Sign In

By signing in or creating an account, you agree with Associated Broadcasting Company's Terms & Conditions and Privacy Policy.

IT Refund: ಐಟಿ ರಿಟರ್ನ್ ಫೈಲ್ ಮಾಡಿದರೂ ರೀಫಂಡ್ ಬಂದಿಲ್ಲವಾ? ಸಮಸ್ಯೆ ಪತ್ತೆಹಚ್ಚಿ ಬಗೆಹರಿಸುವುದು ಹೇಗೆ?

Troubleshooting Income Tax Refund Failure: ಆದಾಯ ತೆರಿಗೆ ರಿಟರ್ನ್ ಸಲ್ಲಿಸಿ ಕೆಲ ವಾರಗಳಿಂದ ಕೆಲ ತಿಂಗಳುಗಳ ಒಳಗೆ ರೀಫಂಡ್ ಸಿಗುತ್ತದೆ. ಕೆಲವೊಮ್ಮೆ ಬೇರೆ ಬೇರೆ ಕಾರಣಗಳಿಗೆ ರೀಫಂಡ್ ಆಗದೇ ಹೋಗಬಹುದು. ಅದರ ಕಾರಣ ತಿಳಿಯುವುದು ಅದಕ್ಕೆ ಪರಿಹಾರ ಹುಡುಕುವುದು ಈ ವಿವರ ಇಲ್ಲಿದೆ...

IT Refund: ಐಟಿ ರಿಟರ್ನ್ ಫೈಲ್ ಮಾಡಿದರೂ ರೀಫಂಡ್ ಬಂದಿಲ್ಲವಾ? ಸಮಸ್ಯೆ ಪತ್ತೆಹಚ್ಚಿ ಬಗೆಹರಿಸುವುದು ಹೇಗೆ?
ಆದಾಯ ತೆರಿಗೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 27, 2023 | 11:54 AM

2022-23ರ ಹಣಕಾಸು ವರ್ಷಕ್ಕೆ ಐಟಿ ರಿಟರ್ನ್ ಸಲ್ಲಿಸಲು ಗಡುವಿಗೆ ಕೆಲವೇ ದಿನ ಬಾಕಿದೆ. ಜುಲೈ 31ರವರೆಗು ಮಾತ್ರ ಐಟಿಆರ್ ಫೈಲಿಂಗ್​ಗೆ (ITR Filing) ಕಾಲಾವಕಾಶ ಇದೆ. ಜೂನ್ ತಿಂಗಳಿಂದಲೇ ಐಟಿಆರ್ ಸಲ್ಲಿಕೆ ಕಾರ್ಯಕ್ಕೆ ಅವಕಾಶ ಕೊಡಲಾಗಿತ್ತು. 10 ದಿನಗಳ ಹಿಂದಿನ ಮಾಹಿತಿಯಂತೆ 3 ಕೋಟಿಗೂ ಹೆಚ್ಚು ಐಟಿಆರ್​ಗಳು ಸಲ್ಲಿಕೆಯಾಗಿವೆ ಎನ್ನಲಾಗಿದೆ. ಐಟಿಆರ್ ಸಲ್ಲಿಕೆಯಾಗಿ ಕೆಲ ತಿಂಗಳುಗಳಲ್ಲಿ ರೀಫಂಡ್ ಆಗುತ್ತದೆ. ಎಲ್ಲಾ ದಾಖಲೆಗಳು ಸರಿ ಇದ್ದಲ್ಲಿ ಕೆಲವೇ ವಾರಗಳಲ್ಲಿ ರೀಫಂಡ್ ಬಂದುಬಿಡಬಹುದು. ಸಾಕಷ್ಟು ತೆರಿಗೆ ಪಾವತಿದಾರರು ರೀಫಂಡ್ (Income tax refund) ಆಗುತ್ತಿಲ್ಲ ಎಂದು ಹತಾಶೆ ತೋಡಿಕೊಂಡಿದ್ದಾರೆ. ಇನ್ಕಮ್ ಟ್ಯಾಕ್ಸ್ ಪೋರ್ಟಲ್​ನಲ್ಲಿ ಪರಿಶೀಲಿಸಿದಾಗ ‘ರಿಸ್ಟ್ರಿಕ್ಟೆಡ್ ರೀಫಂಡ್’ ಅಥವಾ ‘ನಾಟ್ ಎಲಿಜಿಬಲ್ ಫಾರ್ ರೀಫಂಡ್’ ಎನ್ನುವ ಸಂದೇಶ ಕಾಣುತ್ತಿದೆ ಎಂದು ಹಲವರು ಹೇಳುತ್ತಿದ್ದಾರೆ. ಅಷ್ಟಕ್ಕೂ ಐಟಿಆರ್​ಗಳಲ್ಲಿ ಏನು ದೋಷ ಇದ್ದರೆ ರೀಫಂಡ್ ಕಷ್ಟಸಾಧ್ಯವಾಗುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಐಟಿ ರೀಫಂಡ್ ಸರಿಯಾಗಿ ಆಗದಿರುವುದಕ್ಕೆ ಕಾರಣಗಳು

ತಪ್ಪು ಮಾಹಿತಿ: ಬ್ಯಾಂಕ್ ಖಾತೆ ಸಂಖ್ಯೆ, ಹೆಸರು, ವಿಳಾಸ ಇತ್ಯಾದಿ ಮಾಹಿತಿ ಸರಿಯಾಗಿ ಕೊಡದೇ ಇದ್ದರೆ ರೀಫಂಡ್ ಸಮಸ್ಯೆಯಾಗುತ್ತದೆ. ಹಾಗೆಯೇ, ಬ್ಯಾಂಕ್ ಖಾತೆ ಮತ್ತು ಪ್ಯಾನ್ ಕಾರ್ಡ್​ನಲ್ಲಿರುವ ಮಾಹಿತಿಯೂ ಹೊಂದಿಕೆಯಾಗಿರಬೇಕು.

ಸಲ್ಲಿಸುವಾಗ ಆಗುವ ತಪ್ಪುಗಳು: ಐಟಿ ರಿಟರ್ನ್ ಫೈಲಿಂಗ್ ವೇಳೆ ಆದಾಯ, ವೆಚ್ಚ, ಹೂಡಿಕೆ ಇತ್ಯಾದಿ ಬಗ್ಗೆ ಅರೆಬರೆ ಮಾಹಿತಿ ನೀಡುವುದು, ತಪ್ಪು ಲೆಕ್ಕ ಕೊಡುವುದು ಇತ್ಯಾದಿ.

ಬಾಕಿ ತೆರಿಗೆ ಮುರಿದುಕೊಂಡಿರಬಹುದು: ನೀವು ಸರ್ಕಾರಕ್ಕೆ ಕೊಡಬೇಕಾದ ಯಾವುದಾದರೂ ತೆರಿಗೆ ಬಾಕಿ ಉಳಿದಿದ್ದರೆ ಆಗ ನಿಮ್ಮ ರೀಫಂಡ್ ಹಣವನ್ನು ಮುರಿದುಕೊಳ್ಳಲಾಗುತ್ತದೆ.

ಇದನ್ನೂ ಓದಿ: ITR: ಐಟಿಆರ್ ಫೈಲ್ ಮಾಡುತ್ತಿದ್ದೀರಾ? ಈ ಕೊನೆಯ ಹಂತ ಮರೆಯದಿರಿ; ಇವೆರಿಫಿಕೇಶನ್ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ರೀಫಂಡ್ ಸಿಗಲ್ಲ

ಐಟಿ ರೀಫಂಡ್ ಆಗಲಿಲ್ಲವೆಂದರೆ ಏನು ಮಾಡಬೇಕು?

  • ಐಟಿಆರ್ ರೀಫಂಡ್ ಸ್ಟೇಟಸ್ ಅನ್ನು ಪರಿಶೀಲಿಸಿ, ರೀಫಂಡ್ ಹಣ ಬಿಡುಗಡೆಗೆ ಮತ್ತೊಮ್ಮೆ ಮನವಿ ಸಲ್ಲಿಸಿ
  • ಹಿಂದೆ ಸಲ್ಲಿಸಿದ್ದ ಐಟಿಆರ್ ಅನ್ನು ಅಗತ್ಯ ಇದ್ದರೆ ತಿದ್ದಿ ಮರಳಿ ಸಲ್ಲಿಸಿ
  • ಯಾವುದಾದರೂ ತೆರಿಗೆ ಹಣ ಬಾಕಿ ಉಳಿಸಿಕೊಂಡಿದ್ದರೆ ಅದನ್ನು ಪಾವತಿಸಿ
  • ಇನ್ಕಮ್ ಟ್ಯಾಕ್ಸ್ ಪೋರ್ಟಲ್​ನಲ್ಲಿ ಬ್ಯಾಂಕ್ ಖಾತೆಯನ್ನು ವ್ಯಾಲಿಡೇಟ್ ಮಾಡಲಾಗಿದೆಯಾ ಎಂಬುದನ್ನು ಪರಿಶೀಲಿಸಿ. ಇಲ್ಲದಿದ್ದರೆ ಅದನ್ನು ಮಾಡಿ

ಇದನ್ನೂ ಓದಿ: ITR Deadline: ಐಟಿ ರಿಟರ್ನ್ ಫೈಲ್ ಮಾಡುವ ಗಡುವು ವಿಸ್ತರಣೆಯಾಗುತ್ತಾ? ಇಲ್ಲಿಯವರೆಗೆ ಐಟಿಆರ್ ಸಲ್ಲಿಸಿದವರೆಷ್ಟು? ಇಲ್ಲಿದೆ ಡೀಟೇಲ್ಸ್

ಇನ್ಕಮ್ ಟ್ಯಾಕ್ಸ್ ರೀಫಂಡ್ ಪಡೆಯಲು ಪ್ರೀ ವ್ಯಾಲಿಡೇಟ್ ಮಾಡಿದ ಬ್ಯಾಂಕ್ ಖಾತೆ ಇರಬೇಕು ಎಂದು ಆದಾಯ ತೆರಿಗೆ ಇಲಾಖೆ ಹೇಳುತ್ತದೆ. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಪ್ರೀ ವ್ಯಾಲಿಡೇಟ್ ಮಾಡಿ ರೀಫಂಡ್​ಗೆ ನಾಮಿನೇಟ್ ಮಾಡಬಹುದು. ಎಸ್​ಬಿ ಖಾತೆ, ಕರೆಂಟ್ ಅಕೌಂಟ್, ಓವರ್​ಡ್ರಾಫ್ಟ್ ಅಕೌಂಟ್, ಎನ್​ಆರ್​ಒ ಅಕೌಂಟ್, ಕ್ಯಾಷ್ ಕ್ರೆಡಿಟ್ ಅಕೌಂಟ್​ಗಳನ್ನು ಮಾತ್ರ ಪ್ರೀವ್ಯಾಲಿಡೇಟ್ ಮಾಡಲು ಸಾಧ್ಯ.

ಬ್ಯಾಂಕ್ ಖಾತೆಗಳನ್ನು ಪ್ರೀ ವ್ಯಾಲಿಡೇಟ್ ಮಾಡುವ ಕೆಲಸ ಬಹಳ ಸುಲಭ. ಐಟಿಆರ್ ಫೈಲಿಂಗ್ ವೇಳೆ ನೀವು ಬ್ಯಾಂಕ್ ಖಾತೆಯೊಂದನ್ನು ಆಯ್ದುಕೊಂಡು ಪ್ರೀವ್ಯಾಲಿಡೇಶನ್​ಗೆ ಮನವಿ ಸಲ್ಲಿಸಬಹುದು. ಆಗ ಬ್ಯಾಂಕ್ ಅದನ್ನು ಅನುಮೋದಿಸಿದರೆ ಆ ಖಾತೆಯು ಪ್ರೀ ವ್ಯಾಲಿಡೇಟ್ ಆಗುತ್ತದೆ. ಸಾಮಾನ್ಯವಾಗಿ 10-12 ಕಾರ್ಯದಿನಗಳಲ್ಲಿ ಇದು ಆಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:54 am, Thu, 27 July 23

ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ರಸೆಲ್; ವಿಡಿಯೋ
ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ರಸೆಲ್; ವಿಡಿಯೋ
ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ
ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ
ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ
ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್