AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Life Certificate: ಪಿಂಚಣಿದಾರರೆ ಗಮನಿಸಿ, ಈ ವರ್ಷದ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ನವೆಂಬರ್ ತಿಂಗಳು ಗಡುವು

Digital Life Certificate information: ಸರ್ಕಾರಿ ಪಿಂಚಣಿದಾರರು ಪ್ರತೀ ವರ್ಷ ಲೈಫ್ ಸರ್ಟಿಫಿಕೇಟ್ ಸಲ್ಲಿಸುವುದು ಅಗತ್ಯ. ನವೆಂಬರ್ 30ರೊಳಗೆ ಸರ್ಟಿಫಿಕೇಟ್ ಸಲ್ಲಿಸದೇ ಹೋದರೆ ಡಿಸೆಂಬರ್​ನಲ್ಲಿ ಪಿಂಚಣಿ ಬರುವುದಿಲ್ಲ. ವಿವಿಧೆಡೆ ಇರುವ ಜೀವನ್ ಪ್ರಮಾಣ್ ಸೆಂಟರ್​ಗಳಲ್ಲಿ ನೀವು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯಬಹುದು. ಮೊಬೈಲ್ ಆ್ಯಪ್ ಡೌನ್​ಲೋಡ್ ಮಾಡಿಯೂ ಪ್ರಮಾಣಪತ್ರ ಪಡೆಯಬಹುದು.

Life Certificate: ಪಿಂಚಣಿದಾರರೆ ಗಮನಿಸಿ, ಈ ವರ್ಷದ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ನವೆಂಬರ್ ತಿಂಗಳು ಗಡುವು
ಪಿಂಚಣಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 05, 2024 | 2:16 PM

Share

ನವದೆಹಲಿ, ನವೆಂಬರ್ 5: ಕೇಂದ್ರ ಮತ್ತು ರಾಜ್ಯಗಳ ಸರ್ಕಾರಿ ನೌಕರಿಯಲ್ಲಿದ್ದು ನಿವೃತ್ತರಾಗಿ ಪಿಂಚಣಿ ಪಡೆಯುತ್ತಿರುವ ವ್ಯಕ್ತಿಗಳು ಪ್ರತೀ ವರ್ಷ ಲೈಫ್ ಸರ್ಟಿಫಿಕೇಟ್ ಸಲ್ಲಿಸುವುದು ಕಡ್ಡಾಯ. ಪಿಂಚಣಿದಾರರು ತಾವು ಜೀವಂತವಾಗಿರುವುದನ್ನು ತೋರಿಸಲು ಈ ನಿಯಮ ಮಾಡಲಾಗಿದೆ. ಪ್ರತೀ ವರ್ಷ ನವೆಂಬರ್​ನೊಳಗೆ ಪ್ರತೀ ಪಿಂಚಣಿದಾರರೂ ಜೀವನ ಪ್ರಮಾಣಪತ್ರ ಸಲ್ಲಿಸಬೇಕು. ನವೆಂಬರ್ 30ರವರೆಗೂ ಗಡುವು ಇದೆ.

ನಿಮಗೆ ಪಿಂಚಣಿ ಸಿಗುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್​ನ ಕಚೇರಿಗೆ ಹೋಗಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕು. ಈಗ ಡಿಜಿಟಲ್ ಮೂಲಕ ಪ್ರಮಾಣಪತ್ರ ಸಲ್ಲಿಸುವ ಅವಕಾಶ ಇದೆ. ಮುಂಚೆಯಾದರೆ, ಪಿಂಚಣಿದಾರರೇ ಖುದ್ದಾಗಿ ಪಿಂಚಣಿ ವಿತರಕ ಸಂಸ್ಥೆಯ ಕಚೇರಿಗೆ (ಬ್ಯಾಂಕ್ ಅಥವಾ ಅಂಚೆ ಕಚೇರಿ) ಹೋಗಬೇಕಿತ್ತು. ಅಥವಾ ತಾವು ಕೆಲಸ ಮಾಡಿದ್ದ ಸಂಸ್ಥೆಯನ್ನು ಸಂಪರ್ಕಸಿ ಅಲ್ಲಿಂದ ಲೈಫ್ ಸರ್ಟಿಫಿಕೇಟ್ ಅನ್ನು ಪಿಂಚಣಿ ವಿತರಕ ಸಂಸ್ಥೆಗೆ ಕಳುಹಿಸುವಂತೆ ಮಾಡಬೇಕಿತ್ತು.

ಈಗ ಡಿಜಿಟಲ್ ಆಗಿ ಲೈಫ್ ಸರ್ಟಿಫಿಕೇಟ್ ಪಡೆಯಬಹುದು. ಜೀವನ್ ಪ್ರಮಾಣ್ ವೆಬ್​ಸೈಟ್​ಗೆ ಹೋಗಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯಬಹುದು. ನವೆಂಬರ್ 1ರಿಂದ 15 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಸಿದ್ದಾರೆನ್ನಲಾಗಿದೆ.

ಇದನ್ನೂ ಓದಿ: 150 ದಿನಗಳ ವ್ಯಾಲಿಡಿಟಿಯ ಬಿಎಸ್ಸೆನ್ನೆಲ್ ರೀಚಾರ್ಜ್ ಪ್ಲಾನ್; ಬೆಲೆ 400 ರೂಗಿಂತ ಕಡಿಮೆ

ದೇಶಾದ್ಯಂತ ಇರುವ ಜೀವನ್ ಪ್ರಮಾಣ್ ಸೆಂಟರ್​ಗಳಲ್ಲಿ ನೀವು ನೊಂದಾಯಿಸಬಹುದು. ಅಥವಾ, ಜೀವನ್ ಪ್ರಮಾಣ್ ವೆಬ್​ಸೈಟ್​​ಗೆ ಹೋದರೆ ಅಲ್ಲಿ ನೀವು ಅರ್ಜಿ ಡೌನ್​ಲೋಡ್ ಮಾಡಬಹುದು.

ಆನ್​ಲೈನ್​ನಲ್ಲಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯುವ ಕ್ರಮ

  • ನೀವು ಜೀವನ್ ಪ್ರಮಾಣ್ ವೆಬ್​ಸೈಟ್​ಗೆ ಹೋಗಿ ಡೌನ್​ಲೋಡ್ ಲಿಂಕ್ ಕ್ಲಿಕ್ ಮಾಡಿ
  • ಅಲ್ಲಿ ನಿಮ್ಮ ಇಮೇಲ್ ಐಡಿಯನ್ನು ನೀಡಿ, ಕ್ಯಾಪ್ಚಾ ನಮೂದಿಸಿ, ಐ ಅಗ್ರೀ ಟು ಡೌನ್​ಲೋಡ್ ಎಂಬುದನ್ನು ಕ್ಲಿಕ್ ಮಾಡಿ.
  • ನಿಮ್ಮ ಇಮೇಲ್ ಐಡಿಗೆ ಬರುವ ಒಟಿಪಿಯನ್ನು ನಮೂದಿಸಿದರೆ ಡೌನ್​ಲೋಡ್ ಪೇಜ್ ಕಾಣಿಸುತ್ತದೆ.
  • ಅಲ್ಲಿ ಮೊಬೈಲ್ ಆ್ಯಪ್ ಡೌನ್​ಲೋಡ್ ಎನ್ನುವ ಲಿಂಕ್ ಕ್ಲಿಕ್ ಮಾಡಿದರೆ, ನಿಮ್ಮ ಇಮೇಲ್ ಐಡಿಗೆ ಡೌನ್​ಲೋಡ್ ಲಿಂಕ್ ಬಂದಿರುತ್ತದೆ.
  • ನೀವು ಇಮೇಲ್ ತೆರೆದು ಆ ಡೌನ್​ಲೋಡ್ ಲಿಂಕ್ ಕ್ಲಿಕ್ ಮಾಡಿ, ಜೀವನ್ ಪ್ರಮಾಣ್ ಆ್ಯಪ್ ಅನ್ನು ಮೊಬೈಲ್​ಗೆ ಇನ್ಸ್​ಟಾಲ್ ಮಾಡಿಕೊಳ್ಳಬಹುದು.

ಇಲ್ಲಿ ನಿಮ್ಮ ಆಧಾರ್ ನಂಬರ್, ಪೆನ್ಷನ್ ಪೇಮೆಂಟ್ ಆರ್ಡರ್, ಬ್ಯಾಂಕ್ ಅಕೌಂಟ್, ಬ್ಯಾಂಕ್ ಹೆಸರು, ಮೊಬೈಲ್ ನಂಬರ್ ಇತ್ಯಾದಿ ವಿವರ ತುಂಬಬೇಕು. ಆಧಾರ್ ದೃಢೀಕರಣ ನೀಡಬೇಕಾಗುತ್ತದೆ. ಆ ಬಳಿಕ ಡಿಜಿಟಲ್ ಲೈಫ್ ಸರ್ಟಿಫಿಕೇಟ್​​ನ ಐಡಿ ಸಿಗುತ್ತದೆ.

ಈ ಸರ್ಟಿಫಿಕೇಟ್​ಗಳು ರೆಪಾಸಿಟರಿಗಳಲ್ಲಿ ಸಂಗ್ರಹವಾಗಿರುತ್ತವೆ. ಪೆನ್ಷನ್ ವಿತರಕ ಏಜೆನ್ಸಿ, ಪಿಂಚಣಿದಾರರು ಯಾವಾಗ ಬೇಕಾದರೂ ಈ ರೆಪಾಸಿಟರಿಗಳಿಂದ ಜೀವನ್ ಪ್ರಮಾಣ್ ಸರ್ಟಿಫಿಕೇಟ್ ಐಡಿಯನ್ನು ಪಡೆಯಬಹುದು.

ನವೆಂಬರ್ 30ರೊಳಗೆ ಲೈಫ್ ಸರ್ಟಿಫಿಕೇಟ್ ಸಲ್ಲಿಸದಿದ್ದರೆ ಏನಾಗುತ್ತೆ?

ಲೈಫ್ ಸರ್ಟಿಫಿಕೇಟ್ ಡಿಸೆಂಬರ್ 1ರಿಂದ ಮುಂದಿನ ವರ್ಷದ ನವೆಂಬರ್ 30ರವರೆಗೂ ಸಿಂಧು ಇರುತ್ತದೆ. ನವೆಂಬರ್ 30ರೊಳಗೆ ರಿನಿವಲ್ ಮಾಡದೇ ಹೋದರೆ ಡಿಸೆಂಬರ್​ನಲ್ಲಿ ಬರುವ ಪೆನ್ಷನ್ ಸಿಗುವುದಿಲ್ಲ. ನೀವು ಲೈಫ್ ಸರ್ಟಿಫಿಕೇಟ್ ಸಲ್ಲಿಸುವವರೆಗೂ ಪಿಂಚಣಿ ಬರೋದು ನಿಂತಿರುತ್ತದೆ.

ಇದನ್ನೂ ಓದಿ: ಚಿನ್ನ ನಕಲಿಯಾ, ಅಸಲಿಯಾ ಪತ್ತೆ ಹಚ್ಚುವುದು ಹೇಗಿದೆ? ಇಲ್ಲಿದೆ ಕ್ರಮ

ತಡವಾಗಿ ನೀವು ಲೈಫ್ ಸರ್ಟಿಫಿಕೇಟ್ ನೀಡಿದರೆ ಅರಿಯರ್ಸ್ ಸಮೇತ ಪಿಂಚಣಿ ಬರುತ್ತದೆ. ಉದಾಹರಣೆಗೆ, ನವೆಂಬರ್ 30ರ ಬದಲು ನೀವು ಜನವರಿ 10ಕ್ಕೆ ಲೈಫ್ ಸರ್ಟಿಫಿಕೇಟ್ ಸಲ್ಲಿಸಿದಲ್ಲಿ ಆಗ ಫೆಬ್ರುವರಿ ತಿಂಗಳಿಂದ ಪಿಂಚಣಿ ಪುನಾರಂಭವಾಗುತ್ತದೆ. ನಿಂತು ಹೋಗಿದ್ದ ಎರಡು ತಿಂಗಳ ಪಿಂಚಣಿ ಹಣವೂ ಸೇರಿಸಿ ಫೆಬ್ರುವರಿಯಲ್ಲಿ ನಿಮಗೆ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ