AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Land Price: ದುಬಾರಿ ಬೆಂಗಳೂರು; ಸರಾಸರಿ ಬೆಲೆ ಚದರಡಿಗೆ 5,900 ರೂ; ಏಷ್ಯಾ ಪೆಸಿಫಿಕ್ ನಗರಗಳಲ್ಲಿ ಬೆಂಗಳೂರಿಗೆ 8ನೇ ಸ್ಥಾನ

Annual Housing Price Growth Index: ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಕಂಪನಿ ನೈಟ್ ಫ್ರಾಂಕ್ ಏಷ್ಯಾ ಪೆಸಿಫಿಕ್ ವಾರ್ಷಿಕ ವಸತಿ ಬೆಲೆ ಹೆಚ್ಚಳ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ. ಏಷ್ಯಾ ಪೆಸಿಫಿಕ್ ಪ್ರದೇಶದ ಆಯ್ದ 25 ನಗರಗಳ ಪೈಕಿ ಅತಿ ದುಬಾರಿ ರಿಯಲ್ ಎಸ್ಟೇಟ್ ಮಾರುಕಟ್ಟೆಗಳಲ್ಲಿ ಬೆಂಗಳೂರು ಒಂದು. ನೈಟ್ ಫ್ರ್ಯಾಂಕ್​ನ ಈ ಸೂಚ್ಯಂಕದಲ್ಲಿ ಟಾಪ್-10ನಲ್ಲಿ ಬೆಂಗಳೂರು ಮತ್ತು ಮುಂಬೈ ಇವೆ. ದೆಹಲಿ 11ನೇ ಸ್ಥಾನದಲ್ಲಿದೆ.

Bengaluru Land Price: ದುಬಾರಿ ಬೆಂಗಳೂರು; ಸರಾಸರಿ ಬೆಲೆ ಚದರಡಿಗೆ 5,900 ರೂ; ಏಷ್ಯಾ ಪೆಸಿಫಿಕ್ ನಗರಗಳಲ್ಲಿ ಬೆಂಗಳೂರಿಗೆ 8ನೇ ಸ್ಥಾನ
ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 07, 2024 | 11:24 AM

Share

ಬೆಂಗಳೂರು, ಫೆಬ್ರುವರಿ 7: ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಗಣನೀಯ ಬೆಳವಣಿಗೆ ಮುಂದುವರಿಯುತ್ತಿದೆ. ಕಳೆದ ವರ್ಷದ ದ್ವಿತೀಯಾರ್ಧದಲ್ಲಿ ಬೆಂಗಳೂರಿನಲ್ಲಿ ವಸತಿ ಮಾರುಕಟ್ಟೆ (residential market) ಬೆಲೆ ಶೇ. 7.1ರಷ್ಟು ಹೆಚ್ಚಾಗಿದೆ ಎಂದು ಅಂತಾರಾಷ್ಟ್ರೀಯ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಕಂಪನಿಯಾದ ನೈಟ್ ಫ್ರ್ಯಾಂಕ್ (Knight frank) ತನ್ನ ವರದಿಯಲ್ಲಿ ತಿಳಿಸಿದೆ. ಇದು ಸಿದ್ಧಪಡಿಸಿದ ವಾರ್ಷಿಕ ವಸತಿ ಬೆಲೆ ಹೆಚ್ಚಳ ಸೂಚ್ಯಂಕದ (Annual Housing Price Growth Index) ಪ್ರಕಾರ ಏಷ್ಯಾ ಪೆಸಿಫಿಕ್​ನ ವಸತಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೆಲೆ ಹೆಚ್ಚಳ ಕಂಡ ನಗರಗಳ ಪೈಕಿ ಬೆಂಗಳೂರು ಎಂಟನೇ ಸ್ಥಾನದಲ್ಲಿದೆ.

ನೈಟ್ ಫ್ರ್ಯಾಂಕ್​ನ ಈ ವರದಿಯಲ್ಲಿ ಏಷ್ಯಾ ಪೆಸಿಫಿಕ್ ಪ್ರದೇಶದ 25 ನಗರಗಳನ್ನು ಅಧ್ಯಯನಕ್ಕೆ ಆಯ್ದುಕೊಳ್ಳಲಾಗಿದೆ. ಈ ಪೈಕಿ 21 ನಗರಗಳಲ್ಲಿ ವಸತಿ ಬೆಲೆ ಹೆಚ್ಚಳವಾಗಿದೆ. ಸಿಂಗಾಪುರ ಶೇ. 13.7ರಷ್ಟು ಬೆಲೆ ಹೆಚ್ಚಳ ಕಂಡು ನಂಬರ್ ಒನ್ ಸ್ಥಾನ ಪಡೆದಿದೆ.

ಬೆಂಗಳೂರು, ಮುಂಬೈ ಮತ್ತು ದೆಹಲಿ ನಗರಗಳು ಟಾಪ್ 15ನಲ್ಲಿವೆ. ಬೆಂಗಳೂರು ಮತ್ತು ಮುಂಬೈ ಟಾಪ್-10ನಲ್ಲಿವೆ. ಬೆಂಗಳೂರು ಎಂಟನೇ ಸ್ಥಾನ, ಮುಂಬೈ ಒಂಬತ್ತನೇ ಸ್ಥಾನ ಹಾಗೂ ದೆಹಲಿ ಎನ್​ಸಿಆರ್ ಹನ್ನೊಂದನೆ ಸ್ಥಾನ ಪಡೆದಿವೆ.

ಇದನ್ನೂ ಓದಿ: ಮುಂದಿನ 5-6 ವರ್ಷಗಳಲ್ಲಿ ಇಂಧನ ವಲಯದಲ್ಲಿ ಭಾರತ ₹ 5.5 ಲಕ್ಷ ಕೋಟಿ ಹೂಡಿಕೆ ಮಾಡಲಿದೆ: ಮೋದಿ

2023ರ ವರ್ಷದಲ್ಲಿ ಭಾರತದಲ್ಲಿ ಆಗಿರುವ ಒಟ್ಟಾರೆ ವಸತಿ ಮಾರಾಟದಲ್ಲಿ ಈ ಮೂರು ನಗರಗಳ ಪಾಲು ಶೇ. 60ರಷ್ಟು ಇದೆ ಎಂದು ನೈಟ್ ಫ್ರ್ಯಾಂಕ್ ವರದಿ ಹೆಳುತ್ತಿದೆ.

ಬೆಂಗಳೂರಿನಲ್ಲಿ ಹೊರವಲಯದಲ್ಲಿ ಹೆಚ್ಚು ಪ್ರಾಪರ್ಟಿ ಸೇಲ್

ಬೆಂಗಳೂರಿನಲ್ಲಿ ನಗರದ ಹೊರವಲಯದ ಪ್ರದೇಶಗಳಲ್ಲಿ ಹೆಚ್ಚು ಪ್ರಾಪರ್ಟಿ ಯೋಜನೆಗಳಾಗುತ್ತಿವೆ. 2023ರ ಜುಲೈನಿಂದ ಡಿಸೆಂಬರ್​ವರೆಗಿನ ದ್ವಿತೀಯಾರ್ಧ ಭಾಗದಲ್ಲಿ 27,799 ಯೂನಿಟ್​ಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 24ರಷ್ಟು ಹೆಚ್ಚಾಗಿದೆ. ಹೊರವಲಯದಲ್ಲಿ ವಸತಿ ಯೋಜನೆಯತ್ತ ಪ್ರಾಪರ್ಟಿ ಡೆವಲಪರ್​ಗಳು ಗಮನ ಹರಿಸುತ್ತಿದ್ದಾರೆ. ಅಲ್ಲಿಯೇ ಹೆಚ್ಚು ಮಾರಾಟ ಆಗುತ್ತಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಮಾರಾಟವಾಗಿರುವ ಅಷ್ಟೂ ಯೂನಿಟ್​ಗಳಲ್ಲಿ ಸರಾಸರಿ ಬೆಲೆ ಚದರಡಿಗೆ ಬರೋಬ್ಬರಿ 5,900 ರೂ ಆಗಿದೆ. ಅಂದರೆ ಒಂದು ಫ್ಲಾಟ್​ನ ಸರಾಸರಿ ಬೆಲೆ 70 ಲಕ್ಷ ರೂನಷ್ಟಿದೆ.

ಇದನ್ನೂ ಓದಿ: ತೆರಿಗೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆಯಾ? ತೆರಿಗೆ ಹಂಚಿಕೆ ವಿಧಾನ ಹೇಗಿದೆ? ಇಲ್ಲಿದೆ ವಿವರ

ಮುಂಬೈನಲ್ಲಿ ಈ ಬೆಲೆ ಇನ್ನೂ ದುಬಾರಿ. ಅಲ್ಲಿ ಮಾರಾಟವಾದ ಫ್ಲ್ಯಾಟ್​ಗಳ ಸರಾಸರಿ ಬೆಲೆ ಚದರಡಿಗೆ 7,883 ರೂ ಇದೆ. ಆದರೆ, ಬೆಂಗಳೂರು ಮತ್ತು ಮುಂಬೈಗೆ ಹೋಲಿಸಿದರೆ ದೆಹಲಿ ಎನ್​ಸಿಆರ್ ಪ್ರದೇಶದಲ್ಲಿ ವಸತಿ ಬೆಲೆ ಚದರಡಿಗೆ ಸರಾಸರಿ 4,579 ರೂ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!