AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಜುಸ್ ಸಿಎಫ್​ಒ ಅಜಯ್ ಗೋಯಲ್ ರಾಜೀನಾಮೆ; ನಿತಿನ್ ಗೋಲಾನಿಗೆ ಜವಾಬ್ದಾರಿ

BYJU'S CFO Ajay Goel Quits: ಆರು ತಿಂಗಳ ಹಿಂದೆ ವೇದಾಂತದಿಂದ ಬೈಜುಸ್​ಗೆ ಸಿಎಫ್​ಒ ಆಗಿ ಸೇರ್ಪಡೆಯಾಗಿದ್ದ ಅಜಯ್ ಗೋಯಲ್ ಅವರು ಕೆಲಸ ತೊರೆದಿದ್ದಾರೆ. ಅವರು ವೇದಾಂತ ಸಂಸ್ಥೆಗೆ ಮರಳಿ ಹೋಗಲಿದ್ದಾರೆ. ಗೋಯಲ್ ಅವರು ಏಪ್ರಿಲ್ ತಿಂಗಳಲ್ಲಿ ಸಿಎಫ್​ಒ ಆಗಿ ಬೈಜುಸ್​ಗೆ ಬಂದಿದ್ದರು. ಬೈಜುಸ್​ನ ಫೈನಾನ್ಸ್ ವಿಭಾಗದ ಪ್ರೆಸಿಡೆಂಟ್ ಆಗಿರುವ ನಿತಿನ್ ಗೋಲಾನಿ ಅವರು ಇಂಡಿಯಾ ಸಿಎಫ್​ಒ ಆಗಿ ಜವಾಬ್ದಾರಿ ಪಡೆಯಲಿದ್ದಾರೆ.

ಬೈಜುಸ್ ಸಿಎಫ್​ಒ ಅಜಯ್ ಗೋಯಲ್ ರಾಜೀನಾಮೆ; ನಿತಿನ್ ಗೋಲಾನಿಗೆ ಜವಾಬ್ದಾರಿ
ಅಜಯ್ ಗೋಯಲ್ (ಮಧ್ಯದಲ್ಲಿರುವವರು)
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 24, 2023 | 6:38 PM

Share

ಬೆಂಗಳೂರು, ಅಕ್ಟೋಬರ್ 24: ಹಲವು ವಿವಾದ ಮತ್ತು ಬಿಕ್ಕಟ್ಟುಗಳಿಗೆ ಒಳಗಾಗಿರುವ ಬೈಜುಸ್ (Byju’s) ಸಂಸ್ಥೆಯಿಂದ ಹೊರಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಆರು ತಿಂಗಳ ಹಿಂದೆ ವೇದಾಂತದಿಂದ ಬೈಜುಸ್​ಗೆ ಸಿಎಫ್​ಒ ಆಗಿ ಸೇರ್ಪಡೆಯಾಗಿದ್ದ ಅಜಯ್ ಗೋಯಲ್ (Ajay Goel) ಅವರು ಕೆಲಸ ತೊರೆದಿದ್ದಾರೆ. ಅವರು ವೇದಾಂತ ಸಂಸ್ಥೆಗೆ ಮರಳಿ ಹೋಗಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. 2021-22ರ ಹಣಕಾಸು ವರ್ಷಕ್ಕೆ ಬೈಜುಸ್​ನ ಹಣಕಾಸು ವರದಿಯನ್ನು (financial results) ಅಜಯ್ ಗೋಯಲ್ ನೇತೃತ್ವದಲ್ಲೇ ಸಿದ್ಧಪಡಿಸಲಾಗಿದೆ. ಆ ವರದಿ ಬಿಡುಗಡೆ ಬಳಿಕ ಅಜಯ್ ಗೋಯಲ್ ನಿರ್ಗಮಿಸಲಿದ್ದಾರೆ. ಕಳೆದ ಮೂರು ತಿಂಗಳಿಂದಲೂ ಅವರು ಬೈಜುಸ್​ನ ಆಡಿಟಿಂಗ್ ಪ್ರಕ್ರಿಯೆ ಸಾಗಲು ವ್ಯವಸ್ಥೆ ಮಾಡಿದ್ದಾರೆ.

‘ಮೂರು ತಿಂಗಳಲ್ಲಿ ಆಡಿಟ್ ನಡೆಸಲು ಬೈಜುಸ್​ನ ಸಂಸ್ಥಾಪಕರು ಮತ್ತು ಸಹೋದ್ಯೋಗಿಗಳು ನನಗೆ ಸಹಕಾರ ಕೊಟ್ಟಿದ್ದಕ್ಕೆ ಧನ್ಯವಾದಗಳನ್ನ ಹೇಳುತ್ತೇನೆ. ಹಾಗೆಯೇ, ಬೈಜುಸ್​ನಲ್ಲಿ ನನ್ನ ಕಿರು ಅವಧಿಯಲ್ಲಿ ಸಿಕ್ಕ ಬೆಂಬಲವನ್ನೂ ನಾನು ಮೆಚ್ಚುತ್ತೇನೆ’ ಎಂದು ಅವರು ಹೇಳಿದ್ದಾರೆ.

ಗೋಯಲ್ ಅವರು ಏಪ್ರಿಲ್ ತಿಂಗಳಲ್ಲಿ ಸಿಎಫ್​ಒ ಆಗಿ ಬೈಜುಸ್​ಗೆ ಬಂದಿದ್ದರು. ಅದಕ್ಕೂ ಮುಂಚೆ ಪಿವಿ ರಾವ್ ಅವರು ಬೈಜುಸ್​ನ ಸಿಎಫ್​ಒ ಆಗಿದ್ದರು. 2021ರ ಡಿಸೆಂಬರ್​ನಲ್ಲೇ ರಾವ್ ಅವರು ಸಿಎಫ್​ಒ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಅದಾದ ಬಳಿಕ 16 ತಿಂಗಳು ಯಾವ ಸಿಎಫ್​ಒ ನೇಮಕವಾಗಿರಲಿಲ್ಲ.

ಇದನ್ನೂ ಓದಿ: ಉದ್ಯೋಗ ಬಹಳ ರಿಸ್ಕ್; ಬಿಸಿನೆಸ್ ಮಾಡ್ರಪ್ಪ ಅಂತಿದಾರೆ ಮೈಕ್ರೋಸಾಫ್ಟ್ ಇಂಡಿಯಾ ಮಾಜಿ ಛೇರ್ಮನ್ ರವಿ ವೆಂಕಟೇಸನ್

ಅಜಯ್ ಗೋಯಲ್ ಹೊರಹೋಗುತ್ತಿರುವ ಹಿನ್ನೆಲೆಯಲ್ಲಿ ಬೈಜುಸ್​ನಲ್ಲಿ ಹೊಸ ನೇಮಕಾತಿ ಮತ್ತು ಸ್ಥಾನ ಬದಲಾವಣೆಗಳಾಗುತ್ತಿವೆ. ಬೈಜುಸ್​ನ ಫೈನಾನ್ಸ್ ವಿಭಾಗದ ಪ್ರೆಸಿಡೆಂಟ್ ಆಗಿರುವ ನಿತಿನ್ ಗೋಲಾನಿ ಅವರು ಇಂಡಿಯಾ ಸಿಎಫ್​ಒ ಆಗಿ ಜವಾಬ್ದಾರಿ ಪಡೆಯಲಿದ್ದಾರೆ. ಪ್ರದೀಪ್ ಕನಾಕಿಯಾ ಅವರು ಹಿರಿಯ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.

ನಿತಿನ್ ಗೋಲಾನಿ ಅವರು ಈ ಹಿಂದೆ ಆಕಾಶ್ ಎಜುಕೇಶನ್ ಸಂಸ್ಥೆಯಲ್ಲಿ ಮುಖ್ಯ ಸ್ಟ್ರಾಟಿಜಿ ಆಫೀಸರ್ ಆಗಿದ್ದರು. 2021ರಲ್ಲಿ ಆಕಾಶ್ ಸಂಸ್ಥೆಯನ್ನು ಬೈಜುಸ್ ಖರೀದಿಸಿತ್ತು. ಆ ಪ್ರಕ್ರಿಯೆಯಲ್ಲಿ ಗೋಲಾನಿ ಮಹತ್ವದ ಪಾತ್ರ ವಹಿಸಿದ್ದರು.

ಇದನ್ನೂ ಓದಿ: Walt Disney- Reliance Industries Deal: ಹಾಟ್​ಸ್ಟಾರ್ ಪಡೆಯಲು ಅಂಬಾನಿ ಕಸರತ್ತು; ರಿಲಾಯನ್ಸ್ ತೆಕ್ಕೆಗೆ ಬೀಳುತ್ತಾ ಡಿಸ್ನಿ ಇಂಡಿಯಾ ಬಿಸಿನೆಸ್?

ಇನ್ನು, ಅಜಯ್ ಗೋಯಲ್ ಅವರು ಮರಳಿ ಗೂಡಿಗೆ ಎಂಬಂತೆ ವೇದಾಂತ ಸಂಸ್ಥೆಗೆ ಮರಳುತ್ತಿದ್ದಾರೆ. ಭಾರತದ ಪ್ರಮುಖ ಗ್ರೂಪ್ ಕಂಪನಿಗಳಲ್ಲಿ ಒಂದಾದ ವೇದಾಂತ ಸಂಸ್ಥೆ ಇದೀಗ ತನ್ನ ಆರು ವ್ಯವಹಾರಗಳನ್ನು ಪ್ರತ್ಯೇಕಗೊಳಿಸುತ್ತಿದೆ. ಈ ಸಂದರ್ಭದಲ್ಲಿ ಅಜಯ್ ಗೋಯಲ್ ಅವಶ್ಯಕತೆ ವೇದಾಂತಕ್ಕೆ ಹೆಚ್ಚು ಇದೆ. ಇದೇ ಕಾರಣಕ್ಕೆ ಅವರನ್ನು ಮರಳಿ ಬರಮಾಡಿಕೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್