Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲೇಜ್ ಕ್ಯಾಂಟೀನ್​ನಲ್ಲಿ ಮುಸುರೆ ತಿಕ್ಕುತ್ತಿದ್ದ ಬೆಂಗಳೂರು ಹುಡುಗ ಸಂಜಿತ್​​ ಈಗ ಆಸ್ಟ್ರೇಲಿಯಾದಲ್ಲಿ ಫೇಮಸ್ ಚಾಯ್​​ವಾಲಾ

Journey of Dropout Chaiwala founder Sanjith Koda: 18ನೇ ವಯಸ್ಸಿನಲ್ಲಿ ಬೆಂಗಳೂರಿನಿಂದ ಆಸ್ಟ್ರೇಲಿಯಾಗೆ ಹೋಗಿ ಅಲ್ಲಿ ಓದನ್ನು ಅರ್ಧಕ್ಕೆ ಬಿಟ್ಟು ಚಾ ಅಂಗಡಿ ಇಟ್ಟು ಸಕ್ಸಸ್ ಕಂಡಿದ್ದಾರೆ ಬೆಂಗಳೂರು ಹಡುಗ. ಸಂಜಿತ್ ಕೊಂಡ ಆಸ್ಟ್ರೇಲಿಯಾದಲ್ಲಿ ಓದುವಾಗ ಕಾಲೇಜು ಕ್ಯಾಂಟೀನ್​​ನಲ್ಲಿ ಪಾತ್ರೆ ತೊಳೆಯುತ್ತಿದ್ದರು. ಪೆಟ್​ರೋಲ್ ಬಂಕ್​​​ನಲ್ಲಿ ಕೆಲಸ ಮಾಡುತ್ತಿದ್ದರು. ಕೊನೆಗೆ ಓದಿಗೆ ತಿಲಾಂಜಲಿ ಆಡಿ ಸ್ನೇಹಿತರ ಜೊತೆಗೂಡಿ ಡ್ರಾಪ್​​ಔಟ್ ಚಾಯ್​​ವಾಲ ಹೆಸರಿನ ಟೀ ಅಂಗಡಿ ಇಟ್ಟರು.

ಕಾಲೇಜ್ ಕ್ಯಾಂಟೀನ್​ನಲ್ಲಿ ಮುಸುರೆ ತಿಕ್ಕುತ್ತಿದ್ದ ಬೆಂಗಳೂರು ಹುಡುಗ ಸಂಜಿತ್​​ ಈಗ ಆಸ್ಟ್ರೇಲಿಯಾದಲ್ಲಿ ಫೇಮಸ್ ಚಾಯ್​​ವಾಲಾ
ಸಂಜಿತ್ ಕೊಂಡ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 28, 2025 | 12:51 PM

ಕೆಲವು ಜನರ ಜೀವನವೇ ಅಸಂಖ್ಯ ಪಾಠಗಳನ್ನು ಕಲಿಸುತ್ತದೆ. ಇದಕ್ಕೆ ಒಂದು ನಿದರ್ಶನ ಬೆಂಗಳೂರು ಹುಡುಗ ಸಂಜಿತ್ ಕೊಂಡ. ಆಸ್ಟ್ರೇಲಿಯಾ ದೇಶದಲ್ಲಿ ‘ಡ್ರಾಪ್​ಔಟ್ ಚಾಯ್​​ವಾಲಾ’ (Dropout Chaiwala) ಎನ್ನುವ ಜನಪ್ರಿಯ ಬ್ರ್ಯಾಂಡ್ ನಿರ್ಮಿಸಿರುವ 22 ವರ್ಷದ ಸಂಜಿತ್ ಕೊಂಡ (Sanjith Konda), ಒಂದು ಕಾಲದಲ್ಲಿ ಯೂನಿವರ್ಸಿಟಿ ಕ್ಯಾಂಟೀನ್​​ನಲ್ಲಿ ಪಾತ್ರೆ ತೊಳೆದು ಜೀವನ ನಡೆಸುತ್ತಿದ್ದಂತಹ ವ್ಯಕ್ತಿ. ಇವರ ಡ್ರಾಪ್​​ಔಟ್ ಚಾಯ್​ವಾಲಾ ಬ್ರ್ಯಾಂಡು ಏಷ್ಯಾದ ಟಾಪ್ 100 ಬಿಸಿನೆಸ್ ಅವಾರ್ಡ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾದಲ್ಲಿ 2022 ಮತ್ತು 2024ರಲ್ಲಿ ಎರಡು ವರ್ಷ ಬೆಸ್ಟ್ ಚಾಯ್ ಅವಾರ್ಡ್ ಪಡೆದಿದೆ.

ಕಾಲೇಜ್ ಡ್ರಾಪ್​​ಔಟ್ ಆದ ಬೆಂಗಳೂರು ಹುಡುಗ ಸಂಜಿತ್ ಕೊಂಡ

ಸಂಜಿತ್ ಕೊಂಡ ಅವರು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವರು. ಬೆಂಗಳೂರಿನ ಸಿಟಿ ಪಿಯು ಕಾಲೇಜಿನಲ್ಲಿ ಓದಿದ ಹುಡುಗ. ಇವರ ತಂದೆ ಅರಬ್ ನಾಡಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರ್. ಇವರ ತಾಯಿ ಗೃಹಿಣಿ. ಚಿಕ್ಕ ವಯಸ್ಸಿನಿಂದಲೇ ಸ್ವಂತ ಕಾಲ ಮೇಲೆ ನಿಲ್ಲುವ ಸ್ವಭಾವ ಬೆಳೆಸಿಕೊಂಡವರು ಸಂಜಿತ್ ಕೊಂಡ.

ಇದನ್ನೂ ಓದಿ: ಇಲಾನ್ಸ್ ಮಸ್ಕ್​ಗೆ ನೀರಿಳಿಸಿದ್ದ ಬಿವೈಡಿ ಕಂಪನಿ ಭಾರತಕ್ಕೆ ಬರಲು ಸಜ್ಜು; ಹೈದರಾಬಾದ್​​ನಲ್ಲಿ ಫ್ಯಾಕ್ಟರಿ ಸ್ಥಾಪನೆ ಸಾಧ್ಯತೆ

18ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾಗೆ ಹೋಗಿ ಮೆಲ್ಬೋರ್ನ್ ಲಾ ಟ್ರೋಬೆ ಯೂನಿವರ್ಸಿಟಿಯಲ್ಲಿ ಬ್ಯುನಿಸೆಸ್ ಸ್ಟಡೀಸ್​​ನಲ್ಲಿ ಪದವಿ ಕೋರ್ಸ್ ಸೇರಿದರು. ಓದುತ್ತಾ ಓದುತ್ತಾ ಅವರು ಪಾರ್ಟ್ ಟೈಮ್ ಕೆಲಸಗಳನ್ನೂ ಮಾಡುತ್ತಿದ್ದರು. ಕಾಲೇಜು ಫೀಸ್ ಅನ್ನು ಅಪ್ಪ ಕಟ್ಟುತ್ತಿದ್ದರೂ ಸಂಜಿತ್ ಅವರಿಗೆ ಸ್ವಂತವಾಗಿ ಹಣ ಸಂಪಾದಿಸುವ ಹಂಬಲ ಇತ್ತು. ಅಂತೆಯೇ, ಯೂನಿವರ್ಸಿಟಿಯ ಕ್ಯಾಂಟೀನ್​​ನಲ್ಲಿ ಮುಸುರೆ ತಿಕ್ಕುವ ಕೆಲಸ ಮಾಡಿದರು. ಸಮೀಪದ ಪೆಟ್ರೋಲ್ ಬಂಕ್​​ನಲ್ಲಿ ಕೆಲಸ ಮಾಡಿದರು. ಅಲ್ಲಿ ವಾರಕ್ಕೆ 600 ಆಸ್ಟ್ರೇಲಿಯನ್ ಡಾಲರ್ ಹಣ ಸಿಗುತ್ತಿತ್ತು. ಇವೆಲ್ಲಾ ಚಿಲ್ಲರೆ ಪಲ್ಲರೆ ಕೆಲಸ ಅಂತ ಸಂಜಿತ್ ಮನಸ್ಸಿಗೆ ಅನಿಸಲಿಲ್ಲ. ತಾನು ಮಾಡಿದ ಪ್ರತಿಯೊಂದು ಕೆಲಸದಲ್ಲೂ ಪಾಠ ಕಲಿಯುತ್ತಾ ಹೋದರು. ಜೊತೆಗೆ ಓದೂ ಮುಂದುವರಿದಿತ್ತು.

ಓದು ಸಾಕು, ಚಹಾ ಹಾಕು..

ಐದನೇ ಸೆಮಿಸ್ಟರ್​​ಗೆ ಬರುವಷ್ಟರಲ್ಲಿ ಸಂಜಿತ್ ಅವರಿಗೆ ತಾನು ಈ ಓದಿಗೆ ಹೇಳಿ ಮಾಡಿಸಿದವನಲ್ಲ ಎಂಬುದು ಅರಿವಿಗೆ ಬಂದಿತ್ತು. ಅಷ್ಟರಲ್ಲಾಗಲೇ ಅವರಿಗೆ ಸ್ವಂತ ಬ್ಯುಸಿನೆಸ್ ಮಾಡುವ ಐಡಿಯಾ ಬಂದಾಗಿತ್ತು. ಇವರು ತಮ್ಮ ನೆಚ್ಚಿನ ಪಾನೀಯವಾಗಿದ್ದ ಚಹಾದ ಬ್ಯುಸಿನೆಸ್ ಶುರು ಮಾಡಿದರು.

ಇದನ್ನೂ ಓದಿ: ಸರ್ಕಾರದಿಂದ ದೇಶಾದ್ಯಂತ ಸಹಕಾರಿ ಟ್ಯಾಕ್ಸಿ ಸೇವೆ? ಕ್ಯಾಬ್ ಚಾಲಕರಿಗೆ ಹೆಚ್ಚಲಿದೆ ಆದಾಯ

ತಮ್ಮ ಮೂವರು ಸ್ನೇಹಿತರಾದ ಪ್ರೀತಮ್ ಅಕುಲಾ, ಅಸರ್ ಅಹ್ಮದ್ ಸಯದ್ ಮತ್ತು ಅರುಣ್ ಪಿ ಸಿಂಗ್ ಅವರ ಜೊತೆ ಸೇರಿ ಮೆಲ್ಬೋರ್ನ್​​ನಲ್ಲೇ ಡ್ರಾಪ್​​ಔಟ್ ಚಾಯ್​​ವಾಲ ಎನ್ನುವ ಟೀ ಅಂಗಡಿ ಸ್ಥಾಪಿಸಿದರು. ಅದು 2021ರಲ್ಲಿ ಶುರುವಾಗಿದ್ದು. ವಿಭಿನ್ನ ಹೆಸರು, ವಿಭಿನ್ನ ಧೋರಣೆ, ಉತ್ತಮ ರುಚಿ, ಇವು ಡ್ರಾಪ್​​ಔಟ್ ಚಾಯ್​​ವಾಲಾ ಕಂಪನಿ ಬಹಳ ಬೇಗ ಜನಪ್ರಿಯವಾಯಿತು.

ಓದೊಂದೇ ದಾರಿಯಲ್ಲ, ಅಂದುಕೊಂಡಿದ್ದನ್ನು ಸಾಧಿಸುವ ಛಲ ಇದ್ದರೆ ಏನಾದರೂ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಇನ್ನೂ 22 ವರ್ಷದ ಹರೆಯದ ಯುವಕ ಸಂಜಿತ್ ಕೊಂಡ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್