದಿಯಲ್ಲಿ ಮಾಡಲಾಗಿತ್ತು. ಅದಾದ ಬಳಿಕ ಅದಾನಿ ಗ್ರೂಪ್​ನ ಎಲ್ಲಾ ಕಂಪನಿಗಳ ಷೇರುಬೆಲೆ ಬಹುತೇಕ ನೆಲಕಚ್ಚಿತ್ತು. ಹೂಡಿಕೆದಾರರ ಲಕ್ಷಾಂತರ ಕೋಟಿ ರೂ ಹಣ ನಷ್ಟವಾಗಿತ್ತು. ಗೌತಮ್ ಅದಾನಿ ಷೇರುಸಂಪತ್ತೂ ಸಾಕಷ್ಟು ಕರಗಿತ್ತು.

ಹಿಂಡನ್ಬರ್ಗ್ ರಿಸರ್ಚ್​ ವರದಿಯಲ್ಲಿರುವ ಅಂಶಗಳನ್ನು ಸುಪ್ರೀಂಕೋರ್ಟ್ ಅಣತಿಯಂತೆ ಸೆಬಿ ತನಿಖೆ ನಡೆಸುತ್ತಿದೆ. ಗಡುವು ಮುಗಿದಿದ್ದರೂ ಸೆಬಿ ತನಿಖೆ ಮುಗಿದಿಲ್ಲ. 24 ಅಂಶಗಳನ್ನು ಸೆಬಿ ತನಿಖೆ ಮಾಡುತ್ತಿದೆ. ಇದರಲ್ಲಿ 22 ಪ್ರಕರಣಗಳ ತನಿಖೆ ಮುಗಿದಿದೆ. ಇನ್ನೆರಡು ಬಾಕಿ ಇದೆ. ಶೀಘ್ರದಲ್ಲೇ ತನಿಖೆ ಮುಗಿಸಿ ವರದಿ ಕೊಡುವುದಾಗಿ ಹೇಳಿದೆ.

ಇದನ್ನೂ ಓದಿ: Supreme Court: ಹಿಂಡನ್ಬರ್ಗ್ ವರದಿಯೇ ಸತ್ಯ ಅಲ್ಲ, ಸೆಬಿ ತನಿಖೆ ಮುಗಿಯಲಿ: ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್; ಅದಾನಿ ಕಂಪನಿ ನಿರಾಳ

ಇನ್ನು, ಕಳೆದ ವಾರ ನಡೆದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ಪೀಠದ ನ್ಯಾಯಮೂರ್ತಿಗಳು ವ್ಯಕ್ತಪಡಿಸಿದ್ದ ಅಭಿಪ್ರಾಯಗಳು ಅದಾನಿ ಗ್ರೂಪ್​ಗೆ ನಿರಾಳತೆ ತಂದಿವೆ. ಹಿಂಡನ್ಬರ್ಗ್ ರಿಸರ್ಚ್​ನಂತಹ ಸಂಸ್ಥೆ ತಿಳಿಸಿದ ಅಂಶಗಳೇ ಪರಮಸತ್ಯವಲ್ಲ ಎಂಬರ್ಥದಲ್ಲಿ ಹೇಳಿದ್ದು ಅದಾನಿ ಗ್ರೂಪ್ ಪರವಾಗಿ ಕೋರ್ಟ್ ತೀರ್ಪು ಕೊಡಬಹುದು ಎಂಬಂತಹ ಸುದ್ದಿ ದಟ್ಟವಾಗಿ ಹರಿದಾಡುತ್ತಿದೆ. ಪರಿಣಾಮವಾಗಿ, ಅದಾನಿ ಗ್ರೂಪ್ ಷೇರುಗಳನ್ನು ಖರೀದಿಸಲು ಹೂಡಿಕೆದಾರರು ಮುಂದಾಗುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:56 pm, Tue, 28 November 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ