AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google: ಏರ್​ಟೆಲ್​ನಲ್ಲಿ ಗೂಗಲ್​ಗೆ 5224 ಕೋಟಿ ರೂಪಾಯಿ ಮೌಲ್ಯದ ಶೇ 1.2ರಷ್ಟು ಷೇರು ವಿತರಣೆ ವ್ಯವಹಾರ ಪೂರ್ಣ

ಟೆಲಿಕಾಂ ಸೇವೆ ನೀಡುವ ಭಾರತದ ಎರಡನೇ ಅತಿದೊಡ್ಡ ಸೇವಾ ಪೂರೈಕೆದಾರ ಕಂಪೆನಿ ಭಾರ್ತಿ ಏರ್​ಟೆಲ್ (Airtel) ಗುರುವಾರ ತಿಳಿಸಿರುವ ಪ್ರಕಾರ, ಗೂಗಲ್ ಇಂಟರ್​ನ್ಯಾಷನಲ್​ ಎಲ್​ಎಲ್​ಸಿ ವ್ಯವಹಾರವನ್ನು ಪೂರ್ಣಗೊಳಿಸಿದೆ. ಇದೀಗ ಏರ್​ಟೆಲ್​ನಲ್ಲಿ ಶೇ 1.2ರಷ್ಟು ಪಾಲನ್ನು ಗೂಗಲ್ ಹೊಂದುವುದಕ್ಕೆ ಸಂಪೂರ್ಣ ಪ್ರಕ್ರಿಯೆ ಮುಗಿದಂತಾಗಿದೆ. ಏರ್​ಟೆಲ್​ನಿಂದ ಗೂಗಲ್​ಗೆ 5,224 ಕೋಟಿ ರೂಪಾಯಿ ಮೌಲ್ಯದ ಪ್ರಿಫರೆನ್ಷಿಯಲ್ ಷೇರುಗಳನ್ನು ವಿತರಿಸಲಾಗಿದೆ. ಬಾಕಿ 300 ಮಿಲಿಯನ್ ಅಮೆರಿಕನ್ ಡಾಲರ್​ಗಳಿಗೆ ಗೂಗಲ್​ನಿಂದ ಮುಂದಿನ ಐದು ವರ್ಷಗಳಲ್ಲಿ ವಾಣಿಜ್ಯ ಒಪ್ಪಂದದ ಮೂಲಕವಾಗಿ ಹೂಡಿಕೆ ಮಾಡಲಾಗುವುದು. ಕಂಪೆನಿಯ ಆದ್ಯತೆ […]

Google: ಏರ್​ಟೆಲ್​ನಲ್ಲಿ ಗೂಗಲ್​ಗೆ 5224 ಕೋಟಿ ರೂಪಾಯಿ ಮೌಲ್ಯದ ಶೇ 1.2ರಷ್ಟು ಷೇರು ವಿತರಣೆ ವ್ಯವಹಾರ ಪೂರ್ಣ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jul 14, 2022 | 6:08 PM

Share

ಟೆಲಿಕಾಂ ಸೇವೆ ನೀಡುವ ಭಾರತದ ಎರಡನೇ ಅತಿದೊಡ್ಡ ಸೇವಾ ಪೂರೈಕೆದಾರ ಕಂಪೆನಿ ಭಾರ್ತಿ ಏರ್​ಟೆಲ್ (Airtel) ಗುರುವಾರ ತಿಳಿಸಿರುವ ಪ್ರಕಾರ, ಗೂಗಲ್ ಇಂಟರ್​ನ್ಯಾಷನಲ್​ ಎಲ್​ಎಲ್​ಸಿ ವ್ಯವಹಾರವನ್ನು ಪೂರ್ಣಗೊಳಿಸಿದೆ. ಇದೀಗ ಏರ್​ಟೆಲ್​ನಲ್ಲಿ ಶೇ 1.2ರಷ್ಟು ಪಾಲನ್ನು ಗೂಗಲ್ ಹೊಂದುವುದಕ್ಕೆ ಸಂಪೂರ್ಣ ಪ್ರಕ್ರಿಯೆ ಮುಗಿದಂತಾಗಿದೆ. ಏರ್​ಟೆಲ್​ನಿಂದ ಗೂಗಲ್​ಗೆ 5,224 ಕೋಟಿ ರೂಪಾಯಿ ಮೌಲ್ಯದ ಪ್ರಿಫರೆನ್ಷಿಯಲ್ ಷೇರುಗಳನ್ನು ವಿತರಿಸಲಾಗಿದೆ. ಬಾಕಿ 300 ಮಿಲಿಯನ್ ಅಮೆರಿಕನ್ ಡಾಲರ್​ಗಳಿಗೆ ಗೂಗಲ್​ನಿಂದ ಮುಂದಿನ ಐದು ವರ್ಷಗಳಲ್ಲಿ ವಾಣಿಜ್ಯ ಒಪ್ಪಂದದ ಮೂಲಕವಾಗಿ ಹೂಡಿಕೆ ಮಾಡಲಾಗುವುದು.

ಕಂಪೆನಿಯ ಆದ್ಯತೆ ವಿತರಣೆಗೆ ವಿಶೇಷ ಸಮಿತಿಯ ನಿರ್ದೇಶಕರು 71,176,839 ಈಕ್ವಿಟಿ ಷೇರುಗಳನ್ನು ಪೂರ್ತಿಯಾಗಿ ಪಾವತಿಸಿದ 5 ರೂಪಾಯಿಯ ಮುಖಬೆಲೆಯ ಷೇರನ್ನು ಆದ್ಯತೆಯ ಆಧಾರದಲ್ಲಿ ಗೂಗಲ್ ಇಂಟರ್​ನ್ಯಾಷನಲ್ ಎಲ್​ಎಲ್​ಸಿಗೆ ಇಶ್ಯೂ ಬೆಲೆ ಪ್ರತಿ ಷೇರಿಗೆ ರೂ. 734ರಂತೆ (ಪ್ರತಿ ಷೇರಿಗೆ 729 ರೂಪಾಯಿ ಪ್ರೀಮಿಯಂ ಒಳಗೊಂಡಂತೆ) ವಿತರಿಸಲು ಅನುಮತಿಸಿದ್ದಾರೆ ಎಂದು ಬಿಎಸ್​ಇಗೆ ಗುರುವಾರ ತಿಳಿಸಲಾಗಿದೆ.

ಇದರ ಫಲಿತವಾಗಿ ಷೇರು ವಿತರಣೆಯ ನಂತರದಲ್ಲಿ ಕಂಪೆನಿಯ ಶೇ 1.2ರಷ್ಟು- ಪೂರ್ತಿ ಡೈಲ್ಯೂಟ್ ಆದ ಆಧಾರದಲ್ಲಿ ಶೇ 1.17ರಷ್ಟು ಪಾಲನ್ನು ಗೂಗಲ್ ಹೊಂದಿರಲಿದೆ. ಕಳೆದ ವಾರ ಭಾರತದ ಸ್ಪರ್ಧಾ ಆಯೋಗ ಅನುಮತಿ ನೀಡಿದ ಮೇಲೆ ಈ ಘೋಷಣೆ ಬಂದಿದೆ.

ಈ ಹಿಂದೆ 2020ರ ಜುಲೈನಲ್ಲಿ ಗೂಗಲ್​ನಿಂದ ರಿಲಯನ್ಸ್​ ಜಿಯೋದಲ್ಲಿ 4.5 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗಿತ್ತು.

Published On - 6:08 pm, Thu, 14 July 22

Follow Us
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ