AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google: ಏರ್​ಟೆಲ್​ನಲ್ಲಿ ಗೂಗಲ್​ಗೆ 5224 ಕೋಟಿ ರೂಪಾಯಿ ಮೌಲ್ಯದ ಶೇ 1.2ರಷ್ಟು ಷೇರು ವಿತರಣೆ ವ್ಯವಹಾರ ಪೂರ್ಣ

ಟೆಲಿಕಾಂ ಸೇವೆ ನೀಡುವ ಭಾರತದ ಎರಡನೇ ಅತಿದೊಡ್ಡ ಸೇವಾ ಪೂರೈಕೆದಾರ ಕಂಪೆನಿ ಭಾರ್ತಿ ಏರ್​ಟೆಲ್ (Airtel) ಗುರುವಾರ ತಿಳಿಸಿರುವ ಪ್ರಕಾರ, ಗೂಗಲ್ ಇಂಟರ್​ನ್ಯಾಷನಲ್​ ಎಲ್​ಎಲ್​ಸಿ ವ್ಯವಹಾರವನ್ನು ಪೂರ್ಣಗೊಳಿಸಿದೆ. ಇದೀಗ ಏರ್​ಟೆಲ್​ನಲ್ಲಿ ಶೇ 1.2ರಷ್ಟು ಪಾಲನ್ನು ಗೂಗಲ್ ಹೊಂದುವುದಕ್ಕೆ ಸಂಪೂರ್ಣ ಪ್ರಕ್ರಿಯೆ ಮುಗಿದಂತಾಗಿದೆ. ಏರ್​ಟೆಲ್​ನಿಂದ ಗೂಗಲ್​ಗೆ 5,224 ಕೋಟಿ ರೂಪಾಯಿ ಮೌಲ್ಯದ ಪ್ರಿಫರೆನ್ಷಿಯಲ್ ಷೇರುಗಳನ್ನು ವಿತರಿಸಲಾಗಿದೆ. ಬಾಕಿ 300 ಮಿಲಿಯನ್ ಅಮೆರಿಕನ್ ಡಾಲರ್​ಗಳಿಗೆ ಗೂಗಲ್​ನಿಂದ ಮುಂದಿನ ಐದು ವರ್ಷಗಳಲ್ಲಿ ವಾಣಿಜ್ಯ ಒಪ್ಪಂದದ ಮೂಲಕವಾಗಿ ಹೂಡಿಕೆ ಮಾಡಲಾಗುವುದು. ಕಂಪೆನಿಯ ಆದ್ಯತೆ […]

Google: ಏರ್​ಟೆಲ್​ನಲ್ಲಿ ಗೂಗಲ್​ಗೆ 5224 ಕೋಟಿ ರೂಪಾಯಿ ಮೌಲ್ಯದ ಶೇ 1.2ರಷ್ಟು ಷೇರು ವಿತರಣೆ ವ್ಯವಹಾರ ಪೂರ್ಣ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 14, 2022 | 6:08 PM

ಟೆಲಿಕಾಂ ಸೇವೆ ನೀಡುವ ಭಾರತದ ಎರಡನೇ ಅತಿದೊಡ್ಡ ಸೇವಾ ಪೂರೈಕೆದಾರ ಕಂಪೆನಿ ಭಾರ್ತಿ ಏರ್​ಟೆಲ್ (Airtel) ಗುರುವಾರ ತಿಳಿಸಿರುವ ಪ್ರಕಾರ, ಗೂಗಲ್ ಇಂಟರ್​ನ್ಯಾಷನಲ್​ ಎಲ್​ಎಲ್​ಸಿ ವ್ಯವಹಾರವನ್ನು ಪೂರ್ಣಗೊಳಿಸಿದೆ. ಇದೀಗ ಏರ್​ಟೆಲ್​ನಲ್ಲಿ ಶೇ 1.2ರಷ್ಟು ಪಾಲನ್ನು ಗೂಗಲ್ ಹೊಂದುವುದಕ್ಕೆ ಸಂಪೂರ್ಣ ಪ್ರಕ್ರಿಯೆ ಮುಗಿದಂತಾಗಿದೆ. ಏರ್​ಟೆಲ್​ನಿಂದ ಗೂಗಲ್​ಗೆ 5,224 ಕೋಟಿ ರೂಪಾಯಿ ಮೌಲ್ಯದ ಪ್ರಿಫರೆನ್ಷಿಯಲ್ ಷೇರುಗಳನ್ನು ವಿತರಿಸಲಾಗಿದೆ. ಬಾಕಿ 300 ಮಿಲಿಯನ್ ಅಮೆರಿಕನ್ ಡಾಲರ್​ಗಳಿಗೆ ಗೂಗಲ್​ನಿಂದ ಮುಂದಿನ ಐದು ವರ್ಷಗಳಲ್ಲಿ ವಾಣಿಜ್ಯ ಒಪ್ಪಂದದ ಮೂಲಕವಾಗಿ ಹೂಡಿಕೆ ಮಾಡಲಾಗುವುದು.

ಕಂಪೆನಿಯ ಆದ್ಯತೆ ವಿತರಣೆಗೆ ವಿಶೇಷ ಸಮಿತಿಯ ನಿರ್ದೇಶಕರು 71,176,839 ಈಕ್ವಿಟಿ ಷೇರುಗಳನ್ನು ಪೂರ್ತಿಯಾಗಿ ಪಾವತಿಸಿದ 5 ರೂಪಾಯಿಯ ಮುಖಬೆಲೆಯ ಷೇರನ್ನು ಆದ್ಯತೆಯ ಆಧಾರದಲ್ಲಿ ಗೂಗಲ್ ಇಂಟರ್​ನ್ಯಾಷನಲ್ ಎಲ್​ಎಲ್​ಸಿಗೆ ಇಶ್ಯೂ ಬೆಲೆ ಪ್ರತಿ ಷೇರಿಗೆ ರೂ. 734ರಂತೆ (ಪ್ರತಿ ಷೇರಿಗೆ 729 ರೂಪಾಯಿ ಪ್ರೀಮಿಯಂ ಒಳಗೊಂಡಂತೆ) ವಿತರಿಸಲು ಅನುಮತಿಸಿದ್ದಾರೆ ಎಂದು ಬಿಎಸ್​ಇಗೆ ಗುರುವಾರ ತಿಳಿಸಲಾಗಿದೆ.

ಇದರ ಫಲಿತವಾಗಿ ಷೇರು ವಿತರಣೆಯ ನಂತರದಲ್ಲಿ ಕಂಪೆನಿಯ ಶೇ 1.2ರಷ್ಟು- ಪೂರ್ತಿ ಡೈಲ್ಯೂಟ್ ಆದ ಆಧಾರದಲ್ಲಿ ಶೇ 1.17ರಷ್ಟು ಪಾಲನ್ನು ಗೂಗಲ್ ಹೊಂದಿರಲಿದೆ. ಕಳೆದ ವಾರ ಭಾರತದ ಸ್ಪರ್ಧಾ ಆಯೋಗ ಅನುಮತಿ ನೀಡಿದ ಮೇಲೆ ಈ ಘೋಷಣೆ ಬಂದಿದೆ.

ಈ ಹಿಂದೆ 2020ರ ಜುಲೈನಲ್ಲಿ ಗೂಗಲ್​ನಿಂದ ರಿಲಯನ್ಸ್​ ಜಿಯೋದಲ್ಲಿ 4.5 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗಿತ್ತು.

Published On - 6:08 pm, Thu, 14 July 22

ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಸಮರ: ಹಲವೆಡೆ ಕಟ್ಟಡಗಳ ತೆರವು
ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಸಮರ: ಹಲವೆಡೆ ಕಟ್ಟಡಗಳ ತೆರವು
ವೆಸ್ಟ್​ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
ವೆಸ್ಟ್​ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
ಈ ಸಲ ಮೊದಲ ಬಾರಿಗೆ ಜನಗಣತಿಯ ಜಾತಿಗಣತಿ: ಗೃಹ ಸಚಿವಾಲಯ
ಈ ಸಲ ಮೊದಲ ಬಾರಿಗೆ ಜನಗಣತಿಯ ಜಾತಿಗಣತಿ: ಗೃಹ ಸಚಿವಾಲಯ
ಮೈಸೂರಿಗೆ 5 ರೂ. ಕೆಲಸ ಮಾಡಿಲ್ಲ ಸಿದ್ದರಾಮಯ್ಯ: ಪ್ರತಾಪ್ ಸಿಂಹ ವಾಗ್ದಾಳಿ
ಮೈಸೂರಿಗೆ 5 ರೂ. ಕೆಲಸ ಮಾಡಿಲ್ಲ ಸಿದ್ದರಾಮಯ್ಯ: ಪ್ರತಾಪ್ ಸಿಂಹ ವಾಗ್ದಾಳಿ
‘ಹುಡುಗಿ ಇದ್ದಾಗ ಒಂತರ, ಇಲ್ಲದಿದ್ದಾಗ ಒಂತರ’; ರಕ್ಷಕ್ ಬಗ್ಗೆ ರಮೋಲಾ ಮಾತು
‘ಹುಡುಗಿ ಇದ್ದಾಗ ಒಂತರ, ಇಲ್ಲದಿದ್ದಾಗ ಒಂತರ’; ರಕ್ಷಕ್ ಬಗ್ಗೆ ರಮೋಲಾ ಮಾತು
ಎಂಭತ್ತು ಶವಗಳ ಗುರುತು ಪತ್ತೆ, 4-ದಿನದಿಂದ ಕಾಯುತ್ತಿರುವ ಸಂಬಂಧಿಕರು
ಎಂಭತ್ತು ಶವಗಳ ಗುರುತು ಪತ್ತೆ, 4-ದಿನದಿಂದ ಕಾಯುತ್ತಿರುವ ಸಂಬಂಧಿಕರು
ಲಕ್ನೋ: ಸೌದಿ ಏರ್​ಲೈನ್ಸ್​ ವಿಮಾನದ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ
ಲಕ್ನೋ: ಸೌದಿ ಏರ್​ಲೈನ್ಸ್​ ವಿಮಾನದ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ
ಸ್ಫೋಟಕ ಬ್ಯಾಟಿಂಗ್​... ಮತ್ತೊಂದು ಟಿ20 ಟ್ರೋಫಿ ಗೆದ್ದ ಜಿತೇಶ್ ಶರ್ಮಾ
ಸ್ಫೋಟಕ ಬ್ಯಾಟಿಂಗ್​... ಮತ್ತೊಂದು ಟಿ20 ಟ್ರೋಫಿ ಗೆದ್ದ ಜಿತೇಶ್ ಶರ್ಮಾ
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ, ಭೋರ್ಗರೆಯುತ್ತಿರುವ ಭದ್ರೆ
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ, ಭೋರ್ಗರೆಯುತ್ತಿರುವ ಭದ್ರೆ
ಮಳೆ ಅಬ್ಬರ, ಈ ನಾಲ್ಕು ಜಿಲ್ಲೆಗಳಲ್ಲಿಂದು ಶಾಲೆ-ಕಾಲೇಜುಗಳಿಗೆ ರಜೆ
ಮಳೆ ಅಬ್ಬರ, ಈ ನಾಲ್ಕು ಜಿಲ್ಲೆಗಳಲ್ಲಿಂದು ಶಾಲೆ-ಕಾಲೇಜುಗಳಿಗೆ ರಜೆ