AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SpiceJet: ಕಳಾನಿಧಿ ಮಾರನ್​ಗೆ 380 ಕೋಟಿ ರೂ ಕೊಡಲು ಸ್ಪೈಸ್​ಜೆಟ್​ಗೆ ದೆಹಲಿ ಕೋರ್ಟ್ ಆದೇಶ; ಏನಿದು ಪ್ರಕರಣ?

Delhi High Court Order To SpiceJet: 2015ರಲ್ಲಿ ಸನ್ ಗ್ರೂಪ್​ನ ಕಳಾನಿಧಿ ಮಾರನ್ ಸ್ಪೈಸ್​ಜೆಟ್​ನಲ್ಲಿದ್ದ ತಮ್ಮೆಲ್ಲಾ ಪಾಲಿನ ಷೇರುಗಳನ್ನು ಅಜಯ್ ಸಿಂಗ್​ಗೆ ವರ್ಗಾಯಿಸಿರುತ್ತಾರೆ. ಇದಕ್ಕೆ ಬದಲಾಗಿ 18 ಕೋಟಿ ಕನ್ವರ್ಟಿಬಲ್ ವಾರಂಟ್ ಅನ್ನು ಕೊಡಲು ಸ್ಪೈಸ್​ಜೆಟ್ ವಿಫಲವಾಗಿದೆ ಎಂದು ಆರೋಪಿಸಿ ಮಾರನ್ 2017ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು.

SpiceJet: ಕಳಾನಿಧಿ ಮಾರನ್​ಗೆ 380 ಕೋಟಿ ರೂ ಕೊಡಲು ಸ್ಪೈಸ್​ಜೆಟ್​ಗೆ ದೆಹಲಿ ಕೋರ್ಟ್ ಆದೇಶ; ಏನಿದು ಪ್ರಕರಣ?
ಸ್ಪೈಸ್​ಜೆಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 01, 2023 | 5:17 PM

Share

ನವದೆಹಲಿ: ಷೇರು ರವಾನೆ ವಿಚಾರದಲ್ಲಿ ಉಂಟಾದ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸ್ಪೈಸ್​ಜೆಟ್ ಏರ್​ಲೈನ್ ಸಂಸ್ಥೆ (SpiceJet) ತನ್ನ ಮಾಜಿ ಪ್ರೊಮೋಟರ್ ಕಳಾನಿಧಿ ಮಾರನ್ ಅವರಿಗೆ 380 ರೂ ಕಟ್ಟಿಕೊಡಬೇಕಿದೆ. ದೆಹಲಿ ಹೈಕೋರ್ಟ್ ಜೂನ್ 1ರಂದು ಸ್ಪೈಸ್​ಜೆಟ್​ಗೆ ಈ ಆದೇಶ ನೀಡಿದೆ. ನಾಲ್ಕು ವಾರದಲ್ಲಿ ತನ್ನ ಆಸ್ತಿಗಳ ಅಫಿಡವಿಟ್ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಸ್ಪೈಸ್ ಜೆಟ್ ಈಗಾಗಲೇ ಮಾರನ್​ಗೆ 579.08 ಕೋಟಿ ರೂ ಕೊಟ್ಟಿದೆ. ಅದರ ಬಡ್ಡಿ ಎಲ್ಲವೂ ಸೇರಿ ಈಗ 380 ರೂ ಆಗಿದ್ದು, ಅದನ್ನೂ ಪಾವತಿಸುವಂತೆ ಸ್ಪೈಸ್​ಜೆಟ್​ಗೆ ಸೂಚಿಸಲಾಗಿದೆ. ಆದರೆ, ತಾನು 579 ಕೋಟಿ ರೂಗಳ ಅಸಲು ಹಣ ಕಟ್ಟಲಾಗಿರುವುದರಿಂದ ಬಡ್ಡಿಯಿಂದ ವಿನಾಯಿತಿ ಪಡೆಯಲು ಸ್ಪೈಸ್​ಜೆಟ್ ಸಂಧಾನಕ್ಕೆ ಮುಂದಾಗಿರುವುದು ತಿಳಿದುಬಂದಿದೆ.

ಅಂದಹಾಗೆ ಈ ಪ್ರಕರಣದ ಮೂಲ 2015ರಲ್ಲಿ ಶುರುವಾಗುತ್ತದೆ. ಸನ್ ಗ್ರೂಪ್​ನ ಕಳಾನಿಧಿ ಮಾರನ್ ಹಾಗು ಕೆಎಎಲ್ ಏರ್​ವೇಸ್ ಸ್ಪೈಸ್​ಜೆಟ್​ನಲ್ಲಿ ಹೊಂದಿದ್ದ ತಮ್ಮ ಎಲ್ಲಾ ಶೇ. 58.46ರಷ್ಟು ಪಾಲನ್ನು ಅಜಯ್ ಸಿಂಗ್ ಅವರಿಗೆ ಮಾರುತ್ತಾರೆ. ಒಟ್ಟು 35.04 ಕೋಟಿ ಈಕ್ವಿಟಿ ಶೇರುಗಳು ಅಜಯ್ ಸಿಂಗ್​ಗೆ ರವಾನೆಯಾಗುತ್ತದೆ. ಆದರೆ, ಕನ್ವರ್ಟಿಬಲ್ ವಾರಂಟ್ ಮತ್ತು ಪ್ರಿಫರೆನ್ಸ್ ಶೇರ್​ಗಳನ್ನು ಸ್ಪೈಸ್ ಜೆಟ್ ತಮಗೆ ನೀಡುತ್ತಿಲ್ಲ ಎಂದು ಆರೋಪಿಸಿ 2017ರಲ್ಲಿ ಮಾರನ್ ಅವರು ಕೋರ್ಟ್ ಮೆಟ್ಟಿಲೇರುತ್ತಾರೆ. 2020ರಲ್ಲಿ ಕೋರ್ಟ್ ತೀರ್ಪು ಕೊಟ್ಟು ಮಾರನ್​ಗೆ 579.08 ಕೋಟಿ ಅಸಲು ಹಣಕ್ಕೆ ಬಡ್ಡಿ ಸೇರಿಸಿ ಕೊಡುವಂತೆ ತಿಳಿಸುತ್ತದೆ. ಸ್ಪೈಸ್​ಜೆಟ್ ಅಸಲು ಹಣ ಕೊಡುತ್ತದೆ. ಆದರೆ, ಬಡ್ಡಿ ಹಣ ಬಾಕಿ ಉಳಿದಿರುತ್ತದೆ. 2020 ಅಕ್ಟೋಬರ್​ನಲ್ಲಿ ಬಡ್ಡಿ ಹಣ 242 ಕೋಟಿ ರೂ ಆಗಿರುತ್ತದೆ. ಈಗ ಅದು 362 ರುಪಾಯಿಯಷ್ಟಾಗಿದೆ.

ಇದನ್ನೂ ಓದಿOwn business: ಸ್ವಂತ ವ್ಯವಹಾರ ನಡೆಸಲು ಏನೇನು ಮಾಡಬೇಕು? ಈ ಕೆಲ ಅಂಶಗಳು ಗಮನದಲ್ಲಿರಲಿ

ಸ್ಪೈಸ್​ಜೆಟ್ ಇತಿಹಾಸ:

ಖ್ಯಾತ ಉದ್ಯಮಿ ಎಸ್.ಕೆ. ಮೋದಿ ಅವರು 1984ರಲ್ಲಿ ಏರ್ ಟ್ಯಾಕ್ಸಿ ಸರ್ವಿಸ್ ಆರಂಭಿಸಿದ್ದರು. 1993ರಲ್ಲಿ ಲಫ್ತಾನ್ಸಾ ಏರ್​ಲೈನ್ಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಯಿತು. ಎಂಜಿ ಎಕ್ಸ್​ಪ್ರೆಸ್ ಎಂದು ಹೆಸರಿಡಲಾಯಿತು. 1996ರಲ್ಲಿ ಇದು ಮುಚ್ಚಿಹೋಯಿತು. 2004ರಲ್ಲಿ ಅಜಯ್ ಸಿಂಗ್ ಅವರು ಈ ಕಂಪನಿಯನ್ನು ಖರೀದಿಸಿದ್ದರು. ಸ್ಪೈಸ್​ಜೆಟ್ ಎಂದು ಹೆಸರು ಬದಲಾಯಿತು. 2010ರಲ್ಲಿ ಕಳಾನಿಧಿ ಮಾರನ್ ಶೇ. 37.7ರಷ್ಟು ಪಾಲು ಖರೀದಿ ಮಾಡಿದರು. ನಂತರ ತಮ್ಮ ಷೇರುಪಾಲು ಇನ್ನಷ್ಟು ಹೆಚ್ಚಿಸಿಕೊಂಡರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್