AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Company FD: ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್: ಏನು ಲಾಭ? ಎಚ್ಚರ ವಹಿಸಬೇಕಾದ ಸಂಗತಿಗಳು; ಇಲ್ಲಿದೆ ಡೀಟೇಲ್ಸ್

Corporate Company Fixed Deposits: ಕಾರ್ಪೊರೇಟ್ ಸಂಸ್ಥೆಯಲ್ಲಿ ಹಣ ಇರಿಸುವುದು ಕೆಲ ಮಂದಿಗೆ ಹಿಂಜರಿಕೆ ಆಗಬಹುದು. ಕಂಪನಿ ಎಫ್​ಡಿ ಬಗ್ಗೆ ಅಷ್ಟು ಭಯದ ಅಗತ್ಯ ಇಲ್ಲ. ಆದರೆ, ಹೂಡಿಕೆ ಮಾಡುವ ಮುನ್ನ ಕೆಲವೊಂದಿಷ್ಟು ಸಂಗತಿಗಳನ್ನು ಗಮನದಲ್ಲಿರಿಸಿಕೊಂಡಿರುವುದು ಒಳ್ಳೆಯದು.

Company FD: ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್: ಏನು ಲಾಭ? ಎಚ್ಚರ ವಹಿಸಬೇಕಾದ ಸಂಗತಿಗಳು; ಇಲ್ಲಿದೆ ಡೀಟೇಲ್ಸ್
ನಿಶ್ಚಿತ ಠೇವಣಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 12, 2023 | 2:42 PM

Share

ನಮ್ಮ ಉಳಿತಾಯ ಹಣವನ್ನು ಹೂಡಿಕೆ ಮಾಡಲು ಇರುವ ಹಲವು ಆಯ್ಕೆಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ಗಳೂ (Fixed Deposits) ಇವೆ. ಅತಿಹೆಚ್ಚಿನ ಜನರ ಹೂಡಿಕೆ ಆಯ್ಕೆ ಎಫ್​ಡಿಯೇ ಆಗಿದೆ. ಬ್ಯಾಂಕುಗಳ ಅತಿಹೆಚ್ಚು ಆದಾಯ ಮೂಲ ಇವೆ ನಿಶ್ಚಿತ ಠೇವಣಿಗಳೇ ಆಗಿವೆ. ಸ್ಕೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕು ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಗಳನ್ನು ಇಡಬಹುದು. ಹಾಗೆಯೇ, ಕೆಲ ಆಯ್ದ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೂ ಎಫ್​ಡಿ ಯೋಜನೆಗಳಿಗೆ ಆರ್​ಬಿಐ ಅವಕಾಶ ಕೊಟ್ಟಿದೆ. ಇಂಥ ಎಫ್​ಡಿಯನ್ನು ಕಾರ್ಪೊರೇಟ್ ಎಫ್​ಡಿ ಅಥವಾ ಕಂಪನಿ ಎಫ್​ಡಿ (Corporate or Company FD) ಎನ್ನುವುದುಂಟು. ಆದರೆ, ಬ್ಯಾಂಕೆಂದರೆ ಜನರಿಗೆ ವಿಶೇಷ ನಂಬಿಕೆ ಉಂಟು. ಅದೇ ಕಾರ್ಪೊರೇಟ್ ಸಂಸ್ಥೆಯಲ್ಲಿ ಹಣ ಇರಿಸುವುದು ಕೆಲ ಮಂದಿಗೆ ಹಿಂಜರಿಕೆ ಆಗಬಹುದು. ಕಂಪನಿ ಎಫ್​ಡಿ ಬಗ್ಗೆ ಅಷ್ಟು ಭಯದ ಅಗತ್ಯ ಇಲ್ಲ. ಆದರೆ, ಹೂಡಿಕೆ ಮಾಡುವ ಮುನ್ನ ಕೆಲವೊಂದಿಷ್ಟು ಸಂಗತಿಗಳನ್ನು ಗಮನದಲ್ಲಿರಿಸಿಕೊಂಡಿರುವುದು ಒಳ್ಳೆಯದು.

ಕಂಪನಿಯ ರೇಟಿಂಗ್ ಹೇಗಿದೆ ತಿಳಿಯಿರಿ

ನೀವು ಕಾರ್ಪೊರೇಟ್ ಎಫ್​ಡಿ ಅಥವಾ ಕಂಪನಿ ಎಫ್​ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ಆ ಕಂಪನಿಯ ಹಣಕಾಸು ಸ್ಥಿತಿಗತಿ ಹೇಗಿದೆ, ಗ್ರಾಹಕರೊಂದಿಗಿನ ಅದರ ವ್ಯವಹಾರ ಹೇಗಿದೆ ಎಂಬಿತ್ಯಾದಿ ಸಾಧ್ಯವಾದರೆ ತಿಳಿದಿರಿ. ಅದು ಸಾಧ್ಯವಾಗದೇ ಹೋದರೆ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಆ ಕಂಪನಿಗೆ ಎಷ್ಟು ಮೌಲ್ಯ ಅಥವಾ ರೇಟಿಂಗ್ ಕೊಟ್ಟಿದ್ದಾರೆ ಎಂಬುದನ್ನಾದರೂ ತಿಳಿದಿರಿ. ಹೆಚ್ಚು ರೇಟಿಂಗ್ ಇದ್ದರೆ ಆ ಕಂಪನಿ ಹೆಚ್ಚು ವಿಶ್ವಾಸಾರ್ಹ ಆಗಿರುತ್ತದೆ.

ಇದನ್ನೂ ಓದಿPoor and Inflation: ಬಡವರು ಇನ್ನಷ್ಟು ಬಡವರಾಗಲು, ಸಿರಿವಂತರು ಇನ್ನಷ್ಟು ಸಿರಿವಂತರಾಗಲು ಏನು ಕಾರಣ? ವಿಷ ವರ್ತುಲವಾ ಹಣದುಬ್ಬರ? ಕುತೂಹಲದ ಉದಾಹರಣೆ

ಕಾರ್ಪೊರೇಟ್ ಎಫ್​ಡಿಯ ಬಡ್ಡಿದರ ತುಲನೆ ಮಾಡಿ

ವಿವಿಧ ಕಂಪನಿಗಳು ನಿಶ್ಚಿತ ಠೇವಣಿಗೆ ಎಷ್ಟು ಬಡ್ಡಿ ಆಫರ್ ಮಾಡುತ್ತವೆ ಎಂದು ತುಲನೆ ಮಾಡಿರಿ. ಉತ್ತಮ ರೇಟಿಂಗ್ ಹೊಂದಿರುವ ಕಂಪನಿಗಳ ಪೈಕಿ ಯಾವುದು ಹೆಚ್ಚು ಬಡ್ಡಿ ಆಫರ್ ಮಾಡುತ್ತದೋ ಆ ಕಂಪನಿಯ ನಿಶ್ಚಿತ ಠೇವಣಿಯನ್ನು ಆರಿಸಿಕೊಳ್ಳಿ.

ಹಾಗೆಯೇ, ತುರ್ತು ಅಗತ್ಯಬಿದ್ದು ಅವಧಿಗೆ ಮುನ್ನ ಠೇವಣಿಯನ್ನು ಹಿಂಪಡೆದುಕೊಂಡರೆ ಎಷ್ಟು ದಂಡ ವಿಧಿಸಲಾಗುತ್ತದೆ, ಠೇವಣಿ ಇದ್ದ ಅಷ್ಟೂ ಅವಧಿಗೆ ಎಷ್ಟು ಬಡ್ಡಿ ಕೊಡಲಾಗುತ್ತದೆ ಎಂಬಿತ್ಯಾದಿ ಅಂಶಗಳನ್ನೂ ತುಲನೆ ಮಾಡಿ ನೋಡಿ.

ಒಳ್ಳೆಯ ಕ್ರೆಡಿಟ್ ರೇಟಿಂಗ್ ಇರುವ ಕಂಪನಿಗಳು ಹಾಗೂ ಎಫ್​ಡಿ ಬಡ್ಡಿ ದರ

  • ಬಜಾಜ್ ಫೈನಾನ್ಸ್: ಶೇ. 7.40ರಿಂದ ಶೇ. 8.35
  • ಮಹೀಂದ್ರ ಫೈನಾನ್ಸ್: ಶೇ. 7.40ರಿಂದ ಶೇ. 7.75
  • ಶ್ರೀರಾಮ್ ಫೈನಾನ್ಸ್: ಶೇ. 7.60ರಿಂದ ಶೇ. 8.50
  • ಐಸಿಐಸಿಐ ಹೌಸಿಂಗ್ ಫೈನಾನ್ಸ್: ಶೇ. 7.00ರಿಂದ ಶೇ. 7.60
  • ಹೆಚ್​ಡಿಎಫ್​ಸಿ ಲಿ: ಶೇ. 7.10ರಿಂದ ಶೇ. 7.70
  • ಎಲ್​ಐಸಿ ಹೌಸಿಂಗ್ ಲಿ: ಶೇ. 7.25ರಿಂದ ಶೇ. 7.75
  • ಪಿಎನ್​ಬಿ ಹೌಸಿಂಗ್ ಫೈನಾನ್ಸ್: ಶೇ. 7ರಿಂದ ಶೇ. 7.70
  • ಹುಡ್ಕೋ: ಶೇ. 7.50ರವರೆಗೂ
  • ಮಹೀಂದ್ರ ಫೈನಾನ್ಸ್: ಶೇ. 7.40ರಿಂದ ಶೇ. 7.75
  • ಶ್ರೀರಾಮ್ ಟ್ರಾನ್ಸ್​ಪೋರ್ಟ್ ಫೈನಾನ್ಸ್ ಲಿ: ಶೇ. 7.34ರಿಂದ ಶೇ. 8.18
  • ಸುಂದರಮ್ ಫೈನಾನ್ಸ್ ಕಂಪನಿ: ಶೇ. 7.25ರಿಂದ ಶೇ. 7.53
  • ಮುತೂಟ್ ಕ್ಯಾಪಿಟಲ್: ಶೇ. 7.50ರಿಂದ ಶೇ. 7.75

ಇದನ್ನೂ ಓದಿLIC Saral Pension: ಲಕ್ಷ ರೂ ಆದಾಯ ಬರುವಂತಾಗಬೇಕಾ? ಇಲ್ಲಿದೆ ಎಲ್​ಐಸಿ ಸರಳ್ ಪೆನ್ಷನ್ ಪ್ಲಾನ್

ಬಡ್ಡಿಗೆ ತೆರಿಗೆ ಇರುತ್ತದೆ, ಗಮನದಲ್ಲಿರಲಿ

ನಿಶ್ಚಿತ ಠೇವಣಿಗಳಿಂದ ನಿಮಗೆ ಸಿಗುವ ಬಡ್ಡಿ ಹಣಕ್ಕೆ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಎಫ್​ಡಿಯಿಂದ ಬರುವ ಲಾಭ ನೀವು ಲೆಕ್ಕ ಹಾಕಿದಷ್ಟಿರುವುದಿಲ್ಲ. ನಿಮ್ಮ ಆದಾಯ ತೆರಿಗೆ ಯಾವ ಸ್ಲ್ಯಾಬ್​ನಲ್ಲಿ ಇದೆ ಎನ್ನುವುದರ ಮೇಲೆ ಎಫ್​ಡಿ ಬಡ್ಡಿ ಹಣಕ್ಕೆ ತೆರಿಗೆ ಇರುತ್ತದೆ. ಉದಾಹರಣೆಗೆ, ನಿಮ್ಮ ಆದಾಯವು 10,00,000 ರೂ ಆಗಿದ್ದರೆ ನೀವು ಶೇ. 30ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಎಫ್​ಡಿಯಿಂದ ನಿಮಗೆ ಒಂದು ವರ್ಷದಲ್ಲಿ ಸಿಗುವ ಬಡ್ಡಿ ಹಣ 1 ಲಕ್ಷ ರೂ ಆಗಿದ್ದರೆ 30,000 ರೂ ಮತ್ತು ಶೇ. 0.4 ಸೆಸ್ ವಿಧಿಸಲಾಗುತ್ತದೆ. ಅಂದರೆ ಸುಮಾರು 31,000 ರೂ ಹಣವನ್ನು ಕಡಿತ ಮಾಡಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ