Poor and Inflation: ಬಡವರು ಇನ್ನಷ್ಟು ಬಡವರಾಗಲು, ಸಿರಿವಂತರು ಇನ್ನಷ್ಟು ಸಿರಿವಂತರಾಗಲು ಏನು ಕಾರಣ? ವಿಷ ವರ್ತುಲವಾ ಹಣದುಬ್ಬರ? ಕುತೂಹಲದ ಉದಾಹರಣೆ

Know How Inflation Affects Poor: ಯಾವುದೇ ಆರ್ಥಿಕತೆಗೂ ಹೆಚ್ಚಿನ ಮಟ್ಟದ ಹಣದುಬ್ಬರ ಬಹಳ ಡೇಂಜರ್ ಎಂಬುದನ್ನು ಎಲ್ಲಾ ಅರ್ಥಶಾಸ್ತ್ರಜ್ಞರೂ ಒಪ್ಪಿಕೊಳ್ಳುತ್ತಾರೆ. ಕುತೂಹಲದ ವಿಚಾರ ಎಂದರೆ ಹಣದುಬ್ಬರ ಹೆಚ್ಚು ಬಾಧಿಸುವುದು ಬಡವರನ್ನು. ಬಡವರು ಇನ್ನಷ್ಟು ಬಡತನದ ಸುಳಿಗೆ ಸಿಲುಕುವಂತೆ ಮಾಡುತ್ತದೆ ಇದು.

Poor and Inflation: ಬಡವರು ಇನ್ನಷ್ಟು ಬಡವರಾಗಲು, ಸಿರಿವಂತರು ಇನ್ನಷ್ಟು ಸಿರಿವಂತರಾಗಲು ಏನು ಕಾರಣ? ವಿಷ ವರ್ತುಲವಾ ಹಣದುಬ್ಬರ? ಕುತೂಹಲದ ಉದಾಹರಣೆ
ಬಡವರು
Follow us
|

Updated on: Jun 12, 2023 | 12:43 PM

ಬೆಂಗಳೂರು: ನೀವು ಹಣದುಬ್ಬರದ ಬಗ್ಗೆ ಆಗಾಗ್ಗೆ ಸುದ್ದಿಗಳನ್ನು ಓದುತ್ತಿದ್ದಿರಬಹುದು. ಪಾಕಿಸ್ತಾನ, ಶ್ರೀಲಂಕಾ, ಜಿಂಬಾಬ್ವೆ ದೇಶಗಳಲ್ಲಿ ಅಷ್ಟೊಂದು ಹಣದುಬ್ಬರ ಇದ್ಯಂತೆ. ಅಮೆರಿಕದಲ್ಲಿ ಭಾರತಕ್ಕಿಂತ ಹೆಚ್ಚು ಹಣದುಬ್ಬರ (Inflation) ಇದೆಯಂತೆ ಇತ್ಯಾದಿ ಮಾಹಿತಿ ಗೊತ್ತಿದ್ದಿರಬಹುದು. ಹಣದುಬ್ಬರವನ್ನು ಸರಳವಾಗಿ ಹೇಳಬೇಕೆಂದರೆ ಅದು ಬೆಲೆ ಏರಿಕೆ ಪ್ರಮಾಣ. ಒಂದು ವರ್ಷದ ಅಂತರದಲ್ಲಿ ನಿರ್ದಿಷ್ಟ ವಸ್ತುಗಳ ಬೆಲೆಯಲ್ಲಿ ಎಷ್ಟು ವ್ಯತ್ಯಾಸ ಆಗಿದೆ ಎಂಬುದನ್ನು ಹಣದುಬ್ಬರ ಸೂಚಿಸುತ್ತದೆ.

ಭಾರತದಲ್ಲಿ ಹಣದುಬ್ಬರ ಶೇ. 7ಕ್ಕಿಂತ ಹೆಚ್ಚು ಇದ್ದದ್ದು ಇದೀಗ 2023ರ ಏಪ್ರಿಲ್ ತಿಂಗಳಲ್ಲಿ ಶೇ. 4.7ಕ್ಕೆ ಬಂದು ನಿಂತಿದೆ. ಅಂದರೆ, 2022ರ ಏಪ್ರಿಲ್ ತಿಂಗಳಲ್ಲಿ ಇದ್ದ ಬೆಲೆಗಳಿಗಿಂತ ಈ ವರ್ಷದ ಏಪ್ರಿಲ್​ನಲ್ಲಿ ಬೆಲೆ ಶೇ. 4.7ರಷ್ಟು ಏರಿಕೆ ಆಗಿದೆ ಎಂದು ಈ ಹಣದುಬ್ಬರ ಹೇಳುತ್ತದೆ. ಯಾವುದೇ ಉದ್ಯಮಕ್ಕೆ ಬೆಲೆ ಏರಿಕೆ ಅಗತ್ಯ. ಆದರೆ, ಈ ಏರಿಕೆ ಮಿತಿಯಲ್ಲಿರಬೇಕು ಎಂಬುದು ಅರ್ಥಶಾಸ್ತ್ರಜ್ಞರ ಅನಿಸಿಕೆ. ಭಾರತ ಸರ್ಕಾರ ಹಣದುಬ್ಬರದ ಮಿತಿ ಶೇ. 4ರಷ್ಟು ಇರಬೇಕೆಂದು ನಿಗದಿ ಮಾಡಿದೆ. ತುಸು ಏರುಪೇರಾದರೂ ಅದು ಶೇ. 2ರಿಂದ ಶೇ. 6ರ ಒಳಗೆ ಇರುವಂತೆ ನೋಡಿಕೊಳ್ಳಿ ಎಂದು ಆರ್​ಬಿಐಗೆ ಸರ್ಕಾರ ಸೂಚಿಸಿದೆ. ಹಣದುಬ್ಬರ ತಾಳಿಕೆಯ ಮಟ್ಟಕ್ಕಿಂತ ಹೆಚ್ಚಿದ್ದರೆ ರೆಪೋ ದರ ಇತ್ಯಾದಿ ಕ್ರಮಗಳ ಮೂಲಕ ಆರ್​ಬಿಐ ನಿಯಂತ್ರಣ ಸಾಧಿಸಲು ಯತ್ನಿಸುತ್ತದೆ.

ಇದನ್ನೂ ಓದಿSoros Successor: ಅಪ್ಪನನ್ನು ಮೀರಿಸುವ ಮಗ; ಉದಾರ ದಾನಿ ಜಾರ್ಜ್ ಸೋರೋಸ್ ಸಾಮ್ರಾಜ್ಯ ಮಗನ ಕೈಗೆ; ಅಪ್ಪನಿಗಿಂತ ಹೆಚ್ಚು ರಾಜಕೀಯ ಗುರಿಕಾರ ಮಗ

ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡುತ್ತದಾ ಹಣದುಬ್ಬರ?

ಇದು ಬಹಳ ಮುಖ್ಯವಾದ ಸಂಗತಿ. ಯಾವುದೇ ಆರ್ಥಿಕತೆಗೂ ಹೆಚ್ಚಿನ ಮಟ್ಟದ ಹಣದುಬ್ಬರ ಬಹಳ ಡೇಂಜರ್ ಎಂಬುದನ್ನು ಎಲ್ಲಾ ಅರ್ಥಶಾಸ್ತ್ರಜ್ಞರೂ ಒಪ್ಪಿಕೊಳ್ಳುತ್ತಾರೆ. ಕುತೂಹಲದ ವಿಚಾರ ಎಂದರೆ ಹಣದುಬ್ಬರ ಹೆಚ್ಚು ಬಾಧಿಸುವುದು ಬಡವರನ್ನು. ಬಡವರು ಇನ್ನಷ್ಟು ಬಡತನದ ಸುಳಿಗೆ ಸಿಲುಕುವಂತೆ ಮಾಡುತ್ತದೆ ಇದು. ಆದರೆ, ಶ್ರೀಮಂತರ ಮೇಲೆ ಇದರ ಪರಿಣಾಮ ಹೆಚ್ಚು ಇಲ್ಲ. ಬಡವರಿಂದ ಕಸಿದುಹೋದ ಹಣ ಶ್ರೀಮಂತರ ಬುಟ್ಟಿ ಸೇರುವಂತೆ ಮಾಡುತ್ತದೆ ಈ ಹಣದುಬ್ಬರ

ಬಡವರಿಗೆ ಹಣದುಬ್ಬರದ ಬಾಧೆ ಹೆಚ್ಚು ಹೇಗೆ?

ಕೆಲ ಉದಾಹರಣೆಗಳನ್ನು ಇಲ್ಲಿ ನೀಡಬಹುದುಎ ಎಂಬ ವ್ಯಕ್ತಿ ಮಧ್ಯಮ ವರ್ಗದವ ಎಂದಿಟ್ಟುಕೊಳ್ಳೋಣ.

  • ಎ ವ್ಯಕ್ತಿಯ ವರ್ಷದ ಆದಾಯ: 12,00,000 ರೂ
  • ವರ್ಷದ ವೆಚ್ಚ: 7,00,00 ರೂ
  • ಉಳಿತಾಯ: 5,00,000 ರೂ

ಈಗ ಶೇ. 10ರಷ್ಟು ಹಣದುಬ್ಬರ ಇದೆ. ಆದಾಯದಲ್ಲಿ ಶೇ. 5ರಷ್ಟು ಹೆಚ್ಚಳ ಆಗಿದೆ ಎಂದಿಟ್ಟುಕೊಳ್ಳಿ. ಆಗ ಒಂದು ವರ್ಷದಲ್ಲಿ ಹೀಗಿರುತ್ತೆ ಎ ವ್ಯಕ್ತಿಯ ಆಯವ್ಯಯ:

  • ವರ್ಷದ ಆದಾಯ: 12,60,000 ರೂ
  • ವರ್ಷದ ವೆಚ್ಚ: 7,70,000 ರೂ
  • ಉಳಿತಾಯ: 4,90,000 ರೂ

ಇದನ್ನೂ ಓದಿCredit Suisse: ದಿವಾಳಿಯಾದ ಕ್ರೆಡಿಟ್ ಸ್ವೀಸ್ ಬ್ಯಾಂಕ್ ಯುಬಿಎಸ್ ತೆಕ್ಕೆಗೆ; ಶ್ರೀಲಂಕಾ, ರಷ್ಯಾ ಸೇರಿದಂತೆ ಹಲವು ದೇಶಗಳಿಂದ ಹೊಸ ಗ್ರಾಹಕರು ಬೇಡ ಎಂದ ಯುಬಿಎಸ್

ಈಗ ಬಡವ ಅಥವಾ ಕೆಳಮಧ್ಯಮ ವರ್ಗದ ವ್ಯಕ್ತಿಯ ಆಯವ್ಯಯ ಪರಿಗಣಿಸಿ ನೋಡೋಣ

  • ಬಿ ವ್ಯಕ್ತಿಯ ವರ್ಷದ ಆದಾಯ: 2,00,000 ರೂ
  • ವರ್ಷದ ವೆಚ್ಚ: 1,75,000 ರೂ
  • ಉಳಿತಾಯ: 25,000 ರೂ

ವರ್ಷದ ಬಳಿಕ ಶೇ. 10ರಷ್ಟು ಹಣದುಬ್ಬರ ಮತ್ತು ಶೇ. 5 ಆದಾಯ ಏರಿಕೆ ಆದರೆ ಈ ಬಿ ವ್ಯಕ್ತಿಯ ಉಳಿತಾಯ 18,000 ರೂಗೆ ಇಳಿಯುತ್ತದೆ. ಅಂದರೆ, ಕಡಿಮೆ ಆದಾಯದ ವ್ಯಕ್ತಿಗೆ ಹೆಚ್ಚು ನಷ್ಟ ಉಂಟಾಗುತ್ತದೆ. ಹೆಚ್ಚು ಹಣ ಇರುವ ಶ್ರೀಮಂತ ಹಣದುಬ್ಬರದ ಸಂದರ್ಭದಲ್ಲಿ ತಮ್ಮ ಅಪಾರ ಹಣವನ್ನು ಎಲ್ಲಿಯಾದರೂ ಹೂಡಿಕೆ ಮಾಡಿ ವೃದ್ಧಿಸಲು ಅವಕಾಶ ಹೊಂದಿರುತ್ತಾನೆ. ಆ ಮೂಲಕ ಹಣದುಬ್ಬರದ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ, ಹೆಚ್ಚು ಉಳಿತಾಯ ಸಾಧ್ಯ ಇಲ್ಲದ ಬಡವರು ಏನು ಮಾಡಲು ಸಾಧ್ಯ..? ಬೆಲೆ ಏರಿಕೆಯ ವಿಷವರ್ತುಲಕ್ಕೆ ಸಿಲುಕಿ ಆತ ಕ್ರಮೇಣ ಹೆಚ್ಚೆಚ್ಚು ಬಡವನಾಗುತ್ತಾ ಹೋಗುತ್ತಾನೆ.

ಬಡವರು ಈ ವಿಷವರ್ತುಲದಿಂದ ಹೊರಬರಬೇಕಾದರೆ ಆದಾಯ ಹೆಚ್ಚಳ ಅಥವಾ ವೆಚ್ಚ ಕಡಿತ ಮಾತ್ರವೇ ಮಾರ್ಗ. ಆದಾಯ ಹೆಚ್ಚಳಕ್ಕೆ ಮಾರ್ಗ ಇಲ್ಲದಿದ್ದರೆ ವೆಚ್ಚ ಕಡಿತ ಮಾಡಿಯಾದರೂ ಹಣ ಉಳಿಸಿ, ಆ ಹಣವನ್ನು ಎಫ್​ಡಿಯೋ, ಆರ್​ಡಿಯೋ, ಷೇರಿಗೋ ಹೂಡಿಕೆ ಮಾಡಿ ಬೆಳೆಸುವತ್ತ ಜನರು ಗಮನ ಕೊಡುವುದು ಲೇಸು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ