AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಗರೇಟುಗಳಿಗೆ ಶೇ. 40 ಜಿಎಸ್​ಟಿ ಜೊತೆಗೆ ಹೆಚ್ಚುವರಿ ಸುಂಕ ಕ್ರಮ ಮುಂದುವರಿಕೆ

GST on cigarettes: ಪಾಪದ ಸರಕುಗಳೆಂದು ವರ್ಗೀಕೃತವಾಗಿರುವ ಸಿಗರೇಟು ಇತ್ಯಾದಿ ತಂಬಾಕು ಉತ್ಪನ್ನಗಳಿಗೆ ಜಿಎಸ್​ಟಿ ಜೊತೆಗೆ ಹೆಚ್ಚುವರಿ ಸೆಸ್​ಗಳು ಮುಂದುವರಿಯಲಿವೆ. ಸದ್ಯ ಇವುಗಳಿಗೆ ಶೇ. 28 ಜಿಎಸ್​ಟಿ ಹಾಗೂ ಶೇ. 50ರವರೆಗೆ ಕಾಂಪೆನ್ಸೇಶನ್ ಸೆಸ್ ಇವೆ. ಸೆಪ್ಟೆಂಬರ್ 22ರಿಂದ ಈ ಉತ್ಪನ್ನಗಳಿಗೆ ಜಿಎಸ್​ಟಿ ಶೇ. 40ಕ್ಕೆ ಏರುತ್ತದೆ. ಹೆಚ್ಚುವರಿಯಾಗಿ ಸೆಸ್ಗಳನ್ನೂ ಹಾಕಲಾಗುತ್ತದೆ.

ಸಿಗರೇಟುಗಳಿಗೆ ಶೇ. 40 ಜಿಎಸ್​ಟಿ ಜೊತೆಗೆ ಹೆಚ್ಚುವರಿ ಸುಂಕ ಕ್ರಮ ಮುಂದುವರಿಕೆ
ಸಿಗರೇಟು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 05, 2025 | 1:39 PM

Share

ನವದೆಹಲಿ, ಸೆಪ್ಟೆಂಬರ್ 5: ಸಿಗರೇಟು ಮತ್ತಿತರ ತಂಬಾಕು ವಸ್ತುಗಳನ್ನು ಶೇ. 40ರ ಜಿಎಸ್​ಟಿ (GST) ವ್ಯಾಪ್ತಿಗೆ ತರುವುದರಿಂದ ರಾಜ್ಯ ಸರ್ಕಾರಗಳಿಗೆ ಆಗಬಹುದಾದ ಸಂಭವನೀಯ ಆದಾಯ ನಷ್ಟವನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಮಾರ್ಗೋಪಾಯ ಹುಡುಕಿದೆ. ವರದಿಗಳ ಪ್ರಕಾರ, ಈ ಸರಕುಗಳಿಗೆ ಜಿಎಸ್​ಟಿ ಜೊತೆಗೆ ಹೆಚ್ಚುವರಿ ಸುಂಕಗಳನ್ನು ವಿಧಿಸಿ, ಅದನ್ನು ರಾಜ್ಯಗಳಿಗೆ ಹಂಚಲು ಯೋಜಿಸುತ್ತಿದೆ.

ಈ ಮೊದಲೂ ಕೂಡ ಇದೇ ರೀತಿಯ ವ್ಯವಸ್ಥೆ ಇತ್ತು. ತಂಬಾಕು ಮತ್ತಿತರ ಸಿನ್ ಗೂಡ್ ಅಥವಾ ಪಾಪದ ಸರಕುಗಳಿಗೆ ಶೇ. 28 ಜಿಎಸ್​ಟಿ ಹಾಗೂ ಹೆಚ್ಚುವರಿ ಕಾಂಪೆನ್ಸೇಶನ್ ಸೆಸ್ ಅನ್ನು ಹಾಕಲಾಗಿತ್ತು. ಅವೆಲ್ಲಾ ಒಟ್ಟು ಸೇರಿ ಸಿಗರೇಟು ಮತ್ತಿತರ ವಸ್ತುಗಳ ಮೇಲೆ ತೆರಿಗೆ ಶೇ. 50ರಿಂದ 90ರ ಮಟ್ಟದವರೆಗೂ ಇತ್ತು. ಈಗ ಶೇ. 40 ಜಿಎಸ್​ಟಿ ಸೇರಿ ಒಟ್ಟೂ ತೆರಿಗೆ ಶೇ. 52-88ರ ಶ್ರೇಣಿಯಲ್ಲಿ ಇರುವ ರೀತಿಯಲ್ಲಿ ಹೆಚ್ಚುವರಿ ಸುಂಕಗಳನ್ನು ನಿಗದಿ ಮಾಡಲು ಹೊರಟಿದೆ ಸರ್ಕಾರ.

ಈ ವ್ಯವಸ್ಥೆ ಖಾಯಂ ಆಗಿ ಇರುವುದಿಲ್ಲ. ಸಿಗರೇಟುಗಳನ್ನು ಜಿಎಸ್​ಟಿ ವ್ಯಾಪ್ತಿ ತಂದ ಪರಿಣಾಮ ಆದ ನಷ್ಟ ಪ್ರತಿಯಾಗಿ ರಾಜ್ಯಗಳು ತೆಗೆದುಕೊಂಡ ಸಾಲವನ್ನು ಭರ್ತಿಯಾಗುವವರೆಗೂ ಕಾಂಪೆನ್ಸೇಶನ್ ಸೆಸ್ ಇರುತ್ತದೆ. ಹಂತ ಹಂತವಾಗಿ ಈ ಸೆಸ್ ಅನ್ನು ಕಡಿಮೆ ಮಾಡಿ ಕೊನೆಗೆ ತೆಗೆದುಹಾಕಲಾಗುತ್ತದೆ ಎಂದು ಮನಿ ಕಂಟ್ರೋಲ್ ವೆಬ್​ಸೈಟ್​ನಲ್ಲಿ ವರದಿಯಾಗಿದೆ.

ಇದನ್ನೂ ಓದಿ: ಯಾವುದೇ ಒಪ್ಪಂದದಲ್ಲೂ ರೈತರು, ಮೀನುಗಾರರ ಹಿತಾಸಕ್ತಿ ಬಲಿಕೊಡೋದಿಲ್ಲ: ಸಚಿವ ಪೀಯೂಶ್ ಗೋಯಲ್

ಹೊಸ ಜಿಎಸ್​ಟಿ ಸಿಸ್ಟಂನಲ್ಲಿ ನಾಲ್ಕು ಟ್ಯಾಕ್ಸ್ ಸ್ಲ್ಯಾಬ್ ಬದಲು ಎರಡನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಶೇ. 5 ಮತ್ತು ಶೇ. 18 ಟ್ಯಾಕ್ಸ್ ಸ್ಲ್ಯಾಬ್ ಇರಲಿವೆ. ಇದರ ಜೊತೆಗೆ, ಸಿಗರೇಟು ಇತ್ಯಾದಿ ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳು ಹಾಗೂ ಲಕ್ಷುರಿ ವಸ್ತುಗಳನ್ನು ಸಿನ್ ಗೂಡ್ಸ್ ಎಂದು ವರ್ಗೀಕರಿಸಿ ಅವುಗಳಿಗೆ ಸ್ಪೆಷಲ್ ಟ್ಯಾಕ್ಸ್ ಸ್ಲ್ಯಾಬ್ ಹಾಕಲಾಗಿದೆ. ಅವರಕ್ಕೆ ಶೇ. 40 ಜಿಎಸ್​ಟಿ ಇರಲಿದೆ.

ಈ ಮೊದಲೂ ಕೂಡ ಈ ರೀತಿಯ ಸಿನ್ ಗೂಡ್​ಗಳಿಗೆ ಶೇ. 28 ಜಿಎಸ್​ಟಿ ಇತ್ತು. ಅದರ ಜೊತೆಗೆ ಹೆಚ್ಚುವರಿ ಸೆಸ್​ಗಳನ್ನು ಹಾಕಲಾಗುತ್ತಿತ್ತು. 2017ರಲ್ಲಿ ಜಿಎಸ್​ಟಿ ಜಾರಿಗೆ ಬರುವ ಮುನ್ನ ರಾಜ್ಯ ಸರ್ಕಾರಗಳು ಸಿಗರೇಟು ಮತ್ತಿತರ ವಸ್ತುಗಳಿಗೆ ಬೇರೆ ಬೇರೆ ರೀತಿಯ ಟ್ಯಾಕ್ಸ್ ಹಾಕುತ್ತಿದ್ದವು. ಜಿಎಸ್​ಟಿ ಬಂದ ಬಳಿಕ ಶೇ. 28 ತೆರಿಗೆ ನಿಗದಿ ಮಾಡಲಾಯಿತು.

ಇದರಿಂದ ರಾಜ್ಯ ಸರ್ಕಾರಗಳಿಗೆ ತೆರಿಗೆ ಆದಾಯ ಕಡಿಮೆ ಆಗುತ್ತಿದ್ದುದರಿಂದ, ಅದನ್ನು ಭರಿಸಲು ಕಾಂಪೆನ್ಸೇಶನ್ ಸೆಸ್ ಸೇರಿಸಲಾಯಿತು. ಈ ಸೆಸ್​ನಿಂದ ಬಂದ ಹಣವನ್ನು ಶೇಖರಿಸಿ, ರಾಜ್ಯಗಳಿಗೆ ಮರುಹಂಚಿಕೆ ಮಾಡಲಾಗುತ್ತಿತ್ತು. ಈ ರೀತಿಯಾಗಿ ರಾಜ್ಯ ಸರ್ಕಾರಗಳಿಗೆ ಆದಾಯ ನಷ್ಟವನ್ನು ಭರಿಸಲು ಸಾಧ್ಯವಾಗುತ್ತಿದೆ.

ಇದನ್ನೂ ಓದಿ: ಸಿಗರೇಟ್ ಇತ್ಯಾದಿಗೆ ಸಿನ್ ಟ್ಯಾಕ್ಸ್; ಆದ್ರೆ ಮದ್ಯಕ್ಕೆ ಇಲ್ಲ, ಯಾಕೆ?

ಈಗ ಕೇಂದ್ರ ಸರ್ಕಾರ ಸಿಗರೇಟು ಮತ್ತಿತರ ವಸ್ತುಗಳಿಗೆ ಜಿಎಸ್​ಟಿಯನ್ನು ಶೇ. 28 ಬದಲು ಶೇ. 40ಕ್ಕೆ ಹೆಚ್ಚಿಸಿದೆ. ಕಾಂಪೆನ್ಸೇಶನ್ ಸೆಸ್ ಅನ್ನು ನಿರ್ಮೂಲನೆ ಮಾಡಲು ಉದ್ದೇಶಿಸಿದೆ. ಹೀಗೆ ಮಾಡಿದರೆ ರಾಜ್ಯ ಸರ್ಕಾರಗಳಿಗೆ ಆದಾಯ ನಷ್ಟವಾಗಬಹುದು. ಹೀಗಾಗಿ, ಒಮ್ಮೆಗೇ ಸೆಸ್ ತೆಗೆದುಹಾಕುವ ಬದಲು ಹಂತ ಹಂತವಾಗಿ ಅದನ್ನು ಕಡಿಮೆ ಮಾಡಲಾಗುತ್ತಿದೆ.

2017ರಲ್ಲಿ ಜಿಎಸ್​ಟಿ ಜಾರಿಯಾದಾಗ ಕಾಂಪೆನ್ಸೇನ್ ಸೆಸ್ ಅನ್ನು 5 ವರ್ಷದವರೆಗೆ ಮುಂದುವರಿಸಲೆಂದು ತೀರ್ಮಾನಿಸಲಾಗಿತ್ತು. 2020ರಲ್ಲಿ ಕೋವಿಡ್ ಸಂಕಷ್ಟ ಬಂದಾಗ ರಾಜ್ಯಗಳಿಗೆ ತೆರಿಗೆ ಆದಾಯ ಕುಂಠಿತಗೊಂಡಿತು. ಹೀಗಾಗಿ, ಮತ್ತೂ 5 ವರ್ಷ ಸೆಸ್ ಮುಂದುವರಿಸಲಾಗಿದೆ. ಈ ಹೊಂದಾಣಿಕೆಯು 2026ರ ಮಾರ್ಚ್​ಗೆ ಮುಗಿಯುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು