Sundar Pichai: ಎಂಜಿನಿಯರ್ ಅಲ್ಲ, ಕ್ರಿಕೆಟ್ ಆಟಗಾರನಾಗುವ ಆಸೆ ಹೊಂದಿದ್ದರು ಗೂಗಲ್ ಸಿಇಒ ಸುಂದರ್ ಪಿಚೈ

Google CEO's Childhood Dream: ನಾವು ಕನಸು ಕಾಣುವುದೇ ಬೇರೆ, ನಡೆಯುವುದೇ ಬೇರೆ. ಬಾಲ್ಯದ ಕನಸು ಕನಸಾಗಿಯೇ ಉಳಿಯುತ್ತದೆ. ಗೂಗಲ್ ಸಿಇಒ ಸುಂದರ್ ಪಿಚೈದೂ ಇದೇ ಕಥೆ. ಸುಂದರ್ ಪಿಚೈ ಅವರಿಗೆ ಬಾಲ್ಯದಲ್ಲಿ ಕ್ರಿಕೆಟಿಗನಾಗುವ ಆಸೆ ಇತ್ತಂತೆ. ಆದರೆ, ಎಂಜಿನಿಯರ್ ಆಗಿ ವಿಶ್ವದ ಪ್ರಭಾವಿ ವ್ಯಕ್ತಿ ಎನಿಸಿದ್ದಾರೆ. ಸುಂದರ್ ಪಿಚೈ ಅತಿಹೆಚ್ಚು ಸಂಬಳ ಪಡೆಯುವ ಸಿಇಒಗಳಲ್ಲಿ ಒಬ್ಬರು. ಇವರು ವರ್ಷಕ್ಕೆ 1,600 ಕೋಟಿ ರೂಗೂ ಹೆಚ್ಚು ಸಂಬಳ ಪಡೆಯುತ್ತಾರೆ.

Sundar Pichai: ಎಂಜಿನಿಯರ್ ಅಲ್ಲ, ಕ್ರಿಕೆಟ್ ಆಟಗಾರನಾಗುವ ಆಸೆ ಹೊಂದಿದ್ದರು ಗೂಗಲ್ ಸಿಇಒ ಸುಂದರ್ ಪಿಚೈ
ಸುಂದರ್ ಪಿಚೈ

Updated on: Jan 09, 2024 | 3:54 PM

ಇವತ್ತಿನ ಪೀಳಿಗೆಯವರಿಗೆ ಕನಸಿನ ಉದ್ಯೋಗ ಯಾವುದು ಎಂದು ಕೇಳಿದರೆ ಹೆಚ್ಚಿನವರು ಗೂಗಲ್, ಆ್ಯಪಲ್, ಫೇಸ್ಬುಕ್ ಇತ್ಯಾದಿ ಟೆಕ್ ದೈತ್ಯ ಸಂಸ್ಥೆಗಳ ಹೆಸರು ಹೇಳಬಹುದು. ಈ ಟೆಕ್ ಕಂಪನಿಗಳ ಮುಖ್ಯಸ್ಥರಿಗೆ ಹಿಂದೆಲ್ಲಾ ಯಾವ ಕನಸುಗಳಿದ್ದಿರಬಹುದು? ಬಾಲ್ಯದಲ್ಲಿ ನಾವು ಆಸೆ ಪಡುವುದು ಒಂದು, ಆಗುವುದು ಇನ್ನೊಂದು. ಇದು ಸಾಮಾನ್ಯ. ಅಂತೆಯೇ, ಗೂಗಲ್​ನ ಸಿಇಒ ಸುಂದರ್ ಪಿಚೈ (Google CEO Sundar Pichai) ಅವರಿಗೆ ಬಾಲ್ಯದ ಕನಸೇ ಬೇರೆ ಇತ್ತಂತೆ. ತಾನು ಗೂಗಲ್​ನ ಚುಕ್ಕಾಣಿ ಹಿಡಿಯುತ್ತೇನೆ ಎಂದು ಅವರು ಕನಸಿನಲ್ಲೂ ಎಣಿಸಿರಲಿಲ್ಲ.

ಸುಂದರ್ ಪಿಚೈ ಬಾಲ್ಯದ ಕನಸು ಏನಾಗಿತ್ತು?

ಚೆನ್ನೈ ಸಂಜಾತರಾದ ಸುಂದರ್ ಪಿಚೈ ಎಂಜಿನಿಯರ್ ಆಗಿದ್ದು ಕಾಕತಾಳೀಯವಾಗಿ. ಕ್ರಿಕೆಟ್ ಆಟಗಾರನಾಗಬೇಕು ಎಂಬುದು ಅವರ ಬಾಲ್ಯದ ಮಹೋನ್ನತ ಕನಸಾಗಿತ್ತು. ಆ ಕಾಲಕ್ಕೆ ಸುನೀಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಹೆಸರುವಾಸಿಯಾಗಿದ್ದವರು. ಸುಂದರ್ ಕೂಡ ಅವರಿಬ್ಬರ ದೊಡ್ಡ ಅಭಿಮಾನಿ. ಅವರು ಕ್ರಿಕೆಟ್ ಪ್ರೇಮಿ ಮಾತ್ರವೇ ಅಲ್ಲ ತಮ್ಮ ಶಾಲಾ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ಅನೇಕ ಟೂರ್ನಮೆಂಟ್​ಗಳನ್ನು ಗೆಲ್ಲಿಸಿದ್ದಾರೆ. ಚೆನ್ನೈನ ಜವಾಹರ್ ವಿದ್ಯಾಲಯದಲ್ಲಿ ಅವರು ಓದಿದ್ದು.

ಇದನ್ನೂ ಓದಿ: Lakshadweep Resorts: ಲಕ್ಷದ್ವೀಪದಲ್ಲಿ ನಿರ್ಮಾಣವಾಗಲಿವೆ ಎರಡು ವಿಶ್ವದರ್ಜೆ ರೆಸಾರ್ಟ್​ಗಳು; ತಾಜ್ ಗ್ರೂಪ್​ನ ಯೋಜನೆ

ಎಂಜಿನಿಯರಿಂಗ್ ಆಗಲು ಇಷ್ಟ ಇಲ್ಲದಿದ್ದರೂ ಐಐಟಿ ಖರಗ್​ಪುರ್​ನಲ್ಲಿ ಮೆಟಲರ್ಜಿಕಲ್ ಎಂಜನಿಯರಿಂಗ್ ಓದಿದ್ದಾರೆ. ಬಳಿಕ ಸ್ಟಾನ್​ಫೋರ್ಡ್ ಯೂನಿವರ್ಸಿಟಿ ಮತ್ತು ಪೆನ್​ಸಿಲ್ವೇನಿಯಾ ಯೂನಿವರ್ಸಿಟಿಯಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ.

2004ರಲ್ಲಿ ಗೂಗಲ್​ಗೆ ಸೇರಿದ ಅವರು ಹಂತ ಹಂತವಾಗಿ ಬಡ್ತಿ ಪಡೆದು 2015ರಲ್ಲಿ ಸಿಇಒ ಸ್ಥಾನಕ್ಕೆ ಏರಿದ್ದಾರೆ. ಅವರ ಒಂದು ವರ್ಷದ ಒಟ್ಟು ಸಂಬಳ ಬರೋಬ್ಬರಿ 1,663 ಕೋಟಿ ರೂ. ಅಂದರೆ ತಿಂಗಳಿಗೆ 13ರಿಂದ 14 ಕೋಟಿ ರೂ ಸಂಬಳ ಪಡೆಯುತ್ತಾರೆ. ವಿಶ್ವದಲ್ಲಿ ಅತಿಹೆಚ್ಚು ಸಂಬಳ ಪಡೆಯುವ ಸಿಇಒಗಳ ಪೈಕಿ ಸುಂದರ್ ಪಿಚೈ ಕೂಡ ಒಬ್ಬರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us