AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GST Share: ಕೇಂದ್ರದಿಂದ ರಾಜ್ಯಗಳಿಗೆ 1.18 ಲಕ್ಷ ಕೋಟಿ ಜಿಎಸ್​ಟಿ ಹಂಚಿಕೆ; ಕರ್ನಾಟಕಕ್ಕೆ 4,314 ಕೋಟಿ ರೂ; ಬೇರೆ ರಾಜ್ಯಗಳಿಗೆ ಸಿಕ್ಕಿದ್ದು ಎಷ್ಟು?

Centre Releases 3rd GST Installment To States: ಕೇಂದ್ರ ಸರ್ಕಾರ ಜೂನ್ 12ರಂದು 3ನೇ ಕಂತಿನ ಜಿಎಸ್​ಟಿ ಹಣ ಬಿಡುಗಡೆ ಮಾಡಿದೆ. 1.18 ಲಕ್ಷ ಕೋಟಿ ರೂ ಪೈಕಿ ಕರ್ನಾಟಕಕ್ಕೆ 4,314 ಕೋಟಿ ರೂ ಸಿಕ್ಕಿದೆ. ಉತ್ತರಪ್ರದೇಶಕ್ಕೆ ಅತಿಹೆಚ್ಚು ಲಭಿಸಿದೆ. ರಾಜ್ಯವಾರು ಜಿಎಸ್​ಟಿ ಪಟ್ಟಿ ಇಲ್ಲಿದೆ....

GST Share: ಕೇಂದ್ರದಿಂದ ರಾಜ್ಯಗಳಿಗೆ 1.18 ಲಕ್ಷ ಕೋಟಿ ಜಿಎಸ್​ಟಿ ಹಂಚಿಕೆ; ಕರ್ನಾಟಕಕ್ಕೆ 4,314 ಕೋಟಿ ರೂ; ಬೇರೆ ರಾಜ್ಯಗಳಿಗೆ ಸಿಕ್ಕಿದ್ದು ಎಷ್ಟು?
ಜಿಎಸ್​ಟಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 12, 2023 | 5:56 PM

ನವದೆಹಲಿ: ಕೇಂದ್ರ ಸರ್ಕಾರ ಜೂನ್ ತಿಂಗಳಲ್ಲಿ ವಿವಿಧ ರಾಜ್ಯಗಳಿಗೆ ಒಟ್ಟಿಗೆ ಎರಡು ಕಂತುಗಳ ಜಿಎಸ್​ಟಿ ಪಾಲು (GST Devolution) ಹಂಚಿಕೆ ಮಾಡಿದೆ. ವಾಡಿಕೆಯಂತೆ ತಿಂಗಳಿಗೆ 59,140 ಕೋಟಿ ರೂ ನೀಡಬೇಕಿದ್ದ ಕೇಂದ್ರ ಸರ್ಕಾರ ಈ ಬಾರಿ 1,18,280 ಕೋಟಿ ರೂ ಹಣವನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಿದೆ. ಜೂನ್ 12ರಂದು ಕೇಂದ್ರದಿಂದ ಹಣ ಬಿಡುಗಡೆ ಆಗಿದೆ. ರಾಜ್ಯಗಳಲ್ಲಿ ವಿವಿಧ ಯೋಜನೆಗಳಿಗೆ ಹಣ ಹೂಡಿಕೆ ತ್ವರಿತಗೊಳ್ಳಲೆಂಬ ಉದ್ದೇಶಕ್ಕೆ ಕೇಂದ್ರದಿಂದ ಮುಂದಿನ ತಿಂಗಳ ಜಿಎಸ್​ಟಿ ಪಾಲನ್ನು ಮುಂಗಡವಾಗಿ ಸೇರಿಸಿ ಕೊಡಲಾಗಿದೆ.

ವಿವಿಧ ರಾಜ್ಯಗಳಿಗೆ ನೀಡಲಾಗಿರುವ 1,18,280 ರೂ ಪೈಕಿ ಕರ್ನಾಟಕಕ್ಕೆ 4,314 ಕೋಟಿ ರೂ ಪ್ರಾಪ್ತವಾಗಿದೆ. ಮಹಾರಾಷ್ಟ್ರ ರಾಜ್ಯಕ್ಕೆ ಸಿಕ್ಕಿರುವುದು 7,472 ಕೋಟಿ ರೂ. ಮಹಾರಾಷ್ಟ್ರ ಮತ್ತು ಕರ್ನಾಟಕ ದೇಶದಲ್ಲಿ ಅತಿಹೆಚ್ಚು ಜಿಎಸ್​ಟಿ ಸಂಗ್ರಹ ಮಾಡಿ ಕೇಂದ್ರಕ್ಕೆ ತಲುಪಿಸುವ ರಾಜ್ಯಗಳಾಗಿವೆ. ಜಿಎಸ್​ಟಿ ಪಾಲಿನಲ್ಲಿ ಉತ್ತರಪ್ರದೇಶಕ್ಕೆ ಸಿಂಹ ಪಾಲು ಇದೆ. .ಪ್ರ.ಗೆ 21,218 ಕೋಟಿ ರೂ ಸಿಕ್ಕಿದೆ. ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಿಗೆ 8,000 ಕೋಟಿ ರೂಗಿಂತ ಹೆಚ್ಚು ಜಿಎಸ್​ಟಿ ಪಾಲು ಜೂನ್ ತಿಂಗಳಲ್ಲಿ ಸಿಕ್ಕಿದೆ.

ಇದನ್ನೂ ಓದಿPM Kisan 14th Installment: ಕೃಷಿಕರಿಗೆ ನೀಡುವ ಪಿಎಂ ಕಿಸಾನ್ 14ನೇ ಕಂತಿನ ಹಣ ಮುಂದಿನ ವಾರ ಬಿಡುಗಡೆ? ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ

2023, ಜೂನ್ 12ಕ್ಕೆ ಬಿಡಗಡೆ ಆದ 3ನೇ ಕಂತಿನ ಜಿಎಸ್​ಟಿ ಹಣ

  1. ಉತ್ತರಪ್ರದೇಶ: 21,218 ಕೋಟಿ ರೂ
  2. ಬಿಹಾರ: 11,897 ಕೋಟಿ ರೂ
  3. ಮಧ್ಯಪ್ರದೇಶ: 9,285 ಕೋಟಿ ರೂ
  4. ಪಶ್ಚಿಮ ಬಂಗಾಳ: 8,898 ಕೋಟಿ ರೂ
  5. ಮಹಾರಾಷ್ಟ್ರ: 7,472 ಕೋಟಿ ರೂ
  6. ರಾಜಸ್ಥಾನ್: 7,128 ಕೋಟಿ ರೂ
  7. ಒಡಿಶಾ: 5,356 ಕೋಟಿ ರೂ
  8. ತಮಿಳುನಾಡು: 4,825 ಕೋಟಿ ರೂ
  9. ಆಂಧ್ರಪ್ರದೇಶ: 4,787 ಕೋಟಿ ರೂ
  10. ಕರ್ನಾಟಕ: 4,314 ಕೋಟಿ ರೂ
  11. ಗುಜರಾತ್: 4,114 ಕೋಟಿ ರೂ
  12. ಛತ್ತೀಸ್​ಗಡ: 4,030 ಕೋಟಿ ರೂ
  13. ಜಾರ್ಖಂಡ್: 3,912ಕೋಟಿ ರೂ
  14. ಅಸ್ಸಾಮ್: 3,700 ಕೋಟಿ ರೂ
  15. ತೆಲಂಗಾಣ: 2,486 ಕೋಟಿ ರೂ
  16. ಕೇರಳ: 2,277 ಕೋಟಿ ರೂ
  17. ಪಂಜಾಬ್: 2,137 ಕೋಟಿ ರೂ
  18. ಅರುಣಾಚಲಪ್ರದೇಶ: 2,078 ಕೋಟಿ ರೂ
  19. ಉತ್ತರಾಖಂಡ್: 1,322 ಕೋಟಿ ರೂ
  20. ಹರ್ಯಾಣ: 1,293 ಕೋಟಿ ರೂ
  21. ಹಿಮಾಚಲಪ್ರದೇಶ: 982 ಕೋಟಿ ರೂ
  22. ಮೇಘಾಲಯ: 907 ಕೋಟಿ ರೂ
  23. ಮಣಿಪುರ: 847 ಕೋಟಿ ರೂ
  24. ತ್ರಿಪುರಾ: 837 ಕೋಟಿ ರೂ
  25. ನಾಗಾಲ್ಯಾಂಡ್: 673 ಕೋಟಿ ರೂ
  26. ಮಿಝೋರಾಂ: 591 ಕೋಟಿ ರೂ
  27. ಸಿಕ್ಕಿಂ: 459 ಕೋಟಿ ರೂ
  28. ಗೋವಾ: 457 ಕೋಟಿ ರೂ

ಇದನ್ನೂ ಓದಿCompany FD: ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್: ಏನು ಲಾಭ? ಎಚ್ಚರ ವಹಿಸಬೇಕಾದ ಸಂಗತಿಗಳು; ಇಲ್ಲಿದೆ ಡೀಟೇಲ್ಸ್

ಹೆಚ್ಚು ಜಿಎಸ್​ಟಿ ಗಳಿಸಿದರೂ ಯಾಕೆ ಕಡಿಮೆ ಪಾಲು?

ಇಲ್ಲಿ ರಾಜ್ಯಗಳ ಆರ್ಥಿಕ ಸ್ಥಿತಿಗಳಿಗೆ ಅನುಸಾರವಾಗಿ ಜಿಎಸ್​ಟಿ ಪಾಲು ಹಂಚಿಕೆಯನ್ನು ಕೇಂದ್ರ ಸರ್ಕಾರ ಮಾಡುತ್ತದೆ. ಹೆಚ್ಚು ಹಿಂದುಳಿದ ರಾಜ್ಯಗಳಾದ ಉತ್ತರಪ್ರದೇಶ, ಬಿಹಾರ, ಛತ್ತೀಸ್​ಗಡ, ಜಾರ್ಖಂಡ್, ಮಧ್ಯಪ್ರದೇಶ ಮೊದಲಾದವಕ್ಕೆ ಹೆಚ್ಚಿನ ತೆರಿಗೆ ಪಾಲು ಇದೆ. ಹೀಗಾಗಿ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮೊದಲಾದ ರಾಜ್ಯಗಳಿಗೆ ಕಡಿಮೆ ಜಿಎಸ್​ಟಿ ಪಾಲು ದೊರಕುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Mon, 12 June 23

ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮನು ರಿಯಾಕ್ಷನ್
‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮನು ರಿಯಾಕ್ಷನ್
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ
‘ಸರಿಗಮಪ’ ಫಿನಾಲೆಯಲ್ಲಿ ಹೇಗಿತ್ತು ಬಾಳು ಬೆಳಗುಂದಿ ಪರ್ಫಾರ್ಮೆನ್ಸ್?
‘ಸರಿಗಮಪ’ ಫಿನಾಲೆಯಲ್ಲಿ ಹೇಗಿತ್ತು ಬಾಳು ಬೆಳಗುಂದಿ ಪರ್ಫಾರ್ಮೆನ್ಸ್?
ಕಾಲ್ತುಳಿತ ಸಂಭವಿಸಿದಾಗ ಬಚಾವಾಗೋದು ಹೇಗೆ, ಏನು ಮಾಡಬೇಕು? ಇಲ್ಲಿದೆ ಟಿಪ್ಸ್
ಕಾಲ್ತುಳಿತ ಸಂಭವಿಸಿದಾಗ ಬಚಾವಾಗೋದು ಹೇಗೆ, ಏನು ಮಾಡಬೇಕು? ಇಲ್ಲಿದೆ ಟಿಪ್ಸ್
ಪ್ರಿಯಕರನೊಂದಿಗೆ ಬದುಕಿಕೋ ಎಂದು ಪತ್ನಿಯನ್ನು ಕಳಿಸಿದ್ದ ಪತಿ
ಪ್ರಿಯಕರನೊಂದಿಗೆ ಬದುಕಿಕೋ ಎಂದು ಪತ್ನಿಯನ್ನು ಕಳಿಸಿದ್ದ ಪತಿ
ಅಪಘಾತದ ನಂತರ ರಸ್ತೆಬದಿ ಹೋಟೆಲ್​​ಗೆ ನುಗ್ಗಿದ ಒಂದು ಟಿಪ್ಪರ್
ಅಪಘಾತದ ನಂತರ ರಸ್ತೆಬದಿ ಹೋಟೆಲ್​​ಗೆ ನುಗ್ಗಿದ ಒಂದು ಟಿಪ್ಪರ್
Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ
Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ