AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

HAL: ಅಮೆರಿಕದ ಜಿಇ ಜೊತೆ ಸೇರಿ ಫೈಟರ್ ಜೆಟ್ ಎಂಜಿನ್ ತಯಾರಿಕೆಗೆ ಎಚ್​ಎಎಲ್ ಒಪ್ಪಂದ; ಒಮ್ಮೆಲೇ ಜಿಗಿದ ಷೇರುಬೆಲೆ

HAL MoU With GE Aerospace: ತೇಜಸ್ ಎಂಕೆ2 ಫೈಟರ್ ಜೆಟ್​ಗೆ ಎಫ್414 ಎಂಜಿನ್​ಗಳನ್ನು ತಯಾರಿಸಲು ಜಿಇ ಏರೋಸ್ಪೇಸ್ ಜೊತೆ ಎಚ್​ಎಎಲ್ ಎಂಒಯು ಒಪ್ಪಂದ ಮಾಡಿಕೊಂಡಿದೆ. ಈ ಬಳಿಕ ಜೂನ್ 23ರ ಬೆಳಗ್ಗೆ ಎಚ್​ಎಲ್ ಷೇರುಬೆಲೆ ದಿಢೀರ್ ಏರಿಕೆ ಕಂಡಿದೆ.

HAL: ಅಮೆರಿಕದ ಜಿಇ ಜೊತೆ ಸೇರಿ ಫೈಟರ್ ಜೆಟ್ ಎಂಜಿನ್ ತಯಾರಿಕೆಗೆ ಎಚ್​ಎಎಲ್ ಒಪ್ಪಂದ; ಒಮ್ಮೆಲೇ ಜಿಗಿದ ಷೇರುಬೆಲೆ
ಜಿಇ ಸಿಇಒ ಲಾರೆನ್ಸ್ ಕಲ್ಪ್ ಜೊತೆ ಅಮೆರಿದಲ್ಲಿ ಪ್ರಧಾನಿ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 23, 2023 | 11:18 AM

Share

ಬೆಂಗಳೂರು: ನರೇಂದ್ರ ಮೋದಿ ಅವರ ಅಮೆರಿಕ ಭೇಟಿ ವೇಳೆ ನಡೆದ ಮಹತ್ವದ ಉದ್ದಿಮೆ ಒಪ್ಪಂದಗಳಲ್ಲಿ ತೇಜಸ್ ಫೈಟರ್ ಜೆಟ್​ಗೆ ಎಂಜಿನ್ ತಯಾರಿಸುವುದೂ ಒಂದು. ಅಮೆರಿಕದ ಜಿಇ ಏರೋಸ್ಪೇಸ್ ಮತ್ತು ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ (ಎಚ್​ಎಎಲ್) ಮಧ್ಯೆ ಜೂನ್ 22, ಗುರುವಾರದಂದು ಎಂಒಯು ಒಪ್ಪಂದವಾಗಿದೆ. ಭಾರತೀಯ ವಾಯುಸೇನೆಗೆ ಸೇರಿದ ತೇಜಸ್ಎಂಕೆ2 ಎಂಬ ಎಲ್​ಸಿಎ ಫೈಟರ್ ಜೆಟ್​ಗೆ ಎಫ್414 ಎಂಜಿನ್​ಗಳನ್ನು ಈ ಎರಡು ಕಂಪನಿಗಳು ಜೊತೆ ಸೇರಿ ತಯಾರಿಸಲಿವೆ. ಮಿಗ್-29 ಮತ್ತು ಮಿರೇಜ್2000 ಯುದ್ಧವಿಮಾನಗಳ ಕಾಲಾವಧಿ ಮುಗಿಯುತ್ತಿರುವುದರಿಂದ ಅವುಗಳ ಬದಲಿಗೆ ತೇಜಸ್ ಎಲ್​ಸಿಎ ಜೆಟ್ ವಿಮಾನಗಳನ್ನು ಸೇನೆಗೆ ಬಳಸಲಾಗುತ್ತದೆ.

ಎಫ್414 ಎಂಜಿನ್​ಗಳು ಜಿಇ ಏರೋಸ್ಪೇಸ್ ಅಭಿವೃದ್ಧಿಪಡಿಸಿದ್ದಾಗಿವೆ. ಈ ಎಂಜಿನ್​ಗಳ ಶೇ. 80ರಷ್ಟು ತಂತ್ರಜ್ಞಾನವನ್ನು ಎಚ್​ಎಎಲ್​ಗೆ ಹಸ್ತಾಂತರಿಸಲಾಗುತ್ತದೆ. ಅದನ್ನು ಬಳಸಿ ಜಿಇ ಏರೋಸ್ಪೇಸ್​ನ ತಾಂತ್ರಿಕ ಸಹಾಯದೊಂದಿಗೆ ಎಚ್​ಎಎಲ್ ಈ ಎಫ್414 ಎಂಜಿನ್​ಗಳನ್ನು ಭಾರತದಲ್ಲೇ ತಯಾರಿಸಲಿದೆ.

ಇದನ್ನೂ ಓದಿPhotos: ಅಮೆರಿಕ ಸಂಸತ್ತಿನಲ್ಲಿ ಮೋದಿ ಐತಿಹಾಸಿಕ ಭಾಷಣ, ಚಪ್ಪಾಳೆ, ಶಿಳ್ಳೆಗಳ ಸುರಿಮಳೆ, ಮೋದಿ ಮೋದಿ ಎಂದು ಕೂಗಿದ ಜನ

ಜಿಇ ಏರೋಸ್ಪೇಸ್ ಮತ್ತು ಭಾರತೀಯ ವಾಯುಸೇನೆ ನಡುವಿನ ಸಂಬಂಧ ಬಹಳ ಹಳೆಯದ್ದು. ಜಿ ಏರೋಸ್ಪೇಸ್ ಭಾರತೀಯ ವಾಯುಸೇನೆಯ ಎಲ್​ಸಿಎ ಹಗುರ ಯುದ್ಧವಿಮಾನಗಳಿಗೆ ಎಫ್404 ಎಂಜಿನ್​ಗಳನ್ನು ಒದಗಿಸುವ ಕಾರ್ಯವನ್ನು 1986ರಲ್ಲೇ ಆರಂಭಿಸಿತ್ತು. ಎಲ್​ಸಿಎ ತೇಜಸ್ ಎಂಕೆ1 ಮತ್ತು ಎಂಕೆ2 ಯುದ್ಧವಿಮಾನಗಳಿಗೆ ಎಫ್404 ಮತ್ತು ಎಫ್414 ಎಂಜಿನ್​ಗಳನ್ನು ಜಿಇ ಒದಗಿಸುತ್ತಾ ಬಂದಿದೆ. ಈವರೆಗೆ 75 ಎಫ್404 ಮತ್ತು 8 ಎಫ್414 ಎಂಜಿನ್​ಗಳನ್ನು ಜಿಇ ಒದಗಿಸಿದೆ. ಇನ್ನಷ್ಟು 99 ಎಫ್404 ಎಂಜಿನ್​ಗಳಿಗೆ ಒಪ್ಪಂದವಾಗಿದೆ. ಈಗ ಎಫ್414 ಎಂಜಿನ್​ಗಳನ್ನು ಎಚ್​ಎಎಲ್ ಸಂಸ್ಥೆಯೇ ಜಿಇ ಸಹಾಯದೊಂದಿಗೆ ಭಾರತದಲ್ಲಿ ತಯಾರಿಸಲಿದೆ. ಇದರೊಂದಿಗೆ ಯುದ್ಧವಿಮಾನಗಳ ತಯಾರಿಕೆಯಲ್ಲಿ ಬಹುತೇಕ ಸ್ವಾವಲಂಬನೆ ಸಾಧನೆ ಆಗಲಿದೆ.

ಎಚ್​ಎಎಲ್ ಷೇರುಬೆಲೆ ಏರಿಕೆ

ಅಮೆರಿಕದ ಜಿಇ ಏರೋಸ್ಪೇಸ್ ಸಂಸ್ಥೆ ಜೊತೆ ಒಪ್ಪಂದ ಆದ ಬಳಿಕ ಎಚ್​ಎಎಲ್ ಸಂಸ್ಥೆಯ ಷೇರಿಗೆ ಇರುವ ಬೇಡಿಕೆ ಇನ್ನೂ ಹೆಚ್ಚಾಗುವಂತೆ ಕಾಣುತ್ತಿದೆ. ಮಾರ್ಚ್ ಕೊನೆಯ ವಾರದಿಂದ ಸತತವಾಗಿ ಏರಿಕೆ ಕಾಣುತ್ತಾ ಬರುತ್ತಿರುವ ಎಚ್​ಎಎಲ್ ಷೇರುಬೆಲೆ ಜೂನ್ 23ರ ಬೆಳಗಿನ ವಹಿವಾಟಿನಲ್ಲಿ ಚಿಗರೆಯಂತೆ ಎಗರಿತ್ತು. ಜೂನ್ 22ರಂದು 3,753 ರೂ ಬೆಲೆ ಹೊಂದಿದ್ದ ಎಚ್​ಎಎಲ್ ಷೇರು ಜೂನ್ 23ರಂದು ಬೆಳಗ್ಗೆ 9:30ಕ್ಕೆ 3858 ರುಪಾಯಿಗೆ ಜಿಗಿದಿತ್ತು. ನಂತರದ ಹೊತ್ತಿನಲ್ಲಿ ಅಚ್ಚರಿ ರೀತಿಯಲ್ಲಿ ಅದರ ಷೇರುಬೆಲೆ 3,700 ರೂಗಿಂತ ಕೆಳಗೆ ಇಳಿದಿದೆ.

ಇದನ್ನೂ ಓದಿಭಯೋತ್ಪಾದನೆ, ಮೂಲಭೂತವಾದದ ವಿರುದ್ಧ ಭಾರತ, ಅಮೆರಿಕ ಹೆಗಲಿಗೆ ಹೆಗಲು ಕೊಟ್ಟು ಹೋರಾಟ; ಪಾಕ್​ಗೆ ಪ್ರಧಾನಿ ಮೋದಿ ಪರೋಕ್ಷ ಚಾಟಿ

ಆದರೆ, ಕಳೆದ 6 ತಿಂಗಳಲ್ಲಿ ಅದರ ಷೇರುಬೆಲೆ ಶೇ. 50ಕ್ಕಿಂತಲೂ ಹೆಚ್ಚಾಗಿರುವುದು ಹೌದು. ಕಳೆದ 1 ತಿಂಗಳಿಂದಲೇ ಶೇ. 25ರಷ್ಟು ಹೆಚ್ಚಾಗಿರುವುದು ಗಮನಾರ್ಹ. ಈಗ ಜಿಇ ಜೊತೆ ಒಪ್ಪಂದವಾದ ಬಳಿಕ ಎಚ್​ಎಎಲ್ ಷೇರುಬೆಲೆ ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆ ಬಹಳ ದಟ್ಟವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:16 am, Fri, 23 June 23

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು