AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Office Demand: ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ಭಯಂಕರ ಟ್ರಾಫಿಕ್ ಇದ್ದರೂ ಕಚೇರಿ ಸ್ಥಳಕ್ಕೆ ಭಾರೀ ಡಿಮ್ಯಾಂಡ್; ಕಾರಣ ಇದು

Bengaluru's Whitefield: ವೈಟ್​ಫೀಲ್ಡ್​ನಲ್ಲಿ ಮುಂದಿನ ಎರಡು ವರ್ಷದಲ್ಲಿ ಕಚೇರಿ ಸ್ಥಳಗಳ ಬಾಡಿಗೆ ಶೇ. 10ರಷ್ಟು ಹೆಚ್ಚಾಗಬಹುದು. ಮೂರ್ನಾಲ್ಕು ಕಿಲೋಮೀಟರ್ ದೂರಕ್ಕೆ ಗಂಟೆಗಟ್ಟಲೆ ಕಾಲ ಸವೆಯುವುಷ್ಟು ಅರಿಭಯಂಕರ ಟ್ರಾಫಿಕ್ ಇರುವ ವೈಟ್​ಫೀಲ್ಡ್​ನಲ್ಲಿ ಈಪಾಟಿ ಬೇಡಿಕೆಯಾ ಎಂದನಿಸಬಹುದು.

Office Demand: ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ಭಯಂಕರ ಟ್ರಾಫಿಕ್ ಇದ್ದರೂ ಕಚೇರಿ ಸ್ಥಳಕ್ಕೆ ಭಾರೀ ಡಿಮ್ಯಾಂಡ್; ಕಾರಣ ಇದು
ಟ್ರಾಫಿಕ್ ಕಿರಿಕಿರಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 28, 2023 | 10:42 AM

Share

ಬೆಂಗಳೂರು: ಭಾರತದ ಸಿಲಿಕಾನ್ ಸಿಟಿ ಎಂದನಿಸಿರುವ ಬೆಂಗಳೂರಿನಲ್ಲಿ ಆಫೀಸ್ ಸ್ಪೇಸ್​ಗೆ (Office Space) ಯಾವಾಗಲೂ ಬೇಡಿಕೆ ಇರುವಂಥದ್ದೇ. ಭಾರೀ ಟ್ರಾಫಿಕ್ ಕಿರಿಕಿರಿ ಇದ್ದರೂ ಬೇರೆ ಹಲವಾರು ಅನುಕೂಲಕರ ಕಾರಣಗಳಿಂದ ಉದ್ಯಾನನಗರಿಯಲ್ಲಿ ವಾಣಿಜ್ಯ ಮತ್ತು ಔದ್ಯಮಿಕ ಚಟುವಟಿಕೆ ಬಹಳ ಜೀವಂತ ಇರುತ್ತದೆ. ಮುಂಬೈ ಬಿಟ್ಟರೆ ಬೆಂಗಳೂರಿನಲ್ಲೇ ಅತಿಹೆಚ್ಚು ಆಫೀಸ್ ಸ್ಪೇಸ್ ಬಾಡಿಗೆ ದರ ಇರುವುದು. ಈಗ ನಗರದ ವೈಟ್​ಫೀಲ್ಡ್ ಪ್ರದೇಶದತ್ತ ಬಹಳ ಕಂಪನಿಗಳ ಚಿತ್ತ ನೆಟ್ಟಿದೆ. ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಸಂಸ್ಥೆ ಎನಿಸಿದ ಕಾಲಿಯರ್ಸ್ (Colliers) ಪ್ರಕಾರ ವೈಟ್​ಫೀಲ್ಡ್​ನಲ್ಲಿ ಮುಂದಿನ ಎರಡು ವರ್ಷದಲ್ಲಿ ಕಚೇರಿ ಸ್ಥಳಗಳ ಬಾಡಿಗೆ ಶೇ. 10ರಷ್ಟು ಹೆಚ್ಚಾಗಬಹುದು. ಮೂರ್ನಾಲ್ಕು ಕಿಲೋಮೀಟರ್ ದೂರಕ್ಕೆ ಗಂಟೆಗಟ್ಟಲೆ ಕಾಲ ಸವೆಯುವುಷ್ಟು ಅರಿಭಯಂಕರ ಟ್ರಾಫಿಕ್ ಇರುವ ವೈಟ್​ಫೀಲ್ಡ್​ನಲ್ಲಿ ಈಪಾಟಿ ಬೇಡಿಕೆಯಾ ಎಂದನಿಸಬಹುದು. ವೈಟ್​ಫೀಲ್ಡ್​ನಲ್ಲಿ ಟ್ರಾಫಿಕ್ ಕಿರಿಕಿರಿ ತುಸು ಕಡಿಮೆ ಆಗುವಂತೆ ಸೌಕರ್ಯವ್ಯವಸ್ಥೆ ಉತ್ತಮಗೊಳ್ಳಲಿರುವುದು ಇದಕ್ಕೆ ಕಾರಣ.

ವೈಟ್​ಫೀಲ್ಡ್​ನಲ್ಲಿ ಮೆಟ್ರೋ ರೈಲು ತಂದಿತ್ತ ಭಾಗ್ಯ

ಭೈಯಪ್ಪನಹಳ್ಳಿ ವೈಟ್​ಫೀಲ್ಡ್ ಮೆಟ್ರೋ ಯೋಜನೆ ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ಇದರಿಂದ ಈ ಭಾಗದಲ್ಲಿ ಸಾಕಷ್ಟು ಅನುಕೂಲವಾಗಲಿದೆ. ಅದರಲ್ಲೂ ಐಟಿ ಕಂಪನಿಗಳೇ ಹೆಚ್ಚಿರುವ ಈ ಪ್ರದೇಶದಲ್ಲಿ ಮೆಟ್ರೋ ರೈಲು ಓಡಾಡುವುದರಿಂದ ಐಟಿ ಉದ್ಯೋಗಿಗಳಿಗೆ ಭಾರೀ ಅನುಕೂಲವಾಗಲಿದೆ. ಹೀಗಾಗಿ, ಮುಂದಿನ ಎರಡು ವರ್ಷದಲ್ಲಿ ವೈಟ್​ಫೀಲ್ಡ್​ನಲ್ಲಿ ಕಚೇರಿ ಸ್ಥಳಗಳಿಗೆ ಒಳ್ಳೆಯ ಬೇಡಿಕೆ ಬರುವ ನಿರೀಕ್ಷೆ ಇದೆ ಎಂದು ಕಾಲಿಯರ್ಸ್ ಸಂಸ್ಥೆ ತನ್ನ ‘ಬೆಂಗಳೂರು ಮೆಟ್ರೋ ರೈಲ್: ಕೀ ಆಫೀಸ್ ಮಾರ್ಕೆಟ್ ಇಂಪ್ಯಾಕ್ಟ್’ ಎಂಬ ತನ್ನ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿAfter IPL: ವೀಕ್ಷಣೆಯಲ್ಲಿ ದಾಖಲೆ ಬರೆದಿರುವ ಜಿಯೋ ಸಿನಿಮಾ ಒಟಿಟಿಯ ಕಥೆ ಐಪಿಎಲ್ ಮುಗಿದ ಬಳಿಕ ಏನಾಗುತ್ತೆ?

ವೈಟ್​ಫೀಲ್ಡ್ ಬೆಂಗಳೂರಿನಲ್ಲೇ ಎರಡನೇ ಅತಿಹೆಚ್ಚು ಕಚೇರಿ ಮಾರುಕಟ್ಟೆ ಎನಿಸಿದೆ. ಅಂದರೆ ಕಚೇರಿ ಸ್ಥಳಗಳು ಅತಿಹೆಚ್ಚು ಇರುವ ಪ್ರದೇಶಗಳಲ್ಲಿ ವೈಟ್​ಫೀಲ್ಡ್ ಎರಡನೇ ಸ್ಥಾನಪಡೆಯುತ್ತದೆ. ಇಲ್ಲಿ 40.4 ಮಿಲಿಯನ್ ಚದರ ಅಡಿಯಷ್ಟು ಕಚೇರಿ ಸ್ಥಳಗಳಿವೆ. ಮೆಟ್ರೋ ಯೋಜನೆ ಈ ಮಾರ್ಗಕ್ಕೆ ಬರುತ್ತದೆ ಎಂದಾದ ಬಳಿಕ ಕಚೇರಿ ಸ್ಥಳಗಳಿಗೆ ಹೆಚ್ಚು ಬೇಡಿಕೆ ಬಂದಿದೆ. ಈಗ ಯೋಜನೆ ಪೂರ್ಣಗೊಳ್ಳುವ ಹಂತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಮೆಟ್ರೋ ಓಡಾಟ ಶುರುವಾದ ಬಳಿಕ ವೈಟ್​ಫೀಲ್ಡ್​ನಲ್ಲಿ ಕಚೇರಿ ಸ್ಥಳಗಳಲ್ಲಿ ಇನ್ನಿಲ್ಲದಷ್ಟು ಡಿಮ್ಯಾಂಡ್ ಬರಲಿದೆ.

ಬೆಂಗಳೂರಿನಲ್ಲಿ ಈಗೀಗ ಹೆಚ್ಚೆಚ್ಚು ಟ್ರೆಂಡಿಂಗ್​ನಲ್ಲಿರುವುದು ಕೋ ವರ್ಕಿಂಗ್ ಸ್ಪೇಸ್​ಗಳು. ಅಂದರೆ, ಯಾರು ಬೇಕಾದರೂ ಬಂದು ನಿರ್ದಿಷ್ಟ ಬಾಡಿಗೆ ಕೊಟ್ಟು ಕೆಲಸ ಮಾಡಬಹುದಾದ ಆಫೀಸ್ ಸ್ಪೇಸ್​ಗಳು ಇವು. ಬೆಂಗಳೂರಿನ ಒಟ್ಟು ಆಫೀಸ್ ಲೀಸಿಂಗ್​ಲ್ಲಿ ಶೇ. 13ರಷ್ಟು ಸ್ಥಳವು ಕೋವರ್ಕಿಂಗ್ ಸ್ಪೇಸ್​ನದ್ದಾಗಿದೆ. ಆದರೆ, ಟ್ರಾಫಿಕ್ ಕಿರಿಕಿರಿ ಹೆಚ್ಚು ಇರುವ ವೈಟ್​ಫೀಲ್ಡ್​ನಲ್ಲಿ ಇಂಥ ಕಚೇರಿಗಳು ಇರುವುದು ಕಡಿಮೆ. ಆದರೆ, ಮೆಟ್ರೋ ಆರಂಭವಾದ ಬಳಿಕ ಈ ವರ್ಕ್​ಸ್ಪೇಸ್​ಗಳಿಗೆ ವೈಟ್​ಫೀಲ್ಡ್​ನಲ್ಲಿ ಬೇಡಿಕೆ ಹೆಚ್ಚಬಹುದು ಎಂದು ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಕಂಪನಿ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!