AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google: ಏರ್​ಟೆಲ್​ನಲ್ಲಿ ಗೂಗಲ್​ಗೆ 5224 ಕೋಟಿ ರೂಪಾಯಿ ಮೌಲ್ಯದ ಶೇ 1.2ರಷ್ಟು ಷೇರು ವಿತರಣೆ ವ್ಯವಹಾರ ಪೂರ್ಣ

ಟೆಲಿಕಾಂ ಸೇವೆ ನೀಡುವ ಭಾರತದ ಎರಡನೇ ಅತಿದೊಡ್ಡ ಸೇವಾ ಪೂರೈಕೆದಾರ ಕಂಪೆನಿ ಭಾರ್ತಿ ಏರ್​ಟೆಲ್ (Airtel) ಗುರುವಾರ ತಿಳಿಸಿರುವ ಪ್ರಕಾರ, ಗೂಗಲ್ ಇಂಟರ್​ನ್ಯಾಷನಲ್​ ಎಲ್​ಎಲ್​ಸಿ ವ್ಯವಹಾರವನ್ನು ಪೂರ್ಣಗೊಳಿಸಿದೆ. ಇದೀಗ ಏರ್​ಟೆಲ್​ನಲ್ಲಿ ಶೇ 1.2ರಷ್ಟು ಪಾಲನ್ನು ಗೂಗಲ್ ಹೊಂದುವುದಕ್ಕೆ ಸಂಪೂರ್ಣ ಪ್ರಕ್ರಿಯೆ ಮುಗಿದಂತಾಗಿದೆ. ಏರ್​ಟೆಲ್​ನಿಂದ ಗೂಗಲ್​ಗೆ 5,224 ಕೋಟಿ ರೂಪಾಯಿ ಮೌಲ್ಯದ ಪ್ರಿಫರೆನ್ಷಿಯಲ್ ಷೇರುಗಳನ್ನು ವಿತರಿಸಲಾಗಿದೆ. ಬಾಕಿ 300 ಮಿಲಿಯನ್ ಅಮೆರಿಕನ್ ಡಾಲರ್​ಗಳಿಗೆ ಗೂಗಲ್​ನಿಂದ ಮುಂದಿನ ಐದು ವರ್ಷಗಳಲ್ಲಿ ವಾಣಿಜ್ಯ ಒಪ್ಪಂದದ ಮೂಲಕವಾಗಿ ಹೂಡಿಕೆ ಮಾಡಲಾಗುವುದು. ಕಂಪೆನಿಯ ಆದ್ಯತೆ […]

Google: ಏರ್​ಟೆಲ್​ನಲ್ಲಿ ಗೂಗಲ್​ಗೆ 5224 ಕೋಟಿ ರೂಪಾಯಿ ಮೌಲ್ಯದ ಶೇ 1.2ರಷ್ಟು ಷೇರು ವಿತರಣೆ ವ್ಯವಹಾರ ಪೂರ್ಣ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jul 14, 2022 | 6:08 PM

Share

ಟೆಲಿಕಾಂ ಸೇವೆ ನೀಡುವ ಭಾರತದ ಎರಡನೇ ಅತಿದೊಡ್ಡ ಸೇವಾ ಪೂರೈಕೆದಾರ ಕಂಪೆನಿ ಭಾರ್ತಿ ಏರ್​ಟೆಲ್ (Airtel) ಗುರುವಾರ ತಿಳಿಸಿರುವ ಪ್ರಕಾರ, ಗೂಗಲ್ ಇಂಟರ್​ನ್ಯಾಷನಲ್​ ಎಲ್​ಎಲ್​ಸಿ ವ್ಯವಹಾರವನ್ನು ಪೂರ್ಣಗೊಳಿಸಿದೆ. ಇದೀಗ ಏರ್​ಟೆಲ್​ನಲ್ಲಿ ಶೇ 1.2ರಷ್ಟು ಪಾಲನ್ನು ಗೂಗಲ್ ಹೊಂದುವುದಕ್ಕೆ ಸಂಪೂರ್ಣ ಪ್ರಕ್ರಿಯೆ ಮುಗಿದಂತಾಗಿದೆ. ಏರ್​ಟೆಲ್​ನಿಂದ ಗೂಗಲ್​ಗೆ 5,224 ಕೋಟಿ ರೂಪಾಯಿ ಮೌಲ್ಯದ ಪ್ರಿಫರೆನ್ಷಿಯಲ್ ಷೇರುಗಳನ್ನು ವಿತರಿಸಲಾಗಿದೆ. ಬಾಕಿ 300 ಮಿಲಿಯನ್ ಅಮೆರಿಕನ್ ಡಾಲರ್​ಗಳಿಗೆ ಗೂಗಲ್​ನಿಂದ ಮುಂದಿನ ಐದು ವರ್ಷಗಳಲ್ಲಿ ವಾಣಿಜ್ಯ ಒಪ್ಪಂದದ ಮೂಲಕವಾಗಿ ಹೂಡಿಕೆ ಮಾಡಲಾಗುವುದು.

ಕಂಪೆನಿಯ ಆದ್ಯತೆ ವಿತರಣೆಗೆ ವಿಶೇಷ ಸಮಿತಿಯ ನಿರ್ದೇಶಕರು 71,176,839 ಈಕ್ವಿಟಿ ಷೇರುಗಳನ್ನು ಪೂರ್ತಿಯಾಗಿ ಪಾವತಿಸಿದ 5 ರೂಪಾಯಿಯ ಮುಖಬೆಲೆಯ ಷೇರನ್ನು ಆದ್ಯತೆಯ ಆಧಾರದಲ್ಲಿ ಗೂಗಲ್ ಇಂಟರ್​ನ್ಯಾಷನಲ್ ಎಲ್​ಎಲ್​ಸಿಗೆ ಇಶ್ಯೂ ಬೆಲೆ ಪ್ರತಿ ಷೇರಿಗೆ ರೂ. 734ರಂತೆ (ಪ್ರತಿ ಷೇರಿಗೆ 729 ರೂಪಾಯಿ ಪ್ರೀಮಿಯಂ ಒಳಗೊಂಡಂತೆ) ವಿತರಿಸಲು ಅನುಮತಿಸಿದ್ದಾರೆ ಎಂದು ಬಿಎಸ್​ಇಗೆ ಗುರುವಾರ ತಿಳಿಸಲಾಗಿದೆ.

ಇದರ ಫಲಿತವಾಗಿ ಷೇರು ವಿತರಣೆಯ ನಂತರದಲ್ಲಿ ಕಂಪೆನಿಯ ಶೇ 1.2ರಷ್ಟು- ಪೂರ್ತಿ ಡೈಲ್ಯೂಟ್ ಆದ ಆಧಾರದಲ್ಲಿ ಶೇ 1.17ರಷ್ಟು ಪಾಲನ್ನು ಗೂಗಲ್ ಹೊಂದಿರಲಿದೆ. ಕಳೆದ ವಾರ ಭಾರತದ ಸ್ಪರ್ಧಾ ಆಯೋಗ ಅನುಮತಿ ನೀಡಿದ ಮೇಲೆ ಈ ಘೋಷಣೆ ಬಂದಿದೆ.

ಈ ಹಿಂದೆ 2020ರ ಜುಲೈನಲ್ಲಿ ಗೂಗಲ್​ನಿಂದ ರಿಲಯನ್ಸ್​ ಜಿಯೋದಲ್ಲಿ 4.5 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗಿತ್ತು.

Published On - 6:08 pm, Thu, 14 July 22

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು