AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Share Market Shock: ಎರಡು ದಿನ ಭಯಂಕರ ಉಬ್ಬಿದ್ದ ಷೇರುಪೇಟೆ ಗುರುವಾರ ಠುಸ್; 2 ಲಕ್ಷ ಕೋಟಿ ನಷ್ಟಕಂಡ ಹೂಡಿಕೆದಾರರು

BSE Listed Companies See Loss Of Market Cap: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಲಿಸ್ಟ್ ಆಗಿರುವ ಎಲ್ಲಾ ಕಂಪನಿಗಳ ಒಟ್ಟು ಷೇರು ಸಂಪತ್ತು 294.4 ಲಕ್ಷ ಕೋಟಿ ಇದ್ದದ್ದು 292.3 ಲಕ್ಷ ಕೋಟಿ ರೂಗೆ ಇಳಿದಿದೆ. 2.1 ಲಕ್ಷ ಕೋಟಿ ರೂನಷ್ಟು ಷೇರುಸಂಪತ್ತು ಕರಗಿದೆ.

Share Market Shock: ಎರಡು ದಿನ ಭಯಂಕರ ಉಬ್ಬಿದ್ದ ಷೇರುಪೇಟೆ ಗುರುವಾರ ಠುಸ್; 2 ಲಕ್ಷ ಕೋಟಿ ನಷ್ಟಕಂಡ ಹೂಡಿಕೆದಾರರು
ಷೇರುಪೇಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 22, 2023 | 4:34 PM

ನವದೆಹಲಿ: ಬಿಎಸ್​ಇ ಸೆನ್ಸೆಕ್ಸ್ ಸೂಚ್ಯಂಕ ಮತ್ತು ಎನ್​ಎಸ್​ಇ ನಿಫ್ಟಿ ಸೂಚ್ಯಂಕಗಳು ಗುರುವಾರ (ಜೂನ್ 22) ಭೀಕರ ಹೊಡೆತಕ್ಕೆ ಸಿಲುಕಿದಂತೆ ಹಿನ್ನಡೆ ಕಂಡಿವೆ. ನಿನ್ನೆ ಬುಧವಾರ ಎರಡೂ ಕೂಡ ದಾಖಲೆ ಮಟ್ಟಕ್ಕೆ ಹೋಗಿ ನಿಂತಿದ್ದವು. ಇಂದು ಸೆನ್ಸೆಕ್ಸ್ (BSE Sensex) ಬರೋಬ್ಬರಿ 284 ಅಂಕಗಳನ್ನು ಕಳೆದುಕೊಂಡಿದೆ. 63,601.71 ವರೆಗೂ ಏರಿದ್ದ ಅದು 63,238.89 ಅಂಕಗಳಿಗೆ ಬಂದು ನಿಂತಿದೆ. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ನಿಫ್ಟಿ ಸೂಚ್ಯಂಕ 86 ಅಂಕಗಳು ಕಡಿಮೆಗೊಂಡು 18,771.25ರ ಮಟ್ಟಕ್ಕೆ ಬಂದಿದೆ. ಇನ್ನು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ (ಬಿಎಸ್​ಇ) ಸೆನ್ಸೆಕ್ಸ್ ಇಂಡೆಕ್ಸ್​ನಲ್ಲಿರುವ ಕಂಪನಿಗಳೂ ಒಳಗೊಂಡಂತೆ ಎಲ್ಲಾ ಕಂಪನಿಗಳ ಷೇರುಸಂಪತ್ತು ಗಣಿಸಿದಾಗ 2 ಲಕ್ಷ ಕೋಟಿ ರೂಗಿಂತ ಹೆಚ್ಚು ಸಂಪತ್ತು ಕರಗಿರುವುದು ತಿಳಿದುಬಂದಿದೆ.

ಹಿಂದಿನ ದಿನ ಬಿಎಸ್​ಇನಲ್ಲಿ ಲಿಸ್ಟ್ ಆಗಿದ್ದ ಕಂಪನಿಗಳ ಒಟ್ಟು ಷೇರುಸಂಪತ್ತು 294.4 ಲಕ್ಷ ಕೋಟಿ ರೂ ಇತ್ತು. ಇವತ್ತು ಅದು 292.3 ಲಕ್ಷ ಕೋಟಿ ರೂ ಆಗಿದೆ. ಒಂದೇ ದಿನದಲ್ಲಿ 2.1 ಲಕ್ಷ ಕೋಟಿ ರೂ ಷೇರುಸಂಪತ್ತು ಕಡಿಮೆ ಆಗಿದೆ.

ಇದನ್ನೂ ಓದಿIndia GDP: ಈ ವರ್ಷದ ಭಾರತದ ಆರ್ಥಿಕತೆ ಎಷ್ಟು ಬೆಳೆಯಬಲ್ಲುದು? ಫಿಚ್ ರೇಟಿಂಗ್ಸ್ ಪ್ರಕಾರ ಶೇ. 6.3; ಆರ್​ಬಿಐ ಅಂದಾಜಿಗಿಂತ ಎಷ್ಟು ಭಿನ್ನ?

ದಿಢೀರ್ ಷೇರುಪೇಟೆ ಅಲುಗಾಡಲು ಮತ್ತೆ ವಿಶ್ವ ದೊಡ್ಡಣನೇ ಕಾರಣನಾದನಾ?

ಜಗತ್ತಿನ ಹಲವು ಆರ್ಥಿಕ ಏರಿಳಿತಕ್ಕೆ, ಅದರಲ್ಲೂ ಷೇರಪೇಟೆಯ ವ್ಯತ್ಯಯಗಳಿಗೆ ಪ್ರಮುಖ ಕಾರಣಕರ್ತ ಎನಿಸುವುದು ಅಮೆರಿಕದಲ್ಲಿ ನಡೆಯುವ ಬೆಳವಣಿಗೆಗಳೇ. ಭಾರತದಲ್ಲಿ ಷೇರುಪೇಟೆ ಒಂದೇ ದಿನದಲ್ಲಿ ಕುಸಿಯಲು ಅಮೆರಿಕವೇ ಕಾರಣವಾಗಿದೆ. ಅಮೆರಿಕದ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರು ನೀಡಿದ ಒಂದು ಹೇಳಿಕೆ ಈ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಅಮೆರಿಕದಲ್ಲಿ ಹಣದುಬ್ಬರ ಅಷ್ಟು ಸುಲಭಕ್ಕೆ ನಿರೀಕ್ಷಿತ ಗುರಿಗೆ ಬರುವುದಿಲ್ಲ. ಅದರ ವಿರುದ್ಧದ ಹೋರಾಟ ಸುದೀರ್ಘದ್ದಿರುತ್ತದೆ ಎಂದು ಯುಎಸ್ ಫೆಡರಲ್ ಬ್ಯಾಂಕ್ ಮುಖ್ಯಸ್ಥ ಜಿರೋಮ್ ಪೋವೆಲ್ ಹೇಳಿದ್ದರು. ಅಂದರೆ, ಫೆಡರಲ್ ಬ್ಯಾಂಕ್​ನ ಬಡ್ಡಿ ದರ ಏರಿಕೆಗೆ ಅಲ್ಪ ವಿರಾಮ ಇಟ್ಟಿರುವುದು ತಾತ್ಕಾಲಿಕ ಮಾತ್ರವೇ. ಮುಂಬರುವ ದಿನಗಳಲ್ಲಿ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನುವುದರ ಸುಳಿವನ್ನು ಪೋವೆಲ್ ಅವರು ನೀಡಿದ್ದರು. ಅಮೆರಿಕ ಹಣದುಬ್ಬರವನ್ನು ಶೇ. 2ಕ್ಕೆ ತಂದು ನಿಲ್ಲಿಸಲು ಗುರಿ ಇಟ್ಟಿದೆ. ಈಗ ಸದ್ಯ ಅಲ್ಲಿ ಹಣದುಬ್ಬರ ಶೇ. 4ಕ್ಕಿಂತ ತುಸು ಹೆಚ್ಚಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್