AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ರೀಟೇಲ್ ಬ್ಯುಸಿನೆಸ್ ನಿಲ್ಲಿಸಲಿರುವ ಜರ್ಮನ್ ಮೂಲದ ಬ್ಯಾಂಕ್

Deutsche bank puts up its Indian retail assets for sale: ಜರ್ಮನಿ ಮೂಲದ ಡಾಯು ಬ್ಯಾಂಕ್ ತನ್ನ ರೀಟೇಲ್ ಬ್ಯುಸಿನೆಸ್​ನಲ್ಲಿ ಬದಲಾವಣೆ ಮಾಡಲು ಹೊರಟಿದೆ. ಇದರ ಭಾಗವಾಗಿ ಭಾರತದಲ್ಲಿರುವ ತನ್ನ ಸಂಪೂರ್ಣ ರೀಟೇಲ್ ಆಸ್ತಿಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ರಾಯ್ಟರ್ಸ್ ವರದಿ ಪ್ರಕಾರ ಇದರ ಭಾರತೀಯ ಬ್ಯುಸಿನೆಸ್ ಮಾರಾಟಕ್ಕಾಗಿ ವಿವಿಧ ಬ್ಯಾಂಕುಗಳಿಂದ ಬಿಡ್ ಕರೆಯಲಾಗಿತ್ತು.

ಭಾರತದಲ್ಲಿ ರೀಟೇಲ್ ಬ್ಯುಸಿನೆಸ್ ನಿಲ್ಲಿಸಲಿರುವ ಜರ್ಮನ್ ಮೂಲದ ಬ್ಯಾಂಕ್
ಡಾಯ್​ಶು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 02, 2025 | 11:41 AM

Share

ನವದೆಹಲಿ, ಸೆಪ್ಟೆಂಬರ್ 2: ಜರ್ಮನಿ ಮೂಲದ ಡಾಯ್​ಶು ಬ್ಯಾಂಕ್ (Deutsche Bank) ಭಾರತದಲ್ಲಿರುವ ತನ್ನ ರೀಟೇಲ್ ಬ್ಯಾಂಕಿಂಗ್ ಬ್ಯುಸಿನೆಸ್ (Retail banking assents) ಅನ್ನು ಮಾರುವ ಆಲೋಚನೆಯಲ್ಲಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳೂ ಕೂಡ ನಡೆದಿವೆ. ರಾಯ್ಟರ್ಸ್ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ತನ್ನ ಭಾರತೀಯ ರೀಟೇಲ್ ಬ್ಯುಸಿನೆಸ್​ಗಳನ್ನು ಮಾರುವ ಸಲುವಾಗಿ ಭಾರತವೂ ಸೇರಿದಂತೆ ವಿವಿಧ ದೇಶಗಳ ಬ್ಯಾಂಕುಗಳಿಂದ ಬಿಡ್ ಆಹ್ವಾನಿಸಿರುವುದು ತಿಳಿದುಬಂದಿದೆ.

ಡಾಯ್​ಶು ಬ್ಯಾಂಕ್ ತನ್ನ ರೀಟೇಲ್ ಬ್ಯುಸಿನೆಸ್ ಅನ್ನು ಹೆಚ್ಚು ಲಾಭದಾಯಕವಾಗಿ ಮಾಡುವ ಗುರಿ ಇಟ್ಟಿದೆ. ಸರಿಯಾಗಿ ಲಾಭ ತರದ ಬ್ಯಾಂಕ್ ಶಾಖೆಗಳನ್ನು ಮುಚ್ಚುವುದು ಸೇರಿದಂತೆ ವಿವಿಧ ಕ್ರಮಗಳನ್ನು ಈ ಜರ್ಮನ್ ಬ್ಯಾಂಕ್ ಕೈಗೊಳ್ಳುತ್ತಿದೆ. ಈ ವರ್ಷ 2,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಯೋಜನೆಯೂ ಇದರಲ್ಲಿದೆ.

ಇದನ್ನೂ ಓದಿ: Nestle CEO: ಸಹೋದ್ಯೋಗಿ ಜೊತೆ ಸಂಬಂಧ; ನೆಸ್ಲೆ ಸಿಇಒ ಲಾರೆಂಟ್ ವಜಾ

ಭಾರತದಲ್ಲಿ ಡಾಯ್​ಶು ಬ್ಯಾಂಕ್ ತನ್ನ ರೀಟೇಲ್ ಸೆಕ್ಟರ್​ನಲ್ಲಿ 17 ಶಾಖೆಗಳನ್ನು ಹೊಂದಿದೆ. ಇಷ್ಟೂ ಬ್ಯಾಂಕ್ ಬ್ರ್ಯಾಂಚ್​ಗಳನ್ನು ಅದು ಮಾರಾಟ ಮಾಡಲು ಹೊರಟಿದೆ ಎಂದು ರಾಯ್ಟರ್ಸ್ ವರದಿಯು ಎರಡು ಮೂಲಗಳನ್ನು ಉಲ್ಲೇಖಿಸಿ ಮಾಹಿತಿ ನೀಡಿದೆ.

ಆದರೆ, ಡಾಯ್​ಶೆ ಬ್ಯಾಂಕ್​ನ ವಕ್ತಾರರು ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಇದೆಲ್ಲವೂ ಊಹಾಪೋಹ ಮತ್ತು ಮಾರುಕಟ್ಟೆಯ ಗಾಳಿ ಸುದ್ದಿ ಎಂದು ವಕ್ತಾರರು ತಳ್ಳಿ ಹಾಕಿದ್ದಾರೆ. ರಾಯ್ಟರ್ಸ್​ಗೆ ಈ ಮಾರಾಟ ಪ್ರಯತ್ನದ ಬಗ್ಗೆ ಮಾಹಿತಿ ನೀಡಿರುವ ಎರಡು ಮೂಲಗಳು ಹೇಳುವ ಪ್ರಕಾರ, ಮಾರಾಟ ಸಂಬಂಧದ ಮಾತುಕತೆಗಳು ಇನ್ನೂ ಖಾಸಗಿಯಾಗಿ ಇರುವುದರಿಂದ ಸ್ಪಷ್ಟವಾಗಿ ಹೇಳಲು ಆಗುವುದಿಲ್ಲ.

ಇದನ್ನೂ ಓದಿ: ಆಗಸ್ಟ್​​ನಲ್ಲಿ ದೈನಂದಿನ ಸರಾಸರಿ ಯುಪಿಐ ವಹಿವಾಟು 65 ಕೋಟಿ; ಒಂದು ತಿಂಗಳಲ್ಲಿ 25 ಲಕ್ಷ ಕೋಟಿ ರೂ ಟ್ರಾನ್ಸಾಕ್ಷನ್ಸ್

ಈ ಮೂಲಗಳ ಪ್ರಕಾರ, ಭಾರತದಲ್ಲಿರುವ ತಮ್ಮ ರೀಟೇಲ್ ಬ್ಯಾಂಕಿಂಗ್ ಬ್ಯುಸಿನೆಸ್​ಗೆ ಬಿಡ್​ಗಳನ್ನು ಸಲ್ಲಿಸಲು ಆಗಸ್ಟ್ 29ಕ್ಕೆ ಡೆಡ್​ಲೈನ್ ನಿಗದಿ ಮಾಡಲಾಗಿತ್ತು. ಆದರೆ, ಯಾವ್ಯಾವ ಬ್ಯಾಂಕುಗಳಿಂದ ಬಿಡ್ ಸಲ್ಲಿಕೆಯಾಗಿವೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ ಎಂದು ರಾಯ್ಟರ್ಸ್ ವರದಿ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ